BREAKING NEWS

ದಕ್ಷಿಣ ಕನ್ನಡದಲ್ಲಿ ಪ್ರತಿನಿತ್ಯ 1 ಲಕ್ಷ ಲೀ. ಹಾಲಿನ ಕೊರತೆ; ಮಂಡ್ಯ, ಹಾಸನದಿಂದ ನಿತ್ಯ 40,000 ಲೀ.ಖರೀದಿ

ದಕ್ಷಿಣ ಕನ್ನಡ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಬರೋಬ್ಬರಿ ಒಂದು ಲಕ್ಷ ಲೀ. ಕೊರತೆಯಾಗಿದ್ದು ಬೇಡಿಕೆ ಪೂರೈಸಲು 40,000 ಲೀ. ಹಾಲನ್ನು ಕಳೆದೊಂದು ತಿಂಗಳಿನಿಂದ ಮಂಡ್ಯ, ಹಾಸನದ ಒಕ್ಕೂಟಗಳಿಂದ ತರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರೈತರು ಪೂರೈಸುವ ಹಾಲಿಗೆ ಪ್ರತಿ ಲೀಟರಿಗೆ 32ರೂ. + 5ರೂ. ಸಹಾಯಧನ ಸಹಿತ ಫ್ಯಾಟ್/ಗುಣಮಟ್ಟಕ್ಕೆ ಅನುಗುಣವಾಗಿ ಹೆಚ್ಚುವರಿ ದರ ನೀಡಲಾಗುತ್ತಿದೆ. ಆದರೆ ಹಾಸನ, ಮಂಡ್ಯದಿಂದ ತರಿಸುವ ಹಾಲಿಗೆ ಲೀ. ಗೆ 41 ರೂ. ನೀಡಿದರೆ, ಸಾರಿಗೆ, ಪ್ಯಾಕಿಂಗ್‍ನಿಂದ ಲೀಟರಿಗೆ ಸರಾಸರಿ 3 ರೂ. ನಷ್ಟವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.50 ಲಕ್ಷ ಲೀ., ಉಡುಪಿ ಜಿಲ್ಲೆಯಲ್ಲಿ 1.80 ಲಕ್ಷ ಲೀ. ಸಹಿತ ಒಟ್ಟಾರೆ ಈಗಿನ ಉತ್ಪಾದನೆ ಸರಾಸರಿ 4.25 ಲಕ್ಷ ಲೀ. ಗಳಾಗಿದ್ದರೆ ಉಡುಪಿಯಲ್ಲಿ 1.60 ಲಕ್ಷ ಲೀ., ದಕ್ಷಿಣ ಕನ್ನಡದಲ್ಲಿ 3.40 ಲಕ್ಷ ಲೀ. ಸಹಿತ ಒಟ್ಟು 5 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. ಚರ್ಮಗಂಟು ರೋಗದಿಂದ ಅವಿಭಜಿತ ದಕ್ಷಿಣ ಕನ್ನಡದಲ್ಲಿ 150ಕ್ಕೂ ಅಧಿಕ ಜಾನುವಾರು ಸಾವು ಹಾಗೂ ಸಾವಿರಾರು ದನಗಳಿಗೆ ಬಾಧಿಸಿದ ಪರಿಣಾಮ ಹಾಲಿನ ಉತ್ಪಾದನೆ ಒಂದು ಲಕ್ಷ ಲೀ. ಕಡಿಮೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಮೊಸರು 82,000 ಲೀ., ಲಸ್ಸಿ 12,500ಲೀ., ಬೈಟ್ 190 ಕೆ.ಜಿ., ಪೇಡಾ 138 ಕೆ.ಜಿ., ಬರ್ಫಿ 29 ಕೆ.ಜಿ., ಪನ್ನೀರ್ 2,890 ಕೆ.ಜಿ., ಮೈಸೂರು ಪಾಕ್ 106ಕೆ. ಜಿ. ಮಾರಾಟವಾಗುತ್ತಿದೆ. ಅತಿ ಹೆಚ್ಚು ಮಾರಾಟವಾಗುತ್ತಿದ್ದ ಸಮೃದ್ಧಿ, ತೃಪ್ತಿ ಪೂರೈಕೆಯಾಗುತ್ತಿಲ್ಲ. ತುಪ್ಪ, ಬೆಣ್ಣೆ ಉತ್ಪಾದನೆ/ಪೂರೈಕೆಯೂ ಅಷ್ಟಕ್ಕಷ್ಟೆ. ಪಶು ಭಾಗ್ಯ ಯೋಜನೆಯ ಫಲಾನುಭವಿಗಳ ಮೂಲಕ ಒಕ್ಕೂಟಕ್ಕೆ ಹೆಚ್ಚುವರಿ ಹಾಲಿನ ಕೊಡುಗೆಯೂ ಸಂದಾಯವಾಗಿಲ್ಲ.

ನಂದಿನಿ ಪಶು ಆಹಾರಕ್ಕೆ ಮೂರು ತಿಂಗಳ ಹಿಂದಿದ್ದ 950 – 1,000ರೂ. ದರ ಈಗ 1,200ರೂ. ಆಸುಪಾಸಿನಲ್ಲಿದೆ. ಹಾಲಿನ ಪುಡಿ ದರ 230ರೂ. ಗಳಿಂದ 380ರೂ. ಗಳಿಗೇರಿದೆ. ಉಕ್ರೇನ್‍ನಿಂದ ಮೆಕ್ಕೆ ಜೋಳ ಪೂರೈಕೆಯಾಗುತ್ತಿಲ್ಲ. ಉತ್ತರ ಭಾರತದಿಂದ ಸಿಗುತ್ತಿದ್ದ ಮೆಕ್ಕೆ ಜೋಳ ಬಾಂಗ್ಲಾ ದೇಶಕ್ಕೆ ದುಪ್ಪಟ್ಟು ದರದಲ್ಲಿ ಮಾರಾಟವಾಗುತ್ತಿದೆ. ಕ್ಷೀರ ಭಾಗ್ಯದಡಿ ಶಾಲಾ ಮಕ್ಕಳಿಗೆ ಪೂರೈಸುವ ಹಾಲಿನ ಪುಡಿ ಕೆ. ಜಿ. ಗೆ 30ರೂ. ಹೆಚ್ಚಳದ ಬೇಡಿಕೆ ಸರಕಾರದ ಮುಂದಿದೆ. ಹೀಗೆ ಸಾಲು ಸಾಲು ಸವಾಲುಗಳನ್ನು ಹೈನುಗಾರರು ಎದುರಿಸುತ್ತಿದ್ದಾರೆ.

30 ಕೋಟಿ ರೂ. ಸಹಾಯಧನ ಬಾಕಿ : ಒಕ್ಕೂಟಕ್ಕೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ 65,000 ರೈತರು ಪೂರೈಸಿದ ಪ್ರತಿ ಲೀ. ಹಾಲಿಗೆ ರಾಜ್ಯ ಸರಕಾರ ನೀಡುವ 5ರೂ. ಸಹಾಯಧನ ಅಕ್ಟೋಬರ್ ತನಕ ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಡಿಸೆಂಬರ್ ತನಕ ಚುಕ್ತಾ ಆಗಿದ್ದರೂ ಬಳಿಕದ ನಾಲ್ಕು ತಿಂಗಳ ಬಾಕಿ 30 ಕೋಟಿ ರೂ. ಶೀಘ್ರ ಬಿಡುಗಡೆಯಾದರೆ ಆರ್ಥಿಕ ಒತ್ತಡ ಕಡಿಮೆಯಾಗಲಿದೆ.

ಯುವಜನರಿಗೆ ಹೈನುಗಾರಿಕೆಯಲ್ಲಿ ಉಜ್ವಲ ಭವಿಷ್ಯ : ಹಾಲು, ಮೊಸರು ಸಹಿತ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹಿನ್ನೆಲೆಯಲ್ಲಿ ನಿರುದ್ಯೋಗಿ ಯುವಜನತೆ ಹೈನುಗಾರಿಕೆಯಲ್ಲಿ ತೊಡಗಲು, ಸ್ವ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉತ್ತಮ ಅವಕಾಶವಿದೆ. ಈ ಹಿನ್ನೆಲೆಯಲ್ಲಿ 200 ಯುವಜನ ಕುಟುಂಬಕ್ಕೆ ತಲಾ ಐದು ಗೋವುಗಳನ್ನು ಸಾಕಲು ನೀಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಜಾನುವಾರು ಖರೀದಿ, ಹೊಸ ಕೊಟ್ಟಿಗೆ ನಿರ್ಮಾಣಕ್ಕೆ ಸಾಲ,ಸಹಾಯಧನ ಸಹಿತ ನೆರವು ಒದಗಿಸಲು ಯೋಜಿಸಲಾಗಿದೆ. ದುಡಿಯುವ ಬಂಡವಾಳದ ಶೇ. 5ವೆಚ್ಚವನ್ನು ಒಕ್ಕೂಟದ ನೌಕರರಿಗೆ ವೇತನವಾಗಿ ನೀಡುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ರೈತ ಸಾವನ್ನಪ್ಪಿದರೆ 50,000ರೂ., ಆರೋಗ್ಯಕ್ಕೆ 30,000 ರೂ. ವಿಮಾ ಸೌಲಭ್ಯವಿದೆ. ಹಾಲು ಲೀಟರಿಗೆ ಮುಂದೆ 5 ರೂ. ಹೆಚ್ಚಳದ ನಿರೀಕ್ಷೆಯಿದೆ. ಮಣಿಪಾಲದಲ್ಲಿ ಐಸ್‍ಕ್ರೀಂ ಸಹಿತ ಆಹಾರ ಉತ್ಪನ್ನ ಉತ್ಪಾದನಾ ಘಟಕ ಆರಂಭಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

2022ರ ಜೂನ್ ತಿಂಗಳಲ್ಲಿ ಒಕ್ಕೂಟಕ್ಕೆ ಅತ್ಯಧಿಕ 5.64 ಲಕ್ಷ ಲೀ. ಹಾಲು ಪೂರೈಕೆಯಾಗಿತ್ತು. 10 ವರ್ಷಕ್ಕೊಮ್ಮೆ ಕ್ಷೀರ ಕ್ಷೇತ್ರದಲ್ಲಿ ಡೌನ್ ಫಾಲ್ ಸಹಜ. ಜಾನುವಾರುಗಳಿಗೆ ಚರ್ಮಗಂಟು ರೋಗ, ರೈತರ ನಿರಾಸಕ್ತಿ, ಕೋವಿಡ್ ಟೈಮಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ ಯುವಜನರ ಲಾಭ ನಷ್ಟದ ಲೆಕ್ಕಾಚಾರದ ನಡುವೆ 2022, ಸೆಪ್ಟೆಂಬರ್‌ನಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತಾ ಬಂದಿದೆ. ಗಡಿ ರಾಜ್ಯಗಳಲ್ಲಿ 10 ರೂ. ದರ ಹೆಚ್ಚು ಸಿಗುವ ಕಾರಣಕ್ಕೆ ಹಾಲು ಅತ್ತ ಹರಿಯುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಮಂಗಳೂರು)
ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್.

lokesh

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

8 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

9 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

9 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

10 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

15 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

15 hours ago