ಚಿತ್ರ ಮಂಜರಿ

ಬಿಗ್‌ಬಾಸ್‌ ಕನ್ನಡ: ಕಿಚ್ಚನ ಚಪ್ಪಾಳೆ ಮೈಕಲ್‌ಗೆ ಸಿಕ್ಕಿದ್ದು ಯಾಕೆ ಗೊತ್ತಾ?

ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌-10 ದಿನೇ ದಿನೇ ರಂಗೇರುತ್ತಿದ್ದು, ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ, ಗಲಾಟೆ ಎಲ್ಲವನ್ನು ಪಂಚಾಯಿತಿ ಕಟ್ಟೆಯಲ್ಲಿ ಬಗೆ ಹರಸುವ ನಿಟ್ಟಿನಲ್ಲಿ ಕಿಚ್ಚ ಸುದೀಪ ಅವರು ವಾರಾಂತ್ಯದಲ್ಲಿ ಮನೆಯ ಸ್ಪರ್ಧಿಗಳೊಂದಿಗೆ ಚರ್ಚೆ ನಡೆಸುತ್ತಾರೆ.

ಅದರಂತೆಯೇ ಈ ವಾರ (ನವೆಂಬರ್‌ 25) ನಡೆದ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್‌ ಶೋನಲ್ಲಿ ಕಿಚ್ಚ ಸುದೀಪ್‌ ಮಾತನಾಡಿದ್ದು, ಒಬ್ಬರಿಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.  ನೈಜೀರಿಯಾ ಮೂಲದ ಮೈಕಲ್‌ ಅಜಯ್‌ ಅವರ ಕನ್ನಡ ಪ್ರೀತಿಯನ್ನು ಸುದೀಪ್ ಪ್ರಶಂಸಿಸಿದ ಕಿಚ್ಚ ತಮ್ಮ ವಾರದ ಕಿಚ್ಚನ ಚಪ್ಪಾಳೆಯನ್ನು ಮೈಕಲ್‌ಗೆ ನೀಡಿದ್ದಾರೆ.

ಮೈಕಲ್‌ ಕುರಿತು ಕಿಚ್ಚ, : “ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡತ್ತೆ. ಆದ್ರೆ, ಮೊನ್ನೆ ನಡೆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಹುಡುಕಿ ಕನ್ನಡ ಪದಗಳನ್ನೇ ಬಳಸಿ ಉತ್ತರ ಕೊಡ್ತಾ ಇದ್ರಿ, ತಮಗೆ ಕನ್ನಡ ಬರಲ್ಲ ಅನ್ನೋದನ್ನು ನೀವು ಗುರಾಣಿಯಾಗಿ ಬಳಸಿಕೊಳ್ಳಬಹುದಿತ್ತು. ಆದರೆ ನೀವು ಅದನ್ನು ಬಳಸದೇ, ಕನ್ನಡ ಮಾತನಾಡಲು ನೀವು ಹಾಕಿದ ಎಫರ್ಟ್‌ಗೆ ನಮ್ಮ ಮೆಚ್ಚುಗೆ ಇದೆ. ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಹುಡುಕಿ ಕೊನೆಗೆ ಅವಕಾಶವಾದಿ ಅಂತ ಹೇಳಿದ್ರಿ” ಎಂದು ಮೈಕಲ್‌ ಕನ್ನಡ ಪ್ರೇಮದ ಬಗ್ಗೆ ಕಿಚ್ಚ ಸುದೀಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಕಲ್‌ಗೆ ಕಿಚ್ಚನ ಚಪ್ಪಾಳೆ
‘ಕಳೆದ ವಾರ ಕಿಚ್ಚನ ಚಪ್ಪಾಳೆ ನಡೆದಿರಲಿಲ್ಲ. ಆದರೆ ಈ ವಾರ ನೀಡುತ್ತಿದ್ದೇನೆ. ಈ ವಾರ ಒಬ್ಬ ವ್ಯಕ್ತಿಗೆ ಆಟದ ಮೇಲೆ ಫೋಕಸ್ ಜಾಸ್ತಿ ಆಗುತ್ತದೆ, ಎಫರ್ಟ್‌ ಜಾಸ್ತಿ ಕಾಣಿಸುತ್ತದೆ. ಸ್ಟ್ರಾಟರ್ಜಿ ಚೆನ್ನಾಗಿತ್ತು. ಟೀಮ್‌ ಜೊತೆಗೆ ಚೆನ್ನಾಗಿ ಸ್ಪಂದಿಸುತ್ತಾರೆ, ಚೆನ್ನಾಗಿ ಆಡುತ್ತಾರೆ. ಅಭಿಪ್ರಾಯಗಳನ್ನು ಓಪನ್ ಆಗಿ ಮಾತನಾಡುತ್ತಾರೆ. ಅದ್ಭುತವಾಗಿ ನನ್ನ ಕಣ್ಣಿಗೆ ಕಾಣಿಸಿದ್ದು ಮೈಕಲ್ ಅವರು. ಈ ವಾರ ಕಿಚ್ಚನ ಚಪ್ಪಾಳೆ ಮೈಕಲ್‌ಗೆ ಹೋಗುತ್ತಿದೆ. ನೀವು ಕನ್ನಡ ಮಾತನಾಡಲು ಹಾಕಿದ ಎಫರ್ಟ್ ಒಂಚೂರು ಎದ್ದು ಕಾಣಿಸ್ತು. ಅದೇ ತುಂಬ ಪ್ಲಸ್ ಆಯ್ತು ಮೈಕಲ್’ ಎಂದು ಕಿಚ್ಚ ಸುದೀಪ್ ಹೇಳಿದರು.

ಕಿಚ್ಚ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡಿದ್ದಕ್ಕೆ ಮೈಕಲ್ ಅವರು ಧನ್ಯವಾದಗಳನ್ನು ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲೂ ಮೈಕಲ್‌ ಅವರ ಆಟದ ರೀತಿಗೆ ಮತ್ತು ಅವರಿಗೆ ಕನ್ನಡ ಭಾಷೆ ಮೇಲೆ ಇರುವ ಪ್ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

2 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

2 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

2 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

2 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

2 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

2 hours ago