ಅಂಕಣಗಳು

ಕ್ರಿಸ್‌ಮಸ್‌ ಸಂಭ್ರಮಕ್ಕೆ ಕ್ಯಾರಲ್ ಗಾಯನದ ಮುನ್ನುಡಿ

• ಪ್ರೊ.ಎ.ಟಿ.ಸದೆಬೋಸ್

ಇಂದು ಕ್ರಿಸ್ತನ ಹುಟ್ಟು ಹಬ್ಬ. ಜಗತ್ತಿನ ಅತ್ಯಂತ ದೊಡ್ಡ ಹಬ್ಬ. ಇನ್ನು ಸರಿಯಾಗಿ ಒಂದು ವಾರಕ್ಕೆ ಹೊಸ ವರ್ಷ ಬರಲಿದೆ. ಕ್ರಿಸ್ತ ಜನಿಸಿದಾಗ ನಕ್ಷತ್ರವೊಂದು ನಮಗೆ ದಾರಿ ತೋರಿದರೆ, ಇಂದು ಕ್ರೈಸ್ತರ ಮನೆ ಮನೆಗಳಲ್ಲಿ ನಕ್ಷತ್ರವನ್ನು ಬೆಳಗುತ್ತಾ ಕ್ರಿಸ್ತನ ಜನನದ ನೆನಪನ್ನು ತರಲು ಗೋದಲಿಯ ಸೃಷ್ಟಿ ಸಾಂತಕ್ಲಾಸನ ಆಗಮನ ಇವೆಲ್ಲ ನಡೆಯುತ್ತದೆ. ಕ್ರಿಸ್‌ಮಸ್ ವೃಕ್ಷವನ್ನೂ ನಿಲ್ಲಿಸುತ್ತಾರೆ.

ರೋಮನ್ ದೊರೆ ಸೀಸ‌ ಅಗಸ್ಟಸ್‌ ಕಾಲದಲ್ಲಿ ಎಲ್ಲ ಕಡೆ ಜನಗಣತಿಯನ್ನು ನಡೆಸಿದರು. ಬೆಥ್ಲೆಹೆಮ್‌ನ ವಾಸಕ್ಕೆ ಮನೆ ಇಲ್ಲದ ಬಡಕುಟುಂಬವೊಂದರಲ್ಲಿ ಯೇಸು ಗೋದಲಿ ಯಲ್ಲಿ ಜನಿಸಿದರು. ರಾತ್ರಿಯ ವೇಳೆ ಕುರಿ ಕಾಯುತ್ತಿದ್ದ ಕುರುಬರಿಗೆ ದೇವದೂತರು ಸಂದೇಶ ನೀಡಿ, ‘ಮಹೋನ್ನ ತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನುಜರಿಗೆ ಶಾಂತಿ ಎಂದು ಸಾರಿದರು. ಇದೇ ಮೊದಲ ಕ್ಯಾರಲ್ ಎಂದು ಗುರುತಿಸಲಾಗುತ್ತದೆ. ಅಂದಿನ ಸಾಮಾಜಿಕ
ಶ್ರೇಣಿಯ ಕೆಳಗಿನ ಮೆಟ್ಟಿಲಲ್ಲಿದ್ದ ಕುರುಬರಿಗೆ ದೇವ ದೂತರು ಈ ಸಂದೇಶ ನೀಡಿದರೂ. ಶಕ್ತಿಶಾಲಿ ಅರಸರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.

ಕ್ರಿಸ್‌ಮಸ್‌ ಆಚರಣೆಯು ಡಿಸೆಂಬರ್ ತಿಂಗಳ ಆರಂಭದಲ್ಲಿ ಕ್ಯಾರಲ್ ಗೀತೆಗಳ ಇಂಪಾದ ಗಾಯನದಿಂದ ಆರಂಭವಾಗುತ್ತದೆ. ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಆರಂಭವನ್ನು ಸೂಚಿಸುವಂತೆ, ಕಾರ್ಮೆಲ್ ಕ್ಯಾಥೋಲಿಕ್ ಸಂಸ್ಥೆಯು ಕ್ಯಾರಲ್ ಗೀತೆಗಳ ಬೃಹತ್ ಗಾಯನ ಕಾರ್ಯ ಕ್ರಮವನ್ನು ಡಿಸೆಂಬರ್ ತಿಂಗಳ ಎರಡನೇ ಭಾನುವಾರ ಆಯೋಜಿಸಿತ್ತು. ಸಂಗೀತಕ್ಕೆ ಎಲ್ಲರನ್ನೂ ಬೆಸೆಯುವ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸುವಂತೆ ಕಾರ್ಮೆಲ್ ಕ್ಯಾರಲ್ ಗೀತೆಗಳ ಗಾಯನವು ಸಾಂಸ್ಕೃತಿಕ ನಗರಿಯ ಒಂದು ಅವಿಭಾಜ್ಯ ಘಟಕ ಎಂಬಂತೆ ಆಗಿದೆ.

ಕ್ಯಾರಲ್ ಗೀತೆಗಳ ಸ್ಪರ್ಧೆಯು ನರ್ಸರಿ ಮಕ್ಕಳಿಂದ ವೃತ್ತಿ ನಿರತ ಗಾಯಕರವರೆಗೂ ಸುಮಾರು 12 ವರ್ಗಗಳಲ್ಲಿ ನಡೆಯುತ್ತದೆ. ಈ ಸ್ಪರ್ಧೆಯು ವಿವಿಧ ವರ್ಗಗಳ ಜನರನ್ನು ಒಂದು ವೇದಿಕೆಗೆ ತರುವುದೇ ವಿಶೇಷವಾಗಿದೆ.
ಈ ವರ್ಷ ನಡೆದ 31ನೇ ಕ್ರಿಸ್‌ಮಸ್ ಕ್ಯಾರಲ್ ಗಾಯನದಲ್ಲಿ 103 ತಂಡಗಳು ಹಾಗೂ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಗಾಯಕರು ಒಂದೇ ದಿನ ವೇದಿಕೆಯನ್ನೇರಿದರು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ದಿನಏಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿನ ಸಂಕೀರ್ಣವಾದ ಒತ್ತಡದ ಸ್ಪರ್ಧಾಯುಗದಲ್ಲಿ, ಕೈ ಕೈ ಹಿಡಿದು ಒಂದೇ ಸ್ವರವಾಗಿ, ಗೀತೆಯಾಗಿ ಹಾಡುವಾಗ ಅಲ್ಲಿ ಜಾತಿ, ಮತ, ಧರ್ಮ, ಭಾವ ಮೀರಿದ ಸೌಹಾರ್ದ ವಾತಾವರಣವು ಏರ್ಪಡುತ್ತದೆ ಎಂಬುದು ಅಲ್ಲಿ ಸತ್ಯವಾಗಿತ್ತು.

ಕ್ರಿಸ್‌ಮಸ್ ಕ್ಯಾರಲ್ ಗೀತೆಗಳ ಸ್ಪರ್ಧೆಯನ್ನು ಸಂಘವು ತುಂಬಾ ವ್ಯವಸ್ಥಿತವಾಗಿ ಏರ್ಪಡಿಸಿತ್ತು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಸ್ಪರ್ಧಿಗಳು ನವೆಂಬರ್‌ನಿಂದಲೇ ತಯಾರಿ ನಡೆಸಿದ್ದರು. ಅಂದವಾದ ವೇಷ ಭೂಷಣಗಳು, ಸಾಂತಕ್ಲಾಸ್, ಮಾತೇ ಮೇರಿ, ಸಂತ ಜೋಸೆಫ್ ಹಾಗೂ ಬಾಲ ಯೇಸುವಿನ ಅನುಕರಣೆಗಳನ್ನು ಮಾಡುತ್ತಾ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೈಸೂರು ನಗರ ಮತ್ತು ಆಸುಪಾಸಿನ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಯನಶೀಲ ಸಹೋದರರು, ಭಗಿನಿಯರು ವಿವಿಧ ಕ್ರೈಸ್ತ ಪಂಗಡಗಳು ಭಾಗವಹಿಸಿದ್ದವು.

1992ರಲ್ಲಿ ಮೊತ್ತ ಮೊದಲ ಬಾರಿಗೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕಾರ್ಮೆಲ್ ಕ್ಯಾರಲ್ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂದು ಮೂವತ್ತು ತಂಡಗಳಿಂದ ಆರಂಭವಾದ ಈ ಕಾರ್ಯಕ್ರಮವು ಇಂದು ದಿನವಿಡೀ ಬಿಡುವಿಲ್ಲದಂತೆ ನಡೆಯುತ್ತದೆ. ಕ್ರಿಸ್‌ಮಸ್ ಆಚರಣೆಯನ್ನು ಮೈಸೂರಿಗೆ ಸಾರುವ ಈ ಸ್ಪರ್ಧೆಗಳಲ್ಲಿ ಕ್ರೈಸ್ತರ ವಿವಿಧ ಪಂಗಡಗಳಾದ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಪೆಂಟಕೊಸ್ಟ್ ಇತ್ಯಾದಿ ಎಲ್ಲರೂ ಸಂತೋಷ, ಸಡಗರದಿಂದ ಪಾಲ್ಗೊಳ್ಳುತ್ತಾರೆ.

ಕನ್ನಡ, ಇಂಗ್ಲಿಷ್ ಅಲ್ಲದೆ ಭಾರತೀಯ ಎಲ್ಲ ಭಾಷೆಗಳಲ್ಲಿಯೂ ಹಾಡಬಹುದು. ಕೊನೆಗೆ ಬಹುಮಾನಿತರು, ಪಾಲ್ಗೊಂಡವರು ಸಿಹಿಯನ್ನು ಹಂಚಿ ಹೊಸ ವರ್ಷವನ್ನು ಎದುರುಗೊಳ್ಳಲು ಮುನ್ನಡೆಯುತ್ತಾರೆ.
sadeboset@gmail.com

andolanait

Recent Posts

ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಸಿದ…

4 hours ago

ಹನೂರು| ಉಪಟಳ ನೀಡುತ್ತಿರುವ ಕಾಡಾನೆ ಸೆರೆ ಹಿಡಿಯಿರಿ: ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಕಾಡಾನೆ ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ…

8 hours ago

ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ: ಟಿ.ನರಸೀಪುರ ಬಂದ್‌ ಮಾಡಲು ಚಿಂತನೆ

ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ…

8 hours ago

ಹನೂರು ಪಟ್ಟಣದಲ್ಲಿ 50 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ: ಶಾಸಕರಿಂದ ಕಾಮಗಾರಿ ಪರಿಶೀಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ 50 ಹಾಸಿಗೆಗಳ ನೂತನ ಆಸ್ಪತ್ರೆಯು ಸಾರ್ವಜನಿಕರಿಗೆ…

9 hours ago

ಹನೂರು| ಪ್ರತಿನಿತ್ಯ ಒಂಟಿಸಲಗ ದಾಳಿ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗ ಮಧ್ಯದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ…

9 hours ago

ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ: ಅಜ್ಜೀಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ…

9 hours ago