BREAKING NEWS

120ನೇ ವಯಸ್ಸಿಗೆ ಕಾಲಿಟ್ಟ ವಿಶ್ವದ ಅತ್ಯಂತ ದೊಡ್ಡ ಮೊಸಳೆ ಕ್ಯಾಸಿಯಸ್​

ಐಲ್ಯಾಂಡ್ : ಕ್ಯಾಸಿಯಸ್ ಎಂಬ ಹೆಸರಿನ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನ ಗ್ರೀನ್​ ಐಲ್ಯಾಂಡ್​ನಲ್ಲಿರುವ ಮರೀನ್​ಲ್ಯಾಂಡ್ ಕ್ರೊಕೊಡೈಲ್​ ಪಾರ್ಕ್​ನಲ್ಲಿ ವಾಸವಾಗಿದೆ 18 ಅಡಿ ಉದ್ದದ ಈ ದೈತ್ಯ ಎರಡು ದಿನಗಳ ಹಿಂದೆ 120ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಇದಕ್ಕೆ ಚಿಕನ್​ ಮತ್ತು ಟ್ಯೂನಾ ಫಿಷ್​ ಖಾದ್ಯಗಳನ್ನು ಕೊಟ್ಟು ಖುಷಿಪಡಿಸಲಾಗಿದೆ. ಈ ಮೊಸಳೆಯು 1987ರಿಂದಲೂ ಇದೇ ಉದ್ಯಾನವದಲ್ಲಿ ವಾಸಿಸುತ್ತಿದ್ದು ಗಿನ್ನೀಸ್​ ವರ್ಲ್ಡ್​ ರಿಕಾರ್ಡ್​ನಲ್ಲಿಯೂ ಇದರ ಹೆಸರು ದಾಖಲಾಗಿದೆ.

ಕ್ಯಾಸಿಯಸ್​ ವಯಸ್ಸಿನ ಹಂಗಿಲ್ಲದೇ ಚೈತನ್ಯಶೀಲವಾಗಿದೆ. ಉದ್ಯಾನದಲ್ಲಿ ಅತ್ಯುತ್ಸಾಹದಿಂದ ಇತರೇ ಮೊಸಳೆಗಳೊಂದಿಗೆ ಬೆರೆಯುತ್ತದೆ ಮತ್ತು ಎಲ್ಲರಿಗಿಂತ ಆಕರ್ಷಕವಾಗಿ ಕಾಣುತ್ತದೆ. ‘ಸಾಮಾನ್ಯವಾಗಿ ವಯಸ್ಸಾದಂತೆ ಮೊಸಳೆಗಳು ವಿಧೇಯ ಮತ್ತು ನಿರಾಸಕ್ತಿಯಿಂದ ವರ್ತಿಸುತ್ತವೆ. ಆದರೆ ಕ್ಯಾಸಿಯಸ್​ ಈಗಲೂ ಉತ್ಸುಕನಾಗಿರುತ್ತದೆ. ಯಾರಾದರೂ ಅದರೆಡೆ ಲಕ್ಷ್ಯಕೊಟ್ಟರೆ ಉತ್ಸಾಹದಿಂದ ಹತ್ತಿರ ಬರಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಅವನ ಹೊಳೆಯುವ ಕಣ್ಣುಗಳನ್ನು ನೋಡುವುದೇ ಚಂದ’ ಎಂದು 1987ರಲ್ಲಿ ಈ ದೈತ್ಯನನ್ನು ಗ್ರೀನ್ ಲ್ಯಾಂಡ್​ಗೆ ಕರೆತಂದ ಸಂಶೋಧಕ ಟೂಡಿ ಸ್ಕಾಟ್​ ಹೇಳಿದ್ದಾರೆ.

1984ರಲ್ಲಿ ಆಸ್ಟ್ರೇಲಿಯಾದ ಉತ್ತರ ಭಾಗದ ಫಿನ್ನೀಸ್​ ನದಿಯಲ್ಲಿ ಕ್ಯಾಸಿಯಸ್​ ಅನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೊಸಳೇ ಸಂಶೋಧಕ ಗ್ರೇಮ್ ವೆಬ್​, ‘ಈ ಮೊಸಳೆಯನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಈಗಲೂ ಆ ದೃಶ್ಯಗಳು ಕಣ್ಣಮುಂದಿವೆ. ಆಗ ಬರೋಬರೀ 16 ಅಡಿ, 10 ಇಂಚುಗಳಷ್ಟು ಉದ್ದವಿತ್ತು’ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

lokesh

Recent Posts

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

3 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

5 hours ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

5 hours ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

5 hours ago

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…

6 hours ago

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

10 hours ago