ನೀರು ತುಂಬಿದ ಬಕೆಟ್ಗೆ ಬಿದ್ದು ಹಸುಗೂಸು ಸಾವು!
ಹುಣಸೂರು: ನೀರು ತುಂಬಿದ ಬಕೆಟ್ಗೆ ಬಿದ್ದ ೨ ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತರಿಕಲ್ಲು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ತರಿಕಲ್ಲು ಗ್ರಾಮದ ಸುಂದರ್ರಾಜ್ ಅವರ ಮಗ ಸಮರ್ಥ (೨) ಮನೆ ಒಳಗಡೆ ಆಟವಾಡುತ್ತಿದ್ದಾಗ ಮನೆಯವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಮಗು ಬಚ್ಚಲು ಮನೆಯ ಹತ್ತಿರ ಹೋಗಿ ನೀರು ತುಂಬಿದ ಬಕೆಟ್ಗೆ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ. ಸ್ವಲ್ಪ ಸಮಯದ ಬಳಿಕ ಮಗು ಕಾಣದಿದ್ದಾಗ ಮನೆಯವರು ಎಲ್ಲಾ ಕಡೆ ಹುಡುಕಿದಾಗ ಮಗು ನೀರು ತುಂಬಿದ ಬಕೆಟ್ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.