‘ಆದಿಪುರುಷ್’ ಸಿನಿಮಾವು 7000 ಪರದೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಹಿಂದೆ ಈ ಸಿನಿಮಾವು ಕೆಲ ವಿವಾದಗಳನ್ನು ಎದುರಿಸಿತ್ತು. ಈಗ ಈ ಸಿನಿಮಾ ವಿಚಾರವಾಗಿ ನೇಪಾಳದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ‘ಆದಿಪುರುಷ್’ ಸಿನಿಮಾದಲ್ಲಿ ಸೀತೆಯ ಕುರಿತಂತೆ ಇರುವ ಡೈಲಾಗ್ವೊಂದು ನೇಪಾಳದಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಟಿ ಮೇಯರ್ ಬಲೆನ್ ಶಾ ಸೋಶಿಯಲ್ ಮೀಡಿಯಾ ಪೋಸ್ಟ್
ಕಠ್ಮಂಡು ಮೆಟ್ರೊಪೊಲಿಟನ್ ಸಿಟಿ ಮೇಯರ್ ಬಲೆನ್ ಶಾ ಅವರು “ಆದಿಪುರುಷ್ ಸಿನಿಮಾದಲ್ಲಿ ಸೀತಾ ಡೈಲಾಗ್ ಬಗ್ಗೆ ಹೇಳಿದ್ದ ಡೈಲಾಗ್ ಸರಿ ಮಾಡಿಲ್ಲ ಎಂದರೆ ದೇಶದಲ್ಲಿ ಓಂ ರಾವುತ್ ಅವರ ಮುಂದಿನ ಸಿನಿಮಾಗಳು ಇಲ್ಲಿ ರಿಲೀಸ್ ಮಾಡೋದಿಲ್ಲ” ಎಂದು ಹೇಳಿದ್ದಾರೆ.
ಹಿಂದಿ ಸಿನಿಮಾ ರಿಲೀಸ್ ಮಾಡಲ್ಲ ಎಂದು ಎಚ್ಚರಿಕೆ
“ಜಾನಕಿ ಭಾರತದ ಮಗಳು ಎಂದು ಸಿನಿಮಾದಲ್ಲಿದೆ. ಇದು ಸತ್ಯವಲ್ಲ, ಜಾನಕಿ ನೇಪಾಳದ ಮಗಳು. ಆದಿಪುರುಷ್ ಸಿನಿಮಾದಲ್ಲಿರುವ ಈ ತಪ್ಪನ್ನು ಸರಿ ಮಾಡಿಲ್ಲ ಎಂದರೆ ಕಠ್ಮಂಡುವಿನಲ್ಲಿ ಹಿಂದಿ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂದು ಬಲೆನ್ ಶಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಮಾಯಣದ ಪ್ರಕಾರ ಸೀತೆ ಹುಟ್ಟಿದ್ದು ಎಲ್ಲಿ?
ಇದೇ ಕಾರಣಕ್ಕೆ ನೇಪಾಳದ ಸೆನ್ಸಾರ್ ಬೋರ್ಡ್ ಕೂಡ ಈ ಚಿತ್ರವನ್ನು ಹೋಲ್ಡ್ ಮಾಡಿಡಲು ನಿರ್ಧಾರ ಮಾಡಿದೆಯಂತೆ. ಇನ್ನು ‘ಆದಿಪುರುಷ್ ಟ್ರೇಲರ್ನಲ್ಲಿ ಸೀತೆ ಭಾರತದ ಮಗಳು ಎಂದಿದೆ. ರಾಮಾಯಣದ ಪ್ರಕಾರ ನೇಪಾಳದ ಜನಕಪುರದಲ್ಲಿ ಸೀತೆ ಜನಿಸುತ್ತಾಳೆ. ಆಮೇಲೆ ಅವಳನ್ನು ರಾಮ ಮದುವೆ ಆಗುತ್ತಾನೆ’ ಎಂದಿದೆ.
ಯಾರು ಯಾವ ಚಿತ್ರದಲ್ಲಿ ನಟಿಸಿದ್ದಾರೆ?
‘ಆದಿಪುರುಷ್’ ಸಿನಿಮಾವನ್ನು ಸುಮಾರು 500 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನ ಪಾತ್ರವನ್ನು ನಟ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಅವರು ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಜಯ್ ಅತುಲ್, ಸಚೇತ್ ಪರಂಪರಾ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಆದಿಪುರುಷ್ ಸಿನಿಮಾ ಹೇಗಿದೆಯಂತೆ?
ಈ ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್ ನಟನೆಗೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ವಿಎಫ್ಎಕ್ಸ್ ಚೆನ್ನಾಗಿಲ್ಲ ಎಂದು ದೂರಿದ್ದಾರೆ.
ಫ್ರೀ ಟಿಕೆಟ್ ವಿತರಣೆ
ನಟ ರಾಮ್ ಚರಣ್ ತೇಜ, ರಣಬೀರ್ ಕಪೂರ್, ಅಭಿಷೇಕ್ ಅಗರ್ವಾಲ್ ಸೇರಿದಂತೆ ಕೆಲವರು 10 ಸಾವಿರ ಟಿಕೆಟ್ಗಳನ್ನು ಅಸಹಾಯಕರಿಗೆ, ಮಕ್ಕಳಿಗೆ ನೀಡುತ್ತೇವೆ ಎಂದು ಹೇಳಿದ್ದರು. ಈ ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಕುತೂಹಲ ಶುರುವಾಗಿದೆ.
ಬಿಗ್ ಬಾಸ್ ಪ್ರಥಮ್ ಪೋಸ್ಟ್ ಏನು?
“ನನ್ನ ನಿಶ್ಚಿತಾರ್ಥ ಅರ್ಥಪೂರ್ಣವಾಗಿರಲಿ ಎಂಬ ಕಾರಣಕ್ಕೆ 200 ಜನ ಅಶಕ್ತರನ್ನು ಗುರುತಿಸಿ ಆದಿಪುರುಷ್ ಟಿಕೆಟ್ ಕೊಡ್ತಾ ಇದೀನಿ, ರಾಮ ಬರೀ ದೇವರಷ್ಟೇ ಅಲ್ಲ..ನನ್ನ ಪೂರ್ವಜರು. ಭಾರತೀಯರೆಲ್ಲರಿಗೂ ರಾಮನೇ ಪೂರ್ವಜ, ರಾಮನೇ ದೇವರು, ಆದಿಪುರುಷ್ ನಮ್ಮ ಹೆಮ್ಮೆ. ದಯವಿಟ್ಟು ಥಿಯೇಟರ್ಲ್ಲಿ ನೋಡಿ. ಕೈಮುಗಿದು ಪ್ರಾರ್ಥನೆ..” ಎಂದು ಒಳ್ಳೆ ಹುಡ್ಗ ಪ್ರಥಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೊಸದಿಲ್ಲಿ : ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ_ ಜಿ ರಾಮ್ _ ಜಿ ಎಂದು…
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು…
ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್ ಕಾಲೋನಿ ಹಾಗೂ ವಸೀಮ್ ಲೇಔಟ್ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ ಚಿತ್ರಕ್ಕೂ ಪೈರಸಿ…
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಎಚ್ಡಿಡಿ ಹೇಳಿಕೆ ಕುರಿತು ಬಿಜೆಪಿ…
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…