BREAKING NEWS

ದಕ್ಷಿಣ ಕನ್ನಡದಲ್ಲಿ ಪ್ರತಿನಿತ್ಯ 1 ಲಕ್ಷ ಲೀ. ಹಾಲಿನ ಕೊರತೆ; ಮಂಡ್ಯ, ಹಾಸನದಿಂದ ನಿತ್ಯ 40,000 ಲೀ.ಖರೀದಿ

ದಕ್ಷಿಣ ಕನ್ನಡ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಬರೋಬ್ಬರಿ ಒಂದು ಲಕ್ಷ ಲೀ. ಕೊರತೆಯಾಗಿದ್ದು ಬೇಡಿಕೆ ಪೂರೈಸಲು 40,000 ಲೀ. ಹಾಲನ್ನು ಕಳೆದೊಂದು ತಿಂಗಳಿನಿಂದ ಮಂಡ್ಯ, ಹಾಸನದ ಒಕ್ಕೂಟಗಳಿಂದ ತರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರೈತರು ಪೂರೈಸುವ ಹಾಲಿಗೆ ಪ್ರತಿ ಲೀಟರಿಗೆ 32ರೂ. + 5ರೂ. ಸಹಾಯಧನ ಸಹಿತ ಫ್ಯಾಟ್/ಗುಣಮಟ್ಟಕ್ಕೆ ಅನುಗುಣವಾಗಿ ಹೆಚ್ಚುವರಿ ದರ ನೀಡಲಾಗುತ್ತಿದೆ. ಆದರೆ ಹಾಸನ, ಮಂಡ್ಯದಿಂದ ತರಿಸುವ ಹಾಲಿಗೆ ಲೀ. ಗೆ 41 ರೂ. ನೀಡಿದರೆ, ಸಾರಿಗೆ, ಪ್ಯಾಕಿಂಗ್‍ನಿಂದ ಲೀಟರಿಗೆ ಸರಾಸರಿ 3 ರೂ. ನಷ್ಟವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.50 ಲಕ್ಷ ಲೀ., ಉಡುಪಿ ಜಿಲ್ಲೆಯಲ್ಲಿ 1.80 ಲಕ್ಷ ಲೀ. ಸಹಿತ ಒಟ್ಟಾರೆ ಈಗಿನ ಉತ್ಪಾದನೆ ಸರಾಸರಿ 4.25 ಲಕ್ಷ ಲೀ. ಗಳಾಗಿದ್ದರೆ ಉಡುಪಿಯಲ್ಲಿ 1.60 ಲಕ್ಷ ಲೀ., ದಕ್ಷಿಣ ಕನ್ನಡದಲ್ಲಿ 3.40 ಲಕ್ಷ ಲೀ. ಸಹಿತ ಒಟ್ಟು 5 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. ಚರ್ಮಗಂಟು ರೋಗದಿಂದ ಅವಿಭಜಿತ ದಕ್ಷಿಣ ಕನ್ನಡದಲ್ಲಿ 150ಕ್ಕೂ ಅಧಿಕ ಜಾನುವಾರು ಸಾವು ಹಾಗೂ ಸಾವಿರಾರು ದನಗಳಿಗೆ ಬಾಧಿಸಿದ ಪರಿಣಾಮ ಹಾಲಿನ ಉತ್ಪಾದನೆ ಒಂದು ಲಕ್ಷ ಲೀ. ಕಡಿಮೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಮೊಸರು 82,000 ಲೀ., ಲಸ್ಸಿ 12,500ಲೀ., ಬೈಟ್ 190 ಕೆ.ಜಿ., ಪೇಡಾ 138 ಕೆ.ಜಿ., ಬರ್ಫಿ 29 ಕೆ.ಜಿ., ಪನ್ನೀರ್ 2,890 ಕೆ.ಜಿ., ಮೈಸೂರು ಪಾಕ್ 106ಕೆ. ಜಿ. ಮಾರಾಟವಾಗುತ್ತಿದೆ. ಅತಿ ಹೆಚ್ಚು ಮಾರಾಟವಾಗುತ್ತಿದ್ದ ಸಮೃದ್ಧಿ, ತೃಪ್ತಿ ಪೂರೈಕೆಯಾಗುತ್ತಿಲ್ಲ. ತುಪ್ಪ, ಬೆಣ್ಣೆ ಉತ್ಪಾದನೆ/ಪೂರೈಕೆಯೂ ಅಷ್ಟಕ್ಕಷ್ಟೆ. ಪಶು ಭಾಗ್ಯ ಯೋಜನೆಯ ಫಲಾನುಭವಿಗಳ ಮೂಲಕ ಒಕ್ಕೂಟಕ್ಕೆ ಹೆಚ್ಚುವರಿ ಹಾಲಿನ ಕೊಡುಗೆಯೂ ಸಂದಾಯವಾಗಿಲ್ಲ.

ನಂದಿನಿ ಪಶು ಆಹಾರಕ್ಕೆ ಮೂರು ತಿಂಗಳ ಹಿಂದಿದ್ದ 950 – 1,000ರೂ. ದರ ಈಗ 1,200ರೂ. ಆಸುಪಾಸಿನಲ್ಲಿದೆ. ಹಾಲಿನ ಪುಡಿ ದರ 230ರೂ. ಗಳಿಂದ 380ರೂ. ಗಳಿಗೇರಿದೆ. ಉಕ್ರೇನ್‍ನಿಂದ ಮೆಕ್ಕೆ ಜೋಳ ಪೂರೈಕೆಯಾಗುತ್ತಿಲ್ಲ. ಉತ್ತರ ಭಾರತದಿಂದ ಸಿಗುತ್ತಿದ್ದ ಮೆಕ್ಕೆ ಜೋಳ ಬಾಂಗ್ಲಾ ದೇಶಕ್ಕೆ ದುಪ್ಪಟ್ಟು ದರದಲ್ಲಿ ಮಾರಾಟವಾಗುತ್ತಿದೆ. ಕ್ಷೀರ ಭಾಗ್ಯದಡಿ ಶಾಲಾ ಮಕ್ಕಳಿಗೆ ಪೂರೈಸುವ ಹಾಲಿನ ಪುಡಿ ಕೆ. ಜಿ. ಗೆ 30ರೂ. ಹೆಚ್ಚಳದ ಬೇಡಿಕೆ ಸರಕಾರದ ಮುಂದಿದೆ. ಹೀಗೆ ಸಾಲು ಸಾಲು ಸವಾಲುಗಳನ್ನು ಹೈನುಗಾರರು ಎದುರಿಸುತ್ತಿದ್ದಾರೆ.

30 ಕೋಟಿ ರೂ. ಸಹಾಯಧನ ಬಾಕಿ : ಒಕ್ಕೂಟಕ್ಕೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ 65,000 ರೈತರು ಪೂರೈಸಿದ ಪ್ರತಿ ಲೀ. ಹಾಲಿಗೆ ರಾಜ್ಯ ಸರಕಾರ ನೀಡುವ 5ರೂ. ಸಹಾಯಧನ ಅಕ್ಟೋಬರ್ ತನಕ ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಡಿಸೆಂಬರ್ ತನಕ ಚುಕ್ತಾ ಆಗಿದ್ದರೂ ಬಳಿಕದ ನಾಲ್ಕು ತಿಂಗಳ ಬಾಕಿ 30 ಕೋಟಿ ರೂ. ಶೀಘ್ರ ಬಿಡುಗಡೆಯಾದರೆ ಆರ್ಥಿಕ ಒತ್ತಡ ಕಡಿಮೆಯಾಗಲಿದೆ.

ಯುವಜನರಿಗೆ ಹೈನುಗಾರಿಕೆಯಲ್ಲಿ ಉಜ್ವಲ ಭವಿಷ್ಯ : ಹಾಲು, ಮೊಸರು ಸಹಿತ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹಿನ್ನೆಲೆಯಲ್ಲಿ ನಿರುದ್ಯೋಗಿ ಯುವಜನತೆ ಹೈನುಗಾರಿಕೆಯಲ್ಲಿ ತೊಡಗಲು, ಸ್ವ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉತ್ತಮ ಅವಕಾಶವಿದೆ. ಈ ಹಿನ್ನೆಲೆಯಲ್ಲಿ 200 ಯುವಜನ ಕುಟುಂಬಕ್ಕೆ ತಲಾ ಐದು ಗೋವುಗಳನ್ನು ಸಾಕಲು ನೀಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಜಾನುವಾರು ಖರೀದಿ, ಹೊಸ ಕೊಟ್ಟಿಗೆ ನಿರ್ಮಾಣಕ್ಕೆ ಸಾಲ,ಸಹಾಯಧನ ಸಹಿತ ನೆರವು ಒದಗಿಸಲು ಯೋಜಿಸಲಾಗಿದೆ. ದುಡಿಯುವ ಬಂಡವಾಳದ ಶೇ. 5ವೆಚ್ಚವನ್ನು ಒಕ್ಕೂಟದ ನೌಕರರಿಗೆ ವೇತನವಾಗಿ ನೀಡುವ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ರೈತ ಸಾವನ್ನಪ್ಪಿದರೆ 50,000ರೂ., ಆರೋಗ್ಯಕ್ಕೆ 30,000 ರೂ. ವಿಮಾ ಸೌಲಭ್ಯವಿದೆ. ಹಾಲು ಲೀಟರಿಗೆ ಮುಂದೆ 5 ರೂ. ಹೆಚ್ಚಳದ ನಿರೀಕ್ಷೆಯಿದೆ. ಮಣಿಪಾಲದಲ್ಲಿ ಐಸ್‍ಕ್ರೀಂ ಸಹಿತ ಆಹಾರ ಉತ್ಪನ್ನ ಉತ್ಪಾದನಾ ಘಟಕ ಆರಂಭಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

2022ರ ಜೂನ್ ತಿಂಗಳಲ್ಲಿ ಒಕ್ಕೂಟಕ್ಕೆ ಅತ್ಯಧಿಕ 5.64 ಲಕ್ಷ ಲೀ. ಹಾಲು ಪೂರೈಕೆಯಾಗಿತ್ತು. 10 ವರ್ಷಕ್ಕೊಮ್ಮೆ ಕ್ಷೀರ ಕ್ಷೇತ್ರದಲ್ಲಿ ಡೌನ್ ಫಾಲ್ ಸಹಜ. ಜಾನುವಾರುಗಳಿಗೆ ಚರ್ಮಗಂಟು ರೋಗ, ರೈತರ ನಿರಾಸಕ್ತಿ, ಕೋವಿಡ್ ಟೈಮಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ ಯುವಜನರ ಲಾಭ ನಷ್ಟದ ಲೆಕ್ಕಾಚಾರದ ನಡುವೆ 2022, ಸೆಪ್ಟೆಂಬರ್‌ನಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತಾ ಬಂದಿದೆ. ಗಡಿ ರಾಜ್ಯಗಳಲ್ಲಿ 10 ರೂ. ದರ ಹೆಚ್ಚು ಸಿಗುವ ಕಾರಣಕ್ಕೆ ಹಾಲು ಅತ್ತ ಹರಿಯುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಮಂಗಳೂರು)
ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್.

lokesh

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

4 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

5 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

5 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

5 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

7 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

7 hours ago