BREAKING NEWS

ಧಾರ್ಮಿಕ ಆಚರಣೆಗೆ ಅಡ್ಡಿ: ನಂಜುಂಡೇಶ್ವರನ ಭಕ್ತರಿಂದ ಅಹೋರಾತ್ರಿ ಧರಣಿ

ನಂಜನಗೂಡು: ಸಂಪ್ರದಾಯದಂತೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದಂತಹ ಅಂಧಕಾಸುರನ ಸಂಹಾರದಲ್ಲಿ ದಸಂಸ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಆಚರಣೆ ಅಡ್ಡಿಪಡಿಸಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೂರಾರು ಶ್ರೀಕಂಠೇಶ್ವರ ಭಕ್ತ ಮಂಡಳಿ ಆಹೋರಾತ್ರಿ ಧರಣಿ ನಡೆಸಿದರು.

ನಗರದ ರಾಕ್ಷಸ ಮಂಟಪ ವೃತ್ತವೆಂದೇ ಹೆಸರುವಾಸಿಯಾಗಿರುವ ಸ್ಥಳದಲ್ಲಿ ನೂರಾರು ವರದಷಗಳಿಂದ ನಡೆದುಕೊಂಡು ಬಂದಿದ್ದಂತ ಅಂಧಾಕಾಸುರನ ಸಂಹಾರ ಸಾಂಪ್ರಧಾಯಿಕ ಆಚರಣೆಯನ್ನು ನಿಲ್ಲಿಸುವಂತೆ ದಸಂಸ ಕಾರ್ಯಕರ್ತರು ಅಡ್ಡಿಪಡಿಸಿದ್ದಲದೇ, ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ನೀರು ಎರಚುವ ಕೆಲಸ ಮಾಡಿದ್ದರು.

ಈ ವೇಳೆ ಸ್ಥಳದಲ್ಲಿದ್ದ ನೂರಾರು ಭಕ್ತುರು ಹಾಗೂ ದಸಂಸ ಕಾರ್ಯಕರ್ತರ ನಡುವೆ ಮಾತನಿ ಜಕಮಕಿ ಉಂಟಾಯಿತು. ಬಳಿಕ ಭಕ್ತರು ಹಾಗೂ ಪೊಲೀಸರ ಭದ್ರತೆಯ ನಡುವೆ ಸಂಪ್ರದಾಯಿಕ ಆಚರಣೆ ನೆರವೇರಿತು. ಈ ಬಳಿಕ ಮಾತಿನ ಚಕಮಕಿ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘು ಲಾಟಿಪ್ರಹಾರ ನಡೆಸಿದರು.

ಇದನ್ನು ಖಂಡಿಸಿದ ಭಕ್ತಮಂಡಳಿ, ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ನಡೆದ ಅಪಚಾರ ಹಾಗೂ ಭಕ್ತರ ಮೇಲೆ ನಡೆದ ಲಾಟಿಪ್ರಹಾರವನ್ನು ಖಂಡಿಸಿ ನಗರದ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ಸ್ಥಳದಲ್ಲೇ ಧರಣಿ ಕೂತು, ಈ ಕೂಡಲೇ ದಸಂಸ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿದರು.

ಧರಣಿ ನಿರತರಾಗಿದ್ದ ಭಕ್ತ ಮಂಡಳಿ, ಸ್ಥಳಿಯ ಶಾಸಕರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.  ಮಧ್ಯರಾತ್ರಿ ಸುಮಾರು 2ಗಂಟೆ ವರೆಗೂ ನಡೆದ ಪ್ರತಿಭಟನೆಯ ಬಳಿಕ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಗದೀಶ್‌ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಭಕ್ತಮಂಡಳಿಯವರು ದೂರು ಸಲ್ಲಿಸಿದರು.

ಇಂದು ಸಂಜೆ 6ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸಿದಿದ್ದಲ್ಲಿ ಮತ್ತೆ ಇಂದು ಸಂಜೆ ಧರಣಿ ಮುಂದುವರೆಸುವಂತೆ ಶ್ರೀಕಂಠೇಶ್ವರ ಸ್ವಾಮಿ ಭಕ್ತಮಂಡಳಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.

 

ನಮ್ಮ ಪೂರ್ವಿಕರಿಗೆ ಅವಮಾನವಾಗಲು ಬಿಡುವುದಿಲ್ಲ – ದಸಂಸ: ಶತಶತಮಾನಗಳಿಂದ ದಲಿತರ ಮೇಲೆ ನಡೆದುಕೊಂಡು ಬಂದಿರುವ ಶೋಷಣೆಗಳನ್ನು ಮುಂದುವರೆಸಲು ನಾವು ಬಿಡುವುದಿಲ್ಲ ಎಂದು ದಸಂಸ ಕಾರ್ಯಕರ್ತರು ವಾಗ್ದಾಳಿ ನಡೆಸಿದರು. ಅಂಧಕಾಸುರನಾಗಲಿ, ಮಹಿಷಾಸುರನಾಗಲಿ ಇವರೆಲ್ಲಾ ನಮ್ಮ ಪೂರ್ವಿಕರು. ಅವರು ರಾಕ್ಷಸರಲ್ಲ. ಈ ರೀತಿಯ ಆಚರಣೆಗಳ ಮೂಲಕ ನಮ್ಮ ಪೂರ್ವಿಕರಿಗೆ ಅಪಮಾನ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.

andolanait

Recent Posts

ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ ಒಪ್ಪಂದ : ಎಚ್‌ಡಿಕೆ ನೇತೃತ್ವದಲ್ಲಿ ದ್ವಿಪಕ್ಷೀಯ ಚರ್ಚೆ

ಹೊಸದಿಲ್ಲಿ : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು…

12 mins ago

ಮುಡಾ ಕೇಸ್‌ನಲ್ಲಿ ಸಿಎಂʼಗೆ ನಿರಾಳ : ʻಸತ್ಯ ಮೇವ ಜಯತೆʻ ಫ್ಲೇ ಕಾರ್ಡ್‌ ಹಿಡಿದು ಕಾಂಗ್ರೆಸ್‌ ಸಂಭ್ರಮ

ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್…

25 mins ago

ಕೆ.ಜೆ.ಜಾರ್ಜ್‌ ರಾಜೀನಾಮೆ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು ಎಂಬ…

2 hours ago

ವಿಕಲಚೇತನರಿಗಾಗಿಯೇ ಬೃಹತ್‌ ಉದ್ಯೋಗ ಮೇಳ ಆಯೋಜನೆ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…

2 hours ago

ಕೊಡಗಿನಲ್ಲಿ ಮುಂದುವರೆದ ಆನೆ–ಮಾನವ ಸಂಘರ್ಷ: ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಸಾವು

ಕೊಡಗು: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಮತ್ತೆ ಜೀವ ಬಲಿ ಪಡೆದಿದೆ. ಸಿದ್ದಾಪುರ ಸಮೀಪದ ಗೌರಿ ಬೆಟ್ಟ ಬಳಿ ಕಾಡಾನೆ ದಾಳಿಗೆ…

3 hours ago

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಸಾವು ಪ್ರಕರಣ: ದುರಂತದ ಸಂಪೂರ್ಣ ತನಿಖೆಯಾಗಲಿದೆ ಎಂದ ಯದುವೀರ್‌ ಒಡೆಯರ್‌

ಮಡಿಕೇರಿ: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕತೆ ಕಟ್ಟುತ್ತಿದ್ದಾರೆ ಎಂದು…

3 hours ago