BREAKING NEWS

ಬೆಂಗ​ಳೂರು-ಮೈಸೂರು ಮರಣ ಹೆದ್ದಾ​ರಿ ಕ್ರೆಡಿಟ್‌ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು : ರಾಮ​ಲಿಂಗಾ​ರೆಡ್ಡಿ

ರಾಮ​ನ​ಗರ : ಬೆಂಗ​ಳೂರು – ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಾಗಿ ಉಳಿ​ದಿಲ್ಲ. ಅದೊಂದು ಮರಣ ಹೆದ್ದಾ​ರಿ​ಯಾಗಿ ರೂಪ ತಳೆ​ದಿದೆ. ಆ ಕ್ರೆಡಿಟ್‌ ಅನ್ನು ಜಂಬ ಕೊಚ್ಚಿ​ಕೊ​ಳ್ಳು​ತ್ತಿ​ರು​ವ​ವರು ಪಡೆ​ದು​ಕೊ​ಳ್ಳಲಿ ಎಂದು ಬಿಜೆಪಿ ನಾಯ​ಕರ ವಿರುದ್ಧ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಕಿಡಿ​ಕಾ​ರಿ​ದ​ರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ​ನಾ​ಡಿದ ಅವರು, ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 200ಕ್ಕೂ ಹೆಚ್ಚು ಅಪ​ಘಾ​ತ​ಗಳು ಸಂಭ​ವಿ​ಸಿದ್ದು, 150ಕ್ಕೂ ಹೆಚ್ಚು ಜನರು ಜೀವ ಕಳೆ​ದು​ಕೊಂಡಿ​ದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಯನ್ನು ಪ್ರಶ್ನಿ​ಸಿ​ದರು.

ನೀವು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ​ರು​ವು​ದೇ ಇಷ್ಟೊಂದು ಸಾವು ಸಂಭ​ವಿ​ಸಲು ಕಾರ​ಣ​ವಾ​ಗಿದೆ. ಇದರ ಹೊಣೆಯನ್ನು ಯಾರಾ​ದರು ಹೊರು​ತ್ತಾರೆಯೇ. ಕೆಲವರು ಮಾಧ್ಯಮ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನಾವೇ ರಸ್ತೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ರಸ್ತೆ ನಿರ್ಮಾ​ಣವಾಗಿದ್ದು ನಮ್ಮ ಹಣ​ದಲ್ಲಿ. ಆದರೂ ರಸ್ತೆ ಮಾಡಿ​ದ್ದಾಗಿ ಮಾತ್ರ ಹೇಳಿ​ಕೊ​ಳ್ಳು​ತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿ​ದಿ​ಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್‌ ಕೂಡ ಅವ​ರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯ​ಕರನ್ನು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಹೆದ್ದಾ​ರಿ​ಯಲ್ಲಿ ಅಪ​ಘಾ​ತ​ಗಳು ಸಂಭ​ವಿ​ಸ​ದಂತೆ ಮಾಡುವ ಹೊಣೆ ನಿಮ್ಮದು. ನೀವು ಏನು ಮಾಡು​ತ್ತೀರೊ ಗೊತ್ತಿಲ್ಲ. ಹೆದ್ದಾ​ರಿ​ಯನ್ನು ವೈಜ್ಞಾ​ನಿ​ಕ​ವಾಗಿ ಮಾಡ​ಬೇಕು. ಸರ್ವಿಸ್‌ ರಸ್ತೆ, ತಂಗು​ದಾಣ, ಅಂಡರ್‌ ಪಾಸ್‌ ಸಮಸ್ಯೆ ಬಗೆ​ಹ​ರಿ​ಸ​ಬೇಕು ಎಂದು ರಾಮ​ಲಿಂಗಾ​ರೆಡ್ಡಿ ಸೂಚನೆ ನೀಡಿ​ದ​ರು.

lokesh

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

33 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

38 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

48 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago