ಯುವ ಡಾಟ್ ಕಾಂ

ಹಲವು ಹೊಸತುಗಳ ಸೋನಿ ಹೆಡ್‌ಫೋನ್‌

ಸೋನಿ ಕಂಪೆನಿಯು ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರಿಗಾಗಿಯೇ ರೂಪಿಸಲಾದ ಅಲ್ಡ್ ವೇರ್ (Sony ULT Wear) ಎಂಬ ಸರಣಿಯ ಹೆಡ್‌ಫೋನ್‌ ಅನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹಗುರವಾದ ಮತ್ತು ಕಿವಿಯ ಮೇಲ್ಬಾಗದಲ್ಲಿ ಸರಿಯಾಗಿ ಕೂರುವಂತೆ ಹೊಂದಿಸಿಕೊಳ್ಳಲು ವ್ಯವಸ್ಥೆಯಿರುವ ಈ ಹೆಡ್‌ಫೋನ್‌ ತಲೆಯ ಮೇಲೆ ಧರಿಸಲು ಅನುಕೂಲಕರವಾಗಿದ್ದು, ಅಳತೆ ಹೊಂದಿಸಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇದರ ಇಯರ್ ಕಪ್‌ಗಳನ್ನು ಹೇಗೆ ಕೂರಿಸಲಾಗಿದೆ ಎಂದರೆ ಅವುಗಳನ್ನು ಬೇಕಾದ ಕೋನಕ್ಕೆ ತಿರುಗಿಸಿ ಮಡಚ ಬಹುದಾಗಿದ್ದು, ಕಾಂಪ್ಯಾಕ್ ಕೇಸ್ ಒಳಗೆ ಈ ಹೆಡ್‌ಫೋನ್‌ ಕೂರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ನೊಳಗೆ ಒಯ್ಯಲು ತೀರಾ ಅನುಕೂಲಕರವಾದ ಕೇಸ್ ಹೊಂದಿದೆ.

ಅಲ್ಪ ವೇರ್ ಹೆಡ್‌ಫೋನ್‌ನಲ್ಲಿ ಆಲಿಸುವ ಧ್ವನಿಯ ಗುಣಮಟ್ಟವು ಅದ್ಭುತವಾಗಿದ್ದು, ಕಿವಿಯ ಮೇಲಿರುವ ಕುಶನ್ ಭರಿತ ಇಯರ್ ಕಪ್‌ಗಳು ಹೊರಗಿನ ಗದ್ದಲ ಒಳಗೆ ಬಾರದಂತೆ ಮತ್ತು ಸಾಧನದ ಮೂಲಕ ಕೇಳಿಸುವ ಧ್ವನಿ ಹೊರಗೆ ಹೋಗದಂತೆ ತಡೆಯುವುದರಿಂದ ಹಾಡುಗಳನ್ನು ಆನಂದದಿಂದ ಆಲಿಸಬಹುದಾಗಿದೆ. ಅಲ್ಲದೆ ಇದರಲ್ಲಿನ ಹೊರಗಿನ ಸದ್ದನ್ನು ಸಂಪೂರ್ಣ ತಡೆಯುವ ನಾಯ್ಸ್ ಕ್ಯಾನ್ಸಲೇಶನ್ ಬಟನ್ ಒತ್ತಿದರೆ ಹೊರಗಿನ ಸದ್ದನ್ನು ತಡೆಯುವ ಮತ್ತು ಆಲಿಸುವ ಸೌಲಭ್ಯ ಪಡೆಯಬಹುದು. ಜತೆಗೆ ಪಕ್ಕದಲ್ಲೇ ಇರುವ ಹೊಳೆಯುವ ULT ಬಟನ್ ಆನ್ ಮಾಡಿದರೆ ಬೇಸ್ ಧ್ವನಿ ಗರಿಷ್ಟಮಟ್ಟದಲ್ಲಿ ಕೇಳಿಸುತ್ತದೆ.

ಈ ಸುಂದರ ಹೆಡ್ ಫೋನ್‌ ಅನ್ನು ಬ್ಲೂಟೂತ್ ಮೂಲಕ ಸ್ಟಾರ್ಟ್‌ಫೋನ್, ಟಿವಿ, ಕಂಪ್ಯೂಟರ್ ಹಾಗೂ ಬೇರಾವುದೇ ಪ್ಲೇಯರ್‌ಗಳನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ 3.5 ಜ್ಯಾಕ್ ಇದೆ ಮತ್ತು ಕೇಬಲ್ ಸಂಪರ್ಕ ಕೂಡ ನೀಡಲಾಗಿದೆ. ಬ್ಲೂಟೂತ್ ಸಂಪರ್ಕ ಸುಲಭವಾಗಿ ಕನೆಕ್ಟ್ ಆಗಲಿದ್ದು, ಇದಕ್ಕಾಗಿ ಪ್ರತ್ಯೇಕ ಆ್ಯಪ್ ಬೇಕಿಲ್ಲ.

ಇನ್ನು ಈ ಹೆಡ್‌ಫೋನ್‌ ಅನ್ನು ಕೇಬಲ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿಯೇನೂ ಬಳಕೆಯಾಗುವುದಿಲ್ಲ. ಬ್ಲೂಟೂತ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿ ಬಳಕೆಯಾಗುತ್ತದೆ. ನಾಲ್ಡ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡರೆ ಹೆಚ್ಚುವರಿ ಬ್ಯಾಟರಿ ಖರ್ಚಾಗುತ್ತದೆ. ನಾಯ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡು 30 ಗಂಟೆಗಳ ಕಾಲ ಸತತವಾಗಿ ಹಾಡುಗಳನ್ನು ಕೇಳಬಹುದು. ಇನ್ನು ಇದರ ಬ್ಯಾಟರಿ ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಮೂರುವರೆ ಗಂಟೆ ಬೇಕಾಗುತ್ತದೆ.

ಇಂತಹ ಅದ್ಭುತವಾದ ಸೋನಿ ಕಂಪೆನಿಯ ಹೆಡ್‌ಫೋನ್‌ 16,990 ರೂ.ಗಳಿಗೆ ಲಭ್ಯವಿದೆ.

ಆಂದೋಲನ ಡೆಸ್ಕ್

Recent Posts

ಡಿ.24ರಂದು ಮಹಾಸಭಾದಿಂದ ಶಾಮನೂರು ನುಡಿ ನಮನ: ಈಶ್ವರ ಖಂಡ್ರೆ

ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಶಾಸಕ, ಕೊಡುಗೈ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೇ 24ರಂದು ಅಖಿಲ ಭಾರತ…

32 mins ago

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಹೈಕೋರ್ಟ್‌ನಿಂದ ನೋಟಿಸ್‌

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ…

42 mins ago

6 ತಿಂಗಳಿಂದ ಸಂಬಳ ಕೊಡದ ಸರ್ಕಾರ: ರಾಜೀನಾಮೆ ಕೊಟ್ಟ ವೈದ್ಯ

ಮಂಗಳೂರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಆರು ತಿಂಗಳಿಂದ ಸರಿಯಾಗಿ ಸಂಬಳ ಆಗದ ಕಾರಣ…

1 hour ago

ಸರಗೂರು ತಾಲ್ಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್‌ ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ…

2 hours ago

ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು. ಬಿಜೆಪಿಯವರು…

2 hours ago

ಮೈಸೂರು| ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಂದು ತಮ್ಮ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆಲ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ…

2 hours ago