• ಅನಿಲ್ ಅಂತರಸಂತೆ
6-7 ಶತಮಾನಗಳ ಹಿಂದೆ ವಿಶ್ವದ ಶ್ರೀಮಂತ ನಗರಗಳಲ್ಲಿ ಒಂದಾಗಿ ಮೆರೆದ ಹಂಪಿ ಈಗ ಹಾಳು ಕೊಂಪೆಯಂತಾಗಿದೆ. ಶತಮಾನಗಳ ಹಿಂದಿನ ವೈಭವ ಕುಂದಿದ್ದು, ಭವ್ಯ ಕಲಾಕೃತಿ, ವಾಸ್ತು ಶಿಲ್ಪ ಭಗ್ನವಾಗಿ ನಿಂತಿವೆ.
1336ರ ವಿದ್ಯಾರಣ್ಯರ ಕಾಲಘಟದಲ್ಲಿ ಮಾರ್ಗ ದರ್ಶನದಂತೆ ಹರಿಹರ, ಬುಕ್ಕರಾಯ ಕಟ್ಟಿ ಬೆಳೆಸಿದ ಸಾಮ್ರಾಜ್ಯವೇ ವಿಜಯನಗರ. ವಿಜಯನಗರದ 2-3 ಶತಮಾನಗಳ ಆಡಳಿತಾವಧಿಯಲ್ಲಿ ಹಂಪಿ ವಿಶ್ವದ ನಾನಾ ಸಾಮ್ರಾಜ್ಯಗಳ ಕಣ್ಣುಕುಕ್ಕುವಂತೆ ವೈಭವದಿಂದ ಮೆರೆದಿತ್ತು. 1565ರಲ್ಲಿ ವಿಜಯನಗರದ ಸುತ್ತಲಿನ ಶತ್ರು ಸುಲ್ತಾನ ಸಾಮ್ರಾಜ್ಯಗಳು ಒಟ್ಟಾಗಿ ನಡೆಸಿದ ತಾಳಿಕೋಟೆ ಕದನದಲ್ಲಿ ವಿಜಯನಗರ ಶರಣಾಗಬೇಕಾಯಿತು. ಯುದ್ಧದಲ್ಲಿ ಸೋತ ಬಳಿಕ
ಪತನದತ್ತ ಸಾಗಿತು. ಕೆಲ ಇತಿಹಾಸದ ದಾಖಲೆಗಳಂತೆ ಅಂದು ಹಂಪಿಯನ್ನು ಆಳಿದ ಮೊಘಲರು ಸುಮಾರು 6 ತಿಂಗಳುಗಳ ಕಾಲ ಹಂಪಿಯ ಸಂಪತ್ತನ್ನು ದೋಚಿದರು, ಹಂಪಿಯ ಕಲಾವೈಭವವನ್ನು ಭಗ್ನ ಮಾಡಿದರು, ಹಂಪಿಗೆ ಬೆಂಕಿಯಿಟ್ಟು ನಾಶ ಮಾಡಿದರು ಎಂಬುದಾಗಿದೆ.
ಕೃಷ್ಣದೇವರಾಯನ ಕಾಲ ದಲ್ಲಿ ಉತ್ತುಂಗದಲ್ಲಿದ್ದ ಹಂಪಿಯ ವೈಭವದ ಬೀದಿ ಬೀದಿಗಳಲ್ಲಿ ವಜ್ರಾಭರಣ ಗಳನ್ನು ತೂಕದ ಮಾದರಿಯಲ್ಲಿ ಮಾರಲಾ ಗುತ್ತಿತ್ತೆಂತೆ. ಅಷ್ಟು ಸಂಪತ್ತನ್ನು ಆರು ತಿಂಗಳುಗಳ ಕಾಲ ಶತ್ರುಗಳು ದೋಚಿದರು ಎಂದರೆ ಹಂಪಿಯ ಆ ವೈಭವವನ್ನು ಊಹಿಸಲು ಅಸಾಧ್ಯ.
ದಕ್ಷಿಣ ಭಾರತವನ್ನು ಒಗ್ಗೂಡಿಸಿ, ಉತ್ತರದ ತುಘಲಕ್, ದೆಹಲಿಯ ಸುಲ್ತಾನರು, ವಿದೇಶಿಯ ಸಾಮ್ರಾಜ್ಯಗಳು ದಕ್ಷಿಣ ಭಾರತದತ್ತ ದಂಡೆತ್ತಿ ಬಾರದಂತೆ ಯಶಸ್ವಿಯಾಗಿ ತಡೆಯುವಷ್ಟರ ಮಟ್ಟಗೆ ಇಲ್ಲಿನ ಆಡಳಿತ ಬಲಿಷ್ಠವಾಗಿತ್ತು. ಹೀಗೆ ದಕ್ಷಿಣ ಭಾರತವನ್ನೇ ಒಂದಾಗಿಸಿದ್ದ ಆಳಿದ ವಿಜಯನಗರ ಸಾಮ್ರಾಜ್ಯ (ಹಂಪಿ) ಪ್ರಸ್ತುತದ ರಾಜ ಕೀಯ ಕಾರಣ ಕ್ಕಾಗಿಯೋ, ಆಡಳಿತದ ಹಿತಕ್ಕಾಗಿ, ಜನರ ಅಭಿ ವೃದ್ಧಿಯ ದೃಷ್ಟಿಯಿಂದಲೋ ಕೊಪ್ಪಳ, ಬಳ್ಳಾರಿ ಎಂಬ ಜಿಲ್ಲೆಗಳಾಗಿ ಬೇಲ್ಪಟ್ಟಿತು. ಇತ್ತೀಚೆಗೆ ಬಳ್ಳಾರಿ ಯಿಂದ ಹೊಸ ಜಿಲ್ಲೆಯೊಂದನ್ನು ಸೃಜಿಸಿ ರಾಜ್ಯದ 31ನೇ ಜಿಲ್ಲೆಯಾಗಿ ಗುರುತಿಸಿ ‘ವಿಜಯನಗರ’ ಎಂಬ ಹೆಸರಿಡಲಾಗಿದೆ.
ಅಂದು ಕೃಷ್ಣಯಿಂದ ತುಂಗಾಭದ್ರಾ, ಕಾವೇರಿಯ ಜಲಾನಯನ ಪ್ರದೇಶದವರೆಗೂ ಹರಡಿದ್ದ ಹಂಪಿ ಈಗ 3 ಭಾಗವಾಗಿದೆ. ಅಂದು ವೈಭವದಿಂದ ಕಂಗೊಳಿಸಿದ್ದ ಈ ಸ್ಥಳ ಈಗ ಅಭಿವೃದ್ಧಿಗಾಗಿ ಹಾತೊರೆಯುತ್ತಿದೆ. ಅಂದು ಜನಸಂಖ್ಯೆಯಲ್ಲಿ ಬೀಜಿಂಗ್ ನಂತರದ ಎರಡನೇ ಸ್ಥಾನದಲ್ಲಿದ್ದ ವಿಜಯನಗರಕ್ಕೆ ಈಗ ಜನಸಂಖ್ಯೆಗೆ ಅನುಗುಣವಾಗುವಂತೆ ಅನುದಾನಗಳನ್ನು ತಂದು ಅಭಿವೃದ್ಧಿಪಡಿಸುವ ಜತೆಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮತ್ತು ಪ್ರತಿ ನಗರಗಳಲ್ಲಿಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರವಾಸಿ ತಾಣಗಳಲ್ಲಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುವುದರೊಂದಿಗೆ ಒಂದಷ್ಟು ಮೂಲಸೌಕರ್ಯಗಳನ್ನು ಒದಗಿಸಿ ಹಂಪಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ.
ಇಲ್ಲಿನ ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತದ ಕಲ್ಲಿನ ಕಂಬಗಳು, ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಆನೆ
ಲಾಯ ಸೇರಿದಂತೆ ಅನೇಕ ತಾಣಗಳು ಹಂಪಿಯ ಆ ದಿನಗಳ ಭವ್ಯ ಇತಿಹಾಸವನ್ನು ಸಾರುತ್ತಿವೆ. ಈ ಸ್ಥಳಗಳಲ್ಲಿ ಒಂದಿಷ್ಟು ಪ್ರವಾಸಿಗರಿಗೆ ಅನುಕೂಲಕರ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ.
ಒಟ್ಟಾರೆ ಕರ್ನಾಟಕದ ಭವ್ಯ ಪರಂಪರೆಯೊಂದು ದುರಂತ ಅಂತ್ಯ ಕಂಡಿದ್ದು, ಹಂಪಿಗೆ ಭೇಟಿ ನೀಡಿದ ಕನ್ನಡಿಗರ ಕಣ್ಣಂಚಲ್ಲಿ ನೀರು ತರಿಸುವುದಂತೂ ನಿಜ. ಸದ್ಯ ಉಳಿದಿರುವ ಹಾಳು ಹಂಪಿಯನ್ನಾದರೂ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಂಪಿ ಇತಿಹಾಸ ಹೇಳುವಂತಾಗಲಿ.
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…
ಬೆಳಗಾವಿ: ಬೆಳಗಾವಿ ಅಧಿವೇಶನದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 377 ಪ್ರಕರಣಗಳ ಪೈಕಿ…
ಎಚ್.ಡಿ.ಕೋಟೆ: ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಿಸಲು ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಕಾಡಂಚಿನ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಗಡಿಭಾಗದ…
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…