ಚಿತ್ರ ಮಂಜರಿ

ಹಾಲಿವುಡ್‌ ನಟಿ ರಾಕ್ವೆಲ್​ ಇನ್ನಿಲ್ಲ

ವಾಷಿಂಗ್ಟನ್​: 1960ರ ದಶಕದಲ್ಲಿ ಮಾದಕ ತಾರೆ ಎಂದೇ ಹೆಸರು ಗಳಿಸಿದ್ದ ರಾಕ್ವೆಲ್​ ವೆಲ್ಚ್​​ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಇಹಲೋಕ ತ್ಯಜಿಸಿದ್ದಾರೆ. ಬುಧವಾರ (ಫೆ. 15)ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಅಮೆರಿಕ ಟ್ಯಾಬ್ಲೋಯ್ಡ್​ ನ್ಯೂಸ್​ ಅರ್ಗನೈಸೆಷನ್​ ಟಿಎಂಜೆಡ್​ ವರದಿ ಮಾಡಿದೆ.ಹಾಲಿವುಡ್​ನ ಉನ್ಮಾದದ ಬೆಡಗಿ: 1966 ಫ್ಯಾಂಟಸ್ಟಿಕ್​ ವೊಯೇಜ್​ ಮತ್ತು ಒನ್​ ಮಿಲಿಯನ್​ ಇಯರ್​ B. C ಚಿತ್ರದ ಮೂಲಕ ರಾಕ್ವೆಲ್​ ಹೆಸರು ಗಳಿಸಿದ್ದರು. B. C ಚಿತ್ರದಲ್ಲಿ ಒಂದೆರಡು ನಿಮಿಷದ ಪಾತ್ರದಲ್ಲಿ ಮಿಂಚಿದ್ದರೂ ತಮ್ಮ ಉಡುಪಿನಿಂದಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಕೊಂಚ ಹೆಚ್ಚು ಎನ್ನುವ ಮಾದಕತೆ ಜೊತೆ ಬಿಕಿನಿಯಲ್ಲಿ ಮಿಂಚಿದ್ದ ಅವರು, ಉದ್ಯಮದಲ್ಲಿ ಸೆಕ್ಸ್​​ ಸಿಂಬಲ್​ ಆಗಿ ರೂಪುಗೊಂಡರು. ಇದಾದ ಬಳಿಕ ವೆಲ್ವ್ ಸ್ಟಾರ್​ಡಮ್​ ಕೂಡ ಹೆಚ್ಚಿತ್ತು. 1960 ಮತ್ತು 1970ರ ದಶಕದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಅವರು ರೂಪುಗೊಂಡರು. ​
ಇನ್ನು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಬಾಚಿಕೊಂಡಿದ್ದಾರೆ. 1974ರಲ್ಲಿ ನಟಿಸಿದ್ದ ಮ್ಯೂಸಿಯಲ್​ ಕಾಮಿಡಿ ಚಿತ್ರ ದಿ ತ್ರಿ ಮುಸ್ಕಿಟೀರ್ಸ್​ ಸಿನಿಮಾಗಾಗಿ ಗೋಲ್ಡನ್​ ಗ್ಲೋಬ್​ನಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಇನ್ನು ನಟಿಯ ಸಾವಿನ ಕುರಿತು ತಿಳಿಸಿರುವ ​ಅಮೆರಿಕ ಮೂಲದ ಸುದ್ದಿ ಸಂಸ್ಥೆ ಫಾಕ್ಸ್​ ನ್ಯೂಸ್​, ವೆಲ್ಚ್​ ಸಿನಿ ಉದ್ಯಮದಲ್ಲಿ ಉನ್ಮಾದ ನಟಿಯಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಟಿವಿ ಮತ್ತು ನಾಟಕ ಮಾಧ್ಯಮಗಳಲ್ಲೂ ಗುರುತಿಸಿಕೊಂಡಿದ್ದರು.

andolanait

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

17 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

43 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago