ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ನ ಎರಡನೇ ಚಿತ್ರ ಕಾಟೇರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಹು ದಿನಗಳ ಬಳಿಕ ದರ್ಶನ್ ಪ್ರತಿಭೆಗೆ ತಕ್ಕನಾದ ಚಿತ್ರ ಬಂದಿದೆ ಎಂದು ದರ್ಶನ್ ಅಭಿಮಾನಿಗಳು ಹಾಗೂ ಒಂದೊಳ್ಳೆ ಅಂಶ ಇರುವ ಸಿನಿಮಾ ಬಿಡುಗಡೆಯಾಗಿದೆ ಎಂದು ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದಾರೆ.
ಇನ್ನು ಕಾಟೇರ ಬಿಡುಗಡೆಯಾದಾಗಿನಿಂದಲೂ ಸಹ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಸಹ ಗೆಲುವನ್ನು ಕಂಡಿದ್ದಾನೆ. ಹೀಗಾಗಿ ಕಾಟೇರ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನೂ ಸಹ ಹಂಚಿಕೊಂಡಿದ್ದು ಸಂಭ್ರಮಿಸಿದೆ. ಚಿತ್ರದ ನಿರ್ದೇಶಕ ತರುಣ್ ಸುಧೀರ್ ತಮ್ಮ ಕಾಟೇರ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಗೆ ಮನಸೋತು ಟ್ವೀಟ್ವೊಂದನ್ನು ಮಾಡಿದ್ದು, ಚಿತ್ರಕ್ಕೆ ಬೆಂಬಲ ನೀಡಿದ ಹಾಗೂ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ತರುಣ್ ಸುಧೀರ್ ಹಂಚಿಕೊಂಡ ಪೋಸ್ಟ್ ಈ ಕೆಳಕಂಡಂತಿದೆ:
ಅಭಿಮಾನಿಗಳು. ರೈತರು. ನಮ್ಮ ಕನ್ನಡ ಚಿತ್ರೋದ್ಯಮ ಮತ್ತು ಹಲವಾರು ಮನಗಳಿಗೆ ನಾವು ಸಾಕಷ್ಟು ಋಣಿಯಾಗಿದ್ದೇವೆ. ಹೊಸದೊಂದು ಕಥೆ ಹೇಳುವ ಸಲುವಾಗಿ ಶುರುವಾದ ಪ್ರಯತ್ನ. ಹಲವಾರು ದೈತ್ಯರ ಕೃಷಿ, ನಿಮ್ಮ ಕಾಟೇರ. ಇಂದು, ನಾವು ಕಲ್ಪಿಸಿಕೊಂಡದ್ದನ್ನು, ಅರಿತುಕೊಂಡಿರುವುದನ್ನು ನಿಜ ಸ್ವರೂಪದಲ್ಲಿ ಬೆಳ್ಳಿ ಪರದೆಯ ಮೇಲೆ ನೋಡಲು ಬಹಳ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ.
ನಾನು ಹಿಂತಿರುಗಿ ನೋಡಿದಾಗ, ನನಗೆ ಕಾಣುವುದು ನಿಮ್ಮೆಲ್ಲರ ಸತತ ಪ್ರೀತಿ, ಬೆಂಬಲ ಮತ್ತು ಆಶೀರ್ವಾದ. ದರ್ಶನ್ ಸರ್, ರಾಕ್ಲೈನ್ ಸರ್ ಮತ್ತು ನನ್ನ ತಂಡಕ್ಕೆ ನಾನು ಎಂದೆಂದೂ ಆಭಾರಿ, ನನ್ನ ಮೇಲಿನ ನಿಮ್ಮ ಬಲವಾದ ನಂಬಿಕೆಯಿಂದ ಕಾಟೇರ ಸಾಧ್ಯವಾಯಿತು.
ಸೆಲೆಬ್ರಿಟಿಗಳು. ನೀವು ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಪ್ರೇರಣೆಯಾಗಿ ನಿಂತಿದ್ದೀರ. ನೀವು ಕಾಟೇರ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿದ ರೀತಿ ನಮ್ಮನ್ನು ತುಂಬಾ ಭಾವುಕರನ್ನಾಗಿಸುತ್ತದೆ! ಇದಕ್ಕಿಂತ ಹೆಚ್ಚು ಇನ್ನೇನು ಕೇಳಲು ಸಾಧ್ಯ!! ಮತ್ತೊಮ್ಮೆ ಎಲ್ಲರಿಗೂ ಮನದಾಳದ ಧನ್ಯವಾದಗಳು!
ಚಿತ್ರದ ಪ್ರತಿ ಹಂತದಲ್ಲೂ ಬೆಂಬಲ ನೀಡಿದ ಮಾಧ್ಯಮ ಮಿತ್ರರಿಗೆ ವಿಶೇಷ ಧನ್ಯವಾದಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಅಭಿಮಾನಿಯ ಕಾಟೇರ, ಅಭಿಮಾನಿಗಳಿಗಾಗಿ,
ನಿಮ್ಮ,
ತರುಣ್ ಕಿಶೋರ್ ಸುಧೀರ್
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ…
ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಗೆ ಲಕ್ಷಾಂತರ ರೂ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ಅರಕಲಗೂಡು ತಾಲ್ಲೂಕಿನ…
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಿಹಿ ಸುದ್ದಿಯನ್ನು ಡಾಲಿ ಧನಂಜಯ್…
ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ…
ನವದೆಹಲಿ: ಈ ಬಾರಿ ಮೇ ತಿಂಗಳಿನಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು…
ಇಸ್ಲಾಮಾಬಾದ್: ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್ನ ಉನ್ನತ ಕಮಾಂಡರ್ ಪಾಕಿಸ್ತಾನದ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಉನ್ನತ ಉಗ್ರಗಾಮಿ ಕಾರ್ಯಕರ್ತನನ್ನು ಅಪರಿಚಿತ ವಾಹನವೊಂದು…