ಚಿತ್ರ ಮಂಜರಿ

ವಂಶಿಕಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ: ಯಶಸ್ವಿನಿ, ಆನಂದ್‌ ಹೇಳಿದ್ದೇನು?

ಕನ್ನಡ ನಟ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಪುತ್ರಿ ವಂಶಿಕಾ. ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ವಿನ್ನರ್ ಆಗಿರುವ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ಎಂಬುವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಎನ್‌ಎನ್‌ ಪ್ರೊಡಕ್ಷನ್ಸ್’ ಸಂಸ್ಥೆ ಮುಖಾಂತರ ಬೇಬಿ ಕಾಂಟೆಸ್ಟ್, ಕಿಡ್ಸ್ ಮಾಡೆಲಿಂಗ್, ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕೆಲ ಪೋಷಕರಿಂದ ನಿಶಾ ನರಸಪ್ಪ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ವಂಶಿಕಾ ಹೆಸರನ್ನ ಬಳಸಿಕೊಂಡು ವಂಚನೆ ಮಾಡಿರುವ ನಿಶಾ ನರಸಪ್ಪ ವಿರುದ್ಧ ಯಶಸ್ವಿನಿ ಆನಂದ್ ಹಾಗೂ ಮೋಸ ಹೋದ ಕೆಲ ಪೋಷಕರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಏನಿದು ಪ್ರಕರಣ?

‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ವಂಶಿಕಾ ಹಾಗೂ ತಾಯಿ ಯಶಸ್ವಿನಿ ವಿಜೇತರಾದ ಬಳಿಕ ಅವರಿಗೆ ನಿಶಾ ನರಸಪ್ಪ ಎಂಬುವರು ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯಗೊಂಡಿದ್ದಾರೆ. ಎನ್‌ಎನ್‌ ಪೊಡಕ್ಷನ್ಸ್ ಅಡಿಯಲ್ಲಿ ಜರುಗಿದ ಬೇಬಿ ಕಾಂಟೆಸ್ಟ್‌ಗೆ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಂಶಿಕಾ, ಯಶಸ್ವಿನಿ, ವಿಂಧ್ಯಾ, ಜಾಹ್ನವಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಕ್ಕಳ ಟ್ಯಾಲೆಂಟ್‌ ಪ್ರೋತ್ಸಾಹಿಸುತ್ತಾರೆ ಎಂದು ಎನ್‌ಎನ್‌ ಪ್ರೊಡಕ್ಷನ್ಸ್ ಸಂಸ್ಥೆಯನ್ನ ಯಶಸ್ವಿನಿ ಮಾಸ್ಟರ್‌ ಆನಂದ್‌ ಮುಂತಾದವರು ಪ್ರೊಮೋಟ್ ಮಾಡಿದ್ದರು.

‘ವಂಶಿಕಾ ಜೊತೆಗೆ ಆಡ್ ಶೂಟ್, ರಿಯಾಲಿಟಿ ಶೋ ಚಿತ್ರೀಕರಣ, ಆಲ್ಬಂ ಶೂಟಿಂಗ್ ಮಾಡ್ತೀವಿ’ ಎಂದು ಸುಳ್ಳು ಹೇಳಿ ಕೆಲ ಪೋಷಕರಿಂದ ನಿಶಾ ನರಸಪ್ಪ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರಂತೆ. ಹಣ ಪಡೆದ ಬಳಿಕ ಪೋಷಕರ ಫೋನ್ ಹಾಗೂ ಮೆಸೇಜ್‌ಗಳಿಗೆ ನಿಶಾ ನರಸಪ್ಪ ರೆಸ್ಪಾಂಡ್ ಮಾಡುತ್ತಿರಲಿಲ್ಲವಂತೆ. ಹಣ ಪಡೆದ ಪೋಷಕರನ್ನ ಸೋಷಿಯಲ್ ಮೀಡಿಯಾದಲ್ಲಿ ನಿಶಾ ನರಸಪ್ಪ ಬ್ಲಾಕ್ ಮಾಡುತ್ತಿದ್ದರಂತೆ. ಈ ಬಗ್ಗೆ ಯಶಸ್ವಿನಿ ಅವರಿಗೆ ಕೆಲ ಪೋಷಕರು ಮಾಹಿತಿ ನೀಡಿದ್ದರು. ಇದಾದ್ಮೇಲೆ ಯಶಸ್ವಿನಿ ಮಾಸ್ಟರ್ ಆನಂದ್‌ ಹಾಗೂ ವಂಶಿಕಾ ‘ಎನ್‌ಎನ್‌ ಪ್ರೊಡಕ್ಷನ್ಸ್‌’ಗೆ ಯಾವುದೇ ರೀತಿಯ ಪ್ರಚಾರ ನೀಡಲಿಲ್ಲ.
ಇತ್ತೀಚೆಗೆ ಮತ್ತೆ ವಂಶಿಕಾ ಹೆಸರನ್ನ ದುರ್ಬಳಕೆ ಮಾಡಿಕೊಂಡು ನಿಶಾ ನರಸಪ್ಪ ಕೆಲ ಪೋಷಕರಿಂದ ಹಣ ಪೀಕಿದ್ದಾರಂತೆ. ನಿಶಾ ನರಸಪ್ಪ ಅವರನ್ನ ಹಿಡಿದು ಕೆಲ ಪೋಷಕರು ಸದಾಶಿವನಗರದ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಿಶಾ ನರಸಪ್ಪ ವಿರುದ್ಧ ಯಶಸ್ವಿನಿ ಮಾಸ್ಟರ್ ಆನಂದ್ ಮತ್ತು ಪೋಷಕರು ದೂರು ದಾಖಲಿಸಿದ್ದಾರೆ.

ಯಶಸ್ವಿನಿ ಮಾಸ್ಟರ್ ಆನಂದ್ ಹೇಳುವುದೇನು?

‘’ಎನ್‌ಎನ್‌ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನ ನಿಶಾ ನರಸಪ್ಪ ನಡೆಸುತ್ತಿದ್ದರು. ನಾವೂ ಕೂಡ 4 ತಿಂಗಳು ಪ್ರೊಮೋಷನ್ ಮಾಡಿದ್ವಿ. ಆಮೇಲೆ ನಮಗೆ ಇನ್ಸ್ಟಾಗ್ರಾಮ್‌ನಿಂದ ಮೆಸೇಜ್ ಬರೋಕೆ ಶುರುವಾಯಿತು. ‘’ನೀವು ಪ್ರಮೋಟ್ ಮಾಡಿದ್ರಿ. ನಾವೆಲ್ಲಾ ಅವರಿಗೆ ಹಣ ನೀಡಿದ್ದೇವೆ’’ ಎಂಬ ಮೆಸೇಜ್ ಬರಲಾರಂಭಿಸಿತು. ಜನರ ದುಡ್ಡಿನಲ್ಲಿ ಮೋಸ ಆಗುತ್ತಿದೆ ಅನ್ನೋದು ನಮಗೆ ಗೊತ್ತಾಯಿತು. ಹಣ ಪಡೆದ ಮೇಲೆ ಆಕೆ ರಿಪ್ಲೈ ಮಾಡದೇ ಇರುವುದು, ನಂಬರ್ ಬ್ಲಾಕ್ ಮಾಡ್ತಿರೋದು ನಮಗೆ ತಿಳಿಯಿತು. ಅದು ನನಗೆ ಗೊತ್ತಾದಾಗ.. ನಿಶಾ ನರಸಪ್ಪ ಅವರ ಬಳಿ ನಾವು ಮಾತನಾಡಿದ್ವಿ. ‘’ಸಮಸ್ಯೆ ಪರಿಹಾರ ಮಾಡಿಕೊಳ್ಳಿ. ಅಲ್ಲಿಯವರೆಗೂ ನಾವು ಪ್ರಮೋಷನ್ ಮಾಡಲ್ಲ’’ ಅಂತ ನಾವು ಹೇಳಿದ್ವಿ. ಇದಾಗಿ 6 ತಿಂಗಳ ಮೇಲಾಯಿತು’’

‘’ಇತ್ತೀಚೆಗಷ್ಟೇ ವಂಶಿಕಾ ಹೆಸರನ್ನ ಹೇಳಿಕೊಂಡು ಆಲ್ಬಂ ಶೂಟ್, ಆಡ್ ಶೂಟ್, ಸಾಂಗ್ ಶೂಟ್, ಸಿನಿಮಾ ಶೂಟಿಂಗ್ ಇದೆ ಅಂತ ಬೇರೆ ಬೇರೆ ಪೇರೆಂಟ್ಸ್ ಬಳಿ ನಿಶಾ ಹಣ ಪಡೆದಿದ್ದಾಳೆ. ಹಣ ಕೊಟ್ಟ ಪೇರೆಂಟ್ಸ್ ನಮಗೆ ಮೆಸೇಜ್ ಮಾಡಿದ್ದಾರೆ. ಆಗ ಇದು ದೊಡ್ಡ ವಿಷಯ ಆಗಿದೆ ಅಂತ ಗೊತ್ತಾಯಿತು. ಈಗ ಪೇರೆಂಟ್ಸ್ ಒಬ್ಬರು ನಿಶಾರನ್ನ ಕರೆದು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ನಾನೂ ಸಹ ಪೊಲೀಸ್ ಸ್ಟೇಷನ್‌ಗೆ ಬಂದು ದೂರು ಕೊಟ್ಟಿದ್ದೇನೆ’’

‘’ನಿಶಾ ನರಸಪ್ಪ ನನಗೆ ಪರಿಚಯವಾಗಿದ್ದೇ ಇನ್ಸ್ಟಾಗ್ರಾಮ್‌ನಿಂದ. ನಮಗೆ ಅವಳ ಬ್ಯಾಕ್‌ಗ್ರೌಂಡ್ ಗೊತ್ತಿಲ್ಲ. ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮ ಮುಗಿದ್ಮೇಲೆ ಅವಳು ಅಪ್ರೋಚ್ ಮಾಡಿದಳು. ಮಕ್ಕಳ ಟ್ಯಾಲೆಂಟ್ ವಿಷಯ ಎಂಬ ಕಾರಣಕ್ಕೆ ನಾನೂ ಅವಳಿಗೆ ಸಪೋರ್ಟ್ ಮಾಡಿದ್ದೆ. ಅದು ಇಲ್ಲಿಯವರೆಗೂ ಬರುತ್ತೆ ಅಂತ ನಮಗೂ ಗೊತ್ತಿರಲಿಲ್ಲ. ನಮಗೂ ತುಂಬಾ ಬೇಜಾರಾಗಿದೆ. ಅವಳು ನಮಗೂ ಪೇಮೆಂಟ್ ಬ್ಯಾಲೆನ್ಸ್ ಇಟ್ಟಿದ್ದಾಳೆ. ನಮಗೆ ಆ ಪೇಮೆಂಟ್ ಬೇಡ. ಕಣ್ಣೀರಿನ ದುಡ್ಡು ನಮಗೆ ಬೇಡ. ಕೆಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಕೊಟ್ಟ ಪೇರೆಂಟ್ಸ್‌ನ ಬ್ಲಾಕ್ ಮಾಡುತ್ತಿದ್ದಳು. ವಂಶಿಕಾ ಹೆಸರನ್ನ ದುರ್ಬಳಕೆ ಮಾಡ್ತಿರೋದ್ರಿಂದ ನಾನು ದೂರು ಕೊಟ್ಟಿದ್ದೇನೆ’’ ಎಂದಿದ್ದಾರೆ ವಂಶಿಕಾ ತಾಯಿ ಯಶಸ್ವಿನಿ ಮಾಸ್ಟರ್ ಆನಂದ್.

ಮಾಸ್ಟರ್ ಆನಂದ್ ಹೇಳುವುದೇನು?

‘’ನಿಶಾ ನರಸಪ್ಪ ಯಾರು ಅಂತ ನಮಗೆ ಗೊತ್ತಿರಲಿಲ್ಲ. 8 ತಿಂಗಳ ಹಿಂದೆ ನನಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಬರೋಕೆ ಶುರುವಾಯಿತು. ನನ್ನ ಪತ್ನಿಗೂ ಮೆಸೇಜ್‌ಗಳು ಬಂದವು. ವಂಶಿಕಾ ಹೆಸರನ್ನ ನಿಶಾ ನರಸಪ್ಪ ಬಳಸಿಕೊಳ್ಳುತ್ತಿದ್ದರು. ನಾವು ಫಂಕ್ಷನ್‌ನಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನೂ ಅವರು ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಕೆಲವು ಪೇರೆಂಟ್ಸ್ ನಮ್ಮ ಗಮನಕ್ಕೆ ತಂದರು. ನಿಶಾ ನರಸಪ್ಪ ರೆಡ್ ಹ್ಯಾಂಡ್ ಆಗಿ ಇಂದು ಸಿಕ್ಕಿಹಾಕಿಕೊಂಡಿದ್ದಾರೆ’’

‘’ವಾಹಿನಿಗಳಲ್ಲಿ, ಸೀರಿಯಲ್‌ಗಳಲ್ಲಿ ಚಾನ್ಸ್ ಕೊಡಿಸ್ತೀನಿ ಅಂತೆಲ್ಲಾ ಬೇರೆ ಬೇರೆ ಪೇರೆಂಟ್ಸ್ ಬಳಿ ಹೇಳಿದ್ದಾರಂತೆ. ಪೇರೆಂಟ್ಸ್ ಕಡೆಯಿಂದ ಹಣ ಪಡೆದಿದ್ದಾರೆ. ಹಣ ತೆಗೆದುಕೊಂಡ ಬಳಿಕ ಆಕೆ ಯಾವುದೇ ರೀತಿ ಪ್ರತಿಕ್ರಿಯೆ ಕೊಟ್ಟಿಲ್ಲ. ಮಾಧ್ಯಮ ವರ್ಗದ ಪೇರೆಂಟ್ಸ್ ಹಣ ಕಳೆದುಕೊಂಡಿದ್ದಾರೆ’’ ಎಂದಿದ್ದಾರೆ ಮಾಸ್ಟರ್ ಆನಂದ್.

andolanait

Recent Posts

ಸೋಮವಾರಪೇಟೆ | ಕಾಜೂರಿನಲ್ಲಿ ಅಗ್ನಿ ಅವಘಡ ; ತಪ್ಪಿದ ಭಾರಿ ಅನಾಹುತ

​ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…

6 mins ago

ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಮುರ್ಮು

ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…

29 mins ago

ಗಣರಾಜ್ಯೋತ್ಸವ | ಸಂಪೂರ್ಣ ಭಾಷಣ ಓದಿದ ರಾಜ್ಯಪಾಲರು

ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…

40 mins ago

ಮೈಸೂರು | ಧ್ವಜಾರೋಹಣ ನೆರವೇರಿಸಿದ ಸಚಿವ ಮಹದೇವಪ್ಪ : ಸಂವಿಧಾನ ರಕ್ಷಿಸಲು ಕರೆ

ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…

50 mins ago

ಗಣರಾಜ್ಯೋತ್ಸವ ಸಂಭ್ರಮ : ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಧ್ವಜಾರೋಹಣ, ಪರೇಡ್‌ ಆರಂಭ

ಬೆಂಗಳೂರು : ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ…

2 hours ago

ಫ್ಲೀಸ್. . ಬಸ್ ನಿಲ್ಲಿಸಿ ಸಾರ್. . !

ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್‌ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು,…

2 hours ago