ಚಿತ್ರ ಮಂಜರಿ

ಹಾಲಿವುಡ್‌ ನಟಿ ರಾಕ್ವೆಲ್​ ಇನ್ನಿಲ್ಲ

ವಾಷಿಂಗ್ಟನ್​: 1960ರ ದಶಕದಲ್ಲಿ ಮಾದಕ ತಾರೆ ಎಂದೇ ಹೆಸರು ಗಳಿಸಿದ್ದ ರಾಕ್ವೆಲ್​ ವೆಲ್ಚ್​​ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಇಹಲೋಕ ತ್ಯಜಿಸಿದ್ದಾರೆ. ಬುಧವಾರ (ಫೆ. 15)ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಅಮೆರಿಕ ಟ್ಯಾಬ್ಲೋಯ್ಡ್​ ನ್ಯೂಸ್​ ಅರ್ಗನೈಸೆಷನ್​ ಟಿಎಂಜೆಡ್​ ವರದಿ ಮಾಡಿದೆ.ಹಾಲಿವುಡ್​ನ ಉನ್ಮಾದದ ಬೆಡಗಿ: 1966 ಫ್ಯಾಂಟಸ್ಟಿಕ್​ ವೊಯೇಜ್​ ಮತ್ತು ಒನ್​ ಮಿಲಿಯನ್​ ಇಯರ್​ B. C ಚಿತ್ರದ ಮೂಲಕ ರಾಕ್ವೆಲ್​ ಹೆಸರು ಗಳಿಸಿದ್ದರು. B. C ಚಿತ್ರದಲ್ಲಿ ಒಂದೆರಡು ನಿಮಿಷದ ಪಾತ್ರದಲ್ಲಿ ಮಿಂಚಿದ್ದರೂ ತಮ್ಮ ಉಡುಪಿನಿಂದಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಕೊಂಚ ಹೆಚ್ಚು ಎನ್ನುವ ಮಾದಕತೆ ಜೊತೆ ಬಿಕಿನಿಯಲ್ಲಿ ಮಿಂಚಿದ್ದ ಅವರು, ಉದ್ಯಮದಲ್ಲಿ ಸೆಕ್ಸ್​​ ಸಿಂಬಲ್​ ಆಗಿ ರೂಪುಗೊಂಡರು. ಇದಾದ ಬಳಿಕ ವೆಲ್ವ್ ಸ್ಟಾರ್​ಡಮ್​ ಕೂಡ ಹೆಚ್ಚಿತ್ತು. 1960 ಮತ್ತು 1970ರ ದಶಕದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಅವರು ರೂಪುಗೊಂಡರು. ​
ಇನ್ನು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಬಾಚಿಕೊಂಡಿದ್ದಾರೆ. 1974ರಲ್ಲಿ ನಟಿಸಿದ್ದ ಮ್ಯೂಸಿಯಲ್​ ಕಾಮಿಡಿ ಚಿತ್ರ ದಿ ತ್ರಿ ಮುಸ್ಕಿಟೀರ್ಸ್​ ಸಿನಿಮಾಗಾಗಿ ಗೋಲ್ಡನ್​ ಗ್ಲೋಬ್​ನಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಇನ್ನು ನಟಿಯ ಸಾವಿನ ಕುರಿತು ತಿಳಿಸಿರುವ ​ಅಮೆರಿಕ ಮೂಲದ ಸುದ್ದಿ ಸಂಸ್ಥೆ ಫಾಕ್ಸ್​ ನ್ಯೂಸ್​, ವೆಲ್ಚ್​ ಸಿನಿ ಉದ್ಯಮದಲ್ಲಿ ಉನ್ಮಾದ ನಟಿಯಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಟಿವಿ ಮತ್ತು ನಾಟಕ ಮಾಧ್ಯಮಗಳಲ್ಲೂ ಗುರುತಿಸಿಕೊಂಡಿದ್ದರು.

andolanait

Recent Posts

ಟಿ.ನರಸೀಪುರ: ಕೆಎಸ್‌ಐಸಿ ಫ್ಯಾಕ್ಟರಿ ಆವರಣದಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಸ್ತಾವನೆ: ಬೀದಿಗಿಳಿದ ಕಾರ್ಮಿಕರು

ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್‌ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…

7 mins ago

ಕೇರಳ ಇನ್ನು ಮುಂದೆ ಕೇರಳಂ: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…

19 mins ago

ಉದ್ಯೋಗಾಕಾಂಕ್ಷಿಗಳ ಆಶೋತ್ತರ ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಜೆಡಿಎಸ್‌ ಆಕ್ರೋಶ

ಬೆಂಗಳೂರು: ಯುವಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಮೂರು ವರ್ಷ ಕಳೆಯತ್ತಾ ಬಂದರೂ ಒಂದೇ ಒಂದು…

30 mins ago

ಮಂಡ್ಯ| ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಸಿಇಓ ನಂದಿನಿ ಸೂಚನೆ

ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್‌ ಸಿಇಓ…

53 mins ago

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೀದಿಗಿಳಿದ ಉದ್ಯೋಗಾಕಾಂಕ್ಷಿಗಳು

ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ…

1 hour ago

ಕಾಂತಾರ ವಿವಾದ: ನಟ ರಣವೀರ್‌ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ನಟ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-‌1 ಚಿತ್ರದ ದೈವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ…

1 hour ago