ಅಂಕಣಗಳು

ಹಿರಿಯರು ಮುಗ್ಗರಿಸದ ಹಾಗೆ ಮನೆಯವರು ಜಾಗ್ರತೆ ವಹಿಸಿ‌

ಡಾ.ದುಷ್ಯಂತ್.ಪಿ.

ನಾವು ಇದನ್ನು ಎಲ್ಲೆಡೆ ಕೇಳಿರುತ್ತೇವೆ. ‘ನಮ್ಮ ಅತ್ತೆ ಬಚ್ಚಲಲ್ಲಿ ಕಾಲುಜಾರಿ ಬಿದ್ದುಬಿಟ್ಟರು‘, ‘ನಮ್ಮ ತಂದೆ ಮೆಟ್ಟಿಲು ಇಳಿಯಬೇಕಾದರೆ ಬಿದ್ದರು‘, ‘ಅವರಿಗೆ ಮೂಳೆ ಮುರಿದಿದೆ, ಅಪರೇಷನ್ ಮಾಡುತ್ತಾರೋ, ಏನೋ ಗೊತ್ತಿಲ್ಲ. ಎಲ್ಲ ಕಡೆ ಚೆನ್ನಾಗಿ ಓಡಾಡಿಕೊಂಡಿದ್ರು ಇವಾಗ ಹೀಗೆ ಆಗಿಹೊಯ್ತು‘.

ಬೀಳುವುದರ ಬಗ್ಗೆ ನಾವು ಅಷ್ಟಾಗಿ ಗಮನ ನೀಡದಿದ್ದರೂ ಇದೊಂದು ಗಂಭೀರ ಆರೋಗ್ಯ ಸಮಸ್ಯೆ. ಅದರಲ್ಲೂ ಹಿರಿಯರಲ್ಲಿ ಇದು ದೈಹಿಕ ತೊಂದರೆ ಮಾತ್ರವಲ್ಲದೆ ಮಾನಸಿಕವಾಗಿಯೂ ಅವರನ್ನು ಕಾಡುತ್ತದೆ.

ಮನೆಯಲ್ಲಿ ವೃದ್ಧ ದಂಪತಿ ಇಬ್ಬರೇ ವಾಸಿಸುತ್ತಿದ್ದರು. ಗಂಡ ಮನೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಮೂಳೆ ಮುರಿದಿದ್ದು ಖಚಿತವಾಗಿತ್ತು. ಮೂಳೆ ಮುರಿದ ಜಾಗ, ವಯಸ್ಸು ಮತ್ತು ಅವರಿಗಿದ್ದ ಇತರೆ ಕಾಯಿಲೆಗಳಿಂದಾಗಿ ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಮುರಿದ ಜಾಗಕ್ಕೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಅಂದರೆ ಎರಡು ತಿಂಗಳು ಹಾಸಿಗೆ ಹಿಡಿಯಬೇಕು. ಮನೆಯಲ್ಲಿ ನೋಡಿಕೊಳ್ಳಲು ಇವರ ಮಡದಿ ಒಬ್ಬರೇ, ಅವರೂ ವೃದ್ದರೇ, ಅವರಿಗೂ ಕಾಯಿಲೆಗಳು. ಮನೆಯಲ್ಲಿನ ಹೆಚ್ಚಿನ ಕೆಲಸ ಹಾಗೂ ದಿನಸಿ, ತರಕಾರಿ ತರುವುದು ಎಲ್ಲವನ್ನು ಇವರ ಗಂಡನೇ ಮಾಡುತ್ತಿದ್ದರಿಂದ ಈಗ ಇವರಿಗೆ ಸಂಕಷ್ಟದ ಸ್ಥಿತಿ. ಅಕ್ಕಪಕ್ಕದವರ ಸಹಾಯ ಎಷ್ಟು ದಿನ? ಮೂಳೆ ಮುರಿತದ ನೋವು ಒಂದೆಡೆಯಾದರೆ ನಿತ್ಯ ಜೀವನದ ಸಂಕಷ್ಟ ಇನ್ನೊಂದು ಕಡೆ.

ವಯೋವೃದ್ಧರಲ್ಲಿ ‘ಬೀಳುವುದು’ ಗಂಭೀರ ಸಮಸ್ಯೆ ಇದಕ್ಕೆ ಕಾರಣಗಳು ಹಲವು. ಕೆಲವೊಮ್ಮೆ, ಜಾರುವ ನೆಲ, ಎತ್ತರದ ಮೆಟ್ಟಿಲು, ಹಿಡಿಯಲು ಆಧಾರ ಇಲ್ಲದಿರುವುದು ಕಾರಣವಾಗಬಹುದು. ಹಾಗೆೆಯೇ ನಮ್ಮ ದೇಹದಲ್ಲಿರುವ ಇತರ ರೋಗಗಳು ಸಹ ಬೀಳುವುದಕ್ಕೆ ಕಾರಣವಾಗುತ್ತವೆ. ವೃದ್ಧರಲ್ಲಿ ಉಂಟಾಗುವ ದೃಷ್ಟಿ ದೋಷಗಳು (ಕಣ್ಣಿನ ಪೊರೆ, ರೇಟಿನ ಸಮಸ್ಯೆ), ನರರೋಗ ಸಂಬಂಧಿ ಖಾಯಿಲೆಗಳು (ಪಾರ್ಕಿನ್ಸನ್, ನ್ಯೂಕ್), ಮೂಳೆಗಳ ಸವೆಯುವಿಕೆ (ಓನ್ವಯೋಪೋರೂಸಿಸ್), ರಕ್ತದಲ್ಲಿ ಕಿಣ್ವಗಳ ಏರುಪೇರು (electrolyte imbalance), ಒಳಕಿವಿಯಲ್ಲಿನ ತೊಂದರೆಯಿಂದಾಗಿ ದೇಹದ ಸಮತೋಲನ ತಪ್ಪುವುದು (vertigo) ಇವುಗಳೆಲ್ಲವೂ ಬೀಳುವುದಕ್ಕೆ ಕಾರಣವಾಗಬಹುದು.

ಬೀಳುವಿಕೆಯಿಂದಾಗಿ ಉಂಟಾಗುವ ದೈಹಿಕ ತೊಂದರೆಯಿಂದಾಗಿ ವೃದ್ಧರ ಚಲನಶೀಲತೆ ಕಡಿಮೆಯಾಗುತ್ತದೆ. ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಹೊಸದಾಗಿ ಬರಬಹುದು ಅಥವಾ ಈಗಾಗಲೇ ಇರುವ ಕಾಯಿಲೆಗಳು ಉಲ್ಬಣಿಸಬಹುದು. ಚಲನಶೀಲತ ಕಡಿಮೆಯಾಗಿ, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ನಿಯಂತ್ರಣ ಕಳೆದುಕೊಳ್ಳುತ್ತದೆ. ಮಲಬದ್ಧತೆ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ, ನೋಂಕು, ಕೀಲುಗಳಲ್ಲಿ ನೋವು, ಅಸ್ತಮಾ ಮತ್ತು ಉಸಿರಾಟದ ಸಮಸ್ಯೆ ಹೆಚ್ಚಾಗುವುದು, ಸದಾಕಾಲ ಹಾಸಿಗೆಯಲ್ಲಿ ಮಲಗಿರುವುದರಿಂದ ಚರ್ಮದಲ್ಲಿ ಹುಣ್ಣು, ಭ್ರಮೆ ಮತ್ತು ಮರೆವು (delirium and dementia) ಉಂಟಾಗಬಹುದು.

ಬೀಳುವಿಕೆಯನ್ನು ತಡೆಯಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬಹುದು. ತಮಲ್ಲಿರುವ ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ನರರೋಗ ಸಂಬಂಧಿ ಸಮಸ್ಯೆಗಳಿಗೆ ಸರಿಯಾದ ಮತ್ತು ನಿಯಮಿತವಾದ ಚಿಕಿತ್ಸೆ, ಬೀಳುವಿಕೆಯ ಸಂಭವವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು, ಒಮ್ಮೆ ಬೀಳುವ ಹಾಗೆ ಅನುಭವ ಆಗಿದ್ದು, ವೈದ್ಯರಲ್ಲಿ ಇದರ ಬಗ್ಗೆ ತಿಳಿಸಿ, ಸಂಪೂರ್ಣ ಪರೀಕ್ಷೆಗೆ ಒಳಪಟ್ಟು ಅದಕ್ಕಿರುವ ಕಾರಣಗಳನ್ನು ನಿವಾರಿಸುವುದು, ಹೊರಗಡೆ ಓಡಾಡುವಾಗ ಎಚ್ಚರಿಕೆ ವಹಿಸುವುದು. ಮನೆಯಲ್ಲಿ ಜಾರುವ ನೆಲ, ಎತ್ತರದ ಮೆಟ್ಟಿಲುಗಳನ್ನು ಸರಿಪಡಿಸುವುದು, ಬಚ್ಚಲುಮನೆ ಮತ್ತು ಓಡಾಡುವ ಜಾಗಗಳಲ್ಲಿ ಹಿಡಿಕೆಗಳನ್ನು ಅಳವಡಿಸುವುದು, ಅಗತ್ಯಬಿದ್ದಾಗ ಊರುಗೋಲು ಅಥವಾ ವಾಕರ್ ಬಳಸುವುದು ತುರ್ತು ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಯೋಜನೆಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳುವುದು.

ಹೀಗೆ ಹಲವು ಎಚ್ಚರಿಕೆಗಳ ಮೂಲಕ ಬೀಳುವುದನ್ನು ತಡೆಯಬಹುದು. ಬೀಳುವಿಕೆಗೆ ಚಿಕಿತ್ಸೆಗೆ ಹಲವು ಆಯಾಮಗಳು, ವೈದ್ಯಕೀಯ ಚಿಕಿತ್ಸೆ ಅಲ್ಲದೆ, ದೀರ್ಘಕಾಲ ಆರೈಕೆ ಮತ್ತು ಶುಶ್ರೂಷೆ ಅಗತ್ಯ. ಇದರಲ್ಲಿ ಕುಟುಂಬದ ಜವಾಬ್ದಾರಿ ಹೆಚ್ಚಾಗಿರುತ್ತದೆ ಮತ್ತು ಕುಟುಂಬದ ಸಹಾಯವಿಲ್ಲದ ಸಂದರ್ಭದಲ್ಲಿ ಸಮಾಜ ಕೂಡ ವೃದ್ಧರ ನೆರವಿಗೆ ಬರಬೇಕಾಗುತ್ತದೆ. ಇದರಲ್ಲಿ ನಮ್ಮೆಲ್ಲರ ಪಾತ್ರ ಮತ್ತು ಕಳಕಳಿ ಬಹಳ ಮುಖ್ಯ.

andolanait

Recent Posts

ಹನೂರು| ಮೇಕೆ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರಬೆಟ್ಟ ಕಾಡಂಚಿನ ಇಂಡಿಗನತ್ತ–ನಾಗಮಲೆ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕ…

3 hours ago

ಮಲೆ ಮಹದೇಶ್ವರನ ಹುಂಡಿಯಲ್ಲಿ 2.16 ಕೋಟಿ ರೂ. ಸಂಗ್ರಹ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ…

3 hours ago

ನೀಟ್‌ ಪರೀಕ್ಷೆ ನಡೆಸುವ ಅಧಿಕಾರ ಆಯಾಯ ರಾಜ್ಯಗಳಿಗೆ ನೀಡಲಿ: ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ವೈದ್ಯಕೀಯ ಕಾಲೇಜುಗಳಿಗೆ ಪರೀಕ್ಷೆ ನಡೆಸುವ ಸಿಇಟಿ ವ್ಯವಸ್ಥೆಯನ್ನು ನಡೆಸಲು ರಾಜ್ಯಗಳಿಗೇ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.…

4 hours ago

ಎಬೋಲಾಗೆ 136 ಮಂದಿ ಬಲಿ: WHO ಕಳವಳ

ಕಾಂಗೋ: ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ಮಾರಣಾಂತಿಕ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಈ ಬಗ್ಗೆ ವಿಶ್ವ ಆರೋಗ್ಯ…

5 hours ago

ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ.25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ…

5 hours ago

ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ: ಯಥಾಸ್ಥಿತಿ ಮುಂದುವರಿಸಲು ಸುಪ್ರೀಂ ಸೂಚನೆ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂಬಂಧ ಸುಪ್ರಿಂಕೋರ್ಟ್ ಮುಂದಿನ ಅರ್ಜಿ ವಿಚಾರಣೆಯನ್ನು…

5 hours ago