ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ವಿಸ್ತಾರ ಕಂಪೆನಿಯ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಇಳಿದಿದ್ದು ಅಹಮದಾಬಾದ್-ದಿಲ್ಲಿ ವಿಮಾನದ ಪೈಲಟ್ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ.
ಈ ಎರಡು ವಿಮಾನಗಳು ಒಟ್ಟು 300 ಜನರನ್ನು ಹೊತ್ತು ಸಾಗುತ್ತಿದ್ದು, ಮಹಿಳಾ ಪೈಲಟ್ ಸಮಯೋಚಿತ ಕಾರ್ಯಕ್ಕೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.
ಅಹಮದಾಬಾದ್-ದಿಲ್ಲಿ ವಿಮಾನವು ಈಗಷ್ಟೇ ಇಳಿದಿತ್ತು ಹಾಗೂ ಪಾರ್ಕಿಂಗ್ ವೇ ತಲುಪಲು ಸಕ್ರಿಯ ರನ್ ವೇ ದಾಟಲು ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಸೂಚನೆ ನೀಡಲಾಗಿತ್ತು. ಈ ಮಧ್ಯೆ, ವಿಸ್ತಾರಾ ಏರ್ಲೈನ್ಸ್ ನ ದಿಲ್ಲಿ-ಬಾಗ್ಡೋಗ್ರಾ ವಿಮಾನವನ್ನು ಅದೇ ರನ್ವೇಯಲ್ಲಿ ಟೇಕ್-ಆಫ್ ಮಾಡಲು ಅನುಮತಿ ನೀಡಲಾಯಿತು. ಅಹಮದಾಬಾದ್- ದಿಲ್ಲಿ ವಿಮಾನದ 45 ವರ್ಷದ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿತು.
ವಿಮಾನಗಳು 1.8 ಕಿಮೀ ಅಥವಾ 1,800 ಮೀಟರ್ ದೂರದಲ್ಲಿದ್ದವು ಎಂದು ಮೂಲಗಳು ತಿಳಿಸಿವೆ, ಪೈಲಟ್ ಎಟಿಸಿಗೆ ಇತರ ವಿಮಾನದ ಇರುವ ಬಗ್ಗೆ ಎಚ್ಚರಿಕೆ ನೀಡದೇ ಇರುತ್ತಿದ್ದರೆ, ಫಲಿತಾಂಶವು ವಿನಾಶಕಾರಿಯಾಗಬಹುದಿತ್ತು ಎಂದು ತಿಳಿದುಬಂದಿದೆ.
ಪ್ರಶಾಂತ್ ಎಸ್. ಮೈಸೂರು : ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆ ವ್ಯಾಪ್ತಿಯ ಕಂದಾಯ ಇಲಾಖೆ ನೌಕರರ…
ಚಾಮರಾಜನಗರ : ನೀರಿನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ವಿದ್ಯುತ್ ಸಂಪರ್ಕವನ್ನು…
ಇಸ್ರೇಲ್ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…
ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…