ಬೆಂಗಳೂರು : ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಪೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗುವವರು ಸಿದ್ದರಾಮಯ್ಯ ಅವರ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ. ಅವರೆಲ್ಲರೂ ಎಸಗುವ ದುಷ್ಕೃತ್ಯ ಕಾಂಗ್ರೆಸ್ನವರ ಪಾಲಿಗೆ ಕೇವಲ ಮಕ್ಕಳಾಟ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲದ, ದೇಶಭಕ್ತರ ದೇಶಪ್ರೇಮವನ್ನು ಹಂಗಿಸುತ್ತಿದ್ದ, ದೇಶದ ವ್ಯವಸ್ಥೆಯನ್ನು ವಿದೇಶಗಳಲ್ಲಿ ವ್ಯಂಗ್ಯಕ್ಕೆ ಬಳಸಿಕೊಂಡ ಆಷಾಢಭೂತಿಗಳೆಲ್ಲರೂ ಸೇರಿ ತಮ್ಮ ಸ್ವಾರ್ಥ ಸಾಧನೆಯ ಗುಂಪಿಗೆ ಐ.ಎನ್.ಡಿ.ಐ.ಎ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ತಿಳಿದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ಹತಾಶೆಗೊಳಗಾಗಿರುವ ವಿಪಕ್ಷಗಳು ತಮ್ಮ ಗುಂಪಿಗೆ ಐ.ಎನ್.ಡಿ.ಐ.ಎ ಎಂಬ ಹೆಸರಿಟ್ಟ ಮಾತ್ರಕ್ಕೆ ಅದು ದೇಶದ ಮೇಲೆ ಅವರಿಗಿರುವ ಅಭಿಮಾನವಲ್ಲ ಎಂದಿದೆ.
ಬದಲಿಗೆ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಸಲು ಇಷ್ಟು ವರ್ಷಗಳ ಕಾಲ ಜಾತಿ, ಧರ್ಮಗಳನ್ನು ಬಳಸಿಕೊಂಡಿದ್ದವು, ಈ ಬಾರಿ ಸ್ವಲ್ಪ ಮುಂದುವರೆದು ಐ.ಎನ್.ಡಿ.ಐ.ಎಎಂದು ದೇಶದ ಹೆಸರು ಬಳಸಿಕೊಂಡಿವೆ ಎಂದು ದೂರಿದೆ.
ದೇಶದ್ರೋಹಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೆಸರಿನಲ್ಲಿಯೂ ಐ.ಎನ್.ಡಿ.ಐ.ಎ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈಗ ವಿಪಕ್ಷಗಳು ಸೇರಿ ಮಾಡಿಕೊಂಡಿರುವ ಅವಕಾಶವಾದಿ ಗುಂಪು ಸಹ ಬಹುತೇಕ ಆ ಸಂಘಟನೆಗಳಂತೆ, ದೇಶದ ಹಿತದೃಷ್ಟಿಗಿಂತ, ತಮ್ಮ ವೈಯಕ್ತಿಕ ಹಿತ ಸಾಧನೆ ಹಾಗೂ ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತವನ್ನು ಪ್ರೇರೇಪಿಸುತ್ತದೆ ಎಂದು ಆರೋಪಿಸಿದೆ.
ಇಂತಹ ದಿಕ್ಕಿಲ್ಲದ, ಶೂನ್ಯ ನಾಯಕತ್ವದ, ವೈಯುಕ್ತಿಕ ಹಿತಾಸಕ್ತಿಗಳ ಸ್ಥಾಪನೆಗಾಗಿ ರೂಪುಗೊಂಡಿರುವ ಐ.ಎನ್.ಡಿ.ಐ.ಎ ನೈಜ ಕಾಂಗ್ರೆಸ್ ನವರು ಯಾವ ಹೆದರಿಕೆಯಿಂದ ಯುಪಿಎ ಹೆಸರನ್ನು ಬದಲಿಸಿದರು.
ಅವರ ಹಳೆಯ ಲೂಟಿಗಳನ್ನು ಮುಚ್ಚಿಡಲು ಇರಬೇಕು. ಜನರಿಗೆ ಐ.ಎನ್.ಡಿ.ಐ.ಎ ಹಾಗು ಯುಪಿಎ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅದು ಕೇವಲ ಹಳೇ ನೀರು ಹೊಸ ಬಾಟ್ಲಿಯಲ್ಲಿ ಹಾಕಿದ್ದು ಎಂಬುದು ಗೊತ್ತಾಗಬೇಕು ಎಂದಿದೆ.
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…
ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ: ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…
ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…
ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…
ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…