ಚಿತ್ರ ಮಂಜರಿ

ಒಟಿಟಿ ಸೆನ್ಸಾರ್‌ಶಿಪ್‌ ಅರ್ಜಿಯನ್ನು ತಳ್ಳಿ ಹಾಕಿದ ಕೋರ್ಟ್‌

ಮನರಂಜನೆಯ ಜಗತ್ತಿನಲ್ಲಿ ಈಗ ಒಟಿಟಿ ಪ್ಲಾಟ್​ಫಾರ್ಮ್​ನದ್ದೇ ಹವಾ. ಎಲ್ಲ ಹೊಸ ಸಿನಿಮಾಗಳೂ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೆಲವೇ ದಿನಗಳ ನಂತರ ಒಟಿಟಿಗೆ ಲಗ್ಗೆ ಇಡುತ್ತವೆ. ಹಲವಾರು ವೆಬ್​ ಸರಣಿಗಳು ಪ್ರತಿ ವಾರ ಬಿಡುಗಡೆ ಆಗುತ್ತವೆ. ರಿಯಾಲಿಟಿ ಶೋಗಳು ಕೂಡ ಒಟಿಟಿಯಲ್ಲಿ ಶೈನ್​ ಆಗುತ್ತಿವೆ. ಹೊಸ ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಆಗುವ ಕಂಟೆಂಟ್​ಗಳ ಬಗ್ಗೆ ಕೆಲವರಿಗೆ ತರಕಾರು ಇದೆ. ಬೋಲ್ಡ್​ ದೃಶ್ಯಗಳು ಹೆಚ್ಚಾಗಿರುತ್ತವೆ ಎಂದು ಅನೇಕರು ಮೂಗು ಮುರಿದಿದ್ದುಂಟು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆ ಬಗ್ಗೆ ಮಹತ್ವದ ತೀರ್ಪು ಪ್ರಕಟ ಆಗಿದೆ. ಒಟಿಟಿ ಕಂಟೆಂಟ್​ಗಳಿಗೆ ಸೆನ್ಸಾರ್ ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

‘ವೆಬ್​ ಸಿರೀಸ್​ಗಳಿಗೆ ಸೆನ್ಸಾರ್​ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್​ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್​ ತಿಳಿಸಿದೆ.

‘ವೀಕ್ಷಕರು ಇಲ್ಲಿನವರೇ ಆಗಿದ್ದರೂ ಕೂಡ ಕಂಟೆಂಟ್​ ಪ್ರಸಾರ ಆಗುತ್ತಿರುವುದು ಬೇರೆ ಬೇರೆ ದೇಶಗಳಿಂದ. ಪ್ರಸಾರ ಆದ ನಂತರ ಏನಾದರೂ ತಪ್ಪಿದ್ದರೆ ಕ್ರಮ ಕೈಗೊಳ್ಳುವುದು ಬೇರೆ. ನಿಮ್ಮ ಅರ್ಜಿ ಹೆಚ್ಚು ವಿವರವಾಗಿ ಇರಬೇಕು’ ಎಂದು ಹೇಳುವ ಮೂಲಕ ಅರ್ಜಿದಾರರ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

ಭಾರತದಲ್ಲೂ ಒಟಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದೆ. ಅಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​, ಸೋನಿ ಲಿವ್​, ಜೀ5, ವೂಟ್​ ಸೆಲೆಕ್ಟ್​, ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​, ಆಲ್ಟ್​ ಬಾಲಾಜಿ, ಆಹಾ ಸೇರಿದಂತೆ ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್​ಗಳು ತುಂಬ ಬೋಲ್ಡ್​ ಆಗಿರುತ್ತವೆ. ಎಲ್ಲಾ ವಯೋಮಾನದವರಿಗೆ ಸೂಕ್ತ ಆಗದಂತಹ ದೃಶ್ಯಗಳು ಕೂಡ ಇರುತ್ತವೆ. ಅವುಗಳಿಗೆ ಸೆನ್ಸಾರ್​ ಮಾಡಬೇಕು ಎಂಬುದು ಕೆಲವರ ಒತ್ತಾಯ.

‘ಮಿರ್ಜಾಪುರ್​’ ವೆಬ್​ ಸರಣಿಯ ಹೊಸ ಸೀಸನ್​ಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅದಕ್ಕೆ ತಡೆ ನೀಡಬೇಕು ಎಂದು ಮಿರ್ಜಾಪುರ್​ ನಗರದ ನಿವಾಸಿಯೊಬ್ಬರು ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಈ ವೆಬ್​ ಸರಣಿಯಲ್ಲಿ ಮಿರ್ಜಾಪುರ್ ನಗರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದ್ದು, ಅದರ ಬಿಡುಗಡೆಗೆ ತಡೆ ನೀಡಬೇಕು ಎಂಬ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

andolana

Recent Posts

ಸಿಲಿಂಡರ್ ಸ್ಪೋಟ ಪ್ರಕರಣ | ಮೃತ ಸಲೀಂ ಜೊತೆ ಬಂದವರು ನಾಪತ್ತೆ‌ ; ಲಾಡ್ಜ್‌ ಶೋಧ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…

2 mins ago

ದೇಶದದ್ಯಾಂತ ಇಂದಿನಿಂದ ರೈಲು ಪ್ರಯಾಣ ದರ ಏರಿಕೆ

ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…

12 mins ago

ಚಿತ್ರದುರ್ಗ ಬಸ್‌ ದುರಂತ | ಬಸ್‌ ಚಾಲಕ ಮೊಹಮ್ಮದ್‌ ರಫೀಕ್‌ ಸಾವು ; ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚಿತ್ರದುರ್ಗಾ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ…

18 mins ago

ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ : ಮಹತ್ವದ ಮಾಹಿತಿ ಕೊಟ್ಟ ಗೃಹ ಸಚಿವ ಪರಮೇಶ್ವರ

ಮೈಸೂರು : ಮೈಸೂರು ಅರಮನೆ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು…

21 mins ago

ಸ್ಪೋಟ ದುರಂತ | ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಮಹದೇವಪ್ಪ ; ಬಳಿಕ ಹೇಳಿದ್ದೇನು?

ಮೈಸೂರು : ಮೈಸೂರಿನ ಅರಮನೆ ಬಳಿ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ದುರಂತ ಪ್ರಕರಣ ಸಂಬಂಧ ಶುಕ್ರವಾರ ಜಿಲ್ಲಾ ಉಸ್ತುವಾರಿ…

23 mins ago

ಸಿಲಿಂಡರ್‌ ಸ್ಫೋಟ : ಮೈಸೂರಿಗೆ NIA ತಂಡ ಭೇಟಿ, ಹಲವು ಆಯಾಮಗಳಿಂದ ಪರಿಶೀಲನೆ

ಮೈಸೂರು : ದೇಶ-ವಿದೇಶದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾದ ಅರಮನೆಯ ಜಯಮಾರ್ತಾಂಡ ಬಳಿ ಸಂಭವಿಸಿದ ಹೀಲಿಯಂ…

2 hours ago