BREAKING NEWS

Salaar Trailer: ಪ್ರಶಾಂತ್‌ ನೀಲ್‌ ಬತ್ತಳಿಕೆಯಿಂದ ಹೊರಬಂತು ಮತ್ತೊಂದು ಆಯುಧ; ಇದು ಉಗ್ರಂ ರಿಮೇಕಾ?

ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಮೊದಲ ತೆಲುಗು ಚಿತ್ರ ಸಲಾರ್‌ನ ಟ್ರೈಲರ್‌ ಇಂದು ( ಡಿಸೆಂಬರ್‌ 1 ) ಬಿಡುಗಡೆಯಾಗಿದೆ. 3 ನಿಮಿಷ 47 ಸೆಕೆಂಡ್‌ಗಳ ಟ್ರೈಲರ್‌ ಇದಾಗಿದ್ದು, ಟ್ರೈಲರ್‌ ಉದ್ದಕ್ಕೂ ಮಾಸ್‌ ಎಲಿಮೆಂಟ್‌ ತುಂಬಿ ತುಳುಕುತ್ತಿವೆ.

ಕೆಜಿಎಫ್‌ ಮಾದರಿಯಲ್ಲಿಯೇ ಸೆಟ್‌, ಎಡಿಟಿಂಗ್‌, ಕ್ಯಾಮೆರಾ ವರ್ಕ್‌, ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಎಲ್ಲವೂ ಇದ್ದು ಪ್ರಶಾಂತ್‌ ನೀಲ್‌ ಮತ್ತೊಮ್ಮೆ ಸಿಕ್ಸರ್‌ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ರೈಲರ್‌ ನೋಡಿದ ಸಿನಿ ರಸಿಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸಲಾರ್‌ ಕನ್ನಡದಲ್ಲಿ ಪ್ರಶಾಂತ್ ನೀಲ್‌ ನಿರ್ದೇಶಿಸಿದ್ದ ಮೊದಲ ಚಿತ್ರ ಉಗ್ರಂನ ರಿಮೇಕ್‌ ಎಂದು ಚಿತ್ರ ಸೆಟ್ಟೇರಿದಾಗಿನಿಂದಲೂ ಸುದ್ದಿಗಳು ಹರಿದಾಡಿದ್ದವು. ಆದರೆ ಟ್ರೈಲರ್‌ನಲ್ಲಿನ ದೃಶ್ಯಗಳಿಗೂ ಉಗ್ರಂಗೂ ಹೆಚ್ಚೇನೂ ನಂಟಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಸಿಗುತ್ತಿದೆಯಾದರೂ ಟ್ರೈಲರ್‌ನ ಮೊದಲ ದೃಶ್ಯದಲ್ಲಿ ಬಾಲ್ಯದಲ್ಲಿ ನಾಯಕ ತನ್ನ ಸ್ನೇಹಿತನಿಗೆ ನಿನಗೆ ನನ್ನ ಅಗತ್ಯವಿದ್ದಾಗ ಹೇಳು ನಾನು ಬರುತ್ತೇನೆ ಎಂದು ಹೇಳುವ ಡೈಲಾಗ್‌ ಮತ್ತು ಕೊನೆಯಲ್ಲಿ ಬರುವ ಸಾಹಸದೃಶ್ಯ ಒಂದು ಕ್ಷಣ ಉಗ್ರಂ ಸಿನಿಮಾವನ್ನು ನೆನಪಿಸಿದ್ದು ಸುಳ್ಳಲ್ಲ. ಹೀಗಾಗಿ ಸಲಾರ್‌ ಚಿತ್ರ ಉಗ್ರಂನ ರಿಮೇಕ್‌ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ. 

andolana

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

6 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

6 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

7 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

8 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

8 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

9 hours ago