BREAKING NEWS

‘ಮಹಾರಾಜ ನಿವೃತ್ತಿ’: ಹೊಸ ಲೋಗೊ ಬಿಡುಗಡೆ ಮಾಡಿದ ಏರ್ ಇಂಡಿಯಾ

ನವದೆಹಲಿ : ಏರ್ ಇಂಡಿಯಾದ ಪ್ರಖ್ಯಾತ ಲೋಗೋ ಆದ ಮಹಾರಾಜನಿಗೆ ವಿದಾಯ ಹೇಳಿದ ಟಾಟಾ ಮಾಲಕತ್ವದ ಏರ್ ಇಂಡಿಯಾ, ಗುರುವಾರ ತನ್ನ ನೂತನ ಲೋಗೋ ಬಿಡುಗಡೆ ಮಾಡಿದ್ದು, ಅದು ಅಪರಿಮಿತ ಸಾಧ್ಯತೆಗಳನ್ನು ಸೂಚಿಸುವಂತಿದೆ. ಈ ನೂತನ ಲೋಗೋ ಬಿಡುಗಡೆ ಮಾಡಲು 15 ತಿಂಗಳಿನಿಂದ ಏರ್ ಇಂಡಿಯಾ ಕೆಲಸ ಮಾಡಿದೆ. ಈ ಲೋಗೋವು ಅಶೋಕ ಚಕ್ರದಿಂದ ಪ್ರೇರಣೆಗೊಂಡಿದ್ದ ಹಳೆಯ ಕೆಂಪು ಹಂಸ ಹಾಗೂ ಕೇಸರಿ ಮುಳ್ಳುಗಳ ಲೋಗೋದ ಸ್ಥಾನವನ್ನು ಆಕ್ರಮಿಸಲಿದೆ.

ಏರ್ ಇಂಡಿಯಾದ ನೂತನ ಲೋಗೋ ಚಿಹ್ನೆಯು ‘ದಿ ವಿಸ್ತಾ’ ಎಂದಿದ್ದು, ಆಧುನಿಕ ವಿನ್ಯಾಸ ಒಳಗೊಂಡಿರುವ ಸುವರ್ಣ, ಕೆಂಪು ಹಾಗೂ ನೇರಳೆ ಬಣ್ಣಗಳನ್ನು ಹೊಂದಿದೆ.

ನೂತನ ಲೋಗೋ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಕಂಪನಿಯು, “ಈ ವಿನ್ಯಾಸವು ಉತ್ಕೃಷ್ಟ ಸುವರ್ಣ ಕಿಟಕಿ ಚೌಕಟ್ಟಿನಿಂದ ಪ್ರೇರಿತಗೊಂಡಿದ್ದು, ಅಪರಿಮಿತ ಸಾಧ್ಯತೆಗಳು, ಪ್ರಗತಿಪರತೆ ಹಾಗೂ ಭವಿಷ್ಯದೆಡೆಗಿನ ಏರ್ ಲೈನ್ಸ್ ನ ಧೈರ್ಯ, ವಿಶ್ವಾಸದ ದೃಷ್ಟಿಕೋನವನ್ನು ಸೂಚಿಸುತ್ತದೆ” ಎಂದು ಹೇಳಿದೆ.

ನೂತನ ಲೋಗೋವು ಕಲಾತ್ಮಕ ಹಾಗೂ ವಿಶಿಷ್ಟ ಭಾರತೀಯ ಕಿಟಕಿಯ ವಿನ್ಯಾಸದಿಂದ ಪ್ರೇರಣೆಗೊಂಡಿದ್ದು, ಈ ವಿನ್ಯಾಸವನ್ನು ಏರ್ ಇಂಡಿಯಾ ಚಾರಿತ್ರಿಕವಾಗಿ ಬಳಸುತ್ತಾ ಬರುತ್ತಿದೆ. ಈ ವಿನ್ಯಾಸವನ್ನು ಏರ್ ಇಂಡಿಯಾ ಕಂಪನಿಯು “ಅವಕಾಶಗಳ ಕಿಟಕಿ” ಎಂದು ಭಾವಿಸಿದೆ.

andolanait

Recent Posts

ವರ್ತನೆ ತಪ್ಪಿದರೆ ದಾಳಿ ನಿಶ್ಚಿತ : ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಾಷಿಂಗ್ಟನ್ : ಇರಾನ್ ತಪ್ಪು ವರ್ತನೆ ತೋರಿದರೆ ಮತ್ತೆ ಸೇನಾ ದಾಳಿ ಆರಂಭವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

8 hours ago

ನಿಗದಿಗಿಂತ ಮುನ್ನವೇ ಮುಂಗಾರು ಮಳೆ : ಮೇ ಅಂತ್ಯಕ್ಕೆ ಕೇರಳ ಪ್ರವೇಶ

ಬೆಂಗಳೂರು : ಬಿರುಬೇಸಿಗೆಯಿಂದಾಗಿ ಬಳಲಿ ಬೆಂಡಾಗಿರುವ ಜನತೆಗೆ ಕೇಂದ್ರ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿ ನಿಗದಿಗಿಂತ ಮುಂಚಿತವಾಗಿಯೇ…

9 hours ago

ಬೆಟ್ಟದಪುರ | ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶ ; ಬಾಲಕ ಸಾವು

ಬೆಟ್ಟದಪುರ : ಪಿರಿಯಾಪಟ್ಟಣ ತಾಲ್ಲೂಕಿನ ಬಿ.ಟಿ.ಎಂ. ಕೊಪ್ಪಲು ಗ್ರಾಮದಲ್ಲಿ ಮನೆಯ ಹಿಂದೆ ಕ್ರಿಕೆಟ್ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ…

10 hours ago

ಚಿಪ್ಪುಹಂದಿ ಬೇಟೆಯಾಡಿ ಮಾರಾಟಕ್ಕೆ ಯತ್ನ: ಓರ್ವ ಬಂಧನ

ಮೈಸೂರು : ಕಾಡುಪ್ರಾಣಿ ಬೇಟೆ ಹಾಗೂ ಅಕ್ರಮ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ…

12 hours ago

ʼದೃಷ್ಟಿ ಉಪಗ್ರಹʼ ಉಡಾವಣೆ ಯಶಸ್ವಿ

ಬೆಂಗಳೂರು : ಮೋಡ, ಕತ್ತಲೆ, ಮಳೆ... ಯಾವುದಕ್ಕೂ ಜಗ್ಗದ ಕಣ್ಣು ಹೊಂದಿರುವ ಭಾರತದ ಮೊದಲ ಖಾಸಗಿ ಉಪಗ್ರಹ ‘ದೃಷ್ಟಿ’ ಇಂದು…

13 hours ago

ಮೇ.6ರಂದು ಯಸಳೂರಿನ ಅರ್ಜುನ ಆನೆ ಸಮಾಧಿ ಸ್ಥಳದ ಸ್ಮಾರಕ ಉದ್ಘಾಟನೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ 2023 ಡಿಸೆಂಬರ್.4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರು,…

15 hours ago