ಚಿತ್ರ ಮಂಜರಿ

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪಾಲಿಸಬೇಕು

ಹೊಸ ವರ್ಷಕ್ಕೆ ಹಿರಿಯ ನಟಿ ಸುಧಾರಾಣಿ ಸಂಕಲ್ಪ, ಅಂದೋಲನ ಓದುಗರಿಗಾಗಿ ವಿಶೇಷ ಬರಹ

ನಮಸ್ಕಾರ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ರೆಸೊಲ್ಯೂಶನ್ಸ್ ಮಾಡಿಕೊಳ್ಳುತ್ತಾರೆ. ಹೊಸ ಕ್ಯಾಲೆಂಡರ್ ವರ್ಷ ಎನ್ನುವ ಕಾರಣಕ್ಕೆ. ಜನವರಿ 1 ಎಂದ ತಕ್ಷಣ, ಇನ್ನು ಮೇಲೆ ನಾನು ಹೀಗಿರ್ತೀನಿ, ಹೀಗೆ ಮಾಡ್ತೀನಿ, ಈ ಕೆಲಸಗಳನ್ನು ಮಾಡಬೇಕು, ಹೀಗೆ ಬೇರೆಬೇರೆ ಜನ ಬೇರೆಬೇರೆ ತರದಲ್ಲಿ ಬೇರೆಬೇರೆ ರೆಸೊಲ್ಯೂಶನ್‌ಗಳನ್ನು ಮಾಡಿಕೊಳ್ಳುತ್ತಾರೆ.

ಆದರೆ ನಮಗೆಲ್ಲರಿಗೂ ಗೊತ್ತಿರುವ ವಿಷಯ ಎಂದರೆ, ಸಾಮಾನ್ಯವಾಗಿ ಒಂದು ವಾರದ ಮೇಲೆ ಈ ನಿರ್ಧಾರಗಳನ್ನು ಪಾಲಿಸುವುದಿಲ್ಲ. ವಿಶೇಷವಾಗಿ ಅದು ಎಲ್ಲಿ ಅಂದರೆ, ನಾನು ವರ್ಕ್‌ಔಟ್ ಮಾಡ್ತೀನಿ, ಆರೋಗ್ಯಕಾಪಾಡಲು ಬೇಕಾದ ಆಹಾರ ತಿನ್ತೀನಿ… ಇಂತಹ ವಿಚಾರಗಳಲ್ಲಿ ಹಳಿ ತಪ್ಪಿ ಹೋಗ್ತೀವಿ.
ವಿಶೇಷವಾಗಿ ಈಗಿನ ಜೀವನಶೈಲಿ, ಜಾಗತೀಕರಣ, ಈ ದಿನಗಳ ಕೊರಳು ಕೊಯ್ಯುವ ಸ್ಪರ್ಧೆ, ಪ್ರತಿಯೊಂದರಲ್ಲೂ ಹೋಲಿಕೆ. ಹೀಗೆ ತುಂಬಾನೆ ನಮ್ಮ ಸುತ್ತ ಈ ನೆಗೆಟಿವಿಟಿ ಇರುವುದರಿಂದ, ಯಾವ ಚೆಂಡು ನಮ್ಮ ಕೈಯಲ್ಲಿದೆ, ಎಷ್ಟು ಚೆಂಡುಗಳಿವೆ, ಯಾವುದು ತುಂಬ ಮುಖ್ಯವಾದದ್ದು, ಯಾವುದನ್ನು ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ನಾವು ಮರೆತು ಹೋಗ್ತಾ ಇದ್ಧೀವಿ. ವಿಶೇಷವಾಗಿ ಯುವಪೀಳಿಗೆ.

ನಾನು ಏನು ಹೇಳಲು ಬಂದೆ ಅಂದರೆ, ಆ ಎರಡು ಚೆಂಡುಗಳಲ್ಲಿ ಒಂದು ನಮ್ಮ ಕೆಲಸ, ಅದು ರಬ್ಬರ್ ಚೆಂಡು. ಇನ್ನೊಂದು ನಮ್ಮ ಇಡೀ ಜೀವನ ಅಂತ ಇಟ್ಟುಕೊಳ್ಳಿ. ಅದು ಗಾಜಿನ ಚೆಂಡು. ಅದರಲ್ಲಿ ನಮ್ಮ ಭಾವನೆಗಳಾಗಿರಬಹುದು, ಸಂಬಂಧಗಳಾಗಿರಬಹುದು, ಮೌಲ್ಯಗಳಾಗಿರಬಹುದು, ಅಥವಾ ನಮಗೆ ಜೀವನದಲ್ಲಿ ಮುಖ್ಯವಾದ ಮನಶ್ಶಾಂತಿ, ಸಂತೋಷ, ಇದೆಲ್ಲ ಕೂಡಿರುವಂತಹದು ಆ ಗಾಜಿನ ಚೆಂಡು. ನಾವು ಈ ಜಗ್ಲರಿಯಲ್ಲಿ ಎಲ್ಲೋ ಒಂದು ಕಡೆ ಆ ರಬ್ಬರ್ ಬಾಲ್ ಅಂದ್ರೆ ನಮ್ಮ ಈ ಕೆಲಸ, ಪ್ರಾಪಂಚಿಕ ಅಗತ್ಯದ ವಸ್ತುಗಳು ಏನಿವೆ, ದುಡ್ಡು, ಕಾಸು, ಸ್ಥಾನ, ಹೆಸರು, ಈ ಸಮಾಜದಲ್ಲಿ ಅಂತಸ್ತು, ಇವೆಲ್ಲ ತುಂಬಿರುವಂತಹದ್ದು ಆ ರಬ್ಬರ್ ಚೆಂಡು. ಬರೀ ಅದರ ಕಡೆಗೇ ಗಮನ ಕೇಂದ್ರೀಕರಿಸುತ್ತಾ, ನಮ್ಮ ಗಾಜಿನ ಚೆಂಡು ಏನಿದೆ ನಮ್ ಒಂದು ಸಹಾನುಭೂತಿ, ಕನಿಕರ, ಅನುಕಂಪ ಇವೆಲ್ಲ ಕೂಡಿರುವುದನ್ನು ಮರೆತುಬಿಡುತ್ತಿದ್ದೇವೆ.

ಆ ರಬ್ಬರ್ ಚೆಂಡನ್ನು ಹಿಡಿಯುವ ಧಾವಂತದಲ್ಲಿ, ನಮ್ಮ ಆರೋಗ್ಯವನ್ನೂ ಒಳಗೊಂಡ ಗಾಜಿನಚೆಂಡು, ಕೈಜಾರಿ ಬೀಳ್ತಾನೇ ಇರುತ್ತೆ. ಬಿದ್ದಾಗ ಕೆಲವೊಮ್ಮೆ ಅದು ಸ್ವಲ್ಪ ಸಿಡಿದುಹೋಗಬಹುದು, ಕೆಲವೊಮ್ಮೆ ಬಿರುಕು ಬಿಡಬಹುದು, ಇನ್ನು ಕೆಲವರ ಜೀವನದಲ್ಲಿ ಅದು ಒಡೆದೇ ಹೋಗಬಹುದು. ಈ ತಪ್ಪನ್ನು ನಾವು ಪದೇಪದೇ ಮಾಡಾ ಇದ್ದೀವಿ.
ಪ್ರತಿ ವರ್ಷದ ನಿರ್ಧಾರ ಇದನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುತ್ತಾ ಹೋಗುವುದಾಗಬೇಕು. ನನ್ನ ಪ್ರಕಾರ ಈ ಒಂದು ಗಾಜಿನ ಚೆಂಡು ಏನಿದೆ, ಅದು ತುಂಬಾ ಮುಖ್ಯ. ಈ ರಬ್ಬರ್ ಚೆಂಡು ಒಂದು ವೇಳೆ ಬಿದ್ದರೂ ಮತ್ತೆ ಮೇಲೆ ಬರುತ್ತದೆ. ನಾವು ಕೆಲಸ ಕಳ್ಕೊಂಡರೆ, ಮತ್ತೆ ಪ್ರಯತ್ನ ಪಟ್ಟರೆ ಇನ್ನೊಂದು ಕೆಲಸ ಸಿಗಬಹುದು. ದುಡ್ಡು ಆವಶ್ಯಕ. ಆದರೆ ಅದೇ ನಮ್ಮ ಜೀವನವಲ್ಲ. ಆದರೆ ಈ ಗಾಜಿನ ಚೆಂಡು ಏನಿದೆ, ಅದು ನಮ್ಮ ಆರೋಗ್ಯ ಆಗಿರಬಹುದು, ಮನಶ್ಶಾಂತಿ, ಸಂತೋಷ, ಕುಟುಂಬ, ಅಥವಾ ನಮ್ಮ ಮೌಲ್ಯಗಳು, ಸಂಬಂಧಗಳು ಇವೆಲ್ಲ ಒಂದು ಚೂರು ಮುಕ್ಕಾದರೆ, ಒಡೆದು ಹೋದರೆ, ಮತ್ತೆ ಯಾವತ್ತಿಗೂ ಅದು ಸರಿ ಮಾಡೋದಕ್ಕೆ ಆಗೋಲ್ಲ. ಹಾಗಾಗಿ ನನ್ನ ಪ್ರತಿ ವರ್ಷದ ನಿರ್ಧಾರ ಏನು ಅಂತ ಹೇಳಿದರೆ, ಆದಷ್ಟು ಮಟ್ಟಿಗೆ ಈ ಗಾಜಿನ ಚೆಂಡನ್ನು ತುಂಬ ಜೋಪಾನವಾಗಿ ನೋಡ್ಕೊಬೇಕು. ಅದರ ಅರ್ಥ ರಬ್ಬರ್ ಚೆಂಡು ಬಿಡಬೇಕು ಅಂತಲ್ಲ. ಅದು ಬಿದ್ದರೂ ಎಲ್ಲೋ ಬೇರೆ ಅವಕಾಶ ಇದೆ.

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಅದನ್ನು ಪಾಲಿಸಬೇಕು. ಹೊಸ ವರ್ಷದಲ್ಲಿ ಇದು ನನ್ನ ನಿರ್ಧಾರ. ಇಂತಹ ಯೋಚನೆ ನಿಮ್ಮದೂ ಆಗಬಹುದಲ್ಲ. ೨೦೨೩ ಎಲ್ಲರಿಗೂ ಶುಭ ತರಲಿ, ಶಾಂತಿ, ನೆಮ್ಮದಿ ಆರೋಗ್ಯ ತರಲಿ ಎಂದು ಹಾರೈಸುತ್ತೇನೆ.

ಎಲ್ಲಕ್ಕಿಂತ ಮುಖ್ಯವಾದ ಅಂಶ, ನನ್ನ ಪ್ರಕಾರ ಜೀವನ ಯಾವತ್ತೂ ಒಂದು ರೀತಿಯ ಜಗ್ಲರಿ. ನಿರಂತರವಾಗಿ ನಾವು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಿರುತ್ತೇವೆ. ನಾವು ಈ ಸರ್ಕಸ್‌ನಲ್ಲಿ ನೋಡಿರುತ್ತೇವಲ್ಲ, ಮೂರುನಾಲ್ಕು ಚೆಂಡುಗಳನ್ನು ಮೇಲಕ್ಕೆ ಎಸೆದು ಹಿಡಿಯುತ್ತಿರುತ್ತಾರಲ್ಲ ಹಾಗೆ. ಅದರಲ್ಲಿ ಯಾವ ಚೆಂಡು ಮುಖ್ಯವಾದುದು ಎಂದು ಮರೆತಿರುತ್ತೇವೆ. ನಾವು ಅದರ ಕಡೆ ಪೂರ್ತಿ ಗಮನಾನೇ ಕೊಡುವುದಿಲ್ಲ.

andolana

Recent Posts

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

2 hours ago

ಓದುಗರ ಪತ್ರ: ಕೆಎಚ್‌ಬಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…

2 hours ago

ಓದುಗರ ಪತ್ರ: ಬೈಕ್ ಟ್ಯಾಕ್ಸಿ ಚಾಲಕರು ನಿಯಮ ಪಾಲಿಸಲಿ

ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…

2 hours ago

ಓದುಗರ ಪತ್ರ: ‘ಉದಯರವಿ’ಯನ್ನು ಸ್ಮಾರಕವನ್ನಾಗಿ ರೂಪಿಸಿ

ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…

2 hours ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಸಮರ್ಥ ಕಾಯ್ದೆ ಪಾಲನಾ ವ್ಯವಸ್ಥೆ ಮುಖ್ಯ

ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…

2 hours ago

ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ದರ ಕುಸಿತ

ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…

2 hours ago