BREAKING NEWS

ಈ ಸಲ ನಡೆಯೋದಿಲ್ವಾ ಟಿಪ್ಪು ಜಯಂತಿ?

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ದೊಡ್ಡ ಸದ್ದು ಮಾಡಿತ್ತು. ಟಿಪ್ಪು ಜಯಂತಿ ಕಾರಣಕ್ಕೆ ರಾಜ್ಯಾದ್ಯಂತ ಪ್ರಕ್ಷುಬ್ಧ ವಾತಾವರಣ ಉಂಟಾಗಿ, ಸಾವು-ನೋವುಗಳೂ ಸಂಭವಿಸಿದ್ದವು. ಈಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದು, ‘ಈ ಸಲ ಟಿಪ್ಪು ಜಯಂತಿ ನಡೆಯೋದಿಲ್ವಾ?’ ಎಂಬ ಅನುಮಾನ ಉಂಟಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯದಲ್ಲಿ ಹಮ್ಮಿಕೊಳ್ಳಲಿರುವ ಜಯಂತಿಗಳ ಪಟ್ಟಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಒಟ್ಟು 31 ಜಯಂತಿಗಳ ಉಲ್ಲೇಖವಿದೆ. ಆದರೆ ಟಿಪ್ಪು ಜಯಂತಿಯ ಪ್ರಸ್ತಾಪವಿಲ್ಲ. ಹೀಗಾಗಿ ಈ ಸಲ ಟಿಪ್ಪು ಜಯಂತಿ ಆಚರಣೆ ಇದೆಯೋ ಇಲ್ಲವೋ ಎಂಬ ಕುತೂಹಲವೊಂದು ಮೂಡಿದೆ.

ಒಂದು ವೇಳೆ ಆಚರಣೆ ಇದೆ ಎಂದಾದರೆ ಈ ಸಲವೂ ಮತ್ತೆ ವಿವಾದಾತ್ಮಕ ಇಲ್ಲವೇ ಸಂಘರ್ಷಾತ್ಮಕ ವಾತಾವರಣ ಸೃಷ್ಟಿಯಾದರೂ ಅಚ್ಚರಿ ಇಲ್ಲ. ಮತ್ತೊಂದೆಡೆ ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸಲ್ಪಡುವ ಜಯಂತಿಗಳ ವಿವರ. ಟಿಪ್ಪು ಜಯಂತಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೂಲಕ ಆಚರಿಸಲ್ಪಡಲಿದೆ, ಹೀಗಾಗಿ ಅದು ಈ ಪಟ್ಟಿಯಲ್ಲಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈಗ ಬಿಡುಗಡೆ ಆಗಿರುವ ಜಯಂತಿಗಳ ಪಟ್ಟಿ ಟಿಪ್ಪು ಜಯಂತಿ ಕುರಿತು ಕುತೂಹಲವನ್ನು ಕೆರಳಿಸಿದೆ.

lokesh

Recent Posts

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಕೋರ್ಟ್‌ ಸೂಚನೆ

ಬೆಂಗಳೂರು: ಕಾಂತಾರ ಚಾಪ್ಟರ್-‌1 ಚಿತ್ರದ ದೈವಪಾತ್ರವನ್ನು ಮಿಮಿಕ್ರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಒಂದು ತಿಂಗಳೊಳಗೆ…

12 mins ago

ಬಿಜೆಪಿ ಸೇರಿದ 7 ಬಂಡಾಯ ಸಂಸದರನ್ನು ಅನರ್ಹಗೊಳಿಸಿ: ಉಪರಾಷ್ಟ್ರಪತಿಗೆ ಎಎಪಿ ಪತ್ರ: ಸಂಜಯ್‌ ಸಿಂಗ್‌ ಮಾಹಿತಿ

ನವದೆಹಲಿ: ಏಳು ರಾಜ್ಯಸಭಾ ಸಂಸದರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ನಿರ್ಧಾರವನ್ನು ಆಮ್‌ ಆದ್ಮಿ ಪಕ್ಷ ಸಂವಿಧಾನಬಾಹಿರ ಎಂದು ಕರೆದಿದೆ.…

35 mins ago

ಸಚಿವ ಸುಧಾಕರ್‌ಗೆ ಇನ್ನೂ ಪ್ರಜ್ಞೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಯೋಜನೆ ಮತ್ತು ಸಾಂಖ್ಯಿತ ಇಲಾಖೆ ಸಚಿವ…

50 mins ago

ಹಕ್ಕಿಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ

ಬೆಂಗಳೂರು: ಹಕ್ಕಿಜ್ವರ ನಿಯಂತ್ರಣದ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೋಳಿ, ಮಾಂಸ ಮತ್ತು ಮೊಟ್ಟೆಗಳನ್ನು…

1 hour ago

ಕಾಂಗ್ರೆಸ್‌ನಲ್ಲಿ 100ಕ್ಕೆ 100 ಗೊಂದಲ ಇರುವುದು ನಿಜ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್‌ನಲ್ಲಿ 100ಕ್ಕೆ 100 ಗೊಂದಲ ಇರುವುದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಉಪಾಚುನಾವಣೆಯಲ್ಲಿ…

1 hour ago

ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಕ್ಯಾನ್ಸರ್:‌ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ

ಇಸ್ರೇಲ್:‌ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮ್ಮ ಆರೋಗ್ಯದ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು,…

2 hours ago