ಚಿತ್ರ ಮಂಜರಿ

ಕೆಜಿಎಫ್‌ಗೂ ಮುಂಚೆ ಅವನು ಯಾರು? ಯಶ್ ಬಗ್ಗೆ ನಾಲಿಗೆ ಹರಿಬಿಟ್ಟ ಅಲ್ಲು ಅರ್ಜುನ್ ತಂದೆ!

ರಾಕಿಂಗ್ ಸ್ಟಾರ್ ಯಶ್.. ಸಿಲ್ಲಿ ಲಲ್ಲಿ ರೀತಿಯ ಧಾರಾವಾಹಿಗಳಲ್ಲಿ ಸಣ್ಣ ಪಾತ್ರ ನಿರ್ವಹಿಸಿ ಬಳಿಕ ತನ್ನ ಪ್ರತಿಭೆಯಿಂದ ಚಲನಚಿತ್ರಗಳಲ್ಲಿ ಸಣ್ಣ ರೋಲ್‌ಗಳನ್ನು ಗಿಟ್ಟಿಸಿಕೊಂಡು ನಾಯಕ ನಟನಾಗಿ ಬಡ್ತಿ ಪೆಡೆದು ಸ್ಟಾರ್ ಆದ ನಟ.

ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಬಣ್ಣದ ಲೋಕಕ್ಕೆ ಕಾಲಿಡುವ ಪ್ರತಿಭೆಗಳನ್ನು ಕೈಬಿಡದ ಕನ್ನಡ ಸಿನಿ ರಸಿಕರು ಯಶ್ ಅವರನ್ನೂ ಸಹ ಮೆಚ್ಚಿಕೊಂಡರು, ಅವರ ಚಿತ್ರಗಳನ್ನು ಒಪ್ಪಿಕೊಂಡರು. ನೋಡ ನೋಡುತ್ತಿದ್ದಂತೆ ಯಶ್ ಕನ್ನಡ ಚಿತ್ರರಂಗದಲ್ಲಿದ್ದ ಬೆರಳೆಣಿಕೆಯಷ್ಟು ಸ್ಟಾರ್ ಹೀರೊಗಳ ಪಟ್ಟಿ ಸೇರಿಬಿಟ್ಟರು.

ಹೀಗೆ ಕನ್ನಡ ಸಿನಿ ರಸಿಕರ ಪಾಲಿಗೆ ರಾಕಿಂಗ್ ಸ್ಟಾರ್ ಆದ ಯಶ್ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕೆಜಿಎಫ್ ಚಿತ್ರದ ಯಶಸ್ಸನ್ನು ಕೆಲವರು ಲಕ್ ಎಂದರೆ ಇನ್ನೂ ಕೆಲವರು ಶ್ರಮ ಎಂದು ಕೊಂಡಾಡಿದರು. ಕೆಜಿಎಫ್ ಮಾದರಿಯಲ್ಲಿಯೇ ಬಂದ ಇನ್ನುಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನೆಲಕಚ್ಚಿದ ಮೇಲೆ ಕೆಜಿಎಫ್ ಗೆದ್ದದ್ದು ಲಕ್‌ನಿಂದ ಎನ್ನುವುದು ಮೂರ್ಖತನವೇ ಸರಿ ಎನ್ನಬಹುದು.

ಇನ್ನು ಕೆಜಿಎಫ್ ಹಿಟ್ ಆದ ಬಳಿಕ ಯಶ್ ಯಾರೆಂದು ಎಲ್ಲರಿಗೂ ತಿಳಿಯಿತು, ಆ ಚಿತ್ರ ಬಾರದೇ ಇದ್ದಿದ್ದರೆ ಆತನ ಹೆಸರು ಬಹುತೇಕರಿಗೆ ತಿಳಿಯುತ್ತಿರಲಿಲ್ಲ ಎಂದು ಇತ್ತೀಚೆಗಷ್ಟೇ ತೆಲುಗು ನಟ ರವಿತೇಜ ಹೇಳಿಕೆಯೊಂದನ್ನು ನೀಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಈ ಸಾಲಿಗೆ ತೆಲುಗು ನಟ ಅಲ್ಲು ಅರ್ಜುನ್ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಸಹ ಸೇರ್ಪಡೆಗೊಂಡಿದ್ದಾರೆ.

ಯುಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಚಿತ್ರಗಳ ಬಜೆಟ್ ನಟರಿಂದ ಹೆಚ್ಚಾಗುತ್ತಿಲ್ಲ, ಹೆಚ್ಚಿನ ಬಜೆಟ್ ಇರುವ ಚಿತ್ರಗಳಲ್ಲಿ ಸ್ಟಾರ್‌ಗಳು ನಟಿಸುತ್ತಿದ್ದಾರೆ ಅಷ್ಟೇ ಎಂದು ಹೇಳಿಕೆಯನ್ನು ನೀಡಿದ ಅಲ್ಲು ಅರವಿಂದ್ ಇದಕ್ಕೆ ಉದಾಹರಣೆಯಾಗಿ ಯಶ್ ಹಾಗೂ ಕೆಜಿಎಫ್ ಚಿತ್ರವನ್ನು ತೆಗೆದುಕೊಂಡಿದ್ದಾರೆ.

“ಕೆಜಿಎಫ್ ಬರುವ ಮುಂಚೆ ಆತ ಎಂತಹ ದೊಡ್ಡ ಸ್ಟಾರ್ ಹೇಳಿ, ಸಿನಿಮಾಗೆ ಹೆಚ್ಚು ಮೊತ್ತ ಹಾಕಿ ನಿರ್ಮಿಸಿದ ಕಾರಣ ಆತ ಸ್ಟಾರ್ ಆದ” ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಯಶ್ ಅಭಿಮಾನಿಗಳು ನಮ್ಮ ನಟ ಸ್ವಂತ ಪ್ರತಿಭೆಯಿಂದ ಬೆಳೆದವರು, ನಿಮ್ಮ ಮಕ್ಕಳ ಹಾಗೆ ನೆಪೋ ಕಿಡ್ ಅಲ್ಲ ಎಂದು ಅಲ್ಲು ಅರವಿಂದ್ ವಿರುದ್ಧ ಟ್ರೋಲ್ ಚಾಟಿ ಬೀಸಿದ್ದಾರೆ.

andolana

Recent Posts

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

41 mins ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

2 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

3 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

5 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

8 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

8 hours ago