ಅಂಕಣಗಳು

ಇಂಟರ್ನ್‌ಶಿಪ್ ಯೋಜನೆ; ಯುವ ಭಾರತದ ನಿರಾಸಕ್ತಿ

ಅಸಮರ್ಪಕ ತರಬೇತಿ, ಕಡಿಮೆ ಸ್ಟೈಫಂಡ್ ದೂರುಗಳು

ಡಿಜಿಟಲ್ ಭಾರತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಪೈಕಿ ಯುವ ಸಮೂಹದ ನಿರುದ್ಯೋಗ ಸರ್ಕಾರವನ್ನೂ, ನಾಗರಿಕರನ್ನೂ ಕಾಡುತ್ತಿರುವ ಜಟಿಲ ಸಮಸ್ಯೆ. ೨೦೨೪ರ ಅಧಿಕೃತ ವರದಿಯೊಂದರ ಅನುಸಾರ ಸೆಕೆಂಡರಿ ಹಂತದವರೆಗೆ ವಿದ್ಯಾರ್ಜನೆ ಪೂರೈಸಿರುವ ಯುವ ಸಮುದಾಯದಲ್ಲಿ ನಿರುದ್ಯೋಗ ಪ್ರಮಾಣ ಶೇ.೧೮.೪ರಷ್ಟಿದೆ. ಪದವೀಧರರಲ್ಲಿ ಇದು ಶೇ.೨೯.೧ರಷ್ಟಿರುವುದು ಶೋಚನೀಯ ಅಂಶ. ೨೦೧೪ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕೇಂದ್ರ ಬಿಜೆಪಿ – ಎನ್‌ಡಿಎ ಸರ್ಕಾರದ ಘೋಷವಾಕ್ಯ ಇರುವುದು ನಿರುದ್ಯೋಗ ನಿವಾರಣೆ ಅಥವಾ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ. ಈ ದೃಷ್ಟಿಯಿಂದಲೇ ಅಗ್ನಿವೀರ್‌ನಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವುದಲ್ಲದೆ, ಉದ್ಯೋಗಕ್ಕಾಗಿ ಹಂಬಲಿಸದೆ ಯುವ ಸಮೂಹ ಸ್ವಾವಲಂಬಿಯಾಗಲು ಸ್ಟಾರ್ಟ್‌ಅಪ್ ಔದ್ಯಮಿಕ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.

ಇಂಟರ್ನ್‌ಶಿಪ್ ಯೋಜನೆಯ ಸ್ವರೂಪ ಈ ದೃಷ್ಟಿಯಿಂದಲೇ ೨೦೨೪ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ, ಕೈಗಾರಿಕೆಗಳಲ್ಲಿ ಉದ್ಯೋಗಾರ್ಹತೆ ಪಡೆಯಲು ನೆರವಾಗಬಹುದಾದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿಗೊಳಿಸಿತ್ತು.

ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕ/ಯುವತಿಯರಿಗೆ ದೇಶದ ಅತ್ಯುನ್ನತ ೫೦೦ ಉದ್ಯಮಗಳಲ್ಲಿ ಇಂಟರ್ನ್‌ಶಿಪ್ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಂಪೆನಿಗಳು ವಿಶಾಲ ವ್ಯಾಪ್ತಿಯ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಆಟೋಮೊಬೈಲ್, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಹಣಕಾಸು, ಮಾರಾಟ ಕ್ಷೇತ್ರ, ಮಾರುಕಟ್ಟೆ ಮತ್ತಿತರ ವಲಯಗಳನ್ನೂ ಒಳಗೊಳ್ಳುವುದು ಯೋಜನೆಯ ಉದ್ದೇಶಗಳಲ್ಲೊಂದಾಗಿತ್ತು. ೧೨ ತಿಂಗಳುಗಳ ಕಾಲ ನೀಡಲಾಗುವ ಈ ಇಂಟರ್ನ್‌ಶಿಪ್ ಯೋಜನೆಯಲ್ಲಿ ಕನಿಷ್ಠ ೧೦ನೇ ತರಗತಿಯನ್ನು ಪೂರೈಸಿರುವ ೨೧ರಿಂದ ೨೪ರ ವಯೋಮಾನದ ಯುವ ಸಮೂಹಕ್ಕೆ ಅವಕಾಶ ಇರುತ್ತದೆ.

ಇದನ್ನು ಓದಿ : ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ೧,೪೨೫ ಹುದ್ದೆಗಳು

ಈ ಇಂಟರ್ನ್‌ಶಿಪ್ ಅಭ್ಯರ್ಥಿಗಳಿಗೆ ನೀಡುವ ಸ್ಟೈಫಂಡ್ ಮಾಹೆಯಾನ ೫,೦೦೦ ರೂ.ಗಳಾಗಿದ್ದು, ಇದರಲ್ಲಿ ಸರ್ಕಾರದಿಂದ ೪,೫೦೦ ರೂ., ಕಂಪೆನಿಯಿಂದ ೫೦೦ ರೂ.ಗಳನ್ನು ಭರಿಸಲಾಗುತ್ತದೆ. ಪ್ರವೇಶದ ಹಂತದಲ್ಲಿ ಒಂದೇ ಕಂತಿನಲ್ಲಿ ೬,೦೦೦ ರೂ.ಗಳನ್ನು ನೀಡಲಾಗುತ್ತದೆ. ೨೦೨೪ರ ಅಕ್ಟೋಬರ್‌ನಲ್ಲಿ ಆರಂಭವಾದ ಯೋಜನೆಯ ಮೊದಲ ಹಂತದಲ್ಲಿ ೭೪೫ ಜಿಲ್ಲೆಗಳ ೨೮೦ ಕಂಪೆನಿಗಳು ಜಾಹೀರಾತು ನೀಡಿ ೧.೨೭ ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಿದ್ದವು. ಎರಡನೇ ಹಂತವು ೨೦೨೫ರ ಜನವರಿಯಲ್ಲಿ ಜಾರಿಯಾಗಿದ್ದು ೩೨೭ ಕಂಪೆನಿಗಳು ೧.೧೮ ಲಕ್ಷ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದವು.

ಮೊದಲನೇ ಹಂತದಲ್ಲಿ ಭರ್ತಿಯಾಗದ ಸ್ಥಾನಗಳನ್ನು ಎರಡನೇ ಹಂತದಲ್ಲಿ ಒಳಗೊಳ್ಳಲಾಗಿತ್ತು. ಮೊದಲನೇ ಹಂತದಲ್ಲಿ ೬೦ ಸಾವಿರ ಅಭ್ಯರ್ಥಿಗಳಿಗೆ ಅವಕಾಶಗಳನ್ನು ನೀಡಲಾಗಿತ್ತು. ಕಂಪೆನಿಗಳು ಅನೇಕರನ್ನು ಸೂಕ್ತವಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಈ ೬೦ ಸಾವಿರ ಅಭ್ಯರ್ಥಿಗಳ ಪೈಕಿ ಇಂಟರ್ನ್‌ಶಿಪ್ ತರಬೇತಿಗೆ ಸೇರ್ಪಡೆಯಾದವರು ಕೇವಲ ೮,೭೦೦ ಮಾತ್ರ. ಎರಡನೇ ಹಂತದಲ್ಲಿ ೨.೧೪ ಅರ್ಜಿದಾರರು ಇದ್ದರೂ, ೭೨ ಸಾವಿರ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಲಾಗಿತ್ತು ಆದರೆ ಸೇರ್ಪಡೆಯಾದವರು ಕೇವಲ ೨೩ ಸಾವಿರ ಮಾತ್ರ. ಈ ನಿರಾಶಾದಾಯಕ ಫಲಿತಾಂಶಕ್ಕೆ ತಜ್ಞರು ಮತ್ತು ಯುವ ಸಬಲೀಕರಣ-ಉದ್ಯೋಗ ವಲಯದ ಕಾರ್ಯಕರ್ತರು ಹಲವು ಕಾರಣಗಳನ್ನು ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುದು, ೨೧-೨೪ರ ವಯೋಮಾನದ ಯುವಜನತೆ ಸಾಮಾನ್ಯವಾಗಿ ವಿದ್ಯಾಭ್ಯಾಸ ಪೂರೈಸಿ ಉದ್ಯೋಗವನ್ನು ಅರಸುತ್ತಿರುತ್ತಾರೆ. ಹಾಗಾಗಿ ಉದ್ಯೋಗ ಖಾತರಿ ನೀಡದ ಇಂಟರ್ನ್‌ಶಿಪ್ ಯೋಜನೆಯಲ್ಲಿ ಆಸಕ್ತಿ ತೋರುವುದಿಲ್ಲ.

ವಾಸ್ತವಿಕ ನೆಲೆಯ ಸಮಸ್ಯೆಗಳು: ಎಸ್.ಪಿ.ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸಂಸ್ಥೆಯ ಸಂಶೋಧಕ ಪ್ರಾಧ್ಯಾಪಕ ತನೋಜ್ ಮೇಶರಾಮ್, ಸ್ಟೆ ಫಂಡ್ ಮೊತ್ತವು ಬಹಳ ಕಡಿಮೆಯಾಗಿರುವುದರಿಂದ, ಬೇರೆ ಯಾವುದೇ ಪರ್ಯಾಯ ಇಲ್ಲದ ಯುವಜನರು ಮಾತ್ರ ಈ ಯೋಜನೆಗೆ ನೋಂದಾಯಿಸಿಕೊಳ್ಳುತ್ತಾರೆ. ಇದಕ್ಕೆ ಇತರ ಕಾರಣಗಳೂ ಸಾಕಷ್ಟಿವೆ. ಒಂದು ಕಂಪೆನಿಯು ಕೇವಲ ಏಳು ದಿನಗಳು ಮಾತ್ರ ತರಬೇತಿ ನೀಡಿರುವುದನ್ನು ಅಭ್ಯರ್ಥಿಯೊಬ್ಬರು ಉಲ್ಲೇಖಿಸುತ್ತಾರೆ.

ಅಷ್ಟೇ ಅಲ್ಲದೆ ತರಬೇತಿಯು ಪ್ರಾಥಮಿಕ ಸ್ವರೂಪದ್ದಾಗಿದ್ದು, ಅಪೇಕ್ಷಿತ ಕೌಶಲಗಳನ್ನು ಪರಿಚಯಿಸುವುದಷ್ಟೇ ಆಗುತ್ತದೆ ಎಂದೂ ಹೇಳುತ್ತಾರೆ. ಇಂಟರ್ನ್‌ಶಿಪ್ ಅವಧಿಯಲ್ಲಿ ತಮಗೆ ಹೆಚ್ಚಿನ ಕೆಲಸ ಕೊಡುವುದಿಲ್ಲ, ಸಾಫ್ಟ್‌ವೇರ್ ಕಲಿತು ಬಂದಿರುವವರಿಗೆ ಇದು ಪುನರಾವರ್ತನೆಯಾಗುತ್ತದೆ ಎಂಬ ಆಕ್ಷೇಪಗಳೂ ಕೇಳಿಬಂದಿವೆ.

ಇದನ್ನು ಓದಿ : ಗುರುವಿಲ್ಲದ ಗುರಿ ದೂರ!

ವಾಸ್ತವ ಅನುಭವದ ಹಿನ್ನೆಲೆಯಲ್ಲಿ ನೋಡಿದಾಗ ಅಭ್ಯರ್ಥಿಗಳಿಗೆ ಪ್ರವೇಶದ ಸಂದರ್ಭದಲ್ಲಿ ನೀಡುವ ೬,೦೦೦ ರೂ. ಮತ್ತು ಮಾಸಿಕ ೫,೦೦೦ ರೂ.ಗಳು, ಅವರ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. ಕೆಲವೊಮ್ಮೆ ಹಲವು ಕಿಲೋಮೀಟರ್‌ಗಳಿಗೂ ಹೆಚ್ಚು ದೂರದ ಕಂಪೆನಿಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಸಾರಿಗೆ ವೆಚ್ಚ, ಊಟ ತಿಂಡಿಯ ವೆಚ್ಚ ಮತ್ತು ಮೊಬೈಲ್ ಮತ್ತಿತರ ಸೇವೆಗಳ ಖರ್ಚುಗಳನ್ನು ನಿಭಾಯಿ ಸುವುದು ದುಸ್ತರವಾಗುತ್ತದೆ. ಕಂಪೆನಿ ಇರುವ ಸ್ಥಳದಲ್ಲೇ ತಂಗುವುದಾದರೆ, ಬಾಡಿಗೆ ಇತರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ.

ವಯೋಮಿತಿಯನ್ನು ೧೮ ವರ್ಷಗಳಿಗೆ ನಿಗದಿಪಡಿಸುವುದರಿಂದ ಹೆಚ್ಚಿನ ಯುವಜನತೆಗೆ ಉಪಯೋಗವಾಗುತ್ತದೆ ಎಂಬ ಅಭಿಪ್ರಾಯವನ್ನೂ ತಜ್ಞರು ವ್ಯಕ್ತಪಡಿಸುತ್ತಾರೆ. ಹಾಗೆಯೇ ಸ್ಟೆ ಫಂಡ್ ಮೊತ್ತ ಅತಿ ಕಡಿಮೆ ಇರುವುದರಿಂದ, ಅವರಿಗೆ ಯಾವುದೂ ವಸತಿ ಸೌಲಭ್ಯ ನೀಡದೆ ಹೋದರೆ, ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಗಳು ನಿರ್ಣಾಯಕವಾಗುತ್ತವೆ. ಅಭ್ಯರ್ಥಿಗಳ ಮನೆಗೆ ಹತ್ತಿರ ಇರುವ ಕಂಪೆನಿಗಳಲ್ಲೇ ಇಂಟರ್ನ್‌ಶಿಪ್ ದೊರೆತರೆ ಕೊಂಚಮಟ್ಟಿಗೆ ಕುಟುಂಬದ ಹೊರೆ ಕಡಿಮೆಯಾಗುತ್ತದೆ ಎಂಬುದು ಕೆಲ ತಜ್ಞರ ಅಭಿಮತ. ಕಂಪೆನಿಗಳು ಇಂಟರ್ನ್‌ಶಿಪ್ ಒದಗಿಸಲು ಸರ್ಕಾರ ಕಡ್ಡಾಯ ಮಾಡಲಾಗಲೀ, ಒತ್ತಡ ಹೇರಲಾಗಲೀ ಸಾಧ್ಯವಿಲ್ಲ. ಆದರೆ, ಒಂದು ವರ್ಷ ಇಂಟರ್ನ್ ಶಿಪ್ ಪೂರೈಸಿದ ನಂತರವೂ ಎಲ್ಲಿಯೂ ಉದ್ಯೋಗ ದೊರೆಯದೆ ಹೋದರೆ ಯುವಜನರು ಹತಾಶೆಗೊಳಗಾಗುವುದು ಸಹಜ.

ಭವಿಷ್ಯದ ಚಿಂತೆಯಲ್ಲಿ ಯುವಸಮೂಹ: ಇಂಟರ್ನ್‌ಶಿಪ್ ಮುಗಿದ ಮೇಲೆ ಅಭ್ಯರ್ಥಿಗಳು ಕಲಿತ ಕೌಶಲಗಳಿಗೆ ಸೂಕ್ತವಾದ ನೌಕರಿ ದೊರೆಯದೆ ಹೋದರೆ, ಒಂದು ವರ್ಷದ ಕಲಿಕೆ ನಿರರ್ಥಕವೂ ಆಗುತ್ತದೆ. ಸರ್ಕಾರದ ಉದ್ದೇಶ ಒಳ್ಳೆಯದೇ ಆದರೂ, ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಕೈಗಾರಿಕೆಗಳು (Manufacturing Industries) ಹೆಚ್ಚು ಇಲ್ಲದಿರುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಬಹುತೇಕ ಯುವಕರು ಗಿಗ್ ಕಾರ್ಮಿಕರಾಗಿ, ಹೆಚ್ಚಿನ ವ್ಯಾಸಂಗ ಮಾಡಲಾಗದವರು ಕಟ್ಟಡ ನಿರ್ಮಾಣದಂತಹ ಕೆಲಸಗಳಲ್ಲಿ ತೊಡಗಿ ಜೀವನ ಸವೆಸಬೇಕಾಗುತ್ತದೆ.

ಈ ಉದ್ಯೋಗಗಳು ಸೃಷ್ಟಿಸುವ ಅನಿಶ್ಚಿತತೆ ಮತ್ತು ಅಭದ್ರತೆಯೇ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರಕವಾಗುತ್ತದೆ. ನವ ಉದಾರವಾದಿ ಕಾರ್ಪೊರೇಟ್ ಆರ್ಥಿಕತೆಯನ್ನೇ ಆರಾಧಿಸುವ, ಅನುಸರಿಸುವ ಸರ್ಕಾರಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. (ಈ ಲೇಖನದ ಮಾಹಿತಿ, ದತ್ತಾಂಶಗಳಿಗೆ ಆಧಾರ ” Why young Indians are not interested in the prime minister’s ambitious internship scheme”  ಜೊಹಾನಾ ದೀಕ್ಷಾ -ದ ಸ್ಕ್ರೋಲ್ ೧೨ ಸೆಪ್ಟೆಂಬರ್ ೨೦೨೫ )

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

6 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

6 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

8 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

8 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

9 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

9 hours ago