BREAKING NEWS

ಕಾಂಗ್ರೆಸ್‍ನವರ ಪಾಲಿಗೆ ದುಷ್ಕೃತ್ಯಗಳು ಕೇವಲ ಮಕ್ಕಳಾಟ : ಬಿಜೆಪಿ ಕಿಡಿ

ಬೆಂಗಳೂರು : ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಪೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗುವವರು ಸಿದ್ದರಾಮಯ್ಯ ಅವರ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ. ಅವರೆಲ್ಲರೂ ಎಸಗುವ ದುಷ್ಕೃತ್ಯ ಕಾಂಗ್ರೆಸ್‍ನವರ ಪಾಲಿಗೆ ಕೇವಲ ಮಕ್ಕಳಾಟ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲದ, ದೇಶಭಕ್ತರ ದೇಶಪ್ರೇಮವನ್ನು ಹಂಗಿಸುತ್ತಿದ್ದ, ದೇಶದ ವ್ಯವಸ್ಥೆಯನ್ನು ವಿದೇಶಗಳಲ್ಲಿ ವ್ಯಂಗ್ಯಕ್ಕೆ ಬಳಸಿಕೊಂಡ ಆಷಾಢಭೂತಿಗಳೆಲ್ಲರೂ ಸೇರಿ ತಮ್ಮ ಸ್ವಾರ್ಥ ಸಾಧನೆಯ ಗುಂಪಿಗೆ ಐ.ಎನ್.ಡಿ.ಐ.ಎ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ತಿಳಿದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ಹತಾಶೆಗೊಳಗಾಗಿರುವ ವಿಪಕ್ಷಗಳು ತಮ್ಮ ಗುಂಪಿಗೆ ಐ.ಎನ್.ಡಿ.ಐ.ಎ ಎಂಬ ಹೆಸರಿಟ್ಟ ಮಾತ್ರಕ್ಕೆ ಅದು ದೇಶದ ಮೇಲೆ ಅವರಿಗಿರುವ ಅಭಿಮಾನವಲ್ಲ ಎಂದಿದೆ.

ಬದಲಿಗೆ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಸಲು ಇಷ್ಟು ವರ್ಷಗಳ ಕಾಲ ಜಾತಿ, ಧರ್ಮಗಳನ್ನು ಬಳಸಿಕೊಂಡಿದ್ದವು, ಈ ಬಾರಿ ಸ್ವಲ್ಪ ಮುಂದುವರೆದು ಐ.ಎನ್.ಡಿ.ಐ.ಎಎಂದು ದೇಶದ ಹೆಸರು ಬಳಸಿಕೊಂಡಿವೆ ಎಂದು ದೂರಿದೆ.

ದೇಶದ್ರೋಹಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೆಸರಿನಲ್ಲಿಯೂ ಐ.ಎನ್.ಡಿ.ಐ.ಎ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈಗ ವಿಪಕ್ಷಗಳು ಸೇರಿ ಮಾಡಿಕೊಂಡಿರುವ ಅವಕಾಶವಾದಿ ಗುಂಪು ಸಹ ಬಹುತೇಕ ಆ ಸಂಘಟನೆಗಳಂತೆ, ದೇಶದ ಹಿತದೃಷ್ಟಿಗಿಂತ, ತಮ್ಮ ವೈಯಕ್ತಿಕ ಹಿತ ಸಾಧನೆ ಹಾಗೂ ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತವನ್ನು ಪ್ರೇರೇಪಿಸುತ್ತದೆ ಎಂದು ಆರೋಪಿಸಿದೆ.

ಇಂತಹ ದಿಕ್ಕಿಲ್ಲದ, ಶೂನ್ಯ ನಾಯಕತ್ವದ, ವೈಯುಕ್ತಿಕ ಹಿತಾಸಕ್ತಿಗಳ ಸ್ಥಾಪನೆಗಾಗಿ ರೂಪುಗೊಂಡಿರುವ ಐ.ಎನ್.ಡಿ.ಐ.ಎ ನೈಜ ಕಾಂಗ್ರೆಸ್ ನವರು ಯಾವ ಹೆದರಿಕೆಯಿಂದ ಯುಪಿಎ ಹೆಸರನ್ನು ಬದಲಿಸಿದರು.
ಅವರ ಹಳೆಯ ಲೂಟಿಗಳನ್ನು ಮುಚ್ಚಿಡಲು ಇರಬೇಕು. ಜನರಿಗೆ ಐ.ಎನ್.ಡಿ.ಐ.ಎ ಹಾಗು ಯುಪಿಎ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅದು ಕೇವಲ ಹಳೇ ನೀರು ಹೊಸ ಬಾಟ್ಲಿಯಲ್ಲಿ ಹಾಕಿದ್ದು ಎಂಬುದು ಗೊತ್ತಾಗಬೇಕು ಎಂದಿದೆ.

lokesh

Recent Posts

ಪತ್ನಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…

55 mins ago

ಓದುಗರ ಪತ್ರ: ಜಾಗೃತಿ

ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…

1 hour ago

ಓದುಗರ ಪತ್ರ: ಅಶ್ಲೀಲ ಹಾಡು ನಿಷೇಧ ಸ್ವಾಗತಾರ್ಹ

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…

1 hour ago

ಓದುಗರ ಪತ್ರ: ರೈಲು ಟಿಕೆಟ್ ಕಾಯ್ದಿರಿಸುವ ಸ್ಥಳದಲ್ಲಿ ಕೆಲಸ ಮಾಡದ ಎಸಿ

ಮೈಸೂರು ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ವಿಭಾಗದಲ್ಲಿ ಫ್ಯಾನ್ ಹಾಗೂ ಎಸಿ ಯಾವುದೂ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಟಿಕೆಟ್ ಮುಂಗಡವಾಗಿ…

1 hour ago

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ನೀಡಿ

ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರೂ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಅಸಂಘಟಿತ ಕಾರ್ಮಿ ಕರು ಅದರಲ್ಲೂ ಮುಖ್ಯವಾಗಿ ಕಟ್ಟಡ ನಿರ್ಮಾಣ, ಎಲೆಕ್ಟ್ರಿಕ್ ಕೆಲಸ,…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಚಿತ್ರಮಂದಿರಗಳನ್ನು ಉಳಿಸಲು ಚಿತ್ರೋದ್ಯಮ ಹುಡುಕುತ್ತಿದೆ ದಾರಿ

ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಅಟ್ಟುತ್ತಿರುವ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಕಳೆದ ವರ್ಷ ತಮಿಳುನಾಡಿನ ಹೈಕೋರ್ಟ್ ಆದೇಶ…

1 hour ago