BREAKING NEWS

ಚಂದ್ರನ ಮೇಲೆ ಇಳಿಯುವ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಬೆಂಗಳೂರು : ತಾಜಾ ಆಗಿ ವಿಕ್ರಮ್ ಸೆರೆ ಹಿಡಿದ ಅದ್ಭುತ ವಿಡಿಯೋ ಇಲ್ಲಿದೆ. ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ (ISRO) ಇದೀಗತಾನೆ ರಿಲೀಸ್ ಮಾಡಿದೆ. ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್‌ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿವೆ.

ಚಂದ್ರನ ಮೇಲೆ ಪ್ರಜ್ಞಾನ್ ರೋವರ್ ಓಡಾಟ : ಚಂದ್ರನ ಮೇಲೆ ಚಂದ್ರಯಾನ 3 ಪ್ರಜ್ಞಾನ್ ರೋವರ್‌ನ ರಥಯಾತ್ರೆ ಆರಂಭವಾಗಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ 3 ಗಂಟೆ ಬಳಿಕ ಪ್ರಜ್ಞಾನ್ ರೋವರ್ ಹೊರಬಂದಿದೆ. ಗುರುವಾರ ರಾತ್ರಿಯಿಂದಲೇ ಲ್ಯಾಂಡರ್ ಮತ್ತು ರೋವರ್ ಅಧ್ಯಯನ ಆರಂಭಿಸಿವೆ. 7 ಉಪಕರಣಗಳು, 7 ವಿಷಯಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿವೆ.

‘ರೋವರ್‌ನ ಎಲ್ಲಾ ಸಿಸ್ಟಂಗಳು ನಾರ್ಮಲ್’: ಪ್ರಗ್ಯಾನ್ ರೋವರ್‌ಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ರ‍್ಯಾಂಪ್‌ ಮೂಲಕ ನಿಧಾನವಾಗಿ ರೋವರ್ ಕೆಳಗೆ ಇಳಿದಿದೆ. ಮೊದಲಿಗೆ ರೋವರ್‌ನ ಸೋಲಾರ್ ಫಲಕಗಳು ತೆರೆದುಕೊಂಡಿವೆ. ರೋವರ್ ಕಾರ್ಯಚಟುವಟಿಕೆ ಕುರಿತು ಇಸ್ರೋ ಟ್ವೀಟ್ ಮಾಡಿ ಅಪ್‌ಡೇಟ್ ನೀಡಿದೆ. ಪೂರ್ವನಿಗದಿಯಂತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ವಿಕ್ರಮ್ ರೋವರ್‌ನ ಎಲ್ಲಾ ಸಿಸ್ಟಂಗಳು ಯಥಾ ಸ್ಥಿತಿಯಲ್ಲಿವೆ ಅಂತೇಳಿದೆ.

ವಿಕ್ರಂ ಲ್ಯಾಂಡರ್‌ನಿಂದ ಬೇರ್ಪಟ್ಟ ಪ್ರಜ್ಞಾನ್ ರೋವರ್: ಲ್ಯಾಂಡರ್ ಪೇಲೋಡ್ಸ್ ILSA, ರಂಭಾ ಮತ್ತು ಚಸ್ತೆ ಕಾರ್ಯಾರಂಭ ಮಾಡಿವೆ. ರೋವರ್ ಓಡಾಟ ಕೂಡ ಪ್ರಾರಂಭವಾಗಿದೆ. ಪ್ರಪೊಲ್ಷನ್ ಮಾಡ್ಯೂಲ್‌ನ ಶೇಪ್‌ ಪೇಲೋಡ್ ಕಾರ್ಯಾರಂಭ ಮಾಡಿದೆ ಅಂತಾ ಟ್ವೀಟ್ ಮೂಲಕ ಇಸ್ರೋ ಮಾಹಿತಿ ನೀಡಿದೆ. ವಿಕ್ರಮ್ ಲ್ಯಾಂಡರ್‌ನಿಂದ ರೋವರ್ ಕೆಳಗಿಳಿದು ಸರಾಗವಾಗಿ ಓಡಾಟ ಆರಂಭವಿಸಿದೆ. ಇದು ಖಚಿತವಾಗುತ್ತಿದ್ದಂತೆಯೇ ವಿಕ್ರಂ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಅಧಿಕೃತವಾಗಿ ಬೇರ್ಪಡೆಯಾಗಿದೆ.

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಫೆ.14 ಶನಿವಾರ

45 mins ago

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

11 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

12 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

12 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

12 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

12 hours ago