ಚಿತ್ರ ಮಂಜರಿ

ಹಾಲಿವುಡ್‌ ಅಂಗಳದಲ್ಲಿ ಸಲಾರ್ : ಯಾವಾಗ ರಿಲೀಸ್‌ ಆಗ್ತಿದೆ ಗೊತ್ತಾ ?

ಒಂದರ ಹಿಂದೊಂದು ಸಿನಿಮಾ ಫ್ಲಾಪ್ ಆಗುತ್ತಿದ್ದರೂ ಪ್ರಭಾಸ್ ಹವಾ ಮಾತ್ರ ಕಮ್ಮಿಯಾಗಿಲ್ಲ. ನನ್ನ ಹಾದಿ ನನ್ನದು ಎನ್ನುತ್ತಾ ನುಗ್ಗುತ್ತಿದ್ದಾರೆ. ಇದೀಗ ಸಲಾರ್ ಬಿಡುಗಡೆಗೆ ಸಿದ್ಧವಾಗಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಆದರೆ ಇಂಗ್ಲಿಷ್ ವರ್ಶನ್ ಸಲಾರ್ ಯಾವಾಗ ಬರಲಿದೆ? ಅದಕ್ಕೆ ಬೇರೊಂದು ದಿನ ಯಾಕೆ ಫಿಕ್ಸ್ ಮಾಡಿದರು? ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ.

ಸಾಹೋ, ರಾಧೇಶ್ಯಾಮ್ ಹಾಗೂ ಆದಿಪುರುಷ್. ಮೂರೂ ಸಿನಿಮಾಗಳು ಫ್ಲಾಪ್‌ ಆಗಿದ್ದರಿಂದ ಪ್ರಭಾಸ್ ಕತೆ ಮುಗಿಯಿತೆಂದು ಕಾದಿದ್ದವರಿಗೆ ಸಲಾರ್ ಹಾಗೂ ಕಲ್ಕಿ ಕೊಟ್ಟ ಕಿಕ್ ಹೇಗಿತ್ತೆಂದು ಎಲ್ಲರಿಗೂ ಗೊತ್ತಿದೆ. ಈ ಎರಡು ಸಿನಿಮಾಗಳ ಟೀಸರ್ ಹಬ್ಬ ಮಾಡಿದ್ದು ಇಡೀ ವಿಶ್ವವನ್ನೇ ಸೆಳೆದಿದ್ದವು. ಪ್ರಭಾಸ್ ಫ್ಯಾನ್ಸ್ ಮತ್ತೆ ಮೈ ಕೊಡವಿ ಎದ್ದು ನಿಂತರು. ಪ್ರಭಾಸ್ ಕೂಡ ಹೊಸ ಹುರುಪಿನಿಂದ ಅಖಾಡಕ್ಕೆ ಇಳಿದರು. ಸದ್ಯಕ್ಕೆ ಸಲಾರ್, ಕಲ್ಕಿ ಹಾಗೂ ರಾಜಾ ಡಿಲಕ್ಸ್ ಬಾಕಿ ಕೆಲಸ ಮುಗಿಸುತ್ತಿದ್ದಾರೆ. ಈಗಲೇ ಮತ್ತೊಂದು ಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.

ಮೂರು ಸಿನಿಮಾ ಸೋತದ್ದನ್ನು ಫ್ಯಾನ್ಸ್ ಮರೆತಿದ್ದಾರೆ. ಸಲಾರ್ ಇನ್ನೆರಡು ತಿಂಗಳಿಗೆ ಮೆರವಣಿಗೆ ಹೊರಡಲಿದೆ. ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಅದರ ಇಂಗ್ಲಿಷ್ ವರ್ಶನ್ ಕೂಡ ನಿರ್ಮಾಣವಾಗುತ್ತಿದೆ. ಅದು ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಪಕ್ಕಾ ದಿನಾಂಕ ಸಿಗದಿದ್ದರೂ. ಅಕ್ಟೋಬರ್ ಎರಡನೇ ವಾರದಲ್ಲಿ ಹಾಲಿವುಡ್‌ನಲ್ಲಿ ಪ್ರಭಾಸ್ ಅಬ್ಬರಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

lokesh

Recent Posts

ಹನೂರು | ಪ್ರತ್ಯೇಕ ಮನೆಕಳ್ಳತನ ; ಐವರ ಬಂಧನ

ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…

1 hour ago

ವರದಿ ಬಿಟ್ಟು ಕ್ಷೇತ್ರ ಭೇಟಿ ಮಾಡಿ : ಅಧಿಕಾರಿಗಳಿಗೆ ಎಚ್‌ಡಿಕೆ ಸೂಚನೆ

ಮೈಸೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಅವುಗಳನ್ನು…

1 hour ago

ಗೆಲ್ಲಿಸಿಕೊಂಡು ಬರಲಿ ನೋಡೋಣ : ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು

ಮೈಸೂರು : ನಾನು ಅಹಿಂದ ಚಾಂಪಿಯನ್‌ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್‌ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು…

2 hours ago

ಪಶ್ಚಿಮ ಬಿಕ್ಕಟ್ಟು : ಸಂಘರ್ಷ ಸಂಧಾನ ಸಭೆ ಮುಂದೂಡಿಕೆ?

ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಇರಾನ್-ಅಮೇರಿಕಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಂದು ನಡೆಯಬೇಕಿದ್ದ…

2 hours ago

ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು ; 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…

3 hours ago

ಹೊಗೇನಕಲ್‌ : ನೀರಿನ ಸೆಳೆತಕ್ಕೆ ಸಿಲುಕಿ ಓರ್ವ ಸಾವು

ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…

3 hours ago