ಅಂಕಣಗಳು

ಮರಳಿ ಗೂಡಿಗೆ…ನಮ್ಮದೇ ಮನೆಗೆ…ಜ್ಞಾನದ ಕಡೆಗೆ

ನಿಜಕ್ಕೂ ಇದೊಂದು ಹೊಸ ಪ್ರಯೋಗ. ಹೀಗೂ ಧಮ್ಮ ಕಟ್ಟಬಹುದೇ ಎಂದು ಆಶ್ಚರ್ಯ ಪಡುವಷ್ಟರಮಟ್ಟಿಗೆ ಪ್ರಯೋಗ ನಡೆದಿದೆ ಮತ್ತು ನಡೆಯುತ್ತಿದೆ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಬುದ್ಧ ಧಮ್ಮದ ಅರಿವನ್ನು ಗ್ರಾಮೀಣ ಪ್ರದೇಶಗಳಲ್ಲಿ ‘ಮನೆ ಮನೆಗೆ ಬುದ್ಧ-ಮನೆ ಮನಗಳಿಗೆ ಅಂಬೇಡ್ಕರ್’ ಎನ್ನುವ ಘೋಷವಾಕ್ಯ ದೊಡನೆ ಸಂಜೆಯ ನಸುಗತ್ತಲಲ್ಲಿ ದೀಪಗಳನ್ನು ಹಿಡಿದು ಎಲ್ಲರ ಮನೆಯ ಮುಂದೆ ಸಾಗುತ್ತಾ ಮನೆಯಲ್ಲಿರುವ ಗಂಡಸರು, ಹೆಂಗಸರು, ಮಕ್ಕಳನ್ನು ಒಗ್ಗೂಡಿಸಿಕೊಂಡು ಮೆರವಣಿಗೆ ಹೊರಟು ಆಯಾಯ ಊರಿನ ಬೋಧಿವೃಕ್ಷ (ಅರಳಿಮರ)ದ ಕೆಳಗೆ ತ್ರಿಸರಣ, ಪಂಚಶೀಲ ಬೋಧನೆ ಜೊತೆಗೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಒಂದು ‘ಸ್ವಯಂ ಪ್ರೇರಿತ ತಂಡ’ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಕ್ಟೋಬರ್ ೦೩, ೨೦೨೪ರಲ್ಲಿ ಆರಂಭಿಸಿತು.

ಹೀಗೆ ಪ್ರಥಮ ಬಾರಿಗೆ ಮೈಸೂರು ತಾಲ್ಲೂಕು ಸಿಂಧುವಳ್ಳಿ ಗ್ರಾಮದಲ್ಲಿ ಆರಂಭಗೊಂಡ ಈ ಧಮ್ಮ ಪಯಣ ಅಕ್ಟೋಬರ್ ೧೪, ೨೦೨೫ರ ಅಂತ್ಯಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಆಯ್ದ ೧೯೨ ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಈ ಪ್ರಯೋಗವನ್ನು (೨೦೦ ಗ್ರಾಮಗಳ ಗುರಿ ಹೊಂದುವ ಉದ್ದೇಶ ಹೊಂದಲಾಗಿತ್ತು) ಯಶಸ್ವಿಗೊಳಿಸಿದೆ. ಒಟ್ಟು ೧೩,೧೨೯ ಕಿ.ಮೀ. ಕ್ರಮಿಸಿ, ಮೂರು ಲಕ್ಷ ಜನರೊಡನೆ ನೇರವಾಗಿ ಸಂವಾದಿಸು ವುದರೊಂದಿಗೆ ೩೬,೨೨೦ ಕುಟುಂಬಗಳಲ್ಲಿ ಬುದ್ಧಬೆಳಕನ್ನು ಹಚ್ಚಲಾಗಿದೆ. ಈ ಪಯಣದಲ್ಲಿ ನಾಡಿನ ಹೆಸರಾಂತ ಹೋರಾಟ ಹಿರಿಯ ಚೇತನಗಳು ಮತ್ತು ಜನಪರ ಹೋರಾಟಗಾರರ ಜನ್ಮಸ್ಥಳಗಳನ್ನು ತಲುಪಿರುವುದು ಮತ್ತು ಅವರ ನೆನಪಲ್ಲಿ ಧಮ್ಮ ದೀಪ ಹಚ್ಚಿರುವುದು ವಿಶೇಷ.

ಅಂದರೆ ಪ್ರೊ.ಬಿ.ಕೃಷ್ಣಪ್ಪ, ಬಿ.ಬಸವಲಿಂಗಪ್ಪ, ಸಿದ್ದಲಿಂಗಯ್ಯ, ದೇವಯ್ಯ ಹರವೆ, ಮುಳ್ಳೂರು ನಾಗ ರಾಜ್, ಕೆ.ಶಿವರಾಂ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ವಿ.ಶ್ರೀನಿವಾಸ ಪ್ರಸಾದ್ ಹಾಗೂ ದೇವನೂರ ಮಹಾದೇವರವರುಗಳ ಊರುಗಳಲ್ಲಿ ಈ ಧಮ್ಮ ಪಯಣ ಸಾಗಿದೆ. ಬೌದ್ಧ ಸಂಘಟನೆಗಳನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿರುವ, ಬೌದ್ಧ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ, ಕಿರಿಯ ಲೇಖಕರು, ಧಮ್ಮದ ಪ್ರಸರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಯೋಮಾನದ ಉಪಾಸಕ, ಉಪಾಸಕಿಯರನ್ನು ಒಟ್ಟು ನಾಲ್ಕು ಸಂಪದ ಸಮ್ಮೇಳನಗಳನ್ನು ಆಯೋಜಿಸಿ ಗೌರವಿಸಲಾಗಿರುವುದು ಈ ಒಂದು ವರ್ಷದ ಪಯಣದ ವಿಶೇಷತೆಗಳಲ್ಲಿ ಒಂದು.

ಇದನ್ನು ಓದಿ: ನಾಳಿನ ತಲೆಮಾರಿಗೆ ಕೃತಕ ಬುದ್ಧಿಮತ್ತೆ ಅನಿವಾರ್ಯ

ಅಪರಾಧ ಜಗತ್ತಿನ ರಾಷ್ಟ್ರ ವಾಗುತ್ತಿರುವ ಭಾರತಕ್ಕೆ ಬುದ್ಧ ಮಾರ್ಗ ಇಂದು ಬಹಳ ಪ್ರಸ್ತುತ. ಧಮ್ಮದ ತಿರುಳಾದ ಮೈತ್ರಿ, ಕರುಣೆ, ಭ್ರಾತೃತ್ವದ ಅಂಶಗಳನ್ನು ಬೋಧಿಸುವ ಬುದ್ಧ ಧಮ್ಮ ಎಲ್ಲಾ ಜಾತಿ, ಧರ್ಮೀಯರನ್ನು ತಲುಪಿಸಲು ಒಂದು ಸುಧಿರ್ಘ ಹೆಜ್ಜೆಯನ್ನು ಇರಿಸಿದೆ. ಬಹಳಷ್ಟು ಚರಿತ್ರಕಾರರು ಗೌತಮ ಬುದ್ಧರನ್ನು ಸಂತ, ದಾರ್ಶನಿಕ, ಮಾರ್ಗದಾತರೆಂದು ಬಿಂಬಿಸಿರುವುದೇನೋ ಸರಿ. ಆದರೆ ಬಹಳಷ್ಟು ಜನರಿಗೆ ಗೊತ್ತಿರದ ಸತ್ಯವೆಂದರೆ ಬುದ್ಧ ಒಬ್ಬ ಶ್ರೇಷ್ಠ ಮನೋವಿಜ್ಞಾನಿ. ಮನುಷ್ಯನ ಮನಸ್ಸನ್ನು ಪೂರ್ತಿಯಾಗಿ ಅಧ್ಯಯನ ಮಾಡಿ ಕೊನೆಯಲ್ಲಿ ಅಪರಿಮಿತವಾದ ಎರಡು ಸಂದೇಶಗಳನ್ನು ನೀಡಿದ್ದಾರೆ. ಅದುವೇ ‘ನಿನಗೆ ನೀನೇ ಬೆಳಕು’ (be a lamp unto yourself) ಮತ್ತು ‘ಮೊದಲು ನಿನ್ನನ್ನು ನೀನು ಗೆಲ್ಲು (first conquer yourself) ಈ ಎರಡೂ ಸಂದೇಶಗಳನ್ನು ಇದುವರೆಗೂ ಯಾರು ನಿರಾಕರಿಸಿಲ್ಲ ಮತ್ತು ವೈಜ್ಞಾನಿಕವಾಗಿಯೂ ಕೂಡ ಇದು ಪ್ರಮಾಣಿಕರಿಸಲ್ಪಟ್ಟಿದೆ. ಜೊತೆಗೆ ಜಗತ್ತಿರುವವರೆಗೂ ಈ ಸಂದೇಶ ಇದ್ದೇ ಇರುತ್ತದೆ.

ಪ್ರತಿಯೊಂದು ಜೀವಿಯೂ ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಳ್ಳುವುದು ಮುಖ್ಯ ಎಲ್ಲಾ ಒಳಿತು-ಕೆಡಕುಗಳಿಗೆ ಮಾನವನ ಆಲೋಚನೆಗಳೇ ಕಾರಣವಾದ್ದರಿಂದ ಮನುಷ್ಯ ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಮಮತೆಯಿಂದ ಬದುಕಬೇಕು ಬೇಡುವ ವರಗಳನ್ನು ನೀಡುವ ಯಾವುದೇ ಅಗೋಚರ ಶಕ್ತಿ ಈ ಜಗತ್ತಿನಲ್ಲಿ ಇಲ್ಲ ಈ ಲೋಕವನ್ನು ಆವರಿಸಿರುವ ಶ್ರೀಮಂತಿಕೆ, ಬಡತನ, ಮೇಲು- ಕೀಳು, ಪಾಪ ಪುಣ್ಯ, ಸ್ವರ್ಗ ನರಕ, ಅನಾರೋಗ್ಯ, ಸಾಮಾಜಿಕ ತಾರತಮ್ಯಕ್ಕೆ ಮನುಷ್ಯನ ಮನಸ್ಸೇ ಮೂಲ ಕಾರಣ ಈ ಸಮಾಜದ ರೋಗ ರುಜಿನಗಳಿಗೆ ಅತಿಯಾದ ಆಸೆಯೇ ಕಾರಣ ಮತ್ತು ನೆಮ್ಮದಿಯ ಬದುಕಿಗೆ ಸರಳ ಜೀವನ, ದ್ವೇಷ ಅಸೂಯೆಗಳಿಲ್ಲದ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು

ಇದನ್ನು ಓದಿ: ಅ.14, 15ಕ್ಕೆ ಮೈಸೂರಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ

ತಾನು ತೋರಿದ ಮಾರ್ಗವು ಸತ್ಯವಾಗಿದ್ದರೆ ಅನುಸರಿಸಬಹುದು, ಇಲ್ಲದಿದ್ದರೆ ತಿರಸ್ಕರಿಸಬಹುದು ಎಂದು ಹೇಳುವುದರ ಜೊತೆಗೆ, ತಾನು ಮಾರ್ಗದಾತನೇ ಹೊರತು ಮೋಕ್ಷದಾತನಲ್ಲ ಭಾರತರತ್ನ ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿ ೭೦ ವರ್ಷಗಳಾದ ಹಿನ್ನೆಲೆಯಲ್ಲಿ ‘ಮಾನವ ಮೈತ್ರಿ’ ಆಶ್ರಯದಲ್ಲಿ ಅಕ್ಟೋಬರ್ ೧೪ ಮತ್ತು ೧೫ನೇ ತಾರೀಖಿನಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳಿಂದ, ಭಾರತದ ವಿವಿಧ ರಾಜ್ಯಗಳಿಂದ ಬೌದ್ಧ ಭಿಕ್ಕುಗಳು ಸಮಾವೇಶಗೊಳ್ಳುತ್ತಿದ್ದು, ಒಟ್ಟು ೮ ಪ್ರತ್ಯೇಕ ವೇದಿಕೆಗಳಲ್ಲಿ ೨೪ ವಿಚಾರಗೋಷ್ಠಿಗಳು, ೬೪ ಇವೆಂಟ್ಸ್ ಮೂಲಕ ಬೌದ್ಧ ಸಾಹಿತ್ಯ, ಇತಿಹಾಸ, ಪರಂಪರೆ,ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಮೌಢ್ಯ ಮತ್ತು ಸಂಪ್ರದಾಯಗಳಿಂದ ಬಿಡುಗಡೆ ಹೊಂದುವುದರ ಜೊತೆಗೆ ಧಮ್ಮದ ವೈಜ್ಞಾನಿಕ ಮನೋಭಾವನೆ ಹಾಗೂ ಅದರೊಟ್ಟಿಗಿರುವ ಗೊಂದಲಗಳನ್ನು ಬಿಡಿಸುವ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗು ತ್ತಿದೆ. ಆ ಮೂಲಕ ‘ಯುದ್ಧ ಬೇಡ- ಬುದ್ಧ ಬೇಕು’ ಎಂಬ ಘನ ಸಂದೇಶದೊಂದಿಗೆ ಭಾರತವನ್ನು ಪ್ರಬುದ್ಧ ಭಾರತವನ್ನಾಗಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಎರಡು ದಿನಗಳ ಮಾನವ ಪರ ಮೈತ್ರಿ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಹಾರೈಸಿ, ಯಶಸ್ವಿಗೊಳಿಸಿ

” ಅಕ್ಟೋಬರ್ ೧೪ ಮತ್ತು ೧೫ನೇ ತಾರೀಖಿನಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನಲ್ಲಿ ನಡೆಯುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ನಿಮಿತ್ತ ಲೇಖನ”

ಸಿ. ಹರಕುಮಾರ್ , ಹವ್ಯಾಸಿ ಲೇಖಕರು

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

36 mins ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

59 mins ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

2 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

2 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

7 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

7 hours ago