ಬೆಂಗಳೂರು: ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ಸೈಮಾ, ಐಫಾ, ಫಿಲ್ಮ್ಫೇರ್ ಹೆಸರಿನಡಿಯಲ್ಲಿ ನೀಡಲಾಗುತ್ತಿತ್ತು. ಆದರೆ ಕನ್ನಡದವರಿಗೆಂದೇ ಪ್ರತ್ಯೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲ ಎಂಬ ಕೂಗು, ಕೊರಗು ಈ ಹಿಂದಿನಿಂದಲೂ ಸಹ ಕೇಳಿಬಂದಿತ್ತು.
ಈ ಕೊರಗಿಗೆ ಇದೀಗ ಫುಲ್ಸ್ಟಾಪ್ ಬಿದ್ದಿದ್ದು ನಂದಿ ಅವಾರ್ಡ್ಸ್ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಿ ಕಲಾವಿದರನ್ನು ಪ್ರಶಂಸಿಸಲಾಗುತ್ತಿದೆ. ಮೊದಲ ನಂದಿ ಅವಾರ್ಡ್ಸ್ ಕಾರ್ಯಕ್ರಮ ಡಿಸೆಂಬರ್ 6ರಂದು ನಗರದ ಒರಾಯನ್ ಮಾಲ್ನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಚಿತ್ರಗಳಿಗೆ ಯಾವ ಕೆಟಗರಿ ಅಡಿಯಲ್ಲಿ ಪ್ರಶಸ್ತಿ ಲಭಿಸಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಅತ್ಯುತ್ತಮ ಬಯೋಪಿಕ್: ವಿಜಯಾನಂದ
2. ಲೆಜೆಂಡರಿ ನಾಯಕಿ : ಲೀಲಾವತಿ
3. ಜೀವಮಾನ ಸಾಧನೆ ಪ್ರಶಸ್ತಿ : ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್
4. ಅತ್ಯುತ್ತಮ ಡಾಕ್ಯುಮೆಂಟರಿ: ಗಂಧದಗುಡಿ
5. ಅತ್ಯುತ್ತಮ ಉದಯೋನ್ಮುಖ ನಟ: ವಿಕ್ರಮ್ ರವಿಚಂದ್ರನ್
6. ಅತ್ಯುತ್ತಮ ಉದಯೋನ್ಮುಖ ನಟಿ: ರೀಷ್ಮ ನಾಣಯ್ಯ
7. ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು
8. ಅತ್ಯುತ್ತಮ ಹಾಸ್ಯನಟಿ: ಹೇಮಾದತ್
9. ಅತ್ಯುತ್ತಮ ಪೋಷಕನಟಿ – ವೀಣಾ ಸುಂದರ್
10. ಅತ್ಯುತ್ತಮ ನಟ ( ಕ್ರಿಟಿಕ್ಸ್ ) : ಸಂಚಾರಿ ವಿಜಯ್
11. ಅತ್ಯುತ್ತಮ ಸಂಭಾಷಣಾಕಾರ: ಮಾಸ್ತಿ
12. ಅತ್ಯುತ್ತಮ ಚಿತ್ರ: ಚಾರ್ಲಿ 777
13. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ
14. ಅತ್ಯುತ್ತಮ ನಟ: ರಿಷಬ್ ಶೆಟ್ಟಿ
15. ಅತ್ಯುತ್ತಮ ನಟಿ: ಸಪ್ತಮಿ ಗೌಡ
16. ಅತ್ಯುತ್ತಮ ಖಳನಟ: ಡಾಲಿ ಧನಂಜಯ್
17. ಅತ್ಯುತ್ತಮ ಪೋಷಕನಟ: ಲೂಸ್ ಮಾದ ಯೋಗಿ
18. ಅತ್ಯುತ್ತಮ ನಟಿ ( ಕ್ರಿಟಿಕ್ಸ್ ) : ಹರಿಪ್ರಿಯಾ, ಅನು ಪ್ರಭಾಕರ್
19. ಬೆಸ್ಟ್ ಪ್ರೆಸ್ ಫೋಟೊಗ್ರಫರ್ : ಕೆಎನ್ ನಾಗೇಶ್ ಕುಮಾರ್
20. ಬೆಸ್ಟ್ ಪಿಆರ್ : ನಾಗೇಂದ್ರ
ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್ಪೋಸ್ಟ್ ಜಕ್ಕಳ್ಳಿ ಸಮೀಪವಿರುವ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ವೆಚ್ಚದ…
ಪಾಟ್ನಾ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್ಸಿಟಿಸಿಗೆ 10…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ…
ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ…
ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ವಲಯದಲ್ಲಿ ಮತ್ತೆರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹುಲಿಗಳ ಚಲನವಲನದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಜೆಟ್ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು…