Andolana originals

ಕೆ.ಶೆಟ್ಟಿಹಳ್ಳಿಯ ನಿರ್ದಿಗಂತದಲ್ಲಿ ‘ಊರ ಹಬ್ಬ’

ಹಾಡಿ, ಕುಣಿದು ಸಂಭ್ರಮಿಸಿದ ಮಕ್ಕಳು; ‘ವಾಲಿ ವಧೆ’ ನಾಟಕ ಪ್ರದರ್ಶನ

ಮೈಸೂರು: ಚುಮು ಚುಮು ಚಳಿಯ ನಡುವೆ ನಿರ್ದಿಗಂತದ ತುಂಬೆಲ್ಲ ಶನಿವಾರ ಮಕ್ಕಳ ಕಲರವ, ಹಾಡು-ಕುಣಿತದ ಸಂಭ್ರಮದ ಸದ್ದು ಜೋರಾಗಿತ್ತು.

ಶ್ರೀರಂಗಪಟ್ಟಣ ಸಮೀಪದ ಕೆ.ಶೆಟ್ಟಿಹಳ್ಳಿಯ ನಿರ್ದಿಗಂತ ಸಂಸ್ಥೆಯಲ್ಲಿ ಶನಿವಾರ ಸಂಜೆ ನಡೆದ ‘ಊರ ಹಬ್ಬ’ ಮಕ್ಕಳ ರಂಗಪ್ರತಿಭೆಗೆ ಸಾಕ್ಷಿಯಾದವು. ಮೊದಲು ಕಪ್ಪು ವಸ ಧರಿಸಿದ ಕೆ. ಶೆಟ್ಟಿಹಳ್ಳಿ ಗ್ರಾಮದ ಮಕ್ಕಳು ಸಂವಿಧಾನ ಪೀಠಿಕೆಯನ್ನು ರಾಗ ವಾಗಿ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ಮಕ್ಕಳು ನಡೆಸಿಕೊಟ್ಟ ಕೋಲಾಟ ನೃತ್ಯ ಪ್ರೇಕ್ಷಕ ರನ್ನು ಜಾನಪದ ಲೋಕಕ್ಕೆ ಕರೆದೊಯ್ದಿತು.

ಸಂಜೆ ೬.೧೦ ರಿಂದ ರಾತ್ರಿವರೆಗೆ ನಡೆದ ರಂಗಪ್ರಯೋಗಗಳು, ರಂಗಗೀತೆಗಳ ಗಾಯನವು ಮಕ್ಕಳನ್ನು ಮಾತ್ರವಲ್ಲದೇ ಹಿರಿಯರೂ ತಲೆ ದೂಗುವಂತೆ ಮಾಡಿದವು. ಮಕ್ಕಳ ಹಾಡುಗಾರಿಕೆ, ನರ್ತನದ ಮನೋಜ್ಞ ಅಭಿನಯಕ್ಕೆ ಮನ ಸೋತ ಪೋಷಕರು ಸಂತಸದಿಂದ ಹಿಗ್ಗಿದರು. ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕೆ.ಶೆಟ್ಟಿ ಹಳ್ಳಿಯ ೩೫ ಮಕ್ಕಳಿಗೆ ಒಂದೂವರೆ ತಿಂಗಳಿನಿಂದ ನಿರ್ದಿಗಂತ ಸಂಸ್ಥೆಯಿಂದ ಹಾಡು, ನೃತ್ಯ ಕಲಿಕೆ ತರಬೇತಿ ನೀಡಲಾಗಿತ್ತು.

ಬಳಿಕ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಗಜಾನನ ಯುವಕ ಮಂಡಳಿ ತಂಡ ಪ್ರಸ್ತುತಪಡಿಸಿದ ‘ವಾಲಿ ವಧೆ’ ನಾಟಕ ನೋಡುಗರ ಮನ ಸೆಳೆಯಿತು.

ಕೆರೆ ಸಂರಕ್ಷಣೆಯ ಮಹತ್ವ ಸಾರಿದ ಮಕ್ಕಳು:  ಕಲುಷಿತಗೊಳ್ಳುತ್ತಿರುವ ಕೆರೆ ಸಂರಕ್ಷಣೆಯ ಬಗ್ಗೆ ಮಕ್ಕಳು ನಾಟಕದ ಮೂಲಕ ಸಂದೇಶ ಸಾರಿದರು. ಹಾಡು, ನೃತ್ಯದೊಂದಿಗೆ ಕೆರೆಗಳ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಕೆ.ಶೆಟ್ಟಿಹಳ್ಳಿ ಕೆರೆ ಪ್ರಧಾನವಾಗಿಟ್ಟುಕೊಂಡ ಅಲ್ಲಿನ ಮಕ್ಕಳು ಕೆರೆಯಲ್ಲಿ ಬಟ್ಟೆ ಒಗೆಯುವುದು, ಹಸು ತೊಳೆಯುವುದು, ಮಲ, ಮೂತ್ರ ವಿಸರ್ಜನೆ ಮಾಡುವುದು, ಕಸ ಎಸೆಯುವುದರಿಂದ ಕೆರೆಗಳು ನಾಶ ಹೊಂದುತ್ತಿರುವ ಬಗ್ಗೆ ಕಿರು ನಾಟಕದ ಮೂಲಕ ಬೆಳಕು ಚೆಲ್ಲಿದರು. ಕೆರೆ ಕಲುಷಿತಗೊಳಿಸುವುದನ್ನು ತಡೆದು ಸಂರಕ್ಷಣೆ ಮಾಡುವ ಬಗ್ಗೆ ಸಂದೇಶವನ್ನು ಸಾರಿದರು. ಮಕ್ಕಳ ಮನೋಜ್ಞ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

” ಕೆ.ಶೆಟ್ಟಿಹಳ್ಳಿಗೆ ನಿರ್ದಿಗಂತ ಬಂದ ಮೇಲೆ ಕೆ.ಶೆಟ್ಟಿಹಳ್ಳಿ ಗ್ರಾಮದವರು ನಿರ್ದಿಗಂತದ ಜೊತೆಗೆ ಒಂದಾಗಿದ್ದಾರೆ. ನಮ್ಮ ಕೆ.ಶೆಟ್ಟಿಹಳ್ಳಿಯ ಮಕ್ಕಳ ಪ್ರತಿಭೆವನ್ನು ಗುರುತಿಸಿ, ಅವರ ಮನೋವಿಕಾಸ ಹೆಚ್ಚಿಸಿ ಅವರ ಗ್ರಹಿಕೆಯನ್ನು ಉತ್ತಮಪಡಿಸಲು ಇದೇ ಮೊದಲ ಬಾರಿಗೆ ಊರ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇನ್ನು ಮುಂದೆ, ತಿಂಗಳಿಗೆ ಅಥವಾ ೨ ತಿಂಗಳಿಗೆ ಒಂದು ಬಾರಿ ಈ ಊರ ಹಬ್ಬ ಕಾರ್ಯಕ್ರಮವನ್ನು ನಿರ್ದಿಗಂತದ ವತಿಯಿಂದ ಮಾಡಲಾಗುವುದು. ಈ ಮೂಲಕ ನೀವು, ನಾವು ಒಂದಾಗಿ ಬದುಕೋಣ.”

ಪ್ರಕಾಶ್ ರಾಜ್, ನಟ ಹಾಗೂ ನಿರ್ದಿಗಂತ ಸಂಸ್ಥೆಯ ಸ್ಥಾಪಕ

ಪ್ರೇಕ್ಷಕರ ಮನಗೆದ್ದ ಸಮೂಹ ನೃತ್ಯ..!

ಕೆ.ಶೆಟ್ಟಿಹಳ್ಳಿಯ ಕೆಲವು ಮಕ್ಕಳು ಹಾಡುತ್ತಿದ್ದರೆ, ಕೆಲವು ಮಕ್ಕಳು ಕೈ ಕೈ ಹಿಡಿದು ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು. ಪುಟಾಣಿಗಳು ನೃತ್ಯಕ್ಕೆ ಹೆಜ್ಜೆ ಹಾಕಿ ಮುಗಿಸುತ್ತಿದಂತೆ ವೇದಿಕೆ ಏರಿದ ನಿರ್ದಿಗಂತ ಸಂಸ್ಥೆಯ ಸ್ಥಾಪಕ ಹಾಗೂ ನಟ ಪ್ರಕಾಶ್ ರಾಜ್ ‘ನಮ್ಮೂರ್ ಮಕ್ಕಳು ಹೆಂಗೆ’ ಎಂದು ಜೋಶ್‌ನಿಂದ ಪ್ರೇಕ್ಷಕರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ನೆರೆದಿದ್ದ ನೋಡುಗರು ಸೂಪರ್ ಎಂದರು.

ಆಂದೋಲನ ಡೆಸ್ಕ್

Recent Posts

ಪೋಕ್ಸೋ ಕೇಸ್‌| ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಬಿಗ್‌ ರಿಲೀಫ್‌: ‌ಸೆಷನ್ಸ್‌ ಕೋರ್ಟ್‌ ಸಮನ್ಸ್‌ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ಕೋರ್ಟ್‌ ನೀಡಿರುವ ಸಮನ್ಸ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದ್ದು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ…

28 mins ago

ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ವಿಚಾರ: ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಮೈಸೂರು: ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಸೂಚನೆ ಮೇರೆಗೆ ಇಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ…

40 mins ago

ರಾಜ್ಯ ಸರ್ಕಾರದಿಂದ ವಿಮಾ ಮೊತ್ತ ಏರಿಕೆ ಮಾಡಲು ಚಿಂತನೆ: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಪಿಎಲ್‌ ಕಾರ್ಡ್‌ ಹೊಂದಿದ ವಿಕಲಚೇತನರಿಗೆ ಮುಂರುವ ದಿನಗಳಲ್ಲಿ ವಿಮಾ ಮೊತ್ತನ್ನು ಐದು ಲಕ್ಷ ರೂ.ಗೆ ಏರಿಕೆ…

55 mins ago

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್:‌ ತಪ್ಪೊಪ್ಪಿಕೊಂಡ ನಟಿ ರನ್ಯಾ ರಾವ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಆರೋಪಿ ರನ್ಯಾ ರಾವ್‌ ಈಗ ತಪ್ಪೊಪ್ಪಿಕೊಂಡಿದ್ದಾರೆ ಎಂಬ…

1 hour ago

ಚಂಡೀಗಢ: ಅಪರಿಚಿತ ವ್ಯಕ್ತಿಗಳಿಂದ ಶಿವಸೇನಾ ನಾಯಕನ ಹತ್ಯೆ

ಚಂಡೀಗಢ: ಬೈಕ್‌ನಲ್ಲಿ ಬೆನ್ನಟ್ಟಿ ಶಿವಸೇನಾ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಗಾದಲ್ಲಿ ನಡೆದಿದೆ. ದಾಳಿಯಲ್ಲಿ ಓರ್ವ ಬಾಲಕ…

1 hour ago

ಅಪ್ಪು ಸಿನಿಮಾ ರಿ-ರಿಲೀಸ್‌: ಅಭಿಮಾನಿಗಳೊಂದಿಗೆ ತನ್ನದೇ ಚಿತ್ರ ವೀಕ್ಷಿಸಿದ ರಕ್ಷಿತಾ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ರಿ-ರಿಲೀಸ್‌…

1 hour ago