BREAKING NEWS

ಭಾರತದಲ್ಲಿ ‘ಡಿಜಿಟಲ್ ಸರ್ವಾಧಿಕಾರ’: ‘ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್’ ವರದಿ

ನವದೆಹಲಿ : ನಾಗರಿಕರಿಗೆ ಇಂಟರ್ನೆಟ್ ನಿರ್ಬಂಧ, ಸರಕಾರವನ್ನು ಟೀಕಿಸುವ ಪತ್ರಕರ್ತರನ್ನು ದೇಶದ ಶತ್ರುಗಳೆಂದು ಬ್ರಾಂಡ್ ಮಾಡುವುದು ಹಾಗೂ ರಾಜಕೀಯ ವಿರೋಧಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಮತ್ತು ಅವರನ್ನು ಖಳರೆಂಬಂತೆ ಬಿಂಬಿಸುವುದು ಇತ್ಯಾದಿ ರೂಪದೊಂದಿಗೆ ಭಾರತದಲ್ಲಿ ಡಿಜಿಟಲ್ ಸರ್ವಾಧಿಕಾರವು ತಲೆಯೆತ್ತಿದೆ ಎಂದು ಜಾಗತಿಕ ಸೆನ್ಸಾರ್ ವಿರೋಧಿ ಸಂಘಟನೆಯೊಂದು ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

‘ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್’ ಎಂಬ ನೆಟ್ವರ್ಕ್ ಆಗಸ್ಟ್ 4ರಂದು ಈ ವರದಿಯನ್ನು ಪ್ರಕಟಿಸಿತ್ತು. ಜನವರಿ 2022 ಹಾಗೂ ಮಾರ್ಚ್ 2023ರ ನಡುವೆ ದೇಶದಲ್ಲಿ ಕಂಡುಬಂದಿರುವ ಡಿಜಿಟಲ್ ಸರ್ವಾಧಿಕಾರದ ನಿದರ್ಶನಗಳನ್ನು ಸಂಶೋಧಕರು ಅಧ್ಯಯನ ನಡೆಸಿ ಈ ವರದಿ ತಯಾರಿಸಿದ್ದಾರೆ.

ಭಾರತ ಸೇರಿದಂತೆ 20 ರಾಷ್ಟ್ರಗಳು ಡಿಜಿಟಲ್ ಸರ್ವಾಧಿಕಾರ ಅನುಸರಿಸುವ ದೇಶಗಳ ಪಟ್ಟಿಯಲ್ಲಿವೆ ಎಂದು ವರದಿ ಹೇಳಿದೆ.

ಭಾರತವಲ್ಲದೆ ಇತರ 19 ದೇಶಗಳಾದ ಬ್ರೆಝಿಲ್, ಕ್ಯಾಮರೂನ್, ಈಕ್ವೆಡಾರ್, ಈಜಿಪ್ಟ್, ಎಲ್ ಸಲ್ವಡೋರ್, ಹಾಂಕಾಂಗ್, ಹಂಗೇರಿ, ಕಝಕಿಸ್ತಾನ, ಕೆನ್ಯಾ, ಕಿರ್ಗಿಝ್ಸ್ತಾನ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ರಶ್ಯ, ಸುಡಾನ್,ತಾಂಝಾನಿಯಾ,ಟರ್ಕಿ, ವೆನೆಝುವೆಲಾ ಹಾಗೂ ಝಿಂಬಾಬ್ವೆ ದೇಶಗಳಲ್ಲಿನ ಡಿಜಿಟಲ್ ಸರ್ವಾಧಿಕಾರ ಪ್ರವೃತ್ತಿಗಳ ಬಗೆಗೂ ಅಧ್ಯಯನ ನಡೆಸಲಾಗಿತ್ತು.

‘‘ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಕ್ಷವಾದ ಬಿಜೆಪಿ ಹಾಗೂ ಅದರ ಬೆಂಬಲಿಗರು ತಮ್ಮ ನೀತಿ, ನಿಲುವುಗಳ ಪ್ರಚಾರಕ್ಕೆ ಹಾಗೂ ಧಾರ್ಮಿಕ ಹಾಗೂ ರಾಜಕೀಯ ಅಲ್ಪಸಂಖ್ಯಾತರನ್ನು ಟ್ರೋಲ್ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ’’ ಎಂದು ವರದಿ ಹೇಳಿದೆ.

ಪೌರರು ಪ್ರತಿಭಟನೆಗಳನ್ನು ನಡೆಸಿದ ಹಲವಾರು ಸಂದರ್ಭಗಳಲ್ಲಿ ಅವರಿಗೆ ಇಂಟರ್ನೆಟ್ ಸಂಪರ್ಕವನ್ನು ನಿರಾಕರಿಸಲಾಗಿತ್ತು. ಇಂತಹ ನಿರ್ಬಂಧಗಳು ಮಾಹಿತಿ ಮುಕ್ತ ಹರಿವನ್ನು ಹೊಸಕಿಹಾಕುತ್ತದೆ ಹಾಗೂ ದುಬಾರಿ ಆರ್ಥಿಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

‘‘ಸರಕಾರವನ್ನು ಟೀಕಿಸುವ ಪತ್ರಕರ್ತರಿಗೆ ದೇಶದ ಶತ್ರುಗಳೆಂಬ ವ್ಯಾಖ್ಯಾನವನ್ನು ಪ್ರಚಾರ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವನ್ನೂ ಈ ವರದಿಯು ಸೇರ್ಪಡೆಗೊಳಿಸಿದೆ. ಇಂತಹ ವ್ಯಾಖ್ಯಾನವು ‘‘ದೇಶದಲ್ಲಿ ಮಾಧ್ಯಮಗಳ ಮುಚ್ಚುಗಡೆ, ಪತ್ರಕರ್ತರ ಬಂಧನ, ಕಣ್ಗಾವಲಿಗೆ ಸಮರ್ಥನೆ ಹಾಗೂ ಮಾಧ್ಯಮಗಳನ್ನು ನಿರ್ಬಂಧಿಸುವುದಕ್ಕೆ ಕಾರಣವಾಗಿದೆ’’ ಎಂದು ವರದಿ ಹೇಳಿದೆ.

ಆದಾಗ್ಯೂ, ಭಿನ್ನಮತವನ್ನು ಹತ್ತಿಕ್ಕಲು ಹಾಗೂ ವಿರೋಧಿ ಧ್ವನಿಗಳನ್ನು ಅಡಗಿಸುವುದನ್ನು ಸಮರ್ಥಿಸಲು ಭಾರತವು, ಅಭಿವ್ಯಕ್ತಿ ಸ್ವಾತಂತ್ರವೆಂಬುದು ಸಂಪೂರ್ಣವಾಗಿ ನೀಡಲ್ಪಟ್ಟ ಹಕ್ಕಲ್ಲವೆಂದು ವಾದಿಸುತ್ತಾ ಬಂದಿದೆ ಎಂದು ಗ್ಲೋಬಲ್ ವಾಯ್ಸಸ್ಅಡ್ವೊಕ್ಸ್ ಹೇಳಿದೆ.

ಭದ್ರತೆಯ ಕಾರಣವೊಡ್ಡಿ ಇಂಟರ್ನೆಟ್ ಮೇಲೆ ನಿಯಂತ್ರಣ ಸಾಧಿಸಲು ಸರಕಾರವು ಶಾಸನವನ್ನು ರೂಪಿಸಿದೆ ಎಂದು ವರದಿಯು ಹೇಳಿದೆ.

‘‘ಸರ್ವಾಧಿಕಾರಿ ಆಡಳಿತವು ಮಾಧ್ಯಮಗಳು ಹಾಗೂ ಸಂವಹನ ತಂತ್ರಜ್ಞಾನದ ಜೊತೆಗಿನ ನಂಟನ್ನು ಸಂಕೀರ್ಣಗೊಳಿಸಿದೆ. ತನ್ನ್ನನ್ನು ಟೀಕಿಸುವವರಿಗೆ ಇಂಟರ್ನೆಟ್ ನಿರ್ಬಂಧಿಸುವ ಸರಕಾರವು ತನ್ನ ಸಂದೇಶವನ್ನು ಹರಡಲು ಹಾಗೂ ಪ್ರಚಾರ ಉದ್ದೇಶಗಳಿಗಾಗಿ ಅದನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದೆ ಎಂದು ಗ್ಲೋಬಲ್ ವಾಯ್ಸಸ್ ಅಡ್ವೋಕ್ಸ್ ಗಮನಸೆಳೆದಿದೆ.

andolanait

Recent Posts

ಎಚ್‌.ಡಿ.ಕೋಟೆ: ಗುಜರಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ ಬೆಲೆಬಾಳುವ ಸಾಮಗ್ರಿ ನಾಶ

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಜಕ್ಕಳ್ಳಿ ಸಮೀಪವಿರುವ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ವೆಚ್ಚದ…

48 mins ago

ವಂದೇ ಭಾರತ್‌ ರೈಲಿನಲ್ಲಿ ಕೊಟ್ಟ ಮೊಸರಿನಲ್ಲಿ ಹುಳು ಪತ್ತೆ: IRCTCಗೆ 10 ಲಕ್ಷ ರೂ ದಂಡ

ಪಾಟ್ನಾ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10…

58 mins ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: 80 ಎಕರೆಗೂ ಹೆಚ್ಚು ಅರಣ್ಯ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ…

1 hour ago

ಪಾಲಿಕೆ ಬಜೆಟ್‌ ಸತ್ವ ಇಲ್ಲದ ಬಜೆಟ್‌: ಮಾಜಿ ಮೇಯರ್‌ ಶಿವಕುಮಾರ್‌ ಆಕ್ರೋಶ

ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ…

1 hour ago

ಗುಂಡ್ಲುಪೇಟೆ| ಮದ್ದೂರು ವಲಯದಲ್ಲಿ ಮತ್ತೆರಡು ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ವಲಯದಲ್ಲಿ ಮತ್ತೆರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹುಲಿಗಳ ಚಲನವಲನದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ…

2 hours ago

ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು…

2 hours ago