ವಾರಾಂತ್ಯ ವಿಶೇಷ

ಬಂಜಾರರ ಬದುಕು- ಬವಣೆ; ಬಿಂಬಿಸಲಿರುವ ‘ಗೋ‌ರ್ ಮಾಟಿ’ ನಾಟಕ

 

ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾತರಿಸುತ್ತಿರುವ ಅಲಕ್ಷಿತ ಬಂಜಾರ ಸಮುದಾಯದ ಜೀವನ, ಸಂಸ್ಕೃತಿ, ಕಲೆಯನ್ನು ನಾಗರಿಕ ಲೋಕದ ಎದುರು ಬಿಚ್ಚಿಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ರಂಗಪ್ರಯೋಗವೊಂದು ಕನ್ನಡ ಭಾಷೆಯಲ್ಲಿ ಸಿದ್ಧವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ.

ತಮ್ಮನ್ನು ತಾವು ಗೋರ್ ಎಂದು ಕರೆದುಕೊಳ್ಳುವ, ಬೇರೆಯವರನ್ನು, ಕೋರ್ ಎಂದು ಕರೆಯುವ ಗೋ‌ ಬೋಲಿ ಭಾಷೆ ಮಾತನಾಡುವ ಬಂಜಾರ ಸಮುದಾಯದ ಮುಂದಿರುವ ಸವಾಲುಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಮೈಸೂರಿನ ರಂಗಾಯಣವು ‘ಗೋರ್ ಮಾಟಿ’ ಎಂಬ ನಾಟಕದ ಪ್ರಯೋಗಕ್ಕೆ ಸಜ್ಜಾಗಿದೆ. ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ನಿರ್ದೇಶನ ಈ ನಾಟಕಕ್ಕಿದೆ.

ರಂಗಾಯಣದ ನಾಲ್ವರು ಹಿರಿಯ ಕಲಾವಿದರು, ಮೈಸೂರು ರಂಗಾಯಣ ಸೇರಿದಂತೆ ರಾಜ್ಯದ ವಿವಿಧೆಡೆಯ ರಂಗಾಯಣಗಳಲ್ಲಿ ತರಬೇತಿ ಪಡೆದ 20 ಮಂದಿ ಕಲಾವಿದರನ್ನು ಬಳಸಿಕೊಂಡು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅವರು ಗೋ‌ ಮಾಟಿ ನಾಟಕವನ್ನು ನಿರ್ದೇಶನ ಮಾಡಿ ರಂಗರೂಪಕ್ಕೆ ಇಳಿಸಿದ್ದಾರೆ. ಬಂಜಾರ ಸಮುದಾಯದ ಮೂಲ ಪುರುಷ, ಆರಾಧ್ಯ ದೈವ ಸಂತ ಸೇವಾಲಾಲ್ ಸೇರಿದಂತೆ ಸಮುದಾಯದ ಪ್ರಮುಖ ನಾಯಕರ ಕೊಡುಗೆಯನ್ನು ಈ ನಾಟಕದ ಮೂಲಕ ಸಮಾಜದ ಮುಂದಿಡುವ ಪ್ರಯತ್ನ ಮಾಡಲಾಗಿದೆ.

ಕಲಾವಿದರು ಬಂಜಾರರಲ್ಲ..!

‘ಗೋ‌ ಮಾಟಿ’ ನಾಟಕದಲ್ಲಿ ಅಭಿನಯಿಸಿರುವ 24 ಮಂದಿ ಕಲಾವಿದರೂ ಬೇರೆ-ಬೇರೆ ಸಮುದಾಯಕ್ಕೆ ಸೇರಿದ್ದು, ಬಂಜಾರರು ಯಾರೂ ಇಲ್ಲ. ಕೆಲವು ಕಲಾವಿದರು ಗೋ‌ ಬೋಲಿ ಭಾಷೆಯನ್ನು ಕಲಿತಿದ್ದಾರೆ. ಬಂಜಾರರ ಸಂಸ್ಕೃತಿಯನ್ನು ವಿವಿಧ ಆಕರ ಗ್ರಂಥಗಳು ಮತ್ತು ಸಮುದಾಯದ ನಾಯಕರಿಂದ ತಿಳಿದುಕೊಳ್ಳಲಾಗಿದೆ. ಬಂಜಾರ ಮಹಿಳೆಯರೊಡನೆ ಮಾತುಕತೆ ನಡೆಸಿ ಅವರ ಉಡುಗೆ, ತೊಡುಗೆ, ಸಂಪ್ರದಾಯದ ಮಾಹಿತಿ ಕಲೆ ಹಾಕಿ ನಾಟಕವನ್ನು ರೂಪಿಸಿರುವುದು ವಿಶೇಷ.

ಬಂಜಾರರು ಯಾರು?

ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಮೂಲದ ಬಂಜಾರರು ಗೋ‌ ಬೋಲಿ ಭಾಷೆ ಮಾತನಾಡುತ್ತಾರೆ. ಈ ಭಾಷೆಯಲ್ಲಿ ಹಿಂದಿ, ಉರ್ದು, ರಾಜಸ್ಥಾನಿ ಮತ್ತು ಸಂಸ್ಕೃತ ಭಾಷೆಗಳ ಸಮ್ಮಿಶ್ರಣವಿದೆ. ಈ ಸಮುದಾಯವು ತನ್ನದೇ ಆದ ವೇಷಭೂಷಣಗಳಿಂದ ಭಾರತೀಯ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಇವರನ್ನು ಜಿಪ್ಪಿಗಳೆಂದು ಕರೆಯುತ್ತಿದ್ದರು. ಇವರ ಮೂಲ ಪುರುಷ ಸಂತ ಸೇವಾಲಾಲ್, ಇವರ ಕುಲಕಸುಬು ವ್ಯಾಪಾರ ಹಾಗೂ ಪಶುಸಂಗೋಪನೆ. ಇವರು ಶ್ರಮ ಜೀವಿಗಳು, ಸ್ವಾಭಿಮಾನಿ ಗಳು, ಅಷ್ಟೇ ಪ್ರಾಮಾಣಿಕರು. ಮೊದಲು ಅಲೆಮಾರಿಗಳಾಗಿದ್ದು, ಇತ್ತೀಚೆಗೆ ನಾಗರಿಕತೆ ಬೆಳೆದಂತೆ ಗ್ರಾಮಗಳಲ್ಲಿ, ಊರುಗಳಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಊರುಗಳನ್ನು ತಾಂಡ್ಯಗಳೆನ್ನುತ್ತಾರೆ.

ಜನವರಿಯಿಂದ ಆರಂಭವಾದ ಈ ನಾಟಕದ ಪ್ರಯತ್ನವು ಈಗ ರಂಗರೂಪಕ್ಕೆ ಬರುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಸಭೆಯೊಂದರಲ್ಲಿ ಲಂಬಾಣಿ ಜನಾಂಗದ ಕುರಿತು ನಾಟಕ ಮಾಡುವಂತೆ ಸೂಚಿಸಿದ್ದರು. ಅದರಂತೆ ಈ ನಾಟಕ ರಂಗರೂಪಕ್ಕೆ ಬರುತ್ತಿದೆ. ಈ ರಂಗಪ್ರಯೋಗಕ್ಕೆ ಇತಿಹಾಸ, ಪುರಾಣ, ಐತಿಹ್ಯ, ಜೊತೆಗೆ ವಾಸ್ತವ ಬದುಕಿನ ಕಥನ, ಕಾವ್ಯಗಳನ್ನು ಸಂಶೋಧನಾ ಆಕರಗಳನ್ನು ಚರಿತ್ರೆಯಲ್ಲಿನ ಪಾತ್ರಗಳ ಒಟ್ಟಿಗೆ ಸಮಕಾಲೀನ ಬದುಕಿನ ಸಮಾಜದ ಪಾತ್ರಗಳ ಮೂಲಕ ಅಭಿನೀತಗೊಂಡಿವೆ.
-ಸಿ.ಬಸವಲಿಂಗಯ್ಯ, ನಾಟಕದ ನಿರ್ದೆಶಕ,

‘ಗೋ‌ ಮಾಟಿ ನಾಟಕ ಹೊಸ ಪ್ರಯೋಗವಾಗಿದ್ದು, ಇದರಲ್ಲಿ ಹೊಸತನ ಇದೆ. ಕಲಾವಿದ ರಿಗೂ ಮತ್ತು ಪ್ರೇಕ್ಷಕರಿಗೂ ಇದು ಹೊಸದು. ಈ ಕೆಲಸ ಮಾಡುವುದು ಹೊಸ ಅನುಭವವನ್ನು ನೀಡಿದೆ.
-ಗೀತಾ ಮೋಂಟಡ್ಕ, ಹಿರಿಯ ಕಲಾವಿದರು.

ಇಂದು, ನಾಳೆ ನಾಟಕ ಪ್ರದರ್ಶನ

ಮಾ.16 ಮತ್ತು 17ರಂದು ಸಂಜೆ 6.30 ಕ್ಕೆ ರಂಗಾಯಣದ ಅಂಗಳದಲ್ಲಿರುವ ಭೂಮಿಗೀತದಲ್ಲಿ ಗೋರ್ ಮಾಟಿ ನಾಟಕವನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ. ಉಳಿದಂತೆ ವಾರಾಂತ್ಯ ರಂಗಪ್ರದರ್ಶನವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಅಂದರೆ . 22, 23, 24 TO 29, 30 DICI 31ರಂದು ನಾಟಕ ಪ್ರದರ್ಶನವಾಗಲಿದೆ.

ನಾಟಕ ಕನ್ನಡ, ಹಾಡುಗಳು ಗೋರ್ ಬೋಲಿ..!
2 ಗಂಟೆ 10 ನಿಮಿಷಗಳ ಅವಧಿಯ ಈ ನಾಟಕವು ಕನ್ನಡ ಭಾಷೆಯಲ್ಲಿ ಮೂಡಿಬಂದಿದೆ. ಇದರಲ್ಲಿ ಬಂಜಾರ ಜನಾಂಗದ ತೀಜ್ ಹಬ್ಬದ ಸುಖ ದುಃಖದ ಹಾಡುಗಳ ಜತೆಗೆ ಸಮುದಾಯದ ಗೀತೆಗಳು ಗೋರ್‌ ಬೋಲಿ ಭಾಷೆಯಲ್ಲಿವೆ. ಕೆಲವು ಹಾಡುಗಳು ಕನ್ನಡದಲ್ಲಿ ಮೂಡಿಬಂದಿವೆ. ನಾಟಕ ವೀಕ್ಷಣೆಗೆ 50 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ.

ಗೋರ್ ಮಾಟಿ ಎಂದರೇನು?

ಗೋರ್ ಮಾಟಿ ಎಂದರೆ ಬಂಜಾರ ಭಾಷೆಯಲ್ಲಿ ‘ನನ್ನ ಜನ’ ಎಂದು ಅರ್ಥ. ಬಂಜಾರರು ಮೂಲತಃ ಉತ್ತರ ಹಿಂದೂ ಆರ್ಯ ಸಂಸ್ಕೃತಿಯವರಾಗಿದ್ದು, ತಮ್ಮನ್ನು ತಾವು ‘ಗೋ‌ ಮಾಟ’ ಅಥವಾ ‘ಗೋರ್ ಭಾಯ್’ ಎಂದು ಕರೆದುಕೊಳ್ಳುತ್ತಾರೆ. ಹೊರಗಿನವರನ್ನು ಅವರು ಕೋರ್ ಎಂದು ಕರೆಯುತ್ತಾರೆ.

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಬಂಡೀಪುರ ಅರಣ್ಯದಲ್ಲಿ ನೀರಿನ ಸಮಸ್ಯೆಗೆ ಬ್ರೇಕ್: ಸೋಲಾರ್‌ ಬೋರ್‌ವೆಲ್‌ ಮೂಲಕ ನೀರು ತುಂಬಿಸಲು ಪ್ಲಾನ್‌

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್‌ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…

7 mins ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿದೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.…

32 mins ago

ನಟಿ ರನ್ಯಾ ರಾವ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌

ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…

51 mins ago

ಕೌಟುಂಬಿಕ ಕಲಹ: ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…

1 hour ago

ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಎಚ್.ಡಿ.ಕುಮಾರಸ್ವಾಮಿ ವಿರೋಧ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…

1 hour ago

ಓದುಗರ ಪತ್ರ: ಸಮತೋಲನದ ಬಜೆಟ್!…

ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…

5 hours ago