ಶಿಮ್ಲಾ : 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ನಿರ್ಧಾರ ಸಂಚಲನ ಉಂಟುಮಾಡಿದೆ. ಬಹುತೇಕ ಸಾಮಾನ್ಯ ಜನರ ಬಳಿ ಈ ನೋಟುಗಳಿಲ್ಲ. ಇದ್ದರೂ ಅವುಗಳನ್ನು ವಿನಿಮಯ ಮಾಡಲು ಅಥವಾ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲು ಸಾಕಷ್ಟು ಸಮಯ ನೀಡಲಾಗಿದೆ. ಆದರೆ ಕಾಳಧನ ಹೊಂದಿರುವವರಲ್ಲಿ ಇದು ಕೊಂಚ ಭಯ ಮೂಡಿಸಿರಬಹುದು. ತಮ್ಮ ಬಳಿ ಇರುವ ಹಣವನ್ನು ಖಾಲಿ ಮಾಡಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಈ ನಡುವೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾ ದೇವಿ ಮಾತೆ ದೇವಸ್ಥಾನದಲ್ಲಿ 8 ಲಕ್ಷ ರೂ ಬೆಲೆಬಾಳುವ 2,000 ರೂ ಮೌಲ್ಯದ 400 ಕರೆನ್ಸಿ ನೋಟುಗಳನ್ನು ಕಾಣಿಕೆ ಹುಂಡಿಯಲ್ಲಿ ಯಾರೋ ಹಾಕಿರುವುದು ಪತ್ತೆಯಾಗಿದೆ. 2 ಸಾವಿರ ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಆರ್ಬಿಐ ಸುತ್ತೋಲೆ ಜಾರಿಯಾದ ಕೆಲವೇ ದಿನಗಳಲ್ಲಿ ಹುಂಡಿಯಲ್ಲಿ ಇಷ್ಟು ನೋಟುಗಳು ಪತ್ತೆಯಾಗಿವೆ. ಸೋಮವಾರದಿಂದ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಲು ಅಥವಾ ಖಾತೆಗಳಿಗೆ ಜಮೆ ಮಾಡಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಸಮಯ ಕೊಡಲಾಗಿದೆ.
ಆದರೆ ದೇವಸ್ಥಾನದ ಸಂಕೀರ್ಣದಲ್ಲಿರುವ ಕಾಣಿಕೆ ಹುಂಡಿಯಲ್ಲಿ ಅನಾಮಧೇಯ ವ್ಯಕ್ತಿಗಳು 2 ಸಾವಿರ ರೂದ 400 ನೋಟುಗಳ ಕಂತೆಗಳನ್ನು ತುಂಬಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ತಲಾ 100 ನೋಟುಗಳನ್ನು ಹೊಂದಿರುವ ಒಟ್ಟು ನಾಲ್ಕು ಕಂತೆಗಳನ್ನು ಹುಂಡಿಗೆ ತುಂಬಿಸಲಾಗಿದೆ. ಹೀಗಾಗಿ ಒಬ್ಬನೇ ವ್ಯಕ್ತಿ ಈ ಕೆಲಸ ಮಾಡಿದ್ದಾನೆ ಎಂದು ಊಹಿಸಲಾಗಿದೆ. ಮೇ 20ರಂದು ದೇವಸ್ಥಾನದಲ್ಲಿ ಮುಖ್ಯ ಪೂಜೆ ನೆರವೇರಿಸಲಾಗಿತ್ತು. ಮೇ 21ರಂದು ದೇವಾಲಯದ ಅಧಿಕಾರಿಗಳು ಕಾಣಿಕೆ ಹಣ ಎಣಿಸುವ ಸಂದರ್ಭದಲ್ಲಿ ಹಣದ ಕಂತೆಗಳು ದೊರಕಿವೆ ಎಂದು ಜ್ವಾಲಾಜಿ ದೇವಸ್ಥಾನ ಟ್ರಸ್ಟ್ನ ಸದಸ್ಯ ಹಾಗೂ ಅರ್ಚಕ ಕಪಿಲ್ ಶರ್ಮಾ ತಿಳಿಸಿದ್ದಾರೆ. ದೇವಸ್ಥಾನಕ್ಕೆ ನಿತ್ಯ ನೂರಾರು ಮಂದಿ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಇದನ್ನು ಯಾರು ಹಾಕಿದವರು ಎಂದು ಪತ್ತೆ ಮಾಡುವುದು ಕಷ್ಟ. ದೇಣಿಗೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಒಟ್ಟಾರೆ ಹಣವನ್ನು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಸವಲತ್ತುಗಳನ್ನು ಸುಧಾರಿಸುವ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನದ ಕಿರಿಯ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆದರೆ ದೇವಸ್ಥಾನದಲ್ಲಿ 2 ಸಾವಿರ ನೋಟುಗಳ ಕಂತೆ ಕಾಣಿಕೆ ರೂಪದಲ್ಲಿ ದೊರಕಿರುವುದರ ಬಗ್ಗೆ ತಮಗೆ ಮಾಹಿತಿ ಬಂದಿಲ್ಲ ಎಂದು ಕಂಗ್ರಾದ ಜಿಲ್ಲಾಧಿಕಾರಿ ನಿಪುಣ್ ಜಿಂದಾಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೇವಸ್ಥಾನದ ಹುಂಡಿಗೆ ಒಟ್ಟು 11.32 ಲಕ್ಷ ರೂ ನಗದು ಹಾಗೂ 770 ಗ್ರಾಂ ಬೆಳ್ಳಿಯನ್ನು ಭಕ್ತರು ದೇಣಿಗೆಯಾಗಿ ನೀಡಿದ್ದಾರೆ. ಇದರಲ್ಲಿ 2 ಸಾವಿರ ರೂ ಮುಖಬೆಲೆಯ ನಾಲ್ಕು ಕಂತೆಗಳಲ್ಲಿನ 8 ಲಕ್ಷ ರೂ, 500 ರೂ ಮುಖಬೆಲೆಯ 2.2 ಲಕ್ಷ ರೂ , 200 ರೂ ಮುಖಬೆಲೆಯ 27,000 ರೂ ಹಾಗೂ 100 ರೂ ಮುಖಬೆಲೆಯ 1.3 ಲಕ್ಷ ರೂ ನಗದು ಸೇರಿದೆ. ಉಳಿದ ಹಣವು ಕಡಿಮೆ ಮೌಲ್ಯದ ಕರೆನ್ಸಿಯದ್ದಾಗಿವೆ.
ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…
ಕೊಡಗು: ಸಿಎಂ ಡಿ.ಕೆ.ಶಿವಕುಮಾರ್ ಅವರಿಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗಿಗೆ ಆಗಮಿಸುತ್ತಿದ್ದಂತೆ ಕೊಡವ ಸಂಪ್ರದಾಯದಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೊಡವತಿಯರು…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರದಲ್ಲಿ ಬೇರೆ ಸೆಲ್ಗೆ ಶಿಫ್ಟ್ ಮಾಡಲಾಗಿದೆ. ಇಬ್ಬರ ಬ್ಯಾರಕ್ನಲ್ಲಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಖೆ ಅರಣ್ಯದಲ್ಲಿ ನಡೆದ ಗುಂಡಿನ…
ಕುಶಾಲನಗರ: ತಾಲ್ಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಹೆಗ್ಗಡಹಳ್ಳಿ ಗ್ರಾಮದ…