ಸರಗೂರು ದಾಸೇಗೌಡ
ಸರಗೂರು: ಕೇರಳ ಮತ್ತು ತಾಲ್ಲೂಕಿನ ಚಿಕ್ಕಬರಗಿ, ದೊಡ್ಡಬರಗಿ, ಆಲನಹಳ್ಳಿ, ಕುರ್ಣೇಗಾಲ, ಕಾಡಬೇಗೂರು, ಹೊಸ ಕೋಟೆ, ಮುತ್ತಿಗೆಹುಂಡಿ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ತಾಲ್ಲೂಕಿನ ನುಗು ಜಲಾಶಯದ ನೀರಿನ ಮಟ್ಟ ೯೩ ಅಡಿಗಳನ್ನು ತಲುಪಿದೆ.
ಕೆಲ ದಿನಗಳ ಹಿಂದೆ ಜಲಾಶಯದಲ್ಲಿ ೮೨ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಸದ್ಯ ಜಲಾಶಯಕ್ಕೆ ೧,೩೯೨ ಕ್ಯೂಸೆಕ್ಸ್ ನೀರು ಒಳಹರಿವಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಜಲಾಶಯದಲ್ಲಿ ಈ ಮಟ್ಟದ ನೀರು ಸಂಗ್ರಹವಾಗಿದೆ.
ನುಗು ಜಲಾಶಯದ ಗರಿಷ್ಟ ಮಟ್ಟ ೧೧೦ ಅಡಿಗಳಿದ್ದು, ಸದ್ಯ ನೀರಿನ ಮಟ್ಟ ೯೩ ಅಡಿಗಳಷ್ಟಿದೆ ಎಂದು ನುಗು ಜಲಾಶಯದ ಇಂಜಿನಿಯರ್ ದೀಪಕ್ ತಿಳಿಸಿದ್ದಾರೆ.
೫.೪೪ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯ ವ್ಯಾಪ್ತಿಯಲ್ಲಿ ಸುಮಾರು ೧೮,೧೧೦ ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಸರಗೂರು ತಾಲ್ಲೂಕಿನ ೧,೫೦೦ ಎಕರೆ ಪ್ರದೇಶಕ್ಕೆ ನೀರು ಹರಿಸಿದರೆ, ಉಳಿದ ನೀರು ನಂಜನಗೂಡು ತಾಲ್ಲೂಕಿನ ಜನರಿಗೆ ದೊರಕಲಿದೆ. ಮೇಲ್ದಂಡೆ ನಾಲೆ ೮೭ ಕಿ.ಮೀ. ಉದ್ದವಿದ್ದು, ನಂಜನಗೂಡಿನ ನರಸಾಂಬುಧಿ ಕೆರೆಯವರೆಗೆ ಇದೆ. ೬೬೦ ಕ್ಯೂಸೆಕ್ಸ್ ನೀರು ಬಳಕೆಯಾಗಲಿದೆ.
ಜಲಾಶಯದ ಸಮೀಪದಲ್ಲೇ ೨ ಕಿ.ಮೀ. ದೂರದಲ್ಲಿ ಹಲಸೂರು ಗ್ರಾಮದ ಬಳಿ ಕೆರೆಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಬಲದಂಡೆ ನಾಲೆ ಹುಲ್ಲಹಳ್ಳಿವರೆಗೆ ೩೮ ಕಿ.ಮೀ. ದೂರವಿದೆ. ೧೫೦ ಕ್ಯೂಸೆಕ್ಸ್ ನೀರು ಬಳಕೆಯಾಗಲಿದೆ. ಅದೇ ರೀತಿ ಎಡದಂಡೆ ನಾಲೆ ನಂಜನಗೂಡು ತಾಲ್ಲೂಕಿನ ಹರದನಹಳ್ಳಿವರೆಗೆ ೩೩ ಕಿ.ಮೀ. ದೂರವಿದ್ದು, ೭೦ ಕ್ಯೂಸೆಕ್ಸ್ ನೀರು ಇರಲಿದೆ. ಒಟ್ಟು ೧೦ ಕೆರೆಗಳಿಗೆ ನೀರು ಬಳಕೆಯಾಗಲಿದೆ.
ನುಗು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ರೈತರಲ್ಲಿ ಸಂತಸ ಮೂಡಿದೆ ಎಂದು ರೈತ ಮುಖಂಡ ಮುಳ್ಳೂರು ರವಿಕುಮಾರ್ ತಿಳಿಸಿದ್ದಾರೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…