BREAKING NEWS

ವಿಜಯ್‌ ಹಜಾರೆ ಟ್ರೋಫಿ 2023: ಪಡಿಕ್ಕಲ್‌ ಶತಕ, ಕೌಶಿಕ್‌ ಮ್ಯಾಜಿಕ್; ಉತ್ತರಾಖಂಡ ವಿರುದ್ಧ ಕರ್ನಾಟಕಕ್ಕೆ ಗೆಲುವು‌

ಪ್ರಸ್ತುತ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಸೆಣಸಾಡಿದ ಕರ್ನಾಟಕ 52 ರನ್‌ಗಳ ಗೆಲುವನ್ನು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಕರ್ನಾಟಕ ಈ ಗೆಲುವಿನೊಂದಿಗೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿ ಎದುರಾಳಿ ಉತ್ತರಾಖಂಡ ತಂಡಕ್ಕೆ ಗೆಲ್ಲಲು 285 ರನ್‌ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ಉತ್ತರಾಖಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 232 ರನ್‌ ಗಳಿಸಿತು.

ಕರ್ನಾಟಕ ಇನ್ನಿಂಗ್ಸ್:‌ ಕರ್ನಾಟಕದ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್‌ ಸಮರ್ಥ್‌ 11 ರನ್‌ ಕಲೆ ಹಾಕಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ ಶೂನ್ಯ ಸುತ್ತಿದರು. ಹೀಗೆ ಆರಂಭದಲ್ಲಿಯೇ ಆಘಾತ ಅನುಭವಿಸಿದ ಕರ್ನಾಟಕ ತಂಡಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ದೇವದತ್‌ ಪಡಿಕ್ಕಲ್‌ ಹಾಗೂ ನಿಕಿನ್ ಜೋಸ್‌ ಆಸರೆಯಾದರು. ದೇವದತ್‌ ಪಡಿಕ್ಕಲ್‌ 122 ಎಸೆತಗಳಲ್ಲಿ 117 ರನ್‌ ಬಾರಿಸಿದರೆ, ನಿಕಿನ್‌ ಜೋಸ್‌ 82 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಇನ್ನುಳಿದಂತೆ ಮನೀಶ್‌ ಪಾಂಡೆ 40 ಎಸೆತಗಳಲ್ಲಿ 56 ರನ್‌, ಕೃಷ್ಣಪ್ಪ ಗೌತಮ್‌ 4, ಶರತ್‌ ಬಿಆರ್‌ 6 ಹಾಗೂ ಜಗದೀಶ ಸುಚಿತ್‌ ಅಜೇಯ 7 ರನ್‌ ಬಾರಿಸಿದರು.

ಉತ್ತರಾಖಂಡದ ಪರ ಅಗ್ರಿಮ್‌ ತಿವಾರಿ 3 ವಿಕೆಟ್‌ ಪಡೆದರೆ, ರಜನ್‌ ಕುಮಾರ್‌ 2 ವಿಕೆಟ್‌ ಹಾಗೂ ದೀಪಕ್‌ ಧಪೋಲಾ 1 ವಿಕೆಟ್‌ ಪಡೆದರು.

ಉತ್ತರಾಖಂಡ ಇನ್ನಿಂಗ್ಸ್:‌ ತಂಡದ ಪರ ಯುವರಾಜ್‌ ಚೌಧರಿ 13, ಅವ್ನೀಸ್‌ ಸುಧಾ ಶೂನ್ಯ, ನಾಯಕ ಜೀವನ್‌ಜೋತ್‌ ಸಿಂಗ್‌ 46, ದಿಕ್ಷಾಂಶು ನೇಗಿ 21, ಸ್ವಪ್ನಿಲ್‌ ಸಿಂಗ್‌ 13, ಆದಿತ್ಯ ತಾರೆ 17, ಕುನಾಲ್‌ ಚಾಂಡೆಲಾ 98, ಹಿಮಾನ್ಷು ಬಿಷ್ತ್‌ 1, ಅಗ್ರಿಮ್‌ ತಿವಾರಿ ಶೂನ್ಯ, ರಾಜನ್‌ ಕುಮಾರ್‌ ಅಜೇಯ 1 ಹಾಗೂ ದೀಪಕ್‌ ಧಪೊಲಾ ಅಜೇಯ 1 ರನ್‌ ಕಲೆ ಹಾಕಿದರು.

ಕರ್ನಾಟಕದ ಪರ 10 ಓವರ್‌ ಮಾಡಿ ಕೇವಲ 30 ರನ್‌ ನೀಡಿ 2 ಮೇಡನ್‌ ಓವರ್‌ ಜತೆಗೆ 4 ವಿಕೆಟ್‌ ಪಡೆದ ವಾಸುಕಿ ಕೌಶಿಕ್‌ ಉತ್ತರಾಖಂಡ ತಂಡದ ಪ್ರಮುಖ ಆಟಗಾರರ ವಿಕೆಟ್‌ ಪಡೆದರು. ಇನ್ನುಳಿದಂತೆ ವಿದ್ವತ್‌ ಕಾವೇರಪ್ಪ 2 ವಿಕೆಟ್‌, ವಿಜಯ್‌ ಕುಮಾರ್‌ ವೈಶಾಖ್‌, ಕೃಷ್ಣಪ್ಪ ಗೌತಮ್‌ ಹಾಗೂ ಜಗದೀಶ ಸುಚಿತ್‌ ತಲಾ ಒಂದೊಂದು ವಿಕೆಟ್‌ ಪಡೆದರು.

andolana

Recent Posts

ಪರವಾನಗಿ ಅಮಾನತ್ತು : ನಾಲ್ವರ ವಿರುದ್ಧ ಶಿಸ್ತು ಕ್ರಮ

ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…

5 hours ago

ಸಿ.ಟಿ.ರವಿ ಯಾವ ಕಡೆಯಿಂದಲೂ ಒಳಗೆ ಬರತಕ್ಕದ್ದಲ್ಲ : ಚೀಫ್ ಮಾರ್ಷಲ್​​ಗೆ ಸಭಾಪತಿ ಸೂಚನೆ

ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…

5 hours ago

ಮಂಡ್ಯ | 60 ಲಕ್ಷ ಲಂಚಕ್ಕೆ ಬೇಡಿಕೆ ; ಅಬಕಾರಿ ಉಪ ಆಯುಕ್ತ ಅಮಾನತು

ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…

6 hours ago

ಮೈಸೂರಿನಲ್ಲಿ ಮತ್ತೆ ಡ್ರಗ್ಸ್‌ ಪತ್ತೆ ; ಮೂವರ ಬಂಧನ

ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್‌ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್‌ ಸಹ ಕಳವಳ…

7 hours ago

ಮೈ-ಬೆಂ ಹೆದ್ದಾರಿಯಲ್ಲಿ ಸುಲಿಗೆ,ದರೋಡೆ ; 34 ಪ್ರಕರಣಗಳಲ್ಲಿ 28 ಕೇಸ್‌ ಸಾಲ್ವ್‌!

ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…

7 hours ago

ಮೂರು ಬಾಲಕಿಯರನ್ನು ಬಲಿ ಪಡೆದ ಆನ್‌ಲೈನ್‌ ಗೇಮ್‌ ; ಮಹಡಿಯಿಂದ ಹಾರಿ ಆತ್ಮಹತ್ಯೆ

ಗಾಜಿಯಾಬಾದ್ : ಆನ್‌ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…

8 hours ago