BREAKING NEWS

ಪೆಪ್ಪರ್‌ಫ್ರೈ ಸಹ ಸಂಸ್ಥಾಪಕ ಅಂಬರೀಶ್‌ ಮೂರ್ತಿ ನಿಧನ

ಪೀಠೋಪಕರಣಗಳು ಮತ್ತು ಗೃಹಾಲಂಕಾರಕ ವಸ್ತುಗಳ ಆನ್‌ಲೈನ್‌ ಮಾರಾಟ ತಾಣ ಪೆಪ್ಪರ್‌ಫ್ರೈನ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನರಾಗಿದ್ದಾರೆ. ಕಂಪನಿಯ ಇನ್ನೋರ್ವ ಸಹ-ಸಂಸ್ಥಾಪಕ ಆಶಿಶ್ ಷಾ ಅವರು ‘ಎಕ್ಸ್‌’ನಲ್ಲಿ ಈ ವಿಷಯ ತಿಳಿಸಿದ್ದಾರೆ.

ಲೇಹ್‌ನಲ್ಲಿ ಹೃದಯ ಸ್ತಂಭನದಿಂದಾಗಿ ತಮ್ಮ ಸ್ನೇಹಿತ, ಮಾರ್ಗದರ್ಶಕ, ಸಹೋದರ ನಿಧನರಾಗಿದ್ದಾರೆ ಎಂದು ಆಶಿಶ್‌ ಶಾ ತಿಳಿಸಿದ್ದಾರೆ. ಅಂಬರೀಶ್‌ ಮೂರ್ತಿ ಅವರಿಗೆ 51 ವರ್ಷ ವಯಸ್ಸಾಗಿತ್ತು. ಬೈಕ್ ಉತ್ಸಾಹಿಯಾಗಿದ್ದ ಅವರು ಮುಂಬೈನಿಂದ ಲೇಹ್‌ಗೆ ಬೈಕ್‌ನಲ್ಲಿ ಪ್ರವಾಸ ಹೋಗಿದ್ದರು. ಈ ವೇಳೆ ಅಲ್ಲೇ ಹೃದಯ ಸ್ಥಂಭನಕ್ಕೆ ಒಳಗಾಗಿ ಅಸುನೀಗಿದ್ದಾರೆ.

2011ರಲ್ಲಿ ಅವರು ಪೆಪ್ಪರ್‌ಫ್ರೈ ಅನ್ನು ಸ್ಥಾಪಿಸಿದ್ದರು. ಮತ್ತು ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. “ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯ ಸ್ತಂಭನದಿಂದ ಅಂಬರೀಶ್‌ ಮೂರ್ತಿ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಬಂಧುಗಳಿಗಾಗಿ ಪ್ರಾರ್ಥಿಸಿ,” ಎಂದು ಆಶಿಶ್‌ ಶಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರ ಆತ್ಮೀಯರು, ಕಂಪನಿ ಉದ್ಯೋಗಿಗಳು ಅಂಬರೀಶ್‌ ಮೂರ್ತಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಲಡಾಖ್‌ ಪ್ರವಾಸಕ್ಕೆ ತೆರಳಿದ್ದ ಅಂಬರೀಶ್‌ ಮೂರ್ತಿ ಅವರು ತಮ್ಮ ಪ್ರವಾಸದ ಫೋಟೋಗಳು ಮತ್ತು ವಿಡಿಯೋಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಕ್ರಂಚ್‌ಬೇಸ್ ಪ್ರಕಾರ ಅಂಬರೀಶ್‌ ಮೂರ್ತಿ ಅವರು ಅಡೋನಿಯಾ ಹಾಸ್ಪಿಟಾಲಿಟಿ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಅವರು 1996ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕೊಲ್ಕತ್ತಾದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದರು.

ಉದ್ಯಮಶೀಲತೆಯ ಬಗ್ಗೆ ಆರಂಭದಿಂದಲೂ ಆಸಕ್ತರಾಗಿದ್ದ ಅಂಬರೀಶ್‌ ಮೂರ್ತಿಯವರು ಪದವಿ ಓದುವ ವೇಳೆ ಮನೆಯಲ್ಲಿ ಟ್ಯೂಷನ್ ನೀಡಲು ಪ್ರಾರಂಭಿಸಿದ್ದರು. ಅವರು ಟ್ಯೂಟರ್ಸ್ ಬ್ಯೂರೋ ಎಂಬ ಸಣ್ಣ ಉದ್ಯಮವನ್ನೂ ಸ್ಥಾಪಿಸಿದ್ದರು. ಇದು ಶಾಲಾ ವಿದ್ಯಾರ್ಥಿಗಳೊಂದಿಗೆ ಬೋಧಕರನ್ನು ಸಂಪರ್ಕಿಸುವ ವ್ಯವಸ್ಥೆಯಾಗಿತ್ತು, ಅವರು 1990ರ ದಶಕದ ಆರಂಭದಲ್ಲಿ ಎರಡು ವರ್ಷಗಳ ಕಾಲ ಈ ಉದ್ಯಮವನ್ನು ನಡೆಸಿದ್ದರು.

ನಂತರ ಅವರು ಸ್ಥಾಪಿಸಿದ್ದೇ ಪೆಪ್ಪರ್‌ಫ್ರೈ. ಇದು ಸುಮಾರು 500 ಮಿಲಿಯನ್ ಡಾಲರ್‌ (ಸುಮಾರು 4,150 ಕೋಟಿ ರೂ.) ಮೌಲ್ಯದ್ದಾಗಿದೆ. 2020ರ ಹೊತ್ತಿಗೆ ಇದು ಎಂಟು ಸುತ್ತುಗಳಲ್ಲಿ 244 ಮಿಲಿಯನ್ ಡಾಲರ್‌ (2,000 ಕೋಟಿ ರೂ.) ಹೂಡಿಕೆ ಸಂಗ್ರಹಿಸಿತ್ತು. ಕಂಪನಿಯ ಹೂಡಿಕೆದಾರರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಬರ್ಟೆಲ್ಸ್‌ಮನ್ ಇಂಡಿಯಾ ಇನ್ವೆಸ್ಟ್‌ಮೆಂಟ್‌ಗಳು ಸೇರಿವೆ.

andolanait

Recent Posts

ಸಾಲ ಬಾಧೆ ; ದಂಪತಿ ಆತ್ಮಹತ್ಯೆ

ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…

40 mins ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

14 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

14 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

14 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

14 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

14 hours ago