ಇಂದು ಹೊಸ ಸಂಸತ್ ಭವನದ ಒಳಗೆ ದುಷ್ಕರ್ಮಿಗಳು ನುಗ್ಗಿದ ಘಟನೆ ಇಡೀ ದೇಶದ ರಾಜಕಾರಣವನ್ನು ಅಲ್ಲೋಲ ಕಲ್ಲೋಲವಾಗುವಂತೆ ಮಾಡಿದ್ದು, ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಮೈಸೂರು ಮೂಲದ ಮನೋರಂಜನ್ ಎಂಬುವವನೂ ಸಹ ಶಾಮೀಲಾಗಿದ್ದು, ಸಾಗರ್ ಶರ್ಮಾ, ಅಮೋಲ್ ಹಾಗೂ ನೀಲಂ ಅಜಾದ್ ಇನ್ನಿತರ ಬಂಧಿತ ಆರೋಪಿಗಳಾಗಿದ್ದಾರೆ.
ಈ ನಾಲ್ವರ ಪೈಕಿ ಸಾಗರ್ ಶರ್ಮಾ ವಿಸಿಟರ್ಸ್ ಪಾಸ್ ಬಳಸಿ ಸಂಸತ್ ಒಳಗೆ ಪ್ರವೇಶಿಸಿದ್ದು, ಸಂಸತ್ ಪ್ರವೇಶಿಸಲು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದಾನೆ. ಹೀಗೆ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದವರು ಈ ರೀತಿ ಕೃತ್ಯ ಎಸಗಿದ್ದು, ಕೂಡಲೇ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಒಂದೆಡೆ ತಮ್ಮ ವಿರುದ್ಧ ಹೇಳಿಕೆಗಳು ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ದೆಹಲಿಯ ಹಳೆ ಸಂಸತ್ ಭವನದ ಎದುರು ಕಾಲೇಜು ವಿದ್ಯಾರ್ಥಿಗಳ ಜತೆ ಇರುವ ಫೋಟೊವನ್ನು ಟ್ವಟರ್ನಲ್ಲಿ ಹಂಚಿಕೊಂಡಿದ್ದಾರೆ. “ವಿದ್ಯಾವರ್ಧಕ ಕಾಲೇಜಿನ ಪೊಲಿಟಿಕಲ್ ಸೈನ್ಸ್ ಸ್ಟೂಡೆಂಟ್ಸ್ ಜತೆಗೆ ಸೋಮವಾರ ಕ್ಲಿಕ್ಕಿಸಿಕೊಂಡ ಫೋಟೊʼ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ ಪ್ರತಾಪ್ ಸಿಂಹ.
ಬೆಂಗಳೂರು: ಆರ್ಎಸ್ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂಬ ಕೇಂದ್ರದ ಮಾಜಿ ಸಚಿವ ಅನಂತ್…
ಚಾಮರಾಜನಗರ: ಗಡಿ ಜಿಲ್ಲೆ ಹಾಗೂ ಹುಲಿಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿವೆ.…
ಬೆಂಗಳೂರು: ಮಾರ್ಚ್.6ರಂದು ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಇಂದಿನಿಂದ ಬಜೆಟ್ ಅಧಿವೇಶನ ಶುರುವಾಗಲಿದೆ. ಬಜೆಟ್ ಮೇಲಿನ ಕುರಿತು…
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದ ಕಾರ್ಮೋದ ಮತ್ತಷ್ಟು ಹೆಚ್ಚಾಗಿದ್ದು, ಇದರ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನ ವಿಮಾನಯಾನದ ಮೇಲೆ ಬೀರಿದೆ.…
ಹದಿನೇಳನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದರ…
ಪಕ್ಷಕ್ಕೆ ಬಹುಮತ ಬಂದರೆ ಸಿಎಂ, ಬರದಿದ್ದರೆ ಪ್ರತಿಪಕ್ಷ ನಾಯಕರಾಗುವ ಪ್ರಭಾವಿ ವ್ಯಕ್ತಿ ವೇಗವಾಗಿ ಸಾಗುತ್ತಿದ್ದ ಜೀಪು ಸಂಗನಕಲ್ಲು ಕ್ರಾಸ್ ಬಳಿ…