BREAKING NEWS

Under 19 wordlcup: ಸೂಪರ್‌ 6 ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಪ್ರಸ್ತುತ ನಡೆಯುತ್ತಿರುವ ಅಂಡರ್‌ 19 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೂಪರ್‌ ಸಿಕ್ಸ್‌ ಸುತ್ತಿಗೆ ಲೀಗ್‌ ಹಂತದ ಎಲ್ಲಾ ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ಪ್ರವೇಶ ಪಡೆದುಕೊಂಡಿದ್ದು, ಇಂದು ( ಜನವರಿ 30 ) ನಡೆದ ಸೂಪರ್‌ ಸಿಕ್ಸ್‌ ಹಂತದ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 214 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.

ಬ್ಲೋಮ್‌ಫಾಂಟೈನ್ ಮಾಂಗ್ವಾಂಗ್‌ ಓವಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ‌ ಮುಶೀರ್‌ ಖಾನ್‌ ಶತಕದ ನೆರವಿನಿಂದ 295 ರನ್‌ ಕಲೆಹಾಕಿ ಎದುರಾಳಿ ನ್ಯೂಜಿಲೆಂಡ್‌ಗೆ 296 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ದೊಡ್ಡ ಮಟ್ಟದಲ್ಲಿ ವಿಫಲವಾದ ನ್ಯೂಜಿಲೆಂಡ್‌ 28.1 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲ್‌ಔಟ್‌ ಆಗಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರ ಆದರ್ಶ್‌ ಸಿಂಗ್‌ 52 ರನ್‌ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಶೀರ್‌ ಖಾನ್‌ 131 ರನ್‌ ಬಾರಿಸಿದರು. ಇನ್ನುಳಿದಂತೆ ಅರ್ಶಿನ್‌ ಕುಲ್ಕರ್ಣಿ 9, ನಾಯಕ ಉದಯ್‌ ಸಹರಣ್‌ 34, ಅರವೆಳ್ಳಿ ಅವಿನಾಶ್‌ 17, ಪ್ರಿಯಾಂಶು ಮೊಲಿಯಾ 10, ಸಚಿನ್‌ ದಾಸ್‌ 15, ಮುರುಗನ್‌ ಅಭಿಷೇಕ್‌ 4, ನಮನ್‌ ತಿವಾರಿ ಅಜೇಯ 3 ಹಾಗೂ ರಾಜ್‌ ಲಿಂಬಾಣಿ ಅಜೇಯ 2 ರನ್‌ ಕಲೆಹಾಕಿದರು. ನ್ಯೂಜಿಲೆಂಡ್‌ ಪರ ಮೇಸನ್‌ ಕ್ಲಾರ್ಕ್‌ 4 ವಿಕೆಟ್‌, ರಾನ್‌ ಸೌಗರ್ಸ್‌, ಇವಾಲ್ಡ್ ಚ್ರ್ಯೂಡರ್‌, ಜಾಕ್‌ ಕಮ್ಮಿಂಗ್‌ ಹಾಗೂ ಒಲಿವರ್‌ ತೆವಾಟಿಯಾ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.
ನ್ಯೂಜಿಲೆಂಡ್‌ ಇನ್ನಿಂಗ್ಸ್:‌ ಭಾರತದ ಬೌಲಿಂಗ್‌ ದಾಳಿಗೆ ತತ್ತಿರಿಸಿದ ನ್ಯೂಜಿಲೆಂಡ್‌ ಪರ ಯಾವೊಬ್ಬ ಆಟಗಾರ ಸಹ ಇಪ್ಪಂತರ ಗಡಿ ದಾಟಲಿಲ್ಲ. ಟಾಮ್‌ ಜೋನ್ಸ್‌ 0, ಜೇಮ್ಸ್‌ ನೆಲ್ಸನ್‌ 10, ಸ್ನೇಹಿತ್ ರೆಡ್ಡಿ ಡಕ್ಔಟ್‌, ಲಚ್ಲನ್‌ ಸ್ಟಾಕ್‌ಪೋಲ್‌ 5, ಆಸ್ಕರ್‌ ಜಾಕ್‌ಸನ್‌ 19, ಒಲಿವರ್‌ ತೆವಾಟಿಯಾ 7, ಜಾಕ್‌ ಕಮ್ಮಿಂಗ್‌ 16, ಅಲೆಕ್ಸ್‌ ಥಾಂಪ್ಸನ್‌ 12, ಇವಾಲ್ಡ್ ಚ್ರ್ಯೂಡರ್‌‌ 7, ರಾನ್‌ ಸೌಗರ್ಸ್‌ ಹಾಗೂ ಮೇಸನ್‌ ಕ್ಲಾರ್ಕ್‌ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.
ಭಾರತದ ಪರ ಸೌಮಿ ಪಾಂಡೆ 4, ರಾಜ್‌ ಲಿಂಬಾಣಿ 2, ಮುಶೀರ್‌ ಖಾನ್‌ 2, ನಮನ್‌ ತಿವಾರಿ ಹಾಗೂ ಅರ್ಶಿನ್‌ ಕುಲ್ಕರ್ಣಿ ತಲಾ ಒಂದೊಂದು ವಿಕೆಟ್‌ ಪಡೆದರು.
andolana

Recent Posts

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

2 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

3 hours ago

ಕಳ್ಳಬೇಟೆ ತಡೆ ಶಿಬಿರ ಸ್ಫೋಟದ ಬೆನ್ನಲ್ಲೇ ಅರಣ್ಯಕ್ಕೆ ಬೆಂಕಿ: 10 ಎಕರೆ ಸುಟ್ಟು ಭಸ್ಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಜೀವಿ…

3 hours ago

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

10 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

10 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

10 hours ago