ಯುವ ಡಾಟ್ ಕಾಂ

ಸ್ನಾತಕೋತ್ತರ ಕನಸಿನಲ್ಲಿ ಹೋಂ ಗಾರ್ಡ್ ರೂಪಾ

• ಕೀರ್ತಿ ಎಸ್.ಬೈಂದೂರು

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯ ಆದೇಶವೊಂದನ್ನು ಹೊರಡಿಸಿತ್ತು. ವರ್ಷಗಳ ಹಿಂದೆ ಪಾಸಾಗದೆ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನು ಮರುಪರೀಕ್ಷೆಯಲ್ಲಿ ಬರೆದು ಪಾಸ್ ಮಾಡಿಕೊಳ್ಳುವ ಆದೇಶ. ಅದನ್ನು ತಿಳಿಯುತ್ತಿದ್ದಂತೆ ಯಾರಿಗೆಷ್ಟು ಸಂತಸವಾಯೊ, ಇವರಿಗೆ ಮಾತ್ರ ಸಂಭ್ರಮ. ಇವರು ಯಾರೆಂದರೆ ಬೆಳಗಾದರೆ ಗೃಹರಕ್ಷಕ ದಳದಲ್ಲಿ ಕಾರ್ಯನಿರ್ವಹಿಸಿ, ಸಂಜೆಯ ಹೊತ್ತಿಗೆ ಉದ್ಯೋಗಸ್ಥ ಮಹಿಳಾ ವಸತಿನಿಲಯದಲ್ಲಿ ರಾತ್ರಿ ಪಾಳಿಯ ಮೇಲ್ವಿಚಾರಕರಾಗಿ ದುಡಿಯುತ್ತಿರುವ ಡಿ.ಎಂ.ರೂಪಾ.

ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೂ, ಕಿರಿಯವರಾದ ರೂಪ ಎಂದರೆ ಮನೆ ಜನರಿಗೆಲ್ಲ ವಿಶೇಷ ಪ್ರೀತಿ. ಮನೆ ಜನರ ಮಾತಿಗೆ ಒಪ್ಪಿ, ಚಿಕ್ಕ ವಯಸ್ಸಿಗೆ ಮದುವೆಯಾದರು. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಮದುವೆಗೆ ಅನಿವಾರ್ಯವಾಗಿ ಒಪ್ಪಲೇಬೇಕಾಯಿತು.

ಮದುವೆಯ ಬಳಿಕ ‘ನಾನು ಹತ್ತನೇ ತರಗತಿ ಪಾಸ್ ಆಗಿದ್ದೇನೆ, ಮತ್ತೆ ನಾನ್ಯಾಕೆ ಪಿಯುಸಿ ಓದಬಾರದು?? ಎಂದು ಕೆಲ ಕಾಲೇಜುಗಳಲ್ಲಿ ವಿಚಾರಿಸಿದರು. ವಯಸ್ಸಾಗಿದೆ ಎಂಬ ಕಾರಣವೊಡ್ಡಿ ಪ್ರಾಂಶುಪಾಲರು ದಾಖಲಾತಿ ನೀಡಲು ಒಪ್ಪಲಿಲ್ಲ. ಸಂಬಂಧಿಕರೊಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು, ಪ್ರವೇಶಾತಿ ಪಡೆಯಲು ಸಹಾಯ ಮಾಡಿದರು. ಆಶ್ಚರ್ಯ ಎನಿಸಬಹುದು; ಮೊದಲ ಮಗಳು ಒಂದನೇ ತರಗತಿಗೆ ದಾಖಲಾಗಿದ್ದರೆ, ಇವರು ಹನ್ನೊಂದನೇ ತರಗತಿಗೆ!

ಸೈಕಲ್ಲಿನಲ್ಲಿ ಮಗಳನ್ನು ಶಾಲೆಗೆ ಬಿಟ್ಟು, ನಂತರ ಇವರು ತರಗತಿಗೆ ಹೋಗುತ್ತಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ರೂಪಾ ಅವರು ಪಾಸ್ ಆಗಿರಲಿಲ್ಲ. ಇವರಿಗಂತೂ ಬದುಕನ್ನು ಮುಂದುವರಿಸಲು ಹಿಡಿದಿದ್ದ ಶಿಕ್ಷಣದ ದಾರಿಯಲ್ಲಿ ಎಡವಿಬಿದ್ದೆನಲ್ಲಾ ಅನಿಸಿತು. ಆದರೆ, ಅಧ್ಯಾಪಕರಾದ ಶಶಿಕಲಾ ಮತ್ತು ಮರಿಯಾ ಜಾಯಿಸ್ ಅವರು ಮರುಪರೀಕ್ಷೆ ಕಟ್ಟುವಂತೆ ಆತ್ಮವಿಶ್ವಾಸ ತುಂಬಿದರು. ಅರ್ಥಶಾಸ್ತ್ರ ವಿಷಯದಲ್ಲಿ ಪಾಸ್ ಆದರೂ ಇಂಗ್ಲಿಷ್ ವಿಷಯದಲ್ಲಿ ಮತ್ತೆ ಅನುತ್ತೀರ್ಣರಾದರು. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು.

2009-10ರ ಪಿಯುಸಿ ಮರುಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮಹಾರಾಣಿ ಕಲಾ ಕಾಲೇಜಿನಲ್ಲಿ ಪದವಿಗೆ ದಾಖಲಾದರು. ತನ್ನ ಓದಿಗೆ, ಮಕ್ಕಳು, ಮನೆ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವುದಕ್ಕೆ ಇವರಿಗೆ ನೆರವಾಗಿದ್ದು, ವಸತಿ ನಿಲಯದ ರಾತ್ರಿ ಪಾಳಿಯ ಮೇಲ್ವಿಚಾರಕರ ಉದ್ಯೋಗ, ಈ ಉದ್ಯೋಗಕ್ಕೆ ಸೇರಿ 15 ವರ್ಷಗಳಾಗಿವೆ.

ಒಂದು ದಿನ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದಾಗ, ಗೃಹರಕ್ಷಕ ದಳಕ್ಕೆ ಹೊಸ ಸಿಬ್ಬಂದಿಗಳ ನೇಮಕಾತಿಗೆ ನೀಡಿದ ಜಾಹೀರಾತನ್ನು ಗಮನಿಸಿ, ಅರ್ಜಿ ಹಾಕಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೆಲಸವೂ ಸಿಕ್ಕಿತೆನ್ನಿ. 11 ವರ್ಷಗಳಿಂದ ಮನೆಗೆ ಹಣಕಾಸಿನ ವ್ಯವಹಾರಕ್ಕೆ ಆಧಾರ ನೀಡಿದ ಈ ಉದ್ಯೋಗದ ಬಗ್ಗೆ ಇವರಿಗೆ ಎಲ್ಲಿಲ್ಲದ ಹೆಮ್ಮೆ.

ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎಂಬುದು ಬರೀ ಬಾಯಿಮಾತಿನ ಉಪದೇಶವಾಗದೆ, ಅವರ ಬದುಕಿನ ಸಿದ್ಧಾಂತವೂ ಆಗಿದೆ. ‘ಜೀವನವೇ ಹೋರಾಟ. ಹಿಂದೆ ಏನಾದ್ರೂ ಆಗಿರ್ಲಿ, ಈಗಿನ ಬದುಕನ್ನು ಅನುಭವಿಸ್ಟೇಕು’ ಎನ್ನುವ ಯೋಚನೆ ಇವರದ್ದು.

ಇವತ್ತಿಗೂ ಅಷ್ಟೆ, ಬದುಕು ನೀಡಿದ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಎಷ್ಟೋ ಹಾಡುಗಳ ಸಾಲುಗಳು ಇವರ ದನಿಯಲ್ಲಿ ಆಗಾಗ ಗುನುಗುತ್ತಲೇ ಇರುತ್ತವೆ. ಅಂದ ಹಾಗೆ, ಇವರು ಪದವಿಯಲ್ಲಿ ಪಾಸಾಗದೆ ಉಳಿದಿದ್ದ, ಇಂಗ್ಲಿಷ್ ಪರೀಕ್ಷೆಗೆ ಪದವಿ ಓದುತ್ತಿರುವ ಎರಡನೇ ಮಗಳೊಂದಿಗೆ ತಯಾರಾಗುತ್ತಿದ್ದಾರೆ ಸ್ನಾತಕೋತ್ತರ ಅಧ್ಯಯನದ ಕನಸಿನೊಂದಿಗೆ

keerthisba2018@gmail.com

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

6 hours ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

9 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

9 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

10 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

10 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

10 hours ago