BREAKING NEWS

ನವರಾತ್ರಿಗೆ ವಿಶೇಷ ‘ಗರ್ಬೊ’ ಗೀತೆಗೆ ಸಾಹಿತ್ಯ ರಚಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಈಗ ಗೀತ ರಚನೆಕಾರರಾಗಿದ್ದಾರೆ! ಬರವಣಿಗೆ ಮೇಲಿನ ಆಸಕ್ತಿಯನ್ನು ಅವರು ನವರಾತ್ರಿ ಹಾಡಿನ ಮೂಲಕ ಪ್ರದರ್ಶಿಸಿದ್ದಾರೆ. ‘ಗರ್ಬೊ’ ಎಂಬ ಶೀರ್ಷಿಕೆಯ ಹಬ್ಬದ ಹಾಡನ್ನು ಪ್ರಧಾನಿ ಮೋದಿ ರಚಿಸಿದ್ದಾರೆ. ಈ ಹಾಡನ್ನು ಗಾಯಕಿ ಧ್ವನಿ ಭಾನುಶಾಲಿ ಹಾಡಿದ್ದಾರೆ. ತನಿಷ್ಕ್ ಬಗ್ಚಿ ಸಂಗೀತ ನಿರ್ದೇಶನದ, ಜಾಕಿ ಭಗ್ನಾನಿ ನಿರ್ಮಾಣದ ಗೀತೆ ಎಲ್ಲರ ಗಮನ ಸೆಳೆದಿದೆ.

ಹೊಸ ನವರಾತ್ರಿ ಗೀತೆ ‘ಗರ್ಬೊ’ದ ಸಾಹಿತ್ಯವನ್ನು ಪ್ರಧಾನಿ ಮೋದಿ ಬರೆದಿದ್ದಾರೆ. ನವರಾತ್ರಿ ಸಂದರ್ಭದಲ್ಲಿನ ಏಕತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತು ಹಬ್ಬದ ಚಟುವಟಿಕೆಗಳ ಕುರಿತು ಈ ಹಾಡಿನಲ್ಲಿ ಬಣ್ಣಿಸಿದ್ದಾರೆ. ಈ ಹಾಡಿಗೆ ದನಿಯಾಗಿರುವ ಧ್ವನಿ ಭಾನುಶಾಲಿ, ವಿಡಿಯೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಶನಿವಾರ ಈ ಹಾಡು ಬಿಡುಗಡೆಯಾಗಿದ್ದು, ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/narendramodi/status/1713063193592086899?s=20

‘ಗರ್ಬೊ’ ಹಾಡಿನ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಗಾಯಕಿ ಧ್ವನಿ ಭಾನುಶಾಲಿ, ಸಂಗೀತ ನಿರ್ದೇಶಕ ತನಿಷ್ಕ್ ಬಗ್ಚಿ ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ ಸ್ಥಾಪಿಸಿದ ಜಸ್ಟ್ ಮ್ಯೂಸಿಕ್‌ನ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

“ನಾನು ಕೆಲವು ವರ್ಷಗಳ ಹಿಂದೆ ಬರೆದ ಗರ್ಬಾದ ಈ ಸುಂದರ ಅರ್ಪಣೆಗಾಗಿ ಧ್ವನಿ ಭಾನುಶಾಲಿ, ತನಿಷ್ಕ್ ಬಗ್ಚಿ ಹಾಗೂ ಜಸ್ಟ್ ಮ್ಯೂಸಿಕ್ ತಂಡಕ್ಕ ಧನ್ಯವಾದಗಳು. ಇದು ಅನೇಕ ನೆನಪುಗಳನ್ನು ಮರಳಿಸಿದೆ. ನಾನು ಅನೇಕ ವರ್ಷಗಳಿಂದ ಬರೆದಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಹೊಸ ಗರ್ಬಾ ಗೀತೆಯನ್ನು ಬರೆಯವುದು ಸಾಧ್ಯವಾಗಿದೆ. ಅದನ್ನು ನಾನು ನವರಾತ್ರಿ ಸಂದರ್ಭದಲ್ಲಿ ಹಂಚಿಕೊಳ್ಳುತ್ತೇನೆ” ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಾಕಿ ಭಗ್ನಾನಿ, “ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಗರ್ಬಾ ಅರ್ಪಣೆಗಾಗಿ ನಿಮ್ಮ ಕರುಣೆಯ ಪದಗಳು ಮತ್ತು ಹೊಗಳಿಕೆಗಾಗಿ ಧನ್ಯವಾದಗಳು. ನಿಮ್ಮ ಬೆಂಬಲದಿಂದ ನಮಗೆ ನಿಜಕ್ಕೂ ಗೌರವ ದೊರಕಿದೆ. ನಿಮ್ಮ ಮಾತುಗಳು ನಮಗೆ ಸ್ಫೂರ್ತಿ ನೀಡಿವೆ. ಇದನ್ನು ಸೃಷ್ಟಿಸಲು ನಿಮ್ಮ ಸ್ಫೂರ್ತಿಯೇ ನಮಗೆ ಪ್ರೇರಣೆ ನೀಡಿದೆ” ಎಂದು ಹೇಳಿದ್ದಾರೆ.

ಈ ಗೀತೆಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ರಣಾವತ್, ಪ್ರಧಾನಿ ಮೋದಿ ಅವರು ಸ್ಫೂರ್ತಿದಾಯಕರು ಎಂದು ಶ್ಲಾಘಿಸಿದ್ದಾರೆ. “ಎಷ್ಟು ಸುಂದರ, ಅಟಲ್‌ (ವಾಜಪೇಯಿ) ಅವರ ಪದ್ಯಗಳು ಇರಬಹುದು ಅಥವಾ ನರೇಂದ್ರ ಮೋದಿ ಅವರ ಹಾಡುಗಳು/ ಪದ್ಯಗಳು ಮತ್ತು ಕಥೆ ಹೇಳುವಿಕೆಯು, ನಮ್ಮ ದಿಟ್ಟ ಹೀರೋಗಳು ಕಲೆಯ ಸೌಂದರ್ಯ ಹಾಗೂ ಸೊಬಗಿನಲ್ಲಿ ಭಾಗಿಯಾಗುವುದನ್ನು ನೋಡುವುದು ಯಾವಾಗಲೂ ಹೃದಯಸ್ಪರ್ಶಿಯಾಗಿರುತ್ತದೆ. ನವರಾತ್ರಿ 2023 ಗರ್ಬಾ, ಎಲ್ಲಾ ಕಲಾವಿದರಿಗೂ ಬಹಳ ಸ್ಫೂರ್ತಿದಾಯಕ” ಎಂದು ಹೇಳಿದ್ದಾರೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

34 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago