ಅಂಕಣಗಳು

ಶಿಕ್ಷಣ ಮತ್ತು ಸ್ವಾವಲಂಬನೆ ನನ್ನ ಬದುಕಿನ ಎರಡು ಕಣ್ಣುಗಳು

  • ಡಾ.ಮಾಲ ಬಿ.ಎಂ.
ನಾನು ಹುಟ್ಟಿನಿಂದಲೇ ಅಂಧಳು. ಅಂಧಮಕ್ಕಳಿಗೂ ವಿಶೇಷ ಶಾಲೆಗಳಿವೆ ಎಂಬುದರ ಬಗ್ಗೆ ನಮ್ಮ ಮನೆಯಲ್ಲಿ ಮಾಹಿತಿ ಇರಲಿಲ್ಲ. ಇದರಿಂದಾಗಿಯೇ ಅವರು ನನ್ನನ್ನು ಶಾಲೆಗೆ ಸೇರಿಸಲು ತಡ ಮಾಡಿದರು. ಆದರೆ ನನ್ನಲ್ಲಿದ್ದ ಓದುವ ಹಂಬಲದಿಂದ ನಾನು 15 ವರ್ಷಗಳಾದ ಮೇಲೆ ಹತ್ತನೇ ತರಗತಿ ಪರೀಕ್ಷೆಯನ್ನು ತೆಗೆದುಕೊಂಡೆ. ನನ್ನ ಸಹೋದರಿಯರ ಸಹಾಯ ಪಡೆದು ವಿದ್ಯಾಭ್ಯಾಸ ಮುಂದುವರಿಸಿದೆ. ಓದುವುದನ್ನು ಮುಂದುವರಿಸಲು ವಯಸ್ಸಿನ ಪರಿಮಿತಿ ಇಲ್ಲ ಮನಸ್ಸು ಮಾಡಿದರೆ ಸಾಕು ಯಾವ ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ಭಾವನೆ. 90 ವರ್ಷ ದಾಟಿದ ವಯೋವೃದ್ದೆ ಒಬ್ಬರು ಪಿಎಚ್‌.ಡಿ. ಪದವಿ ಪಡೆದ ಉದಾಹರಣೆಯು ನಮ್ಮಲ್ಲಿದೆ. ಅಷ್ಟೇ ಏಕೆ ನನ್ನ ವಿದ್ಯಾಭ್ಯಾಸವು ತಡವಾಗಿಯೇ ಶುರುವಾಯಿತು. ಕಾರಣ ನಾನು ಹುಟ್ಟಿನಿಂದಲೇ ಅಂಧಳಾಗಿದ್ದರಿಂದ, ನಮ್ಮ ಮನೆಯಲ್ಲಿ ವಿಶೇಷ ಶಾಲೆಗಳ ಬಗ್ಗೆ ಮಾಹಿತಿ ಇಲ್ಲದೆ ಇದ್ದುದ್ದರಿಂದ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತಲು ಸಾಧ್ಯವಾಗಿರಲಿಲ್ಲ. ಆದರೂ ಓದುವ ಹಂಬಲದಿಂದ ನನಗೆ 15 ವರ್ಷಗಳಾದ ಮೇಲೆ ನಾನು ಹತ್ತನೇ ತರಗತಿ ಪರೀಕ್ಷೆಯನ್ನು ನೇರವಾಗಿ ಖಾಸಗಿ ವಿದ್ಯಾರ್ಥಿನಿಯಾಗಿ ತೆಗೆದುಕೊಂಡೆ. ನಂತರ ನನ್ನ ಸಹೋದರಿಯರ ಸಹಾಯ ಪಡೆದು ಮನೆಯಲ್ಲಿಯೇ ಪಾಠಗಳನ್ನು ಓದಿಸಿಕೊಂಡು ಅರ್ಥ ಮಾಡಿಕೊಳ್ಳ ತೊಡಗಿದೆ. ಪರಿಣಾಮವಾಗಿ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ. ಅಲ್ಲಿಂದ ಪ್ರಾರಂಭವಾದ ನನ್ನ ವಿದ್ಯಾಭ್ಯಾಸವು ಇಲ್ಲಿಯವರೆಗೂ ಮುಂದುವರಿಯುತ್ತಾ ಬಂದಿದೆ. ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದು ಕೊಂಡಿದ್ದೇನೆ. ಪ್ರಸ್ತುತ ಇತಿಹಾಸ ವಿಭಾಗದಲ್ಲಿ ಪಿಹೆಚ್.ಡಿ ಪದವಿಗಾಗಿ ಮಹಾ ಪ್ರಬಂಧವನ್ನು ಸಿದ್ಧಪಡಿಸುತ್ತಿದ್ದೇನೆ.
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗಬೇಕಾದರೆ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಆಗ ಅದೆಷ್ಟೋ ಅವಕಾಶಗಳು ಅವರಿಗೆ ತೆರೆದುಕೊಳ್ಳುತ್ತವೆ. ಹತ್ತನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಖಾಸಗಿಯಾಗಿಯೇ ತೆಗೆದುಕೊಂಡು ಮನೆಯಲ್ಲೇ ಓದಿಕೊಳ್ಳಬಹುದು. ನಂತರ ಉನ್ನತ ಶಿಕ್ಷಣದ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳಿಂದ ಪಡೆದುಕೊಳ್ಳಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶಿಕ್ಷಣವೇ ಮೂಲ ಮಂತ್ರವಾಗಿದೆ. ಹಾಗಾಗಿ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಒಳ್ಳೆಯ ಉದ್ಯೋಗ ಪಡೆದರೆ ಮಹಿಳೆಯರು ಉತ್ತಮ ಜೀವನ ನಡೆಸಬಹುದು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಪ್ರಸಿದ್ಧವಾದ ನಾಣ್ಣುಡಿಯಂತೆ, ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಾಗ ಮಾತ್ರ ಉತ್ತಮ ಕುಟುಂಬ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನನ್ನನ್ನು ಸಾಕಷ್ಟು ಮಹಿಳೆಯರು ಕೇಳುವ ಪ್ರಶ್ನೆ, ‘ಮೇಡಂ ನನಗೆ ಓದುವ ಹಂಬಲವಿದೆ.
ಆದರೆ ನನಗೆ 18 ವರ್ಷಗಳು ತುಂಬಿ ಹೋಗಿದೆ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ನಾನು ಈಗಲೂ ಓದಬಹುದೇ?’ ಮತ್ತೆ ಕೆಲವರು ‘ತಮ್ಮ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತುಹೋಗಿದೆ, ಈಗ ನಾನು ಓದನ್ನು ಮುಂದುವರಿಸಬಹುದೇ?’ ಎಂಬುದಾಗಿದೆ.
ಇದಕ್ಕೆಲ್ಲ ನಾನು ಹೇಳುವುದು ಒಂದೇ ಮಾತು, ಖಂಡಿತಗಿಯೂ ನಿಮ್ಮ ವಿದ್ಯಾಭ್ಯಾಸವನ್ನು ನೀವು ಈಗಲೂ ಮುಂದುವರಿಸಬಹುದು ಎಂದು.
ಓದನ್ನು ಮುಂದುವರಿಸಲು, ಶಿಕ್ಷಿತರಾಗಲು ವಯಸ್ಸಿನ ಪರಿಮಿತಿ ಇಲ್ಲ. ಮನಸ್ಸು ಮಾಡಿದರೆ ಸಾಕು ಯಾವ ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ಭಾವನೆ.
alabm2014@gmail.com
lokesh

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

4 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

5 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

6 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

7 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

7 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

7 hours ago