BREAKING NEWS

ಪಟ್ಟಭದ್ರ ಹಿತಾಸಕ್ತಿಗಳಿಂದ ಹಿಂಡನ್‌ಬರ್ಗ್‌ ವರದಿಯ ದುರ್ಬಳಕೆ: ಅದಾನಿ ಕಿಡಿ

ಅಮೆರಿಕ ಮೂಲದ ಶಾರ್ಟ್‌ ಸೆಲ್ಲಿಂಗ್‌ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯ ಪರಿಣಾಮಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಂಡವು ಎಂದು ಅದಾನಿ ಸಮೂಹದ ಮಾಲೀಕ ಗೌತಮ್ ಅದಾನಿ ಕಿಡಿಕಾರಿದ್ದಾರೆ.

ಅದಾನಿ ಗ್ರೂಪ್‌ ವಿರುದ್ಧ ಹಿಂಡನ್‌ಬರ್ಗ್‌ ವರದಿ ಪ್ರಕಟಿಸಿದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರುಗಳು ದಿಢೀರ್‌ ಕುಸಿತ ಕಂಡಿದ್ದವು. ಒಂದು ಹಂತದಲ್ಲಿ ಅದಾನಿ ಗ್ರೂಪ್‌ ಮುಳಗಡೆಯಾಗುವ ಆತಂಕ ಎದುರಾಗಿತ್ತು. ಇದು ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಭಾರತದ ರಾಜಕಾರಣದಲ್ಲೂ ಕೋಲಾಹಲ ಎಬ್ಬಿಸಿತ್ತು.

ಇದೀಗ ವರದಿ ಬಿಡುಗಡೆಯಾಗಿ ಹಲವು ತಿಂಗಳುಗಳ ಬಳಿಕ ಷೇರುದಾರರಿಗೆ ಪತ್ರ ಬರೆದಿರುವ ಗೌತಮ್‌ ಅದಾನಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ಹಿಂಡನ್‌ಬರ್ಗ್‌ ವರದಿಯಿಂದ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಯಿತು. ನಾವು ತಕ್ಷಣವೇ ವರದಿಯನ್ನು ಸಮಗ್ರವಾಗಿ ಖಂಡಿಸಿದ್ದರೂ ವಿವಿಧ ಪಟ್ಟಭದ್ರ ಹಿತಾಸಕ್ತಿಗಳು, ಶಾರ್ಟ್‌ ಸೆಲ್ಲಿಂಗ್‌ ಸಂಸ್ಥೆಯ ವರದಿಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದವು. ಇವು ವಿವಿಧ ಸುದ್ಧಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿ ಹರಡಿದವು,” ಎಂಬುದಾಗಿ ಅದಾನಿ ಅವರು ಷೇರುದಾರರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
2023ರ ಜನವರಿ 24ರಂದು ಹಿಂಡನ್‌ಬರ್ಗ್ ವರದಿ ಬಿಡುಗಡೆಯಾಗುವ ಮೊದಲು ಅದಾನಿ ಸಮೂಹದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 19.2 ಲಕ್ಷ ಕೋಟಿ ರೂ. ಇತ್ತು. ವರದಿ ಬಿಡುಗಡೆಯಾಗಿ ಇಂದಿಗೆ ಐದು ತಿಂಗಳೇ ಕಳೆದಿದ್ದರೂ ಕಂಪನಿಗಳ ಮಾರುಕಟ್ಟೆ ಬಂಡವಾಳವು ಸುಮಾರು 10 ಲಕ್ಷ ಕೋಟಿ ರೂ. ಆಸುಪಾಸಿನಲ್ಲೇ ಇದೆ. ಇದರಿಂದ ಅದಾನಿ ಷೇರುಗಳು ತಮ್ಮ ಹಿಂದಿನ ಗತವೈಭವದ ದಿನಗಳಿಗೆ ಮರಳಲು ಸಾಧ್ಯವಾಗಿಲ್ಲ.

ಇನ್ನೂ ಪೂರ್ಣಗೊಳ್ಳದ ಸೆಬಿ ತನಿಖೆ

ಹಿಂಡನ್‌ಬರ್ಗ್‌ನ ಆರೋಪಗಳ ಕುರಿತು ಮಾರುಕಟ್ಟೆ ನಿಯಂತ್ರಕ ಸೆಬಿ ತನಿಖೆ ನಡೆಸುತ್ತಿದ್ದು, ಇದು ಇನ್ನೂ ಪೂರ್ಣಗೊಂಡಿಲ್ಲ. ಇವೆಲ್ಲದರ ನಡುವೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು, ಅದಾನಿ ಕಂಪನಿಗಳ ಷೇರುಗಳ ಬೆಲೆಯಲ್ಲಿ ದಿಢೀರ್‌ ಏರಿಕೆಗೆ ಕಾರಣವಾಗಿರಬಹುದಾದ ಷೇರು ತಿರುಚುವಿಕೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಪುರಾವೆ ಸಿಕ್ಕಿಲ್ಲ ಎಂದು ಹೇಳಿದೆ. ತಜ್ಞ ಸಮಿತಿಯ ತನಿಖೆಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ವೈಫಲ್ಯವೂ ಕಂಡುಬಂದಿಲ್ಲ ಎಂಬುದಾಗಿ ಗೌತಮ್‌ ಅದಾನಿ ತಿಳಿಸಿದ್ದಾರೆ.

ಮುಂದಿನ ತಿಂಗಳು ಸೆಬಿ ತನ್ನ ತನಿಖಾ ವರದಿಯನ್ನು ಸಲ್ಲಿಸಲಿದೆ. ತಮ್ಮ ಸಂಘಟಿತ ಸಂಸ್ಥೆಯು ಆಡಳಿತ ಮತ್ತು ಬಹಿರಂಗಪಡಿಸುವಿಕೆಯ ಮಾನದಂಡಗಳ ಬಗ್ಗೆ ವಿಶ್ವಾಸವನ್ನು ಹೊಂದಿದೆ ಎಂದು ಒಂದು ಕಾಲದ ಏಷ್ಯಾದ ನಂ.1 ಹಾಗೂ ವಿಶ್ವದ ಮೂರನೇ ಅತಿ ದೊಡ್ಡ ಶ್ರೀಮಂತರಾಗಿದ್ದ ಗೌತಮ್‌ ಅದಾನಿ ಹೇಳಿದ್ದಾರೆ.

ಹಿಂಡನ್‌ಬರ್ಗ್‌ ತನ್ನ ವರದಿಯಲ್ಲಿ ಅದಾನಿ ಸಮೂಹವು ದಶಕಗಳಿಂದ ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಇದು ಉದ್ದೇಶಿತ ತಪ್ಪು ಮಾಹಿತಿಯಾಗಿದ್ದು, ಅದಾನಿ ಗ್ರೂಪ್‌ನ ಖ್ಯಾತಿಯನ್ನು ಹಾಳುಗೆಡವುವ ಮತ್ತು ಷೇರುಗಳ ಬೆಲೆಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವ ಮೂಲಕ ಲಾಭ ಗಳಿಸುವ ಗುರಿ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

andolanait

Recent Posts

ಅಧಿಕಾರ ಯಾರಿಗೂ ಶಾಶ್ವತ ಅಲ್ಲ : ಯತೀಂದ್ರಗೆ ಟಾಂಗ್‌ ನೀಡಿದ ಶಾಸಕ ತನ್ವೀರ್‌

ಮೈಸೂರು : ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಒಪ್ಪುತ್ತೇವೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು. 5…

4 mins ago

ಮೈಸೂರು | ಉಯಯಗಿರಿ, ಕುವೆಂಪುನಗರಕ್ಕೆ ಮತ್ತೊಂದು ಠಾಣೆ, ಅಗತ್ಯ ಸೌಲಭ್ಯಕ್ಕೆ ಬದ್ಧ ; ಹೋಂ ಮಿನಿಸ್ಟರ್‌

ಮೈಸೂರು : ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣಗಳಲ್ಲಿ ವಸೂಲಾಗುವ ಶುಲ್ಕದ ಮೊತ್ತದಲ್ಲಿ ಶೇ.50ರಷ್ಟು ಸರ್ಕಾರಕ್ಕೆ ಮತ್ತು ಇಲಾಖೆಯಲ್ಲಿ ಬಳಸಲಾಗುತ್ತಿದ್ದು, ಅದೇ…

52 mins ago

ತಂತ್ರಜ್ಞಾನದ ಮಾಹಿತಿ ಕೊರತೆ ರೇಷ್ಮೆ ಕೃಷಿಯ ಹಿನ್ನಡೆಗೆ ಕಾರಣ: ಪ್ರೊ. ಎಸ್.ಆರ್.ನಿರಂಜನ

ಮೈಸೂರು : ರೇಷ್ಮೆ ಕೃಷಿಯ ವಿಚಾರಗಳನ್ನು ತಿಳಿದುಕೊಳ್ಳದವರು ಪ್ರಾಯೋಗಿಕವಾಗಿ ಬೆಳೆಯಲಾರರು. ಹವಾಮಾನ ವೈಪರೀತ್ಯ, ತಂತ್ರಜ್ಞಾನದ ಮಾಹಿತಿ ಕೊರತೆ ರೇಷ್ಮೆ ಕೃಷಿಯ…

1 hour ago

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ :‌ ದರ ಏರಿಕೆ ಸ್ಥಗಿತ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರಗಳಲ್ಲಿ ಫೆಬ್ರವರಿ 9ರಿಂದ ಯೋಜಿಸಲಾಗಿದ್ದ ಸುಮಾರು 5% ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರು…

2 hours ago

ಮುಂಬೈ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಬಿಜೆಪಿಯ ರಿತು ತಾವ್ಡೆ ಆಯ್ಕೆ

ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸಿದೆ. ಕಳೆದ 25…

3 hours ago

ಸಿಎಂ ಆಗುವ ಆಸೆ ಎಲ್ಲರಿಗೂ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಮಂಗಳೂರು: ನಾನು ಸಿಎಂ ಎಂಬ ಕನಸು ಜನರಿಗೂ ಇದೆ. ಶಾಸಕರಿಗೂ ಇದೆ. ಪಕ್ಷದ ಏನು ಹೇಳುತ್ತದೆ ಅದನ್ನು ಕೇಳಬೇಕು. ಎಲ್ಲದಕ್ಕೂ…

3 hours ago