BREAKING NEWS

40 ಜನರಿಗೆ ಕಚ್ಚಿ ಸಾವನ್ನಪ್ಪಿದ ರೇಬಿಸ್ ಸೋಂಕಿತ ಮಗು

ಉತ್ತರ ಪ್ರದೇಶ : ಕೆಲವು ವಾರಗಳ ಹಿಂದೆ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹಳ್ಳಿಯೊಂದರ ಎರಡೂವರೆ ವರ್ಷಗಳ ಹೆಣ್ಣು ಮಗು ರೇಬಿಸ್ ಸೋಂಕಿಗೆ ತುತ್ತಾಗಿ ಸೋಮವಾರ ಮೃತಪಟ್ಟಿದೆ. ಈ ಮಗುವಿನ ಸಾವು ಇಡೀ ಗ್ರಾಮಕ್ಕೇ ಆತಂಕ ತಂದೊಡ್ಡಿದೆ.

ಈ ಮಗು ಸಾವನ್ನಪ್ಪುವ ಮುನ್ನ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಇದೀಗ ಎಲ್ಲರಿಗೂ ರೇಬಿಸ್ ಸೋಂಕು ತಗುಲಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಕೊಂಚ್ ತಾಲ್ಲೂಕಿನ ಕ್ಯೋಲಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗು ತನ್ನ ತಾಯಿಯ ಜೊತೆ ಸೋದರ ಮಾವನ ಮನೆಯಲ್ಲಿ ಇತ್ತು. ಈ ವೇಳೆ ಮಗುವಿಗೆ ಬೀದಿ ನಾಯಿಗಳು ಕಡಿದಿದ್ದವು. ಹೀಗಾಗಿ, ಮಗು ರೇಬಿಸ್ ಸೋಂಕಿಗೆ ತುತ್ತಾಗಿತ್ತು.
ಆದರೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರಲಿಲ್ಲ. ಈ ಮಗು ಕಳೆದ ಮೂರು ವಾರಗಳ ಅವಧಿಯಲ್ಲಿ ಗ್ರಾಮದ 40 ಜನರಿಗೆ ಕಚ್ಚಿತ್ತು. ಇದೀಗ ಎಲ್ಲರೂ ರೇಬಿಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಈ ಬಾಲಕಿಗೆ ಕಡಿದ ಬಳಿಕ ರೇಬಿಸ್ ಸೋಂಕಿತ ಬೀದಿ ನಾಯಿ ಕೂಡಾ ಸಾವನ್ನಪ್ಪಿತ್ತು.

ಮಗುವಿಗೆ ನಾಯಿ ಕಡಿದ ಬಳಿಕ ಪೋಷಕರು ಗ್ರಾಮದ ನಾಟಿ ವೈದ್ಯರ ಬಳಿ ಕರೆದೊಯ್ದಿದ್ದರು. ಯಾವುದೇ ವೃತ್ತಿಪರ ಪದವೀಧರ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿರಲಿಲ್ಲ. ಮಗುವನ್ನು ಗ್ರಾಮಕ್ಕೆ ವಾಪಸ್ ಕರೆ ತಂದ ಬಳಿಕ ಮಗುವಿನ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಮಗುವಿನ ಪೋಷಕರು ಮಾತ್ರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರೇಬಿಸ್ ರೋಗದ ಲಕ್ಷಣ ಹೊಂದಿದ್ದ ಮಗುವು ತನ್ನ ಬಳಿ ಬಂದ ಎಲ್ಲರಿಗೂ ಉಗುರಿನಿಂದ ಪರಚುತ್ತಿತ್ತು. ಸಿಕ್ಕ ಸಿಕ್ಕ ಕಡೆ ಕಚ್ಚುತ್ತಿತ್ತು. ಮಗುವಿನ ವರ್ತನೆಯಲ್ಲಿ ವಿಪರೀತ ಬದಲಾವಣೆ ಕಂಡು ಬಂದಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಕಳೆದ ಶುಕ್ರವಾರ ಮಗು ಕುಸಿದು ಬಿದ್ದಾಗ ಮಗುವಿನ ಹೆತ್ತವರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾಸ್ಪತ್ರೆ ವೈದ್ಯರು ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ, ಕುಟುಂಬಸ್ಥರು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಮಗು ಸಾವನ್ನಪ್ಪಿದೆ.

ಮಗು ಕಚ್ಚಿದ ಪರಿಣಾಮ ಇದೀಗ ಕ್ಯೋಲಾರಿ ಗ್ರಾಮದ 40 ಜನರು ರೇಬಿಸ್ ಸೋಂಕಿತರಾಗಿದ್ದಾರೆ. ಎಲ್ಲರಿಗೂ ರೇಬಿಸ್ ಸೋಂಕು ನಿರೋಧಕ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ದಿನೇಶ್ ಬರ್ದಾರಿಯಾ ಅವರು ಹೇಳಿದ್ದಾರೆ. ರೇಬಿಸ್ ಸೋಂಕಿನ ವಿರುದ್ದ ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ. ಹೀಗಾಗಿ, ಯಾರೂ ಆತಂಕಕ್ಕೆ ಒಳಗಾಗೋದು ಬೇಡ ಎಂದು ವೈದ್ಯರು ಅಭಯ ಹೇಳಿದ್ದಾರೆ. ಆದರೂ ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

 

lokesh

Recent Posts

ಯತೀಂದ್ರ ಸಿದ್ಧರಾಮಯ್ಯ ಅವಹೇಳನ ಪ್ರಕರಣ: ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ದೂರು ದಾಖಲು

ಮೈಸೂರು: ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ವಿರುದ್ಧ ಅವಹೇಳನ ಪೋಸ್ಟ್‌ ಮಾಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಐಟಿ…

22 mins ago

ಫೆಬ್ರವರಿ.13ರಿಂದ ಹಂಪಿ ಉತ್ಸವ-2026

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪು ಮಾಡಿಕೊಡುವ ಹಂಪಿ ಉತ್ಸವದ ತಯಾರಿ ನಡೆಯುತ್ತಿದೆ. ಫೆಬ್ರವರಿ.13, 14 ಹಾಗೂ 15ರಂದು ಹಂಪಿ…

30 mins ago

ಹನೂರು ಕ್ಷೇತ್ರದಲ್ಲಿ 15 ವರ್ಷಗಳಿಂದ ಆಗದೇ ಇದ್ದ ಅಭಿವೃದ್ಧಿ ಕಾರ್ಯ ನಾನು ಮಾಡಿ ತೋರಿಸಿದ್ದೇನೆ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ವಿಧಾನಸಭಾ ಕ್ಷೇತ್ರದ ಮತದಾರರ ಋಣದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚುನಾವಣಾ ಪೂರ್ವದಲ್ಲಿ…

41 mins ago

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.39 ಕೋಟಿ ಮೌಲ್ಯದ ಗಾಂಜಾ ಸೀಜ್‌

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3.39 ಕೋಟಿ ರೂ…

1 hour ago

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಮ್ಯಾಚ್‌ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಮ್ಯಾಚ್‌ ಆಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು…

2 hours ago

ಹೋಗೇನಕಲ್‌ ಫಾಲ್ಸ್‌ಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಗೆನಕಲ್ ಫಾಲ್ಸ್ ಗೆ ಬರುವ ಪ್ರವಾಸಿಗರ…

2 hours ago