ಅಂಕಣಗಳು

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಎದುರಿಸುತ್ತಿರುವ ಒಂದು ಹೊಸ ಸಮಸ್ಯೆ ಎಂದರೆ ನಗರದಲ್ಲಿ ಚಿರತೆಗಳು ಹಾಗೂ ಇತರೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವಿಕೆ. ಈ ಘಟನೆಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಕಾಣಿಸಿಕೊಂಡು ಜನರಲ್ಲಿ ಆತಂಕದ ಭಾವನೆ ಮೂಡಿಸುತ್ತಿವೆ. ಆದರೂ, ಈ ಸಮಸ್ಯೆಯ ಮೂಲ ಮನುಷ್ಯರಲ್ಲಿರುವುದನ್ನು ನಾವು ಬಹುತೇಕ ಮರೆತೇ ಬಿಡುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ ಮೈಸೂರಿನ ಹೊರವಲಯದಲ್ಲಿ ನಡೆದ ಭೂ ಉಪಯೋಗ ಬದಲಾವಣೆ, ರಿಯಲ್ ಎಸ್ಟೇಟ್ ವಿಸ್ತರಣೆ ಮತ್ತು ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ನಡೆದ ಅತಿರೇಕದ ನಗರೀಕರಣವೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ.

ಹಿಂದೆ ಮೈಸೂರಿನ ರಿಂಗ್ ರಸ್ತೆ ಸುತ್ತಲಿನ ಪ್ರದೇಶಗಳು ಪಾಚ್ ಕಾಡುಗಳು, ಗುಡ್ಡಗಾಡುಗಳು, ಜಾಗಗಳು ಮತ್ತು ತೆರೆದ ಜಮೀನುಗಳಿಂದ ತುಂಬಿದ್ದವು. ಇವು ಕೇವಲ ಸಸ್ಯಾವರಣೆಗಳು ಅಲ್ಲ, ಚಿರತೆ, ನರಿ, ಮುಂಗುಸಿ, ಮೊಲ, ಕಾಡು ಹಂದಿ ಮುಂತಾದ ಹಲವಾರು ಪ್ರಾಣಿಗಳ ನೈಸರ್ಗಿಕ ವಾಸಸ್ಥಳಗಳಾಗಿದ್ದವು. ಮನುಷ್ಯರ ಸಂಚಾರ ಕಡಿಮೆ ಇರುವ ಪ್ರದೇಶವಾಗಿದ್ದುದರಿಂದ ಪ್ರಾಣಿಗಳ ಸಂಚಲನ, ಬೇಟೆ, ಪ್ರಕೃತಿ ದತ್ತವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಪ್ರದೇಶಗಳ ಬಹುಪಾಲು ಮನೆಗಳು, ಲೇಔಟ್‌ಗಳು, ಅಪಾರ್ಟ್‌ಮೆಂಟ್ ಗಳು ಮತ್ತು ವಾಣಿಜ್ಯ ಕಟ್ಟಡಗಳಿಂದ ತುಂಬಿಕೊಂಡಿವೆ. ಹಸಿರು ಪ್ರದೇಶಗಳ ಬದಲಿಗೆ ಕಾಂಕ್ರೀಟ್ ಕಟ್ಟಡಗಳು ಕಾಣಿಸಿಕೊಂಡಿದ್ದು, ಮಣ್ಣಿನ ಪರಿಸರ ಸಂಪೂರ್ಣವಾಗಿ ಬದಲಾಗಿದೆ.

ಇದನ್ನು ಓದಿ : ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಪ್ರಾಣಿಗಳು ನಗರಕ್ಕೆ ಬರುತ್ತಿವೆ ಎನ್ನುವುದು ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳುವ ಮಾತು. ಆದರೆ ಪ್ರಶ್ನೆ ಏನೆಂದರೆ ಚಿರತೆ ನಗರಕ್ಕೆ ಬರುತ್ತಿದೆಯೇ? ಅಥವಾ ನಗರವೇ ಚಿರತೆಯ ಮನೆಗೆ ಬಂದು ಕೂತಿದೆಯೇ? ಮನುಷ್ಯರು ತಮ್ಮ ಅಗತ್ಯಗಳಿಗಾಗಿ, ಲಾಭಕ್ಕಾಗಿ, ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಕಾಡಿನ ಜಾಗಗಳನ್ನು ಕಬಳಿಸಿದ್ದಾರೆ. ಈ ನೈಸರ್ಗಿಕ ವಾಸಸ್ಥಳ ನಾಶವಾದ ಮೇಲೆ, ಪ್ರಾಣಿಗಳಿಗೆ ಬದುಕಲು ಜಾಗವೇ ಉಳಿದಿಲ್ಲ. ಚಿರತೆ ಸಾಮಾನ್ಯವಾಗಿ ಮನುಷ್ಯರನ್ನು ದೂರವಿರಿಸುವ ಪ್ರಾಣಿ. ಅದು ಮನುಷ್ಯರ ಸಂಚಲನ ಹೆಚ್ಚಿರುವ ಪ್ರದೇಶಕ್ಕೆ ಬರುವುದಿಲ್ಲ. ಆದರೆ ನಗರದ ಹೊರವಲಯದಲ್ಲಿ ಕಟ್ಟಡಗಳ ಸಂಖ್ಯೆ ಹೆಚ್ಚಾದಂತೆ, ಅದು ಸಾಗುತ್ತಿದ್ದ ಹಾದಿಗಳನ್ನೇ ಮನುಷ್ಯರು ಮುಚ್ಚಿರುವುದರಿಂದ, ಅದರ ಚಲನೆ ವ್ಯತ್ಯಾಸಗೊಂಡಿದೆ.

ಚಿರತೆ ನಗರದಲ್ಲಿ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಆಹಾರ ಸರಪಳಿಯ ವ್ಯತ್ಯಾಸ. ಚಿರತೆಯ ಮುಖ್ಯ ಆಹಾರವಾಗಿರುವ ಮೊಲ, ಮತ್ತು ಬೀದಿ ನಾಯಿಗಳು ನಗರದ ಹೊರವಲಯದಲ್ಲಿ ಹೆಚ್ಚಿರುವ ಕಸದ ಬುಟ್ಟಿಗಳ ಕಡೆ ಆಕರ್ಷಿತರಾಗಿ ಬರುತ್ತಿವೆ. ಪ್ರಾಣಿಗಳು ತಮ್ಮ ಬೇಟೆಯನ್ನು ಹಿಂಬಾಲಿಸಿದಾಗ ಅವು ಸಹ ನಗರಕ್ಕೆ ಬರುತ್ತವೆ. ಎರಡನೆಯದಾಗಿ, ರಾತ್ರಿ ಸಮಯದಲ್ಲಿ ಮನುಷ್ಯರ ಚಟುವಟಿಕೆಗಳು ಹೆಚ್ಚಾಗಿರುವುದು. ಒಮ್ಮೆ ಮೌನವಾಗಿದ್ದ ಪ್ರದೇಶಗಳಲ್ಲಿ ಬೈಕ್ ಸಂಚಾರ, ಲೈಟುಗಳು, ಗದ್ದಲ.

ಮೂರನೆಯದಾಗಿ, ರಿಯಲ್ ಎಸ್ಟೇಟ್. ಜಾಗದ ಬೆಲೆ ಏರಿಕೆ, ‘ಮನೆ-ಮನೆ-ಮನೆ’ ಎಂಬ ರೀತಿಯ ಅಭಿವೃದ್ಧಿಯಿಂದ ಕಾಡಿಗೆ ಮನುಷ್ಯರು ನೇರವಾಗಿ ಧಕ್ಕೆ ತಂದಿದ್ದಾರೆ. ಅಭಿವೃದ್ಧಿ ಎನ್ನುವುದು ಕೇವಲ ಮನುಷ್ಯರ ಸುಲಭಿಕೆಗಾಗಿ ಮಾಡಿದ ಕ್ರಮವಾಗಿದ್ದು, ಪರಿಸರದ ದೀರ್ಘಕಾಲಿಕ ಪರಿಣಾಮಗಳನ್ನು ಪರಿಗಣಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿರತೆಗಳು ಮನೆಗಳ ಹಿಂಭಾಗ, ತೋಟ, ಬೀದಿ, ಶಾಲೆಗಳ ಬಳಿ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಆದರೆ ಜನರು ಇದನ್ನು ‘ಅಪಾಯ’ ಎಂದು ಮಾತ್ರ ನೋಡುತ್ತಾರೆ. ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವ ಪ್ರಾಣಿ ಅಲ್ಲ.

ಇದನ್ನು ಓದಿ: ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಅದು ಮನುಷ್ಯರ ಸನ್ನಿಧಿ ಕಂಡರೆ ದೂರ ಹೋಗಲು ಪ್ರಯತ್ನಿಸುತ್ತದೆ. ಆದರೆ ಜನರು ಗುಂಪು ಸೇರಿ ಅದನ್ನು ಬೆನ್ನಟ್ಟುವಾಗ, ಕಲ್ಲೆಸೆಯುವಾಗ, ವಿಡಿಯೋ ತೆಗೆದುಕೊಳ್ಳಲು ಹತ್ತಿರ ಹೋಗುವಾಗ, ಅದಕ್ಕೆ ಹಿಂಸೆ ಆಗುತ್ತದೆ, ಅದು ತಮಗೆಭಯ ಎಂದು ಭಾವಿಸಿ ಪ್ರತಿಕ್ರಿಯಿಸಿದಾಗ ಸಂಘರ್ಷಕ್ಕೆ ಕಾರಣವಾಗುತ್ತದೆ.ಈ ಸಮಸ್ಯೆಗೆ ಪರಿಹಾರ ಹುಡುಕುವುದಾದರೆ, ಮೊದಲು ಕಾಡಿನ ಉಳಿವಿಗೆಕಾನೂನು ರಕ್ಷಣೆ ನೀಡಬೇಕು. ರಿಂಗ್ ರಸ್ತೆ ಸುತ್ತಲೂ ಉಳಿದಿರುವ ಪಾಚ್ ಕಾಡುಗಳನ್ನು ‘ಅರ್ಬನ್ ಗ್ರೀನ್ ಝೋನ್’ ಆಗಿ ಘೋಷಿಸುವುದು ಅಗತ್ಯ. ಎರಡನೆಯದಾಗಿ, ಗ್ರೀನ್ ಬೆಲ್ಟ್ ಅನ್ನು ಪುನಃ ಸ್ಥಾಪಿಸುವುದು ಬಹಳ ಮುಖ್ಯ. ಇದು ಪ್ರಾಣಿಗಳ ಸಂಚಲನಕ್ಕೆ ನೈಸರ್ಗಿಕ ಮಾರ್ಗವಾಗಿ ಕೆಲಸ ಮಾಡುತ್ತದೆ. ನಗರ ಹೊರವಲಯದಲ್ಲಿ ಕಸದ ನಿರ್ವಹಣೆಯನ್ನು ಕಟ್ಟುನಿಟ್ಟಾಗಿಸಬೇಕು. ಹಂದಿ ಹಾಗೂ ನಾಯಿಗಳನ್ನು ಆಕರ್ಷಿಸುವಂತಹ ಕಸದ ಗುಡ್ಡೆಗಳು ಚಿರತೆಗೆ ನಗರ ಪ್ರವೇಶದ ನೇರ ಆಹ್ವಾನವಾಗುತ್ತವೆ. ಅಕ್ರಮ ಲೇಔಟ್‌ಗಳನ್ನು ನಿಯಂತ್ರಿಸದಿದ್ದರೆ ಮೈಸೂರಿನ ಪರಿಸರ ಸಮತೋಲನ ಸಂಪೂರ್ಣ ಕುಸಿಯುವುದು ಖಂಡಿತ.

ಜನರಲ್ಲಿ ಜಾಗೃತಿ ಮೂಡಿಸುವುದೂ ತುಂಬಾ ಮುಖ್ಯ. ಚಿರತೆಯನ್ನು ನೋಡಿದರೆ ಜನರು ದೂರವೇ ನಿಲ್ಲಬೇಕು, ಹತ್ತಿರ ಹೋಗಬಾರದು, ಮಕ್ಕಳನ್ನು ಹೊರಗೆ ಬಿಡಬಾರದು, ಪಶುಗಳನ್ನು ಸರಿಯಾಗಿ ಕಾಯ್ದುಕೊಳ್ಳಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಕೆಲಸವನ್ನು ಸುಗಮವಾಗಿ ಮಾಡಲು ಜನರು ಸಹಕರಿಸಬೇಕು. ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು ಮತ್ತು ವಾಣಿಜ್ಯ ಕೇಂದ್ರಗಳು ಅಲ್ಲ. ನಿಜವಾದ ಅಭಿವೃದ್ಧಿ ಎಂದರೆ ಪ್ರಕೃತಿ, ಮನುಷ್ಯ ಮತ್ತುಕಾಡುಜೀವಿಗಳು ಸಮತೋಲನದಿಂದ ಬದುಕುವ ಪರಿಸರ. ಮೈಸೂರಿನ ನೈಜ ಸೌಂದರ್ಯ ಅರಮನೆ, ರಸ್ತೆಗಳು ಹಾಗೂ ಕಟ್ಟಡಗಳ ಜೊತೆ, ಅದರ ಹಸಿರುಪ್ರದೇಶಗಳಲ್ಲಿ, ಜೀವವೈವಿಧ್ಯದಲ್ಲಿ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿಯೂ ಇದೆ. ಚಿರತೆಗಳು ನಗರ ಪ್ರವೇಶವು ನಮಗೆ ಪ್ರಕೃತಿಯಿಂದ ಬಂದಿರುವ ಒಂದು ನೇರ ಸಂದೇಶ: ‘ನನ್ನ ವಾಸಸ್ಥಳವನ್ನು ಕಾಪಾಡಿ.’ ಇಂದು ನಾವು ಕಂಡುಕೊಳ್ಳುತ್ತಿರುವ ಸಮಸ್ಯೆ, ನಾಳೆ ಮತ್ತಷ್ಟು ದೊಡ್ಡ ಸಮಸ್ಯೆಯ ರೂಪ ತಾಳಬಹುದು.

ಆದ್ದರಿಂದ ನಗರ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯನ್ನು ಮರೆಯದೇ ಮುಂದುವರಿಸಬೇಕು. ಮೈಸೂರನ್ನು ಮುಂದಿನ ತಲೆಮಾರಿಗೆ ನೀಡುವಾಗ ಅದು ಕೇವಲ ಕಟ್ಟಡಗಳ ನಗರವಾಗಿರದೇ, ಜೀವವೈವಿಧ್ಯ ಮತ್ತು ಪ್ರಕೃತಿ ಸಮತೋಲನ ಹೊಂದಿರುವ ನಗರವಾಗಿರಬೇಕು.

” ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆಗಳು ಮತ್ತು ವಾಣಿಜ್ಯ ಕೇಂದ್ರಗಳು ಅಲ್ಲ. ನಿಜವಾದ ಅಭಿವೃದ್ಧಿ ಎಂದರೆ ಪ್ರಕೃತಿ, ಮನುಷ್ಯ ಮತ್ತು ಕಾಡುಜೀವಿಗಳು ಸಮತೋಲನದಿಂದ ಬದುಕುವ ಪರಿಸರ”

ಶ್ರೇಯಸ್ ದೇವನೂರು

ಆಂದೋಲನ ಡೆಸ್ಕ್

Recent Posts

ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ; ಟಾಪ್-10 ಕಂಪನಿಗಳಲ್ಲಿ 7ಕ್ಕೆ ಭಾರೀ ನಷ್ಟ

ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…

43 mins ago

ಎಲ್‌ಪಿಜಿ ಹೊತ್ತ ಮತ್ತೆರಡು ಹಡಗು ಭಾರತದತ್ತ

ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…

51 mins ago

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

55 mins ago

ಅಸ್ಸಾಂ ಚುನಾವಣೆ | ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

1 hour ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ : ​ಆಹಾರ,ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ

ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ‌ ಎಲ್.ಪಿ.ಜಿಗೆ ಯಾವುದೇ…

1 hour ago

ಹನೂರು | ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಓಡಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹನೂರು : ಶನಿವಾರ ಮಧ್ಯರಾತ್ರಿ ಎರಡು ಗಂಟೆ ವೇಳೆಯಲ್ಲಿ ಯಾರೋ ಆಸಾಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಐದಾರು ಜನರು ಓಡಾಡುತ್ತಿರುವ ದೃಶ್ಯ…

1 hour ago