ಚೆನ್ನೈ: ಬ್ರಿಟಿಷರ ಕಾಲದ ಅಪರಾಧ ಕಾನೂನುಗಳಿಗೆ ಪರ್ಯಾಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ನಲ್ಲಿ ಶುಕ್ರವಾರ ಮಂಡಿಸಿದ ಮೂರು ಹೊಸ ವಿಧೇಯಕಗಳ ಹಿಂದಿ ಹೆಸರುಗಳನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರೋಧಿಸಿದೆ.
ಸಂಸತ್ನ ಮುಂಗಾರು ಅಧಿವೇಶನ ಅಂತ್ಯಗೊಂಡ ಬಳಿಕ ದಿಲ್ಲಿಯಿಂದ ಮರಳಿದ ಡಿಎಂಕೆ ಸಂಸದ ವಿಲ್ಸನ್, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. “ಭಾರತವು ಅನೇಕ ವಿಭಿನ್ನ ಭಾಷೆಗಳನ್ನು ಹೊಂದಿರುವುದರಿಂದ ಇಂಗ್ಲಿಷ್ ಸಾಮಾನ್ಯ ಬಳಕೆಯ ಭಾಷೆಯಾಗಿದೆ. ಎಲ್ಲಾ ಮೂರು ವಿಧೇಯಕಗಳು ಹಿಂದಿಯಲ್ಲಿವೆ. ಹೀಗಾಗಿ ಅದು ಯಾವ ಮಸೂದೆ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಈ ಹೆಸರುಗಳನ್ನು ಉಚ್ಛರಿಸುವುದು ಬಹಳ ಕಷ್ಟವಾಗುತ್ತಿದೆ. ಇದು ಭಾರತದಾದ್ಯಂತ ಹಿಂದಿಯನ್ನು ಬಲವಂತವಾಗಿ ತುರುಕುವುದಕ್ಕೆ ಎಡೆಮಾಡಿಕೊಡಲಿದೆ” ಎಂದು ಆರೋಪಿಸಿದರು.
ಈ ನಡೆಯು ಸಂವಿಧಾನ ವಿರೋಧಿ ಎಂದು ವಿಲ್ಸನ್ ಟೀಕಿಸಿದರು. “ಮೂರೂ ಮಸೂದೆಗಳ ಶೀರ್ಷಿಕೆಗಳು ಹಿಂದಿಯಲ್ಲಿವೆ. ಕಾನೂನುಗಳ ಶೀರ್ಷಿಕೆ ಹಿಂದಿಯಲ್ಲಿ ಇರುವುದು ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿದೆ. ಮಸೂದೆ ಸೇರಿದಂತೆ ಏನೇ ರೂಪಿಸಿದರೂ ಅದು ಇಂಗ್ಲಿಷ್ನಲ್ಲಿ ಇರಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ” ಎಂಬುದಾಗಿ ಹೇಳಿದರು.
ಕೇಂದ್ರ ಸರ್ಕಾರವು ಮಸೂದೆಗಳನ್ನು ಹಿಂದಿಯಲ್ಲಿ ಪ್ರಸ್ತುತಪಡಿಸಿರುವುದು ‘ಭಾಷಾ ಸಾಮ್ರಾಜ್ಯಶಾಹಿ’ ಸರಣಿಯ ಭಾಗವಾಗಿದೆ ಮತ್ತು ಇದು ವಸಾಹತು ವಿಮೋಚನೆಯ ಹೆಸರಿನಲ್ಲಿ ವಸಾಹತು ಮರು ಸ್ಥಾಪನೆಯ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.
“ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಮೊಂಡುತನದ ಪ್ರಯತ್ನವು ಒಟ್ಟಾರೆ ಬದಲಾವಣೆಯ ಮೂಲಕ ಭಾರತೀಯ ವೈವಿಧ್ಯತೆಯ ಸತ್ವವನ್ನು ಹಾಳುಮಾಡುವಂತಿದೆ- ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳು ಭಾಷಾ ಸಾಮ್ರಾಜ್ಯಶಾಹಿಯ ಭಾಗವಾಗಿದೆ. ಇದು ಭಾರತದ ಏಕತೆಯ ಮೂಲ ನೆಲಗಟ್ಟಿಗೆ ವಿರುದ್ಧವಾಗಿದೆ. ಇನ್ನು ಮುಂದೆ ಒಂದೇ ಒಂದು ತಮಿಳು ಪದವನ್ನು ಉಚ್ಚರಿಸುವ ನೈತಿಕ ಹಕ್ಕೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ” ಎಂದು ಸ್ಟಾಲಿನ್ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು.
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಕಸ್ಟಡಿಗೆ ವಹಿಸಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿಯ ಜಾತ್ರಾ…
ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…
ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು. ಆದರೆ ಹೈಕಮಾಂಡ್ಗೆ ನಾವು ನೋಟಿಸ್ ಕೊಡಲು…
ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರ, ಶೀತ ಸಂಪೂರ್ಣ ಕಡಿಮೆಯಾಗಿದ್ದು, ಒಣ ಹವೆಯ ಜೊತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಶಿವರಾತ್ರಿ…
ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ…