BREAKING NEWS

ಧಾರ್ಮಿಕ ಆಚರಣೆಗೆ ಅಡ್ಡಿ: ನಂಜುಂಡೇಶ್ವರನ ಭಕ್ತರಿಂದ ಅಹೋರಾತ್ರಿ ಧರಣಿ

ನಂಜನಗೂಡು: ಸಂಪ್ರದಾಯದಂತೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದಂತಹ ಅಂಧಕಾಸುರನ ಸಂಹಾರದಲ್ಲಿ ದಸಂಸ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಆಚರಣೆ ಅಡ್ಡಿಪಡಿಸಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೂರಾರು ಶ್ರೀಕಂಠೇಶ್ವರ ಭಕ್ತ ಮಂಡಳಿ ಆಹೋರಾತ್ರಿ ಧರಣಿ ನಡೆಸಿದರು.

ನಗರದ ರಾಕ್ಷಸ ಮಂಟಪ ವೃತ್ತವೆಂದೇ ಹೆಸರುವಾಸಿಯಾಗಿರುವ ಸ್ಥಳದಲ್ಲಿ ನೂರಾರು ವರದಷಗಳಿಂದ ನಡೆದುಕೊಂಡು ಬಂದಿದ್ದಂತ ಅಂಧಾಕಾಸುರನ ಸಂಹಾರ ಸಾಂಪ್ರಧಾಯಿಕ ಆಚರಣೆಯನ್ನು ನಿಲ್ಲಿಸುವಂತೆ ದಸಂಸ ಕಾರ್ಯಕರ್ತರು ಅಡ್ಡಿಪಡಿಸಿದ್ದಲದೇ, ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ನೀರು ಎರಚುವ ಕೆಲಸ ಮಾಡಿದ್ದರು.

ಈ ವೇಳೆ ಸ್ಥಳದಲ್ಲಿದ್ದ ನೂರಾರು ಭಕ್ತುರು ಹಾಗೂ ದಸಂಸ ಕಾರ್ಯಕರ್ತರ ನಡುವೆ ಮಾತನಿ ಜಕಮಕಿ ಉಂಟಾಯಿತು. ಬಳಿಕ ಭಕ್ತರು ಹಾಗೂ ಪೊಲೀಸರ ಭದ್ರತೆಯ ನಡುವೆ ಸಂಪ್ರದಾಯಿಕ ಆಚರಣೆ ನೆರವೇರಿತು. ಈ ಬಳಿಕ ಮಾತಿನ ಚಕಮಕಿ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘು ಲಾಟಿಪ್ರಹಾರ ನಡೆಸಿದರು.

ಇದನ್ನು ಖಂಡಿಸಿದ ಭಕ್ತಮಂಡಳಿ, ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ನಡೆದ ಅಪಚಾರ ಹಾಗೂ ಭಕ್ತರ ಮೇಲೆ ನಡೆದ ಲಾಟಿಪ್ರಹಾರವನ್ನು ಖಂಡಿಸಿ ನಗರದ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ಸ್ಥಳದಲ್ಲೇ ಧರಣಿ ಕೂತು, ಈ ಕೂಡಲೇ ದಸಂಸ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿದರು.

ಧರಣಿ ನಿರತರಾಗಿದ್ದ ಭಕ್ತ ಮಂಡಳಿ, ಸ್ಥಳಿಯ ಶಾಸಕರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.  ಮಧ್ಯರಾತ್ರಿ ಸುಮಾರು 2ಗಂಟೆ ವರೆಗೂ ನಡೆದ ಪ್ರತಿಭಟನೆಯ ಬಳಿಕ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಗದೀಶ್‌ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಭಕ್ತಮಂಡಳಿಯವರು ದೂರು ಸಲ್ಲಿಸಿದರು.

ಇಂದು ಸಂಜೆ 6ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸಿದಿದ್ದಲ್ಲಿ ಮತ್ತೆ ಇಂದು ಸಂಜೆ ಧರಣಿ ಮುಂದುವರೆಸುವಂತೆ ಶ್ರೀಕಂಠೇಶ್ವರ ಸ್ವಾಮಿ ಭಕ್ತಮಂಡಳಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.

 

ನಮ್ಮ ಪೂರ್ವಿಕರಿಗೆ ಅವಮಾನವಾಗಲು ಬಿಡುವುದಿಲ್ಲ – ದಸಂಸ: ಶತಶತಮಾನಗಳಿಂದ ದಲಿತರ ಮೇಲೆ ನಡೆದುಕೊಂಡು ಬಂದಿರುವ ಶೋಷಣೆಗಳನ್ನು ಮುಂದುವರೆಸಲು ನಾವು ಬಿಡುವುದಿಲ್ಲ ಎಂದು ದಸಂಸ ಕಾರ್ಯಕರ್ತರು ವಾಗ್ದಾಳಿ ನಡೆಸಿದರು. ಅಂಧಕಾಸುರನಾಗಲಿ, ಮಹಿಷಾಸುರನಾಗಲಿ ಇವರೆಲ್ಲಾ ನಮ್ಮ ಪೂರ್ವಿಕರು. ಅವರು ರಾಕ್ಷಸರಲ್ಲ. ಈ ರೀತಿಯ ಆಚರಣೆಗಳ ಮೂಲಕ ನಮ್ಮ ಪೂರ್ವಿಕರಿಗೆ ಅಪಮಾನ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.

andolanait

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

2 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

2 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

3 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

3 hours ago