ನವದೆಹಲಿ: ಮೆಟಾ ಒಡೆತನದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ ಆಯಪ್ ಆಗಾಗ್ಗೆ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿರುತ್ತದೆ. ಸದ್ಯ, ಈ ಅಪ್ಲಿಕೇಶನ್ ಬಳಕೆದಾರರಿಗೆ ಆಯಪ್ ಅನ್ನು ಲಾಕ್ ಮಾಡಲು ಅನುಮತಿಸಿದರೂ, ಇದು ವೈಯಕ್ತಿಕ ಚಾಟ್ಗಳನ್ನು ಲಾಕ್ ಮಾಡಲು ಸಾಧ್ಯವಿಲ್ಲ. ಆದರೆ ಅದು ಶೀಘ್ರದಲ್ಲೇ ಬದಲಾಗಬಹುದು. ಹೌದು, ಇಂತಹದ್ದೊಂದು ಹೊಸ ವೈಶಿಷ್ಟ್ಯ ಶೀಘ್ರದಲ್ಲೇ ಬರಲಿದೆ ಎನ್ನಲಾಗಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.8.2 ಅಪ್ಡೇಟ್ಗಾಗಿ ಇತ್ತೀಚಿನ ವಾಟ್ಸಆಯಪ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ಭವಿಷ್ಯದ ಅಪ್ಡೇಟ್ನಲ್ಲಿ ಇದನ್ನು ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು WaBetalnfo ವರದಿ ಮಾಡಿದೆ. ವಾಟ್ಸ್ ಆಯಪ್ ಡೆವಲಪಗಳು ಈ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌಪ್ಯತಾ ನೀತಿ ಒಪ್ಪದವರಿಗೂ ವಾಟ್ಸಾಪ್ ನಿರ್ಬಂಧಿಸಲ್ಲ ಎಂದು ಘೋಷಿಸಿ: ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಅದು ಬಳಕೆದಾರರಿಗೆ ಫಿಂಗರ್ಪ್ರಿಂಟ್ ಅಥವಾ ಪಾಸ್ಕೋಡ್ಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್ಗಳನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ. ಈ ಲಾಕ್ ಆಗಿರುವ ಚಾಟ್ಗಗಳನ್ನು ಪ್ರತ್ಯೇಕ ವಿಭಾಗದಲ್ಲಿ ವೀಕ್ಷಿಸಲು ಬಳಕೆದಾರರಿಗೆ ಸಾಧ್ಯವಾಗುವಂತೆ ತೋರುತ್ತಿದೆ ಎಂದು ತಿಳಿದುಬಂದಿದೆ.
ಇದು ಪಾಸ್ಕೋಡ್ ಇಲ್ಲದ ಯಾರಿಗಾದರೂ ಈ ಚಾಟ್ಗಳನ್ನು ವೀಕ್ಷಿಸಲು ಅಸಾಧ್ಯವಾಗಬಹುದು. ಯಾರಾದರೂ ನಿಮ್ಮ ಫೋನ್ ಅನ್ನು ನೋಡಲು ಪ್ರಯತ್ನಿಸಿದರೆ ಮತ್ತು ದೃಢೀಕರಣ ಪ್ರಕ್ರಿಯೆಯಲ್ಲಿ ಹಲವು ಬಾರಿ ವಿಫಲವಾದರೆ, ಅವರು ಅದನ್ನು ತೆರೆಯಲು ಬಯಸಿದರೆ ಅವರು ಚಾಟ್ ಅನ್ನು ಕ್ಲಿಯರ್ ಮಾಡಬೇಕಾಗುತ್ತದೆ. ಇದು ವಾಟ್ಸ್ ಆಯಪ್ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವುದರ ಹೊರತಾಗಿ, ಸಾಧನ ಗ್ಯಾಲರಿಗೆ ಸ್ವಯಂಚಾಲಿತವಾಗಿ ಉಳಿಸದೆ ಖಾಸಗಿ ಚಾಟ್ಗಳೊಂದಿಗೆ ಹಂಚಿಕೊಳ್ಳಲಾದ ಮಾಧ್ಯಮವನ್ನು ಮರೆಮಾಡಲು ಹೊಸ ವೈಶಿಷ್ಟ್ಯವು ಸಹಾಯ ಮಾಡುತ್ತದೆ.
ಹಾಸನ: ಕೌಟುಂಬಿಕ ಕಲಹದಿಂದ ಪುತ್ರನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ರಾಡ್ನಿಂದ…
ಕೊಡಗು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.…
ಮಂಗಳೂರು: ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…
ಬೆಂಗಳೂರು: ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಪ್ರಕಾಶಕಿಯಾಗಿದ್ದ ಆಶಾ ರಘು ಅವರು ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು…
ಮೈಸೂರು: ಇಂದು ಮುಂಜಾನೆ ಚಳಿ, ಮಳೆಯನ್ನು ಲೆಕ್ಕಿಸದೇ ಮೈಸೂರಿನ ಸ್ವಚ್ಚತೆಗಾಗಿ ಫಿಟ್ ಮೈಸೂರು ಸಾಮೂಹಿಕ ಆರೋಗ್ಯ ಮತ್ತು ಜಾಗೃತಿ ನಡಿಗೆ…