ಹಾಡು ಪಾಡು

ತುಂಬಿ ಹರಿಯುತ್ತಿರುವ ಪಂಚ ನದಿಗಳು

ರಂಗಸ್ವಾಮಿ ಸಂತೆ ಬಾಚಹಳ್ಳಿ

ನೀರು ತುಂಬಿ ಹರಿವ ನದಿಯ ಸೌಂದರ್ಯ ದೃಶ್ಯಕಾವ್ಯವೇ ಸರಿ. ಇತ್ತೀಚೆಗೆ ಬಿಡದೇ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿರುವ ಪಂಚ ನದಿಗಳಿಗೆ ಮರುಜೀವ ಬಂದಂತಿದೆ. ನಾಗಮಂಗಲದ ಹಸುವಿನ ಕಾವಲು ಪ್ರದೇಶ ಹಾಗೂ ಕೃಷ್ಣರಾಜಪೇಟೆಯ ಸಂತೇಬಾಚಳ್ಳಿಯ ಪ್ರದೇಶಗಳಲ್ಲಿ ಲೋಕಪಾವನಿ, ವೀರವೈಷ್ಣವಿ, ಕೇತಕಾ, ಜಾಗಿನಕೆರೆ ಮತ್ತು ರಾಯಸಮುದ್ರ ಎಂಬ ಐದು ಉಪನದಿಗಳು ಹರಿಯುತ್ತಿವೆ.

ನಾಗಮಂಗಲದ ಬೊಮ್ಮನಾಯಕನಹಳ್ಳಿಯಿಂದ ಆರಂಭವಾಗುವ ಲೋಕಪಾವನಿ ನದಿಯ ಹರಿವು ಹಂದೆನಳ್ಳಿ, ಕರಿಕ್ಯಾತ್ನಳ್ಳಿ, ಕಳ್ಳಿಗುಂದಿ, ಮಾರನಾಯಕನಹಳ್ಳಿ, ಹೊಣಕೆರೆಯಂತಹ ಹಳ್ಳಿಗಳಿಗೂ ವ್ಯಾಪಿಸಿದೆ. ಪಾಂಡವಪುರ ಮಾರ್ಗವಾಗಿ ಶ್ರೀರಂಗಪಟ್ಟಣದ ಕರಿಕಲ್ಲು ಬೆಟ್ಟದ ಸಮೀಪ ಕಾವೇರಿ ನದಿಯೊಂದಿಗೆ ಸಂಗಮವಾಗುವುದು ಈ ನದಿಯ ವಿಶೇಷ. ಇನ್ನು ನಾಗಮಂಗಲದ ಹಸುವಿನ ಕಾವಲು ಮತ್ತು ಗಿಡದ ಚೆಲ್ಲಾಪುರ ಪ್ರದೇಶಗಳ ಹಳ್ಳಗಳಲ್ಲಿ ಹುಟ್ಟುವ ನದಿಯೇ ವೀರ ವೈಷ್ಣವಿ. ವಡ್ಡರಹಳ್ಳಿ, ಸಾತೇನಹಳ್ಳಿ ಹಳ್ಳದ ಮೂಲಕ ಕೊಡಳ್ಳಿ, ಹೊನ್ನಾವರ, ಬಿಂಡಿಗನವಿಲೆ ಕೆರೆಯ ಮಾರ್ಗವಾಗಿ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಅಣೆಕಟ್ಟಿನ ಹಿನ್ನೀರಿನಲ್ಲಿ ಸೇರುತ್ತದೆ.

ಅಲ್ಲಿಂದ ಶಿಂಷಾ ನದಿಯಾಗಿ ಮದ್ದೂರು, ಮಳವಳ್ಳಿ ಮಾರ್ಗವಾಗಿ ಬೆಂಕಿ ಫಾಲ್ಸ್ ಸೇರುತ್ತದೆ. ‘ರಾಮನು ಕೇತಕಾ ನದಿಯನ್ನು ದಾಟಿ ಲಂಕೆಗೆ ಹೋದನು’ ಎಂಬುದಾಗಿ ಉಲ್ಲೇಖವಿರುವುದು, ಬಹುಶಃ ಮಂಡ್ಯ ಜಿಲ್ಲೆಯ ಕೇತಕಾ ನದಿಯ ಬಗ್ಗೆಯೇ ಇರಬಹುದು. ಈ ನದಿ ನಾಗಮಂಗಲದ ತಿರುಗನಹಳ್ಳಿ ಬಾರೆಯಲ್ಲಿ ಹುಟ್ಟಿ, ಸಾಣೇನಹಳ್ಳಿಯ ಮಾರ್ಗವಾಗಿ ನಾಯಕನಹಳ್ಳಿ, ಅಪ್ಪನಹಳ್ಳಿ, ಮಾಳಗೂರು, ಅಘಲಯ, ಕಿಕ್ಕೇರಿ ಕೆರೆಗಳ ಮೂಲಕ ಹೇಮಾವತಿ ನದಿಯನ್ನು ಸೇರುತ್ತದೆ. ಕೆ. ಆರ್. ಪೇಟೆ ತಾಲ್ಲೂಕಿನ ದುಗ್ಗನಹಳ್ಳಿ ಬಾರಿಯ ಹಳ್ಳಗಳಲ್ಲಿ ಹುಟ್ಟುವ ನದಿಯೇ ಜಾಗಿನ ನದಿ. ಜಾಗಿನಕೆರೆ ಮಾರ್ಗವಾಗಿ ಕೈಗೂನಹಳ್ಳಿ, ವಳಗೆರೆಮೆಣಸ, ಅಗ್ರಹಾರಬಾಚಹಳ್ಳಿ, ಕೃಷ್ಣರಾಜಪೇಟೆ, ಹೊಸಹೊಳಲು ಮಾರ್ಗವಾಗಿ ಹೇಮಾವತಿ ನದಿಯನ್ನು ಸೇರುತ್ತದೆ.

ರಾಯಸಮುದ್ರ ನದಿಯೂ ನಾಗಮಂಗಲ ತಾಲ್ಲೂಕಿನ ಕೊರವನಗುಂದಿ ಸಂಽಸುವ ಹಳ್ಳಗಳ ಮೂಲಕ ನಾರಾಯಣದುರ್ಗ ಅರಣ್ಯದೊಳಗೆ ಹರಿದು ಗವಿಮಠ ಮಾರ್ಗವಾಗಿ ಹೇಮಾವತಿ ನದಿಯನ್ನು ತಲುಪುತ್ತದೆ. ಈ ಮೊದಲು ಲೋಕಪಾವನಿ ಮತ್ತು ವೀರ ವೈಷ್ಣವಿ ನದಿಗಳನ್ನು ಮಾತ್ರ ವಿಶೇಷವಾಗಿ ಗುರುತಿಸಲಾಗಿತ್ತು. ಆದರೆ ಕೇತಕಾ, ಜಾಗಿನ ಕೆರೆ ಮತ್ತು ರಾಯಸಮುದ್ರ ನದಿಗಳು ಹರಿಯುವ ಪ್ರದೇಶಗಳಲ್ಲಿ ೩೦ ರಿಂದ ೫೦ ಅಡಿ ಮರಳಿನ ನಿಕ್ಷೇಪಗಳಿದ್ದು, ನುಣುಪಾದ ಕಲ್ಲುಗಳ ರಾಶಿಯೂ ಪತ್ತೆಯಾಗಿವೆ.

ಇದರರ್ಥ ನೂರಾರು ವರ್ಷಗಳ ಹಿಂದೆ ಈ ಉಪನದಿಗಳು ಜೀವಂತ ನದಿಗಳೆಂದು ಕಂಡುಬರುತ್ತವೆ. ಇದಕ್ಕೆ ಪೂರಕವಾಗಿ ಊರ ಹಿರಿಯರು ಕೂಡ ಬರಗಾಲ ಬಂದ ವರ್ಷ ಬಿಟ್ಟರೆ, ಈ ನದಿಗಳು ವರ್ಷವೆಲ್ಲ ಹರಿಯುತ್ತಿದ್ದವು ಎನ್ನುತ್ತಾರೆ. ಇತ್ತೀಚೆಗೆ ಈ ಪ್ರದೇಶಗಳ ಸುತ್ತಲೂ ರಿಗ್ ಬ್ಲಾಸ್ಟ್ ಮೂಲಕ ಭೂತಾಯಿಯ ಎದೆಯನ್ನು ಬಗೆಯುತ್ತಿದ್ದಾರೆ. ಮತ್ತೊಂದೆಡೆ ಮರಳು ಮಾಫಿಯಾದಿಂದ ಅಂತರ್ಜಲ ಕುಸಿದೇಬಿಟ್ಟಿದೆ. ಸಾಲದೆಂಬಂತೆ ಮನೆ, ಜಮೀನುಗಳಲ್ಲಿ ಸಾವಿರಾರು ಬೋರ್ ವೆಲ್‌ಗಳ ನಿರ್ಮಾಣ ಬೇರೆ! ಆಧುನಿಕ ತಂತ್ರಜ್ಞಾನ ತಂದೊಡ್ಡಿದ ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ಮುಂಗಾರು ಮಳೆ ಬಿದ್ದ ಏಳೆಂಟು ತಿಂಗಳು ಇಲ್ಲಿ ಕೊರತೆಯಾಗದಷ್ಟು ನೀರು ಹರಿಯುತ್ತಿರುತ್ತದೆ

andolana

Recent Posts

ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ. ಈ ಕುರಿತು…

10 hours ago

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಗ್ಯಾರಂಟಿ…

10 hours ago

ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ…

10 hours ago

ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಮುತ್ಯಾ

ಯಾದಗಿರಿ: ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ…

10 hours ago

ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ: ಭಯಭೀತರಾದ ಜನತೆ

ಟಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ್ದು, ಜನತೆ ಭಯಭೀತರಾಗಿದ್ದಾರೆ. ತಾಲ್ಲೂಕಿನ ಎಸ್.ಕೆಬ್ಬೆಹುಂಡಿ, ಕನ್ನಾಯಕನಹಳ್ಳಿ ಗ್ರಾಮದ ಮಧ್ಯೆ ಚಿರತೆ ಪ್ರತ್ಯಕ್ಷವಾಗಿದ್ದು, ಈ…

11 hours ago

ರಾಜಧಾನಿಯ ಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಮಾನದಂಡ- ಪರಿಸರ ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ…

11 hours ago