BREAKING NEWS

ಬೆಂಗ​ಳೂರು-ಮೈಸೂರು ಮರಣ ಹೆದ್ದಾ​ರಿ ಕ್ರೆಡಿಟ್‌ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು : ರಾಮ​ಲಿಂಗಾ​ರೆಡ್ಡಿ

ರಾಮ​ನ​ಗರ : ಬೆಂಗ​ಳೂರು – ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಾಗಿ ಉಳಿ​ದಿಲ್ಲ. ಅದೊಂದು ಮರಣ ಹೆದ್ದಾ​ರಿ​ಯಾಗಿ ರೂಪ ತಳೆ​ದಿದೆ. ಆ ಕ್ರೆಡಿಟ್‌ ಅನ್ನು ಜಂಬ ಕೊಚ್ಚಿ​ಕೊ​ಳ್ಳು​ತ್ತಿ​ರು​ವ​ವರು ಪಡೆ​ದು​ಕೊ​ಳ್ಳಲಿ ಎಂದು ಬಿಜೆಪಿ ನಾಯ​ಕರ ವಿರುದ್ಧ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಕಿಡಿ​ಕಾ​ರಿ​ದ​ರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ​ನಾ​ಡಿದ ಅವರು, ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 200ಕ್ಕೂ ಹೆಚ್ಚು ಅಪ​ಘಾ​ತ​ಗಳು ಸಂಭ​ವಿ​ಸಿದ್ದು, 150ಕ್ಕೂ ಹೆಚ್ಚು ಜನರು ಜೀವ ಕಳೆ​ದು​ಕೊಂಡಿ​ದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಯನ್ನು ಪ್ರಶ್ನಿ​ಸಿ​ದರು.

ನೀವು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ​ರು​ವು​ದೇ ಇಷ್ಟೊಂದು ಸಾವು ಸಂಭ​ವಿ​ಸಲು ಕಾರ​ಣ​ವಾ​ಗಿದೆ. ಇದರ ಹೊಣೆಯನ್ನು ಯಾರಾ​ದರು ಹೊರು​ತ್ತಾರೆಯೇ. ಕೆಲವರು ಮಾಧ್ಯಮ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನಾವೇ ರಸ್ತೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ರಸ್ತೆ ನಿರ್ಮಾ​ಣವಾಗಿದ್ದು ನಮ್ಮ ಹಣ​ದಲ್ಲಿ. ಆದರೂ ರಸ್ತೆ ಮಾಡಿ​ದ್ದಾಗಿ ಮಾತ್ರ ಹೇಳಿ​ಕೊ​ಳ್ಳು​ತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿ​ದಿ​ಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್‌ ಕೂಡ ಅವ​ರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯ​ಕರನ್ನು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಹೆದ್ದಾ​ರಿ​ಯಲ್ಲಿ ಅಪ​ಘಾ​ತ​ಗಳು ಸಂಭ​ವಿ​ಸ​ದಂತೆ ಮಾಡುವ ಹೊಣೆ ನಿಮ್ಮದು. ನೀವು ಏನು ಮಾಡು​ತ್ತೀರೊ ಗೊತ್ತಿಲ್ಲ. ಹೆದ್ದಾ​ರಿ​ಯನ್ನು ವೈಜ್ಞಾ​ನಿ​ಕ​ವಾಗಿ ಮಾಡ​ಬೇಕು. ಸರ್ವಿಸ್‌ ರಸ್ತೆ, ತಂಗು​ದಾಣ, ಅಂಡರ್‌ ಪಾಸ್‌ ಸಮಸ್ಯೆ ಬಗೆ​ಹ​ರಿ​ಸ​ಬೇಕು ಎಂದು ರಾಮ​ಲಿಂಗಾ​ರೆಡ್ಡಿ ಸೂಚನೆ ನೀಡಿ​ದ​ರು.

lokesh

Recent Posts

ಕೊಡಗು ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯ ಚುರುಕು

ನವೀನ್ ಡಿಸೋಜ ಜಿಲ್ಲೆಯಲ್ಲಿ ಸು.೧೭೪,೧೧೪ ಕುಟುಂಬಗಳು, ಗಣತಿ ಕಾರ್ಯಕ್ಕೆ ಗುರುತು, ೭,೩೭೯ ಕುಟುಂಬಗಳಿಂದ ಸ್ವಯಂ ಗಣತಿ ಮಡಿಕೇರಿ: ನಮ್ಮ ಗಣತಿ,…

2 hours ago

ಏರುತ್ತಿರುವ ತಾಪಮಾನ; ತಂಪು ಪಾನೀಯಗಳಿಗೆ ಮೊರೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ…

2 hours ago

ಆಗ ಟೈಲರ್ ಕಾಲ, ಈಗ ಆನ್ ಲೈನ್ ಕಾಲ…

ಮಧುಕರ ಮಳವಳ್ಳಿ (ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ) ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ…

2 hours ago

ಸೈಕಲ್ಲು, ಸಿರೀಂದ್ರ ಮತ್ತು ನನ್ನ ನಟರಾಜ ಸರ್ವೀಸು

ಭಾರತಿ ಬಿ.ವಿ. ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು.…

2 hours ago

ತರುಣ ತಲೆಮಾರಿನ ಕೈಯಲ್ಲಿ ನೆರೆಯ ನೇಪಾಳದ ಚುಕ್ಕಾಣಿ…

ಶುಭಾ ಖಟಾವಕರ ಮ್ಹೆತ್ರಸ್ ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ…

2 hours ago

ದೇವನೂರಿಗೆ ಆಗಮಿಸಿದ ಪಂಪ

ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ ರಾಜೇಂದ್ರ ಚೆನ್ನಿ ೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ…

2 hours ago