ಅಂಕಣಗಳು

ಕನ್ನಡದ ನೆಲದ ಕಾಡುವ ಕತೆ ಹೇಳುವ ‘ಕಹಾನಿ’

ಗೋವಿಂದರಾಜು ಲಕ್ಷ್ಮೀಪುರ

ಪತ್ರಕರ್ತ ಕಾರ್ತಿಕ್ ರಚನೆಯ ಇಂಗ್ಲಿಷ್ ಭಾಷೆಯ ಕಥಾಸಂಕಲನ

ಹಿಂದಿ ಶೀರ್ಷಿಕೆಯಂತೆ ಧ್ವನಿಸುವ ‘ಕಹಾನಿ’ ಕೃತಿಯು, ಅಪ್ಪಟ ಕನ್ನಡ ನೆಲದ ಭಾವಕ್ಕೆ ಬಾಯಾಗಿದೆ. ಲೇಖಕರು ಪತ್ರಿಕಾ ವರದಿಯಲ್ಲಿ ಹೇಳಲಾಗದ ವಿಷಯಗಳಿಗೆ ಇಲ್ಲಿ ಕಥನ ರೂಪ ಕೊಟ್ಟಿದ್ದಾರೆ. ಟೋಪಿ ರಾಮ, ಪಾರ್ವತಿ, ಶಾಂತಿಪುರ, ಸಿಕೋಪಾತ್, ಪುನರ್ಜನ್ಮ, ನಿಷ್ಕಲ್ಮಶ ಮನಸ್ಸು, ಸುಖಾಂತ್ಯ ಇತ್ಯಾದಿ ಹೆಸರಿನ ಮೈಸೂರು ಸುತ್ತಮುತ್ತ ನಡೆಯುವಕತೆಗಳು ಎಲ್ಲೋ ಕೇಳಿದಂತೆ ಕಂಡರೂ ಸಿನಿಮೀಯ ಮಾದರಿಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ.

ಅಪರಿಚಿತ ಮುಖಗಳು, ದಮನಿತ ದನಿಗಳು, ಪ್ರತಿನಿತ್ಯ ಕಾಣುವ, ಕಾಡುವ ಪ್ರೀತಿ, ನೋವು, ವಿರಹ, ವೇದನೆಗಳು; ತುಳಿತಕ್ಕೊಳಗಾದ, ಕಡೆಗಣಿತ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ, ದಲಿತ ದಮನಿತ ಮತ್ತು ಇನ್ನಿತರ ನಿರ್ಲಕ್ಷಿತ ಸಮುದಾಯಗಳ ಕತೆಗಳನ್ನು ವಿಶೇಷ ವರದಿಯಂತೆ ತೋರುವ ಪುಟ್ಟ ಕಥನಗಳಾಗಿ ರೂಪಿಸಿದ್ದಾರೆ.೮೦ರ ದಶಕದ ಆಸುಪಾಸಿನಲ್ಲಿ ಮೈಸೂರು, ಕೊಡಗು, ಶ್ರೀರಂಗಪಟ್ಟಣದ ಆಸುಪಾಸಿನಲ್ಲಿ ನಡೆಯುವ ಎಲ್ಲ ಕತೆಗಳೂ ಸ್ಥಳ ವ್ಯಾಪ್ತಿಯನ್ನು ಮೀರಿದ ಅನನ್ಯತೆಯನ್ನು ಕಂಡುಕೊಂಡಿವೆ. ಪಟ್ಟಣದ ಕತೆಗಳಿಗೆ ಶಾಯಿಯಾದಂತೆ ಕಾಣುವ ಕತೆಗಳು, ಅಲ್ಲಿನ ಬಡ ಮತ್ತು ನಿರ್ಲಕ್ಷಿತ ಜನರ ನೋವಿಗೆ ಸ್ಪಂದಿಸಿವೆ. ಎಲ್ಲೂ ಹೆಚ್ಚು ಕಲ್ಪನೆಯ ವಿವರಣೆ ಇಲ್ಲದ ಕತೆಗಳು ಈ ಕಾಲಮಾನದ ಓದುಗರ ಓದಿನ ಓಘಕ್ಕೆ ಹೊಂದಿ ಕೊಳ್ಳುವ ಗುಣವನ್ನು ಗಳಿಸಿಕೊಂಡಿವೆ.

ಇದನ್ನೂ ಓದಿ:-ಲಡಾಖ್ ಬೇಡಿಕೆಗೆ ಕೇಂದ್ರ ವಿಮುಖವಾಗಬಾರದು

ಮುಖ್ಯವಾಹಿನಿ ಗಂಭೀರ ಸಾಹಿತ್ಯ ಕಥನ ಶೈಲಿಯಲ್ಲಿರದ ಇಲ್ಲಿನ ಕತೆಗಳು ಆಧುನಿಕ ಕಥನ ರೂಪ ಪಡೆದಿವೆ. ಕಾಲ್ಪನಿಕ ಕತೆಗಳು ಎಂದು ಆರಂಭದಲ್ಲೇ ಪ್ರಮಾಣ ಮಾಡುವ ಲೇಖಕರ ಕತೆಗಳು ನಿಜ ಜೀವನದ ಸತ್ಯ ಕತೆಗಳು ಎನಿಸಿದರೆ ಆಶ್ಚರ್ಯವಿಲ್ಲ. ಲೇಖಕ ಕಾರ್ತಿಕ್, ದಶಕದಿಂದಲೂ ಇಂಗ್ಲಿಷ್ ದೈನಿಕ ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ‘ಕಹಾನಿ’ ಕೃತಿ ಬಿಡುಗಡೆ

ಮೈಸೂರು: ಪತ್ರಕರ್ತ ಕೆ.ಕೆ.ಕಾರ್ತಿಕ್ ಅವರ ‘ಕಹಾನಿ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸೆ.೨೮ರಂದು ಸಂಜೆ ೫ಕ್ಕೆ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ‍್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಪುಸ್ತಕವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಮಾನ್ಸೋರೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಪತ್ರಕರ್ತ ಡಾ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಮೈಸೂರು ಪುಸ್ತಕ ಕ್ಲಬ್‌ಗಳ ಚಾರಿಟಬಲ್ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷರಾದ ಶುಭಾ ಸಂಜಯ್ ಅರಸ್ ಕೃತಿ ಕುರಿತು ಮಾತನಾಡಲಿದ್ದಾರೆ.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

2 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago