ನಿಪ್ಪಾಣಿ : ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ ಶಶಿಕಲಾ ಜಿಲ್ಲೆ ಅವರು ₹11.6 ಕೋಟಿ ಮೌಲ್ಯದ ಚರಾಸ್ತಿಗಳು ಹಾಗೂ ₹ 56.98 ಕೊಟಿ ಮೌಲ್ಯದ ಸ್ಥಿರಾಸ್ತಿಗಳು ಸೇರಿ ₹68.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಶಿಕಲಾ ಒಬ್ಬರಿಗೇ ₹1.03 ಕೋಟಿ ವಾರ್ಷಿಕ ಆದಾಯವಿದೆ.
ಶಶಿಕಲಾ ಹೆಸರಲ್ಲಿ ₹3.9 ಕೋಟಿ ಹಾಗೂ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ ₹5.73 ಕೋಟಿ, ಪುತ್ರರ ಹೆಸರಲ್ಲಿ ₹1.17 ಕೋಟಿ ಹಾಗೂ ಇತರರ ಹೆಸರಲ್ಲಿ ₹26 ಲಕ್ಷ ಮೌಲ್ಯದ ಚರಾಸ್ತಿಗಳು ಇವೆ.
ಸಚಿವೆ ಹೆಸರಲ್ಲಿ ₹24.13 ಕೋಟಿಯ ಸ್ಥಿರಾಸ್ತಿ, ಪತಿ ಹೆಸರಲ್ಲಿ ₹15.04 ಕೋಟಿ, ಪುತ್ರನ ಹೆಸರಲ್ಲಿ ₹17.81 ಕೋಟಿ ಸೇರಿ ಒಟ್ಟು ₹ 56.98 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಅವರ ಕುಟುಂಬ ಹೊಂದಿದೆ.ಅಲ್ಲದೇ, ₹42.81 ಲಕ್ಷ ಹಣ ಅವರ ಬ್ಯಾಂಕ್ ಖಾತೆಯಲ್ಲಿದೆ.
ಇಡೀ ಕುಟುಂಬದ ಖಾತೆಯಲ್ಲಿ ₹2.19 ಕೋಟಿ ಹಣವಿದೆ. ₹ 1.87 ಕೋಟಿ ಮೌಲ್ಯದ ವಿವಿಧ ಷೇರು ಹಾಗೂ ಬಾಂಡ್ಗಳನ್ನು ಅವರು ಖರೀದಿಸಿದ್ದು, ಕುಟುಂಬದಲ್ಲಿ ₹5.9 ಕೋಟಿ ಮೌಲ್ಯದ ಇಂಥ ಆಸ್ತಿ ಇದೆ. ಉಳಿತಾಯ ಹಾಗೂ ವಿಮೆಗಳ ಮೊತ್ತ ಸುಮಾರು ₹76.95 ಲಕ್ಷ.
ಶಶಿಕಲಾ ಅವರೇ ವಿವಿಧ ಬ್ಯಾಂಕುಗಳಿಂದ ₹ 80 ಲಕ್ಷ ವೈಯಕ್ತಿಕ ಸಾಲ ಹಾಗೂ ₹ 9.05 ಕೋಟಿ ವಿವಿಧ ಸಾಲಗಳನ್ನು ಪಡೆದಿದ್ದಾರೆ. ಕುಟುಂಬದ ತಲೆಯ ಮೇಲೆ ₹22.41 ಕೋಟಿ ಸಾಲವಿದೆ.
₹ 73 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಕುಟುಂಬದಲ್ಲಿ ₹1.45 ಕೋಟಿಯ ಚಿನ್ನ ಹಾಗೂ ಬೆಳ್ಳಿ ಆರಭರಣಗಳಿವೆ. ವಿವಿಧ ಗ್ರಾಮಗಳಲ್ಲಿ ₹ 3.9 ಕೋಟಿ ಮೌಲ್ಯದ ಕೃಷಿ ಜಮೀನು ಶಶಿಕಲಾ ಹೊಂದಿದ್ದು, ₹ 11.76 ಕೋಟಿಯ ಜಮೀನು ಕುಟುಂಬಕ್ಕಿದೆ. ₹ 15.20 ಕೋಟಿಯ ವಾಣಿಜ್ಯ ಭೂಮಿಯನ್ನು ಶಶಿಕಲಾ ಹೊಂದಿದ್ದಾರೆ. ₹ 21.85 ಕೋಟಿ ಮೌಲ್ಯದ ವಾಣಿಜ್ಯ ಭೂಮಿ ಕುಟುಂಬಕ್ಕಿದೆ.
ಶಶಿಕಲಾ ಜೊಲ್ಲೆ ನೀಡಿದ ಆಸ್ತಿ ವಿವರದಲ್ಲಿ ಆಕಳು, ಎಮ್ಮೆ, ನಾಯಿಗಳೂ ಸೇರಿವೆ. ತಮ್ಮ ಬಳಿ 10 ಹೈಬ್ರೀಡ್ ಹಸುಗಳು, 17 ದೇಸಿ ಹಸುಗಳು, 6 ಎಮ್ಮೆ, ಒಂದು ಕುದುರೆ ಹಾಗೂ 4 ನಾಯಿಗಳು ಇವೆ ಎಂದೂ ಅವರು ಘೋಷಿಸಿಕೊಂಡಿದ್ದಾರೆ. ಆದರೆ, ಇವುಗಳ ಮೌಲ್ಯ ನಮೂದಿಸಿಲ್ಲ.
ಮೈಸೂರು: ಚಾಮುಂಡಿಬೆಟ್ಟ ರಸ್ತೆಯ ತಾವರೆಕಟ್ಟೆ ಬಳಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 40 ವರ್ಷ…
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಂಡ್ಯದಲ್ಲಿ ಜನರು 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ…
ಮಂಡ್ಯ: ತ್ರಿವಿಧ ದಾಸೋಹದ ಮೂಲಕ ಆದಿಚುಂಚನಗಿರಿ ಮಠ ಪ್ರಸಿದ್ಧಿ ಪಡೆದಿದೆ. ಬಾಲಗಂಗಾಧರನಾಥರ ಭೈರವೈಕ್ಯ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು…
ಬೆಂಗಳೂರು: ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ನಿಂದ ಅಮಾನತುಗೊಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ…
ಪಾಟ್ನಾ: ಬಿಹಾರದ ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದರು. ಪಾಟ್ನಾದ ಲೋಕಭವನದಲ್ಲಿ ರಾಜ್ಯಪಾಲ ಸೈಯದ್…
ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ…