• ರಮೇಶ್ ಪಿ.ರಂಗಸಮುದ್ರ

ನಮ್ಮ ದೇಶದಲ್ಲಿ ಬಾಳೆ ಬೇಸಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಲ್ಲ ಶುಭಕಾರ್ಯಗಳಿಗೂ,
ಸರ್ವರಿಗೂ ಪ್ರಿಯವಾದ ಹಣ್ಣು ಬಾಳೆ. ಈ ಹಣ್ಣು ಕೊಬ್ಬು ರಹಿತವಾದದ್ದರಿಂದ, ಪೊಟ್ಯಾಶಿಯಂ ನಿಂದ ಕೂಡಿರುವುದರಿಂದ ಹೃದಯಕ್ಕೆ ಒಳ್ಳೆಯದು. ಪ್ರಪಂಚದಲ್ಲಿ ಭಾರತ ಬಾಳೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಬಾಳೆಗೆ ಬಳಸುವ ವಿಪ ರೀತ ರಾಸಾಯನಿಕ ಮತ್ತು ವಿಷಕಾರಿ ಕಳೆ ಕೀಟ ನಾಶಕಗಳಿಂದಾಗಿ ವಿದೇಶಿ ಮಾರುಕಟ್ಟೆಯಲ್ಲಿ ದೇಶದ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇಲ್ಲ. ವಿಶ್ವದ ಮಾರುಕಟ್ಟೆಯಲ್ಲಿ ಬಾಳೆಗೂ ಬೇಡಿಕೆ ಹೆಚ್ಚಾಗಬೇಕಾ ದರೆ ರೈತರು ಸಾವಯವ ಬಾಳೆ ಕೃಷಿಗೆ ತೆರೆದು ಕೊಳ್ಳಬೇಕು.

ಅಂಗಾಂಶ ಕೃಷಿ ಬಾಳೆ: ಹಿಂದೆಲ್ಲಾ ತಾಯಿ ಬುಡದ ಸುತ್ತ ಬೆಳೆದ ಕಂದುಗಳನ್ನು ಕಿತ್ತು ತಂದು ನಾಟಿ ಮಾಡುತ್ತಿದ್ದರು. ಇದರಿಂದ ತಾಯಿ ಬುಡಕ್ಕೆ ರೋಗ ಬಾಧೆಗಳು ಇಡೀ ತೋಟಕೆ ವಾರದ ಹರಡುತ್ತಿತ್ತು. ಇದರ ನಿವಾರಣೆಗೆ ಕೃಷಿ ಅಂಕಣ ಹಾಗೂ ಗಿಡಗಳ ಸದೃಢತೆಗೆ ಹೆಚ್ಚಿನ ರಾಸಾಯನಿಕ ಗೊಬ್ಬರ
ಗಳು ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದರು. ಇದರಿಂದ ಉತ್ಪಾದನಾ ವೆಚ್ಚವು ಅಧಿಕವಾಗುತ್ತಿತ್ತು. ಈಗ ಬಾಳೆ ಬೆಳೆಯಲು ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಬಾಳೆ ಸಸಿಗಳು ಲಭ್ಯವಿರುವುದ ರಿಂದ ಸಾವಯವ ಪದ್ಧತಿಯಲ್ಲಿ ಬಾಳೆ ತೋಟ ಮಾಡಲು, ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯ ಸಹಾಯ ಧನ, ಮಾರ್ಗದರ್ಶನವೂ ಸಿಗುವುದರಿಂದ ಕೃಷಿಕರ ಚಿತ್ತ ಸಾವಯವ ಬಾಳೆ ಬೆಳೆಯುತ್ತಾ ಸಾಗಬೇಕು.

ಅಂಗಾಂಶ ಕೃಷಿ ಬಾಳೆ ಸಸಿಗಳ ಅನುಕೂಲಗಳು

1. ಒಂದೇ ವಯಸ್ಸಿನ ರೋಗನಿರೋಧಕ ಗಿಡಗಳನ್ನು ನಾಟಿ ಮಾಡಬಹುದು.
2.ಎಲ್ಲ ಗಿಡಗಳಲ್ಲೂ ಬಾಳೆ ಒಟ್ಟಿಗೆ ಕಟಾವಿಗೆ ಬರುತ್ತದೆ.
3. ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದು.
4. ಹನಿ ನೀರಾವರಿ ಪದ್ಧತಿಯಲ್ಲಿ ಬೇಸಾಯ ಸುಲಭ. 5. ಅಧಿಕ ಇಳುವರಿ, ಲಾಭ ಪಡೆಯಬಹುದು. 6. ತೋಟಗಾರಿಕಾ ಇಲಾಖೆಯಿಂದ ಸಹಾಯ, ಮಾರ್ಗದರ್ಶನ ಪಡೆಯಬಹುದು.

ಹೊಸ ಉದ್ಯಮಗಳ ಅವಕಾಶ ಸೃಷ್ಟಿಸುವಲ್ಲಿ ಬಾಳೆ
ಕರ್ನಾಟಕ ಸರ್ಕಾರದ ಜಿಲ್ಲಾ ಪ್ರಾತಿನಿಧಿಕ ಬೆಳೆಗಳನ್ನು ಗುರುತಿಸಿದ್ದು, ಅದರಲ್ಲಿ ಬಾಳೆ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ಆದರಿಂದ ಬಾಳೆ ಬೆಳೆಗಾರರನ್ನು ಉದ್ಯಮಿಗಳನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.

1 ಬಾಳೆಯ ಮೋತೆ, ಹೂ, ದಿಂಡು, ದಿಂಡಿನೊಳಗಿನ ನೀರು ಕಿಡ್ನಿ ರಕ್ಷಕವಾಗಿದ್ದು, ಒಂದು ಲೀಟರ್‌ಗೆ 100 ರೂ.ಗಳಿಂದ 150 ರೂ.ಗಳವರೆಗೂ ಬೆಲೆ ಇದೆ. ಒಂದು ಬಾಳೆ ದಿಂಡಿನೊಳಗೆ 3-4 ಲೀ. ನೀರು ಸಿಗಲಿದೆ

2 ಬಾಳೆ ನಾರಿನಿಂದ ವಿವಿಧ ಚೀಲಗಳನ್ನು ತಯಾರಿಸಬಹುದು.

3 ಹಿರೇ ಗೊಬ್ಬರವನ್ನು ತಯಾರಿಸಲು ಸೂಕ್ತ. ಒಣ ಬಾಳೆ ಎಲೆಗಳನ್ನು ಹೊದಿಕೆಯಾಗಿ ತೋಟಕ್ಕೆ ಮುಚ್ಚಿದರೆ  ಕ್ರಮೇಣ ಕರಗಿ ನೈಸರ್ಗಿಕ ಪೊಟ್ಯಾಶ್ ತಯಾರಾಗುತ್ತದೆ.
4 ಬಾಳೆ ಎಲೆ ಮಾರಾಟ ಮಾಡಿ ಲಾಭ ಪಡೆಯಬಹುದು.
5 ಬಾಳೆಕಾಯಿ ಪೌಡರ್ ಅನ್ನು ಮೈದಾಗೆ ಪರ್ಯಾಯವಾಗಿ ಬಳಸಬಹುದು.
6 ಒಣಗಿಸಿದ ಬಾಳೆಹಣ್ಣಿನಿಂದ ತಿಂಡಿಗಳನ್ನು ತಯಾರಿಸಬಹುದು.
7 ಬಾಳೆ ಅತಿವೃಷ್ಟಿ-ಅನಾವೃಷ್ಠಿಗಳಲ್ಲಿ ಆಹಾರದ ಕೊರತೆ ನೀಗಿಸುವ ಹಣ್ಣಾಗಿದೆ.

ಬಾಳೆಯ ತಳಿಗಳು: ರೂಬಸ್ಟ್, ಕ್ಯಾವೆಂಡಿಸ್, ಗ್ರಾಂಡ್ ನೇನ್, ಮಧುಕರ, ರಸಬಾಳೆ, ಏಲಕ್ಕಿ ಬಾಳೆ, ಜೀರಿಗೆ ಬಾಳೆ, ಪುಟ್ಟ ಬಾಳೆ, ಪೂಜೆ ಬಾಳೆ, ಕರಿ ಬಾಳೆ, ಕಂದುಬಾಳೆ, ಬೂದುಬಾಳೆ, ಕೆಂಪು ಬಾಳೆ, ಜವರಿ ಬಾಳೆ

ಸಾವಯವ ಬೇಸಾಯ ಕ್ರಮಗಳು

1. ಒಂದು ಎಕರೆಗೆ 8-10 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಉಳುಮೆ ಮಾಡಿಕೊಳ್ಳಬೇಕು.

2. 1.5X1.5X1.5 ಅಡಿ ಆಳದ ಗುಂಡಿಗಳನ್ನು ಮಾಡಿಕೊಂಡು, ಪ್ರತಿ ಗುಂಡಿಯೊಳಗೆ 1/2 ಕೆ.ಜಿ. ಬೇವಿನ ಹಿಂಡಿ, 20 ಕೆಜಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮರಳು ಮತ್ತು ಕೆಂಪು ಮಣ್ಣಿನೊಂದಿಗೆ 1:1:1 ಪ್ರಮಾಣದಲ್ಲಿ ಮಿಶ್ರಣ ಮಾಡಿ ಗುಂಡಿಗೆ ತುಂಬಿ, 6X6 ಅಡಿ ಅಂತರದಲ್ಲಿ ಪ್ರತಿ ಎಕರೆಗೆ 1,200 ಗಿಡಗಳಂತೆ ನೆಡಬೇಕು.

3. ಅಂತರ ಬೆಳೆಯಾಗಿ ನೆಲಮಟ್ಟದಲ್ಲಿಯೇ ಬೆಳೆಯುವ ಬೆಳೆಗಳನ್ನು ಬೆಳೆದುಕೊಳ್ಳಬಹುದು.

ಸಾವಯವ ಪದ್ಧತಿಯ ಅಂಶಗಳು

1. ರಾಸಾಯನಿಕಗಳನ್ನು ಬಳಸಬಾರದು

2. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಹಿಂಡಿಗಳು, ಎರೆಹುಳು ಗೊಬ್ಬರ ಹಾಗೂ ಜೀವಾಮೃತ ರಸಸಾರ ಪಂಚಗವ್ಯ ಹಾಗೂ ಸಾವಯವ ಕಷಾಯಗಳು ಬಳಸಬೇಕು.

3. ಗೊಬ್ಬರಕ್ಕಾಗಿ ಹಸು, ಕುರಿ, ಮೇಕೆ, ಕೋಳಿ, ಕತ್ತೆ ಇತ್ಯಾದಿ ಪ್ರಾಣಿಗಳನ್ನು ಸಾಕಬೇಕು.

4. ಶಿಫಾರಸು ಮಾಡಿದ ಅಂತರಕ್ಕಿಂತ ಹೆಚ್ಚು ಹೊತ್ತಾಗಿ ಗಿಡಗಳನ್ನು ನೆಡಬಾರದು.

5. ಸಾರಜನಕ, ರಂಜಕ, ಪೋಷಕಾಂಶಗಳನ್ನು ಪೂರೈಸಲು ಅಜಟೋ ಬ್ಯಾಕ್ಟರ್ 50 ಗ್ರಾಂ ಪಿಎಸ್‌ಬಿ 50 ಗ್ರಾಂ ಮತ್ತು ವ್ಯಾನ್ 100 ಗ್ರಾಂ ಜೈವಿಕ ಗೊಬ್ಬರವನ್ನು ಪ್ರತಿ ಗಿಡಕ್ಕೆ ಪ್ರತಿವರ್ಷ
ಕೊಡಬೇಕು.

6. ಕಳೆಗಳನ್ನು ನಿಯಂತ್ರಿಸಲು ತೋಟಕ್ಕೆ ಹೊದಿಕೆ ಯಾಗಿ ಒಣ ಬಾಳೆ ಎಲೆಗಳನ್ನು ಮುಚ್ಚಬೇಕು ಮತ್ತು ಕೈಗಳಿಂದ ಕಳೆ ಕೀಳಿಸಬೇಕು.

7. ತೋಟದ ಮಧ್ಯೆ ಮಧ್ಯೆ ಚೆಂಡು ಹೂ ಗಿಡ ಗಳನ್ನು ಬೆಳೆಸಬೇಕು ಹಾಗೂ ಎರಡರಿಂದ ಮೂರು ಬಾರಿ ಬೇವಿನ ಎಣ್ಣೆ ಸಿಂಪಡಣೆ ಮಾಡಬೇಕು.

(ಟಿಶೂ ಕಲ್ಲ‌ ಬಾಳೆ ಸಸಿಗಳನ್ನು ತೋಟಗಾ ರಿಕಾ ಇಲಾಖೆ ಅಭಿವೃದ್ಧಿಪಡಿಸಿರುವ ಸಮಗ್ರ ಜೈವಿಕ ಕೇಂದ್ರ ರಂಗಸಮುದ್ರ, ಹುಳಿಮಾವು, ಬೆಂಗಳೂರುಹಾಗೂ ತೋಟಗಾರಿಕಾ ಇಲಾಖೆಯ ಶಿಫಾರಸ್ಸು ಮಾಡುವ ಕೇಂದ್ರಗಳಿಂದಲೇ ಆಯ್ಕೆ ಮಾಡಿಕೊಳ್ಳಬೇಕು.)

andolana

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

48 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

1 hour ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

2 hours ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

2 hours ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

3 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

3 hours ago