ಟೆಕ್‌ ಸಮಾಚಾರ

ತನ್ನ ವಿಶಿಷ್ಟವಾದ ಸ್ಮಾರ್ಟ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೊ, ಭಾರತೀಯ ವಿವಿಧ ಹವಾಮಾನ ವೈವಿಧ್ಯಕ್ಕೆ ಹೊಂದಿಕೊಳ್ಳುವಂತೆ ವಿನೂತನ ವೈಶಿಷ್ಟ ಗಳೊಂದಿಗೆ ರೂಪಿಸಿರುವ ಒಪ್ಪೊ ಎಫ್ 29 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಸರಣಿಯ ಒಪ್ಪೊ ಎಫ್29 ಮತ್ತು ಎಫ್29 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ತೆಳುವಾದ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ಸಂಪರ್ಕತೆ ಮತ್ತು ದೀರ್ಘ ಬ್ಯಾಟರಿ ಬಾಳಿಕ ಹೊಂದಿರುವ ಫೋನ್ ಇದಾಗಿದೆ.

ಈ ಫೋನ್‌ಅನ್ನು ಭಾರತೀಯ ವಿವಿಧ ಹವಾಮಾನಗಳಾದ ಮಳೆ, ಚಳಿ, ದೂಳು, ತಾಪಮಾನಕ್ಕೆ ಹೊಂದಿಕೊಳ್ಳುವಂತೆ ರೂಪಿಸಲಾಗಿದ್ದು, ದೂಳು, ಮಳೆ,
ನೀರಿನೊಳಗೆ ಮುಳುಗುವ ಸಂದರ್ಭಗಳಲ್ಲಿ ಫೋನ್‌ಗೆ ರಕ್ಷಣೆ ಇರುತ್ತದೆ. ಸ್ಟಾಂಜ್ ಬಯೋನಿಕ್ ಕುಶನಿಂಗ್ ಮತ್ತು ಫೈಬರ್ ಗ್ಲಾಸ್ ಕವರ್ ಹಾಗೂ ಕ್ಯಾಮೆರಾ ಲೆನ್ಸ್ ರಕ್ಷಣಾತ್ಮಕ ರಿಂಗ್ ಇದರಲ್ಲಿದೆ.

ಒಪ್ಪೊ ಎಫ್20 ಪ್ರೋನಲ್ಲಿ 6000 ಎಂಎಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 80 ಡಬ್ಲ್ಯೂ ಸೂಪರ್‌ವೊಕ್ ವೇಗದ ಚಾರ್ಜಿಂಗ್ ವ್ಯವಸ್ಥೆಯಿದ್ದರೆ, ಒಪ್ಪೊ ಎಫ್29 ಸಾಧನದಲ್ಲಿ 6500 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. ಈ ಎರಡರಲ್ಲೂ ಕರೆಯ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ.

  • ಒಪ್ಪೊ ಎಫ್ 29 ಸರಣಿಯ ಫೋನ್‌ಗಳು 50ಎಂಪಿ ಪ್ರಧಾನ ಕ್ಯಾಮೆರಾ ಹಾಗೂ 2 ಎಂಪಿ ಡೆಪ್ತ್ ಕ್ಯಾಮೆರಾ ಹಾಗೂ 16ಎಂಪಿ ಸೆಲ್ಛಿ ಕ್ಯಾಮೆರಾದ ಜತೆಗೆ ಎಐ ಆಧಾರಿತ ಕ್ಯಾಮೆರಾ ಫೀಚರ್‌ಗಳನ್ನು ಹೊಂದಿದೆ.
  • ಒಪ್ಪೊ ಎಫ್29 ಪ್ರೊ ಏಪ್ರಿಲ್ 1ರಿಂದ ಲಭ್ಯವಾಗಲಿದ್ದು, 8ಜಿಬಿ+128ಜಿಬಿ ಫೋನ್‌ಗೆ 27,999 ರೂ. 8ಜಿಬಿ+256ಜಿಬಿ ಫೋನ್‌ಗೆ 29,999 ರೂ. ಹಾಗೂ 12ಜಿಬಿ+256 ಜಿಬಿ ಫೋನ್‌ಗೆ 31,999 ರೂ.ಗಳಿವೆ.
  • ಒಪ್ಪೊ ಎಫ್‌29 ಮಾರ್ಚ್‌ 27 ರಿಂದ ಲಭ್ಯವಿದ್ದು, 8 ಜಿಬಿ+128ಜಿಬಿ ಫೋನ್‌ಗೆ 23,999 ರೂ., 8ಜಿಬಿ+256ಜಿಬಿ ಫೋನ್‌ಗೆ 25,999 ರೂ.ಗಳಿಗೆ ಲಭ್ಯವಿದೆ.

 

ಆಂದೋಲನ ಡೆಸ್ಕ್

Recent Posts

ಡೀಮ್ಡ್‌ ಅರಣ್ಯ ಪ್ರದೇಶ ಗುರುತಿಸುವಿಕೆಗೆ ಸಮಿತಿ ರಚನೆ : ಈಶ್ವರ ಖಂಡ್ರೆ

ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…

5 mins ago

ಕೆಪಿಟಿಸಿಎಲ್ : 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ

ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ…

9 mins ago

ಕ್ರೀಡಾ ನೇಮಕಾತಿ ಮೀಸಲಾತಿ ಅನುಷ್ಠಾನ : ಸಿಎಂ ಘೋಷಣೆ

ಬೆಳಗಾವಿ : ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಇಲಾಖೆಯಲ್ಲಿ ಶೇ. 3 ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ…

14 mins ago

ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ : ಆರ್ಥಿಕ ಇಲಾಖೆಯ ಅನುಮತಿ ಪಡೆದು ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

19 mins ago

ಹೊಸದಿಲ್ಲಿ : ಭಾರತೀಯ ಜಲಪ್ರದೇಶಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಬೋಟ್ ಒಂದನ್ನು ಇಂದು ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದ್ದು ಹಡಗಿನಲ್ಲಿದ್ದ ೧೧ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಭಾರತೀಯ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು…

23 mins ago

ಮೈಸೂರು | 21 ರಂದು ಪಲ್ಸ್ ಪೋಲಿಯೋ ಅಭಿಯಾನ

ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…

1 hour ago