ಕಿರುತೆರೆ ವೀಕ್ಷಕರಿಗೆ ಸತತವಾಗಿ ವಿವಿಧ ಧಾರಾವಾಹಿ, ವಾರಾಂತ್ಯದಲ್ಲಿ ವಿಶೇಷ ಚಲನಚಿತ್ರಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಾ ಬರುತ್ತಿರುವ ಕನ್ನಡದ ಅತಿ ಹೆಚ್ಚು ಟಿಆರ್ಪಿ ಗಳಿಸುವ ಮನರಂಜನಾ ವಾಹಿನಿ ಜೀ ಕನ್ನಡ ಇತ್ತೀಚೆಗಷ್ಟೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನು ನಡೆಸಿದೆ.
ಈ ಕಾರ್ಯಕ್ರಮದಲ್ಲಿ ತಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕಲಾವಿದರ ಹಾಗೂ ಧಾರಾವಾಹಿಗಳನ್ನು ಆರಿಸಿ ಪ್ರಶಸ್ತಿಯನ್ನು ನೀಡಿ ಪ್ರಶಂಸಿಸಲಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ವೀಕ್ಷಕರಿಗೆ ತಮ್ಮ ನೆಚ್ಚಿನ ಕಲಾವಿದರು ಹಾಗೂ ಕಾರ್ಯಕ್ರಮಗಳಿಗೆ ವೋಟ್ ಮಾಡಲು ಜೀ ವಾಹಿನಿ ವೋಟ್ ಪೋಲ್ ತೆರೆದಿತ್ತು.
ಹೀಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಧಾರಾವಾಹಿಗಳಿಗೆ ಪ್ರಶಸ್ತಿ ದಕ್ಕಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನೆಚ್ಚಿನ ನಾಯಕ ನಟ- ಗೌತಮ್. ಅಮೃತಧಾರೆ
ಜೀ ಕನ್ನಡ ವರ್ಷದ ಉದಯೋನ್ಮುಖ ತಾರೆ- ಸಿಹಿ, ಸೀತಾ ರಾಮ ಧಾರಾವಾಹಿ
ಜನಪ್ರಿಯ ನಾಯಕ ನಟ- ಶ್ರೀರಾಮ, ಸೀತಾ ರಾಮ ಸೀರಿಯಲ್
ನೆಚ್ಚಿನ ಸೊಸೆ- ಲೀಲಾ, ಹಿಟ್ಲರ್ ಕಲ್ಯಾಣ ಸೀರಿಯಲ್
ನೆಚ್ಚಿನ ಹಾಸ್ಯ ಕಲಾವಿದ- ಆನಂದ್, ಅಮೃತಧಾರೆ ಸೀರಿಯಲ್
ನೆಚ್ಚಿನ ಸಹೋದರಿ- ಸುಮ, ಸ್ನೇಹಾ, ಸಹನಾ, ಪುಟ್ಟಕ್ಕನ ಮಕ್ಕಳು ಸೀರಿಯಲ್
ನೆಚ್ಚಿನ ಸ್ಟೈಲ್ ಐಕಾನ್ ಫೀಮೇಲ್- ಮಹಿಮಾ, ಅಮೃತಧಾರೆ ಸೀರಿಯಲ್
ಜನಪ್ರಿಯ ನಾಯಕ- ಕಂಠಿ, ಪುಟ್ಟಕ್ಕನ ಮಕ್ಕಳು ಸೀರಿಯಲ್
ನೆಚ್ಚಿನ ಸ್ನೇಹಿತ- ಅಶೋಕ, ಸೀತಾ ರಾಮ ಸೀರಿಯಲ್
ನೆಚ್ಚಿನ ರಿಯಾಲಿಟಿ ಶೋ- ಡಾನ್ಸ್ ಕರ್ನಾಟಕ ಡಾನ್ಸ್
ನೆಚ್ಚಿನ ನಾಯಕ ನಟ- ಶಿವಪ್ರಸಾದ್, ಭೂಮಿಗೆ ಬಂದ ಭಗವಂತ
ನೆಚ್ಚಿನ ಸಹೋದರ- ಜೀವನ್, ಅಮೃತಧಾರೆ
ನೆಚ್ಚಿನ ಅತ್ತೆ- ಸೀತಮ್ಮ, ಸತ್ಯ ಸೀರಿಯಲ್
ನೆಚ್ಚಿನ ಸೊಸೆ- ಸತ್ಯ, ಸತ್ಯ ಸೀರಿಯಲ್
ಜನಪ್ರಿಯ ಧಾರಾವಾಹಿ- ಸೀತಾರಾಮ
ನೆಚ್ಚಿನ ಆಂಕರ್- ಕುರಿ ಪ್ರತಾಪ್
ನೆಚ್ಚಿನ ಜೋಡಿ- ಕಂಠಿ- ಸ್ನೇಹಾ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಮಾವ- ದತ್ತ, ಶ್ರೀರಸ್ತು ಶುಭಮಸ್ತು
ಜೀ ಕನ್ನಡದ ಹಿರಿಯ ಸದಸ್ಯ- ಆನಂದ ಗುರೂಜಿ, ಮಹರ್ಷಿವಾಣಿ
ಜನಪ್ರಿಯ ನಾಯಕ ನಟಿ- ಭೂಮಿಕಾ, ಅಮೃತಧಾರೆ
ನೆಚ್ಚಿನ ಅಳಿಯ- ಕಾರ್ತಿಕ್, ಸತ್ಯ
ಜೀ ಕನ್ನಡದ ಹೆಮ್ಮೆ- ಉಮಾಶ್ರೀ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಧಾರಾವಾಹಿ- ಪುಟ್ಟಕ್ಕನ ಮಕ್ಕಳು
ಜನಪ್ರಿಯ ನಾಯಕಿ ನಟಿ- ಸೀತಾ, ಸೀತಾ ರಾಮ
ನೆಚ್ಚಿನ ಆಂಕರ್- ಶ್ವೇತಾ ಚೆಂಗಪ್ಪ
ಜನಪ್ರಿಯ ಆಂಕರ್- ಅನುಶ್ರೀ
ನೆಚ್ಚಿನ ನಾಯಕ ನಟಿ- ತುಳಸಿ, ಶ್ರೀರಸ್ತು ಶುಭಮಸ್ತು
ನೆಚ್ಚಿನ ನಾಯಕ ನಟಿ- ಗಿರಿಜಾ, ಭೂಮಿಗೆ ಬಂದ ಭಗವಂತ
ಜನಪ್ರಿಯ ಜೋಡಿ- ವೇದಾಂತ್ ಅಮೂಲ್ಯ, ಗಟ್ಟಿಮೇಳ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…
ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…
ಬೆಂಗಳೂರು: ಮುಡಾ ಕೇಸ್ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…
ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್ಐಟಿ…